ಅರಸೀಕೆರೆ: ರಾಜ್ಯ ಉಚ್ಛ ನ್ಯಾಯಾಲಯದ ಆದೇಶದ ಮೇರೆಗೆ ಸಂಚರಿಸುತ್ತಿರುವ `ಕಾನೂನು ಸಾಕ್ಷರತಾ ರಥ ಜೂ.16ರಂದು ನಗರಕ್ಕೆ ಬರುತ್ತಿದ್ದು, ಜೂ.20ರವರೆಗೆ ತಾಲೂಕಿನ ವಿವಿಧ ಗ್ರಾಮೀಣ ಪ್ರದೇಶಗಳಲ್ಲಿ ಸಂಚರಿಸಲಿದೆ ಎಂದು ನಗರದ ಜೆಎಂಎಫ್ಸಿವಿಲ್ ನ್ಯಾಯಾಲಯದ ಹಿರಿಯ ನ್ಯಾಯಾ ಧೀಶರಾದ ಕೆ.ನಿರ್ಮಲಾ ತಿಳಿಸಿದರು. ನಗರದ ಸಿವಿಲ್ ನ್ಯಾಯಾಲಯದ ಆವ ರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ ಬುಧ ವಾರ ಏರ್ಪಡಿಸಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಬ್ಯಾಂಕಿನ ವ್ಯವಸ್ಥಾ ಪಕರ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ…
ಅರಸೀಕೆರೆ ಗ್ರಾಮಾಂತರ ಪೊಲೀಸರ ಭರ್ಜರಿ ಬೇಟೆ13 ಕಳವು ಪ್ರಕರಣದಲ್ಲಿ ಮೂವರು ಚೋರರ ಸೆರೆ
June 12, 2019* ಅಣ್ಣ-ತಮ್ಮ, ಬಾವಮೈದುನ ಸೇರಿಕೊಂಡು 13 ಕಡೆ ಕಳವು * 176 ಗ್ರಾಂ ಚಿನ್ನಾಭರಣ, 4.62 ಲಕ್ಷ ರೂ. ನಗದು ವಶ * ಕೃತ್ಯಕ್ಕೆ ಬಳಸುತ್ತಿದ್ದ 2 ಬೈಕ್, 1 ಮಿನಿಗೂಡ್ಸ್ ವಾಹನ ಜಪ್ತಿ ಅರಸೀಕೆರೆ: ಅರಸೀಕೆರೆ ತಾಲೂಕು ಸೇರಿದಂತೆ ರಾಜ್ಯದ ವಿವಿಧೆಡೆ ನಡೆದಿದ್ದ ಹಲವು ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಒಂದೇ ಕುಟುಂಬದ ಮೂವರು ಆಂಧ್ರಪ್ರದೇಶದ ಚೋರರನ್ನು ಬಂಧಿಸಿರುವ ಅರಸೀಕೆರೆ ಗ್ರಾಮಾಂತರ ಪೊಲೀಸರು ಭರ್ಜರಿ ಬೇಟೆಯನ್ನೇ ಆಡಿದ್ದಾರೆ ಎಂದು ಡಿವೈಎಸ್ಪಿ ಸದಾ ನಂದ ತಿಪ್ಪಣ್ಣನವರ್ ಹೇಳಿದರು. ನಗರದಲ್ಲಿ…
ಅಂಬಿಗರ ಚೌಡಯ್ಯ ಮಹಾನ್ ದಾರ್ಶನಿಕ
June 12, 2019ಮಾಡಾಳು ನಿರಂಜನ ಪೀಠ ಕಾರ್ಯಕ್ರಮದಲ್ಲಿ ಶ್ರೀ ರುದ್ರಮುನಿ ಸ್ವಾಮೀಜಿ ಬಣ್ಣನೆ ಅರಸಿ: ಹನ್ನೆರಡನೇ ಶತಮಾನದಲ್ಲಿ ಕಾಯಕ, ದಾಸೋಹ, ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ಸಮಾಜ ದಲ್ಲಿ ಜಾಗೃತಿ ಮೂಡಿಸಿದ ಶರಣ ಅಂಬಿ ಗರ ಚೌಡಯ್ಯ ಮಹಾನ್ ದಾರ್ಶನಿಕರು. ಬಸವಣ್ಣನವರ ನಡೆ-ನುಡಿ-ತತ್ವ-ಆದರ್ಶ ಗಳನ್ನು ಪಾಲಿಸಿ ತಮ್ಮದೇ ಆದ ವಚನಗಳ ಮೂಲಕ ಸಮಾಜದ ಅಂಕು-ಡೊಂಕು ಗಳನ್ನು ತಿದ್ದಿದರು. ಜನರಲ್ಲಿ ಸಾಮಾಜಿಕ ಕ್ರಾಂತಿ ಮೂಡಿಸಿದ ಮಹಾಪುರುಷರು ಎಂದು ರುದ್ರಮುನಿ ಸ್ವಾಮೀಜಿ ಬಣ್ಣಿಸಿದರು. ಅರಸೀಕೆರೆ ತಾಲೂಕಿನ ಕಣಕಟ್ಟೆ ಹೋಬ ಳಿಯ ಮಾಡಾಳು ಗ್ರಾಮದ…
ಹಲ್ಮಿಡಿ ಶಿಲಾಶಾಸನ ಅಂಗಳದಲ್ಲಿ ಅಕ್ಷರಾಭ್ಯಾಸ
June 12, 2019ಬೇಲೂರು: ತಾಲೂಕಿನ ಹಲ್ಮಿಡಿ ಗ್ರಾಮದಲ್ಲಿ ಕನ್ನಡದ ಪ್ರಪ್ರಥಮ ಶಿಲಾಶಾಸನದ ಆವರಣದಲ್ಲಿ ಹಾಸನದ ಶಾಲೆಯ ಪುಟ್ಟ ಮಕ್ಕಳಿಗೆ ಅಧ್ಯಾತ್ಮ ಚಿಂತಕ ಇಬ್ರಾಹಿಂ ಸುತಾರ ಅವರು ಅಕ್ಷರಾಭ್ಯಾಸ ಮಾಡಿಸಿದರು. ಪುಟ್ಟ ಮಕ್ಕಳನ್ನು ಮಡಿಲಲ್ಲಿ ಕುಳ್ಳಿರಿಸಿಕೊಂಡು ಅಕ್ಷರಾಭ್ಯಾಸ ಮಾಡಿಸುತ್ತಲೇ ಪೋಷಕ ರಿಗೂ ಬದುಕಿನ ಪಾಠ ಹೇಳಿದರು. ದ ಸ್ಕಾಲರ್ಸ್ ವಲ್ರ್ಡ್ ಶಾಲೆಗೆ ಮೊದಲ ಬಾರಿ ದಾಖಲಾಗುವ ಪುಟ್ಟ ಮಕ್ಕಳಿಗೆ ಅಕ್ಷರಾಭ್ಯಾಸವನ್ನು ಕಳೆದ 8 ವರ್ಷಗಳಿಂದಲೂ ಹಲ್ಮಿಡಿ ಶಿಲಾಶಾಸ ನದ ಆವರಣದಲ್ಲಿ ನಡೆಸಲಾ ಗುತ್ತಿದೆ. ಈ ಬಾರಿ ಕನ್ನಡದ ಕಬೀರ ಎಂದೇ ಹೆಸರಾದ…
ಕುಶಾವರ ಶಾಲೆ ಅಂಗಳದಲ್ಲಿ 50 ಗಿಡ ನೆಟ್ಟ ಮಕ್ಕಳು-ಗಣ್ಯರು
June 12, 2019ಬೇಲೂರು: ಅರಣ್ಯ-ಪರಿಸರ ಕುರಿತು ಶಾಲಾ ಮಕ್ಕಳಲ್ಲಿ ಹೆಚ್ಚಿನ ಅರಿವು ಮೂಡಿಸಿ, ಗಿಡ-ಮರಗಳನ್ನು ಬೆಳೆಸುವ ಹವ್ಯಾಸ ಬೆಳೆಸಬೇಕು ಎಂದು ಹಾಸನ ಸಾಮಾಜಿಕ ವಲಯ ಅರಣ್ಯ ಸಂರಕ್ಷಣಾಧಿಕಾರಿ ರವಿ ಜೆ.ಜಿ. ಹೇಳಿದರು. ತಾಲೂಕಿನ ಕುಶಾವರ ಗ್ರಾಮದಲ್ಲಿ ತಾಲೂಕು ಮಕ್ಕಳ ಸಾಹಿತ್ಯ ಪರಿಷತ್, ಸಿರಿಗನ್ನಡಂ ವೇದಿಕೆ, ಸಾಮಾಜಿಕ ಅರಣ್ಯ ಇಲಾಖೆ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಸರ್ಕಾರಿ ಶಾಲೆ ಆವರಣ ಏರ್ಪಡಿಸಿದ್ದ ವನಮಹೋತ್ಸವ ಉದ್ಘಾಟಿಸಿದ ಅವರು, ಅರಣ್ಯ ಪ್ರದೇಶಗಳನ್ನು ಉಳಿಸಿ ಬೆಳೆಸಬೇಕೆನ್ನುವ ಉದ್ದೇಶದಿಂದ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಈ…
ಭೂ ಸ್ವಾಧೀನ ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ
June 11, 2019ರೈತರಿಂದ ರಾಷ್ಟ್ರೀಯ ಹೆದ್ದಾರಿ ತಡೆ, ಸಂಚಾರ ಅಸ್ತವ್ಯಸ್ತ ಹಾಸನ: ರಾಜ್ಯ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಭೂ ಸ್ವಾಧೀನ ಕಾಯ್ದೆ ತಿದ್ದುಪಡಿಯು ರೈತರಿಗೆ ಮರಣಶಾಸನವಾಗಿದ್ದು, ಕೂಡಲೇ ಈ ತಿದ್ದುಪಡಿ ಕೈಬಿಡುವಂತೆ ಆಗ್ರಹಿಸಿ ನಗರ ದಲ್ಲಿ ಸೋಮವಾರ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಬೂವನಹಳ್ಳಿ ಬೈಪಾಸ್ನ ಬಳಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ನಗರದ ಹೇಮಾವತಿ ಪ್ರತಿಮೆ ಬಳಿ ಯಿಂದ ರೈತ ಸಂಘದ ನೂರಾರು ಕಾರ್ಯಕರ್ತರು ಬೂವನಹಳ್ಳಿ ಬೈಪಾಸ್ ವರೆಗೂ ಮೆರವಣಿಗೆಯಲ್ಲಿ ಬಂದು…
ಹಾಸನಕ್ಕೆ ಮರು ನಿಯೋಜನೆಗೊಂಡ ಎಸ್ಪಿ ಪ್ರಕಾಶ್ಗೌಡ
June 11, 2019ಹಾಸನ: ಲೋಕಸಭಾ ಚುನಾವಣಾ ಸಂದರ್ಭದಲ್ಲಿ ವರ್ಗಾವಣೆಗೊಂಡಿದ್ದ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಎ.ಎನ್.ಪ್ರಕಾಶ್ಗೌಡ ಅವರು ಮತ್ತೆ ಸೋಮವಾರ ಅಧಿಕಾರ ಸ್ವೀಕರಿಸಿದರು. ಅಲ್ಲದೆ ಜಿಲ್ಲೆಯಲ್ಲಿ 17 ಸಬ್ ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆ ಮಾಡಲಾಗಿದೆ. ಪ್ರಕಾಶ್ಗೌಡ ಮರು ನಿಯೋಜನೆ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಎ.ಎನ್.ಪ್ರಕಾಶ್ಗೌಡ ಅವರನ್ನು ವರ್ಗಾವಣೆ ಮಾಡಿತ್ತು. ಇವರ ಜಾಗಕ್ಕೆ ಚೇತನ್ಸಿಂಗ್ ರಾಥೋಡ್ ಅವರನ್ನು ನೇಮಿಸಿ ಆದೇಶ ಹೊರಡಿಸಿತ್ತು. ಚುನಾವಣೆ ಮುಕ್ತಾಯವಾದ ಬಳಿಕ, ಸರ್ಕಾರ ಮತ್ತೆ ಅವರನ್ನು ಹಾಸನ ಪೆÇಲೀಸ್ ವರಿಷ್ಠಾಧಿಕಾರಿಯಾಗಿ ನೇಮಿಸಿ ಆದೇಶ ಹೊರಡಿಸಿದೆ. ಅದರಂತೆ ಸೋಮ…
ಕಂತೇನಹಳ್ಳಿ ಕೆರೆ ಈಗ ಹಂದಿಗಳ ಸಾಮ್ರಾಜ್ಯ..!
June 11, 2019ಬಿಡಾಡಿ ಪ್ರಾಣಿಗಳ ಸೆರೆಗೆ ಸಾರ್ವಜನಿಕರ ಒತ್ತಾಯ, ಸ್ವಚ್ಛ ಪರಿಸರ ನಿರ್ಮಾಣಕ್ಕೆ ಮನವಿ ಅರಸೀಕೆರೆ: ನಗರದ ಕಂತೇನಹಳ್ಳಿ ಕೆರೆ ಅಂಗಳದಲ್ಲಿ ನಗರಸಭೆಯು ಉದ್ಯಾನವನವನ್ನು ನಿರ್ಮಿಸಿ ಸಾರ್ವಜನಿಕರ ಮೆಚ್ಚಿಗೆಗೆ ಪಾತ್ರ ವಾಗಿದ್ದರೆ, ಮತ್ತೊಂದೆಡೆ ಈ ಉದ್ಯಾನ ವನಕ್ಕೆ ಹೊಂದಿಕೊಂಡಿರುವ ಕೆರೆ ಅಂಗ ಳವು ಹಂದಿ ಮತ್ತು ನಾಯಿಗಳ ನೆಚ್ಚಿನ ತಾಣವಾಗಿ ಕೆರೆ ನೀರನ್ನು ಕಲುಷಿತ ಗೊಳಿಸಿ ಕಾಲುದಾರಿಗಳಲ್ಲಿ ಅಡ್ಡಾ ದಿಡ್ಡಿ ಸಂಚರಿಸುತ್ತಿರುವುದು ವಾಯು ವಿಹಾರಿ ಗಳಿಗೆ ಕಿರಿಕಿರಿ ಉಂಟು ಮಾಡುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ನಗರದ ಕಂತೇನಹಳ್ಳಿ ಬಡಾವಣೆಯ…
ಜಿಲ್ಲಾಧಿಕಾರಿ ಅಕ್ರಂಪಾಷ ನೇತೃತ್ವದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ: ಹಲವು ವಿಚಾರಗಳ ಚರ್ಚೆ
June 11, 2019ಫಲಾನುಭವಿಗಳಿಗೆ ನಿವೇಶನ ಒದಗಿಸಿ: ಡಿಸಿ ಹಾಸನ: ಜಿಲ್ಲೆಯಲ್ಲಿ ಈಗಾಗಲೇ ಗುರುತಿಸಿರುವ 7,388 ಅರ್ಹ ಫಲಾನುಭವಿಗಳಿಗೆ ವಿವಿಧ ವಸತಿ ಯೋಜನೆಯಡಿ ನಿವೇಶನ ಒದಗಿಸಲು ಅಧಿಕಾರಿಗಳು ಪ್ರಥಮ ಆದ್ಯತೆ ನೀಡಿ ಕೆಲಸ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷಾ ಸೂಚನೆ ನೀಡಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ವಸತಿ ಯೋಜನೆಗಳ ಪ್ರಗತಿ ಪರಿಶೀಲಿಸಿ ಮಾತನಾಡಿದ ಅವರು, ನಿವೇಶನ ಹಂಚಿಕೆಗೆ ಗುರುತಿಸಿರುವ ಸರ್ಕಾರದ ಜಮೀನು, ಗೋಮಾಳ ಹಾಗೂ ಖರೀದಿಸಿದ ಖಾಸಗಿ ಜಮೀನುಗಳನ್ನು ನಿವೇಶನಗಳನ್ನಾಗಿ ಮಾರ್ಪಡಿಸಿ ವಿತರಣೆಗೆ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರಲ್ಲದೆ,…
ಮನೆಯಲ್ಲೊಂದು ಚಿಕ್ಕ ಗ್ರಂಥಾಲಯ ನಿರ್ಮಿಸಿ: ನಾಗರಾಜು
June 11, 2019ಹಾಸ£: ಯಾರು ಪುಸ್ತಕ ವನ್ನು ಓದುವುದಿಲ್ಲ ಅವರು ಸಮಾಜಕ್ಕೆ ಹೊರೆ ಆಗಿರುತ್ತಾರೆ. ಹಾಗಾಗಿ, ಎಲ್ಲರೂ ಪುಸ್ತಕ ಓದುವ ಅಭ್ಯಾಸ ರೂಢಿಸಿ ಕೊಳ್ಳುವ ಜೊತೆಗೆ ಮನೆಯಲೊಂದು ನಿಮ್ಮದೆಯಾದ ಚಿಕ್ಕ ಗ್ರಂಥಾಲಯ ನಿರ್ಮಿಸಿ ಎಂದು ಉಪವಿಭಾಗಾಧಿಕಾರಿ ಹೆಚ್. ಎಲ್.ನಾಗರಾಜು ಸಲಹೆ ನೀಡಿದರು. ನಗರದ ಶಂಕರಮಠ ರಸ್ತೆಯಲ್ಲಿರುವ ಅಕ್ಷರ ಬುಕ್ ಹೌಸ್ ವತಿಯಿಂದ ಎಸ್ಎಸ್ ಎಲ್ಸಿ ಪರೀಕ್ಷೆಯಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕ ಪಡೆದವರಿಗೆ ಹಮ್ಮಿಕೊಳ್ಳಲಾಗಿದ್ದ ಅಕ್ಷರ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜಕ್ಕೆ ಪೂರಕವಾಗಿರುವ ಪುಸ್ತಕ ವನ್ನು ಹೆಚ್ಚು…