ಅರಸೀಕೆರೆ: ವಾಸವಿ ಜಯಂತಿ ಕಾರ್ಯಕ್ರಮದ ಅಂಗವಾಗಿ ನಗರದ ಪೇಟೆ ಬೀದಿಯಲ್ಲಿರುವ ಶ್ರೀ ಕನ್ನಿಕಾ ಪರಮೇ ಶ್ವರಿ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ಮಂಗಳವಾರ ನೆರವೇರಿತು. ವಿಶೇಷ ಹೂವಿನ ಅಲಂಕಾರ ಮಾಡ ಲಾಗಿದ್ದ ಅಮ್ಮನವರಿಗೆ ಪ್ರಾತಃಕಾಲದ ಲ್ಲಿಯೇ 102 ಕಳಸಗಳೊಂದಿಗೆ ಮಹಿಳೆ ಯರು ಗಂಗೆಯನ್ನು ತರುವುದರ ಮೂಲಕ ಧಾರ್ಮಿಕ ಕಾರ್ಯಕ್ರಮ ಪ್ರಾರಂಭಿಸಲಾ ಯಿತು. ಎಲ್ಲಾ ದೇವರುಗಳಿಗೆ ಫಲ ಸಮ ರ್ಪಣೆ, ಶ್ರೀಮಹಾಗಣಪತಿ ಹೋಮ, ಮೂಲ ಮಂತ್ರ ಹೋಮದೊಂದಿಗೆ ಮಧ್ಯಾಹ್ನ ಪೂರ್ಣಾಹುತಿ ನೀಡಲಾಯಿತು. ಪೂರ್ಣಾಹುತಿ ನಂತರ ತೊಟ್ಟಿಲು ಸೇವೆ,…
ಮಿಸ್ ಪಾಪ್ಯುಲರ್ ಡಾ.ಸ್ವಾತಿ
May 15, 2019ಹಾಸನ: ಬೆಂಗಳೂರಿನ ಕೋರ್ಟ್ ಯಾರ್ಡ್ ಮಾರಿಯೋಟ್ ನಲ್ಲಿ ನಡೆದ ಮಿಸ್ ಗ್ಲೋಬ್ ಸೌತ್ ಇಂಡಿಯಾ ಸ್ಪರ್ಧೆಯಲ್ಲಿ ಹಾಸನ ಜಿಲ್ಲೆಯಿಂದ ಭಾಗವಹಿಸಿ ಪ್ರಾಯೋಗಿಕ ಎಲ್ಲಾ ಹಂತದಲ್ಲೂ ತೇರ್ಗಡೆ ಹೊಂದಿ ಮಿಸ್ ಪಾಪ್ಯುಲರ್ ಸಬ್ ಟೈಟಲ್ ಮತ್ತು ಮಿಸ್ ಗ್ಲೋಬ್ ಸೌತ್ ಇಂಡಿಯಾ ರನ್ನರ್ ಅಪ್ ಸ್ಥಾನ ಪಡೆದ ಯುವ ಕಲಾವಿದೆ ಡಾ.ಸ್ವಾತಿ ಪಿ. ಭಾರದ್ವಾಜ್ ವಿಜೇತರಾಗಿದ್ದಾರೆ. ರಾಷ್ಟ್ರ ಮಟ್ಟದ ಸ್ಪರ್ಧೆ ಜೂನ್ 29 ರಂದು ದೆಹಲಿಯಲ್ಲಿ ನಡೆಯಲಿದ್ದು, ನಮ್ಮ ರಾಜ್ಯದ ಪರವಾಗಿ ಪ್ರತಿನಿಧಿಸಲು ಸ್ವಾತಿ ಆಯ್ಕೆಯಾಗಿದ್ದಾರೆ.
ಹಿರಿಯರಿಗಾಗಿ ಕಿರಿಯರು ಸಮಯ ಮೀಸಲಿಡಿ: ಸಂತೋಷ್
May 15, 2019ಅರಸೀಕೆರೆ: ಮನುಷ್ಯನಿಗೆ ವಯಸ್ಸು ಹೆಚ್ಚಾದಂತೆ ಮನಸ್ಸು ಪರಿಪಕ್ವ ವಾಗುತ್ತದೆ. 60ವರ್ಷ ದಾಟಿದ ಹಿರಿಯ ರನ್ನು ಗೌರವಿಸುವುದು ನಾಗರಿಕತೆಯಾ ಗಿದ್ದು, ಅವರನ್ನು ಕಾಯುವ ನಿಟ್ಟಿನಲ್ಲಿ ಕಿರಿಯರು ದಿನದಲ್ಲಿ ಸ್ವಲ್ಪ ಸಮಯವನ್ನಾ ದರೂ ಮೀಸಲಿಡಬೇಕು ಎಂದು ತಹಸೀ ಲ್ದಾರ್ ಸಂತೋಷ್ಕುಮಾರ್ ಹೇಳಿದರು. ನಗರದ ಶ್ರೀವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ತಾಲೂಕು ಹಿರಿಯ ನಾಗರಿಕರ ವೇದಿಕೆಯಿಂದ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ಯುವ ಜನಾಂಗಕ್ಕೆ ಹಿರಿಯರು ಮತ್ತು ಮಕ್ಕಳಿ ಗಾಗಿ ಸಮಯ ಮೀಸಲಿಡುವುದೇ ದೊಡ್ಡ ತಲೆ ನೋವಾಗಿದೆ. ಅಂದಿನ…
ಮಾವಿನಕಾಯಿ ಮಾರಾಟ ಮಳಿಗೆಗಳಿಗೆ ತಹಸೀಲ್ದಾರ್ ಭೇಟಿ, ಪರಿಶೀಲನೆ
May 15, 2019ಹಾಸನ: ಅರಸೀಕೆರೆ ನಗರದಲ್ಲಿ ಮಾವಿನಕಾಯಿಗಳನ್ನು ಕೃತಕ ಹಣ್ಣು ಮಾಡುವಿಕೆ ವಿಧಾನದ ಅನುಮಾನದ ಮೇರೆಗೆ ಮೇ 13ರಂದು ತಹಸೀಲ್ದಾರ್ ಸಂತೋಷ ಕುಮಾರ್ ಮತ್ತು ತಾಲೂಕು ಆಹಾರ ಸುರಕ್ಷಾತಾಧಿಕಾರಿ ಡಾ.ಜಿ.ಎಸ್. ನಾಗಪ್ಪ ಜಂಟಿಯಾಗಿ ಸಿಬ್ಬಂದಿಯೊಡನೆ ಮಾವಿನಕಾಯಿ ಮಾರಾಟ ಮಳಿಗೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಾವಿನ ಹಣ್ಣುಗಳಿಗೆ ವಿಷಕಾರಿ ರಾಸಾಯನಿಕ ವಸ್ತುಗಳನ್ನು ಸಿಂಪಡಿಸಿ ಅವುಗಳನ್ನು ಕೃತಕ ರೀತಿಯಲ್ಲಿ ಹಣ್ಣು ಮಾಡದಂತೆ ಮಾಲೀಕರಿಗೆ ಎಚ್ಚರಿಕೆ ನೀಡಿದರು. ಈ ರೀತಿಯ ಪ್ರಕರಣಗಳಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಬೀರುವ ಪರಿಣಾಮಗಳನ್ನು ತಿಳಿಸಲಾಯಿತು. ಕೊಳೆತ…
ಸ್ಥಳೀಯ ಸಂಸ್ಥೆ ಚುನಾವಣೆಗೆ ಅಧಿಸೂಚನೆ: ಮೇ 16ರವರೆಗೆ ನಾಮಪತ್ರ ಸಲ್ಲಿಕೆ, 29ಕ್ಕೆ ಮತದಾನ 30ಕ್ಕೆ ಮತ ಎಣಿಕೆ
May 10, 2019ಹಾಸನ: ನಗರದ ಸ್ಥಳೀಯ ಸಾರ್ವತ್ರಿಕ ಚುನಾವಣೆ-2019ನ್ನು ರಾಜ್ಯ ಚುನಾವಣಾ ಆಯೋಗವು ಮೇ 2ರಂದು ಘೋಷಿಸಿದ್ದು, ಜಿಲ್ಲಾ ಚುನಾವಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಚುನಾವಣಾ ಅಧಿಸೂಚನೆಯನ್ನು ಪ್ರಪತ್ರ-1ರಲ್ಲಿ ಹೊರಡಿಸಿದ್ದಾರೆ. ಮೇ 16ರವರೆಗೆ ಪಟ್ಟಣ ಪಂಚಾಯಿತಿ ಗಳ ವಾರ್ಡ್ಗಳಿಗೆ ನಿಗದಿಪಡಿಸಲಾದ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆ ಯವರೆಗೆ ನಾಮಪತ್ರಗಳನ್ನು ಸಲ್ಲಿಸಬಹು ದಾಗಿದ್ದು, ರಾಜ್ಯ ಚುನಾವಣಾ ಆಯೋಗದ ಪತ್ರ ಸಂಖ್ಯೆ: ರಾಚುಲಿ 76ಇಯುಬಿ 2018, ಮೇ 6ರಂತೆ ಮೇ 11ರ ಎರಡನೇ ಶನಿವಾರ ದಂದು Negotiable…
ಮೇ 23, ಮತ ಎಣಿಕೆ: ನಿಷೇಧಾಜ್ಞೆ ಜಾರಿ
May 10, 2019ಹಾಸನ: ಲೋಕಸಭಾ ಸಾರ್ವತ್ರಿಕ ಚುನಾ ವಣೆ ಮತ ಎಣಿಕೆ ಕಾರ್ಯವು ಮೇ 23ರಂದು ಹಾಸನ ನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್ನಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅಂದು ಬೆಳಿಗ್ಗೆ 6ರಿಂದ ಮೇ 24ರ ಮಧ್ಯರಾತ್ರಿ 12ಗಂಟೆವರೆಗೆ 2 ದಿನಗಳು ಮುಂಜಾಗ್ರತೆಗಾಗಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಿದ್ದಾರೆ. ನಿಷೇಧಾಜ್ಞೆ ಜಾರಿಯಲ್ಲಿರುವ ಅವಧಿಯಲ್ಲಿ ಯಾವುದೇ ರೀತಿಯ ಮೆರವಣಿಗೆ, ವಿಜಯೋತ್ಸವ ಮತ್ತು ಕರಾಳ ದಿನಾ ಚರಣೆ ನಡೆಸುವುದು ನಿಷೇಧಿಸಿದೆ. ಯಾವುದೇ ಕ್ಷಾರಕ ಪದಾರ್ಥ ಅಥವಾ ಸ್ಫೋಟಕಗಳ ಸಾಗಾಣಿಕೆ, ವಿಜಯೋತ್ಸವದ…
ಶ್ರೀಮಲ್ಲೇಶ್ವರ ಸ್ವಾಮಿ ದೇವಸ್ಥಾನ ಲೋಕಾರ್ಪಣೆ
May 10, 2019ಅರೇಹಳ್ಳಿ: ಹೋಬಳಿಯ ಕಣಗುಪ್ಪೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಬಳಿ ನೂತನವಾಗಿ ನಿರ್ಮಿಸಿರುವ ಶ್ರೀಮಲ್ಲೇಶ್ವರ ಸ್ವಾಮಿಯ ಮೂರ್ತಿ ಪ್ರತಿಷ್ಠಾಪನ ಹಾಗೂ ದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮ ಶ್ರೀಮಲ್ಲೇಶ್ವರ ಸ್ವಾಮಿ ಸೇವಾ ಸಮಿತಿಯಿಂದ ನಡೆಯಿತು. ವಿರೂಪಾಕ್ಷ ಲಿಂಗ ಶಿವಚಾರ್ಯ ಸ್ವಾಮೀಜಿ, ಚನ್ನಮಲ್ಲಿಕಾರ್ಜುನ ಶಿವಚಾರ್ಯ ಸ್ವಾಮೀಜಿ, ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ನೇತೃತ್ವವಹಿಸಿದ್ದರು. ಬೆಳಿಗ್ಗೆ ಕಳಸ ಪೂಜಾ ಕಾರ್ಯಗಳು, ಗಣಪತಿ ಪೂಜೆ, ನಂದಿ, ಪಂಚ ಕಳಸ, ನವಗ್ರಹ, ಮೃತ್ಯುಂಜಯ, ಸಪ್ತ ಸಭಾ ಅಷ್ಟದಿಕ್ಪಾಲಕರು, ದಶದಿಕ್ಪಾಲಕರು, ವಾಸ್ತು, ಅಘೋರ, ನವದುರ್ಗಾ, ಉಮಾ ಮಹೇಶ್ವರ,…
ಅಧಿಕಾರಿಗಳ ಗ್ರಾಮ ವಾಸ್ತವ್ಯಕ್ಕೆ ಎಸಿ ಸೂಚನೆ
May 10, 2019ಅರಸೀಕೆರೆ: ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಪಿಡಿಓಗಳು ಆಯಾ ಗ್ರಾಮಗಳಲ್ಲೇ ವಾಸ್ತವ್ಯ ಹೂಡುವುದರ ಮೂಲಕ ಬರಪೀಡಿತ ಪ್ರದೇಶಗಳ ಕುಡಿಯುವ ನೀರು ಮತ್ತು ಇನ್ನಿತರೇ ಸಮಸ್ಯೆಗಳ ಮಾಹಿತಿಯನ್ನು ಮೇಲಧಿಕಾರಿಗಳಿಗೆ ರವಾನಿಬೇಕು ಎಂದು ಹಾಸನ ಜಿಲ್ಲಾ ಉಪ ವಿಭಾಗಾಧಿಕಾರಿ ಡಾ.ನಾಗರಾಜು ಸೂಚನೆ ನೀಡಿದರು. ನಗರದ ತಾಲೂಕು ಕಚೇರಿಯಲ್ಲಿ ಗುರುವಾರ ನಡೆದ ತಾಲೂಕಿನ 5 ಹೋಬಳಿಗಳ ಶಿರಸ್ತೆದಾರ್, ರಾಜಸ್ವ, ಪಿಡಿಓ ಸೇರಿದಂತೆ ವಿವಿಧ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಕುಡಿಯುವ ನೀರು ಸಮಸ್ಯೆ ಇಲ್ಲದಿದ್ದರೂ ಸದಾ ಜಾಗೃತರಾಗಿರು ವಂತೆ ನಗರಸಭೆ…
3 ವರ್ಷವಾದರೂ ಉದ್ಘಾಟನೆಯಾಗದ ಯಾತ್ರಿ ನಿವಾಸ
May 10, 2019ಅರಸೀಕೆರೆ- ದಕ್ಷಿಣ ಕರ್ನಾ ಟಕದಲ್ಲಿ ಚಿಕ್ಕ ತಿರುಪತಿ ಎಂದು ಪ್ರಸಿದ್ಧ ವಾದ ತಾಲೂಕಿನ ಅಮರಗಿರಿ ಮಲೇ ಕಲ್ ತಿರುಪತಿ ಶ್ರೀಲಕ್ಷ್ಮೀವೆಂಕಟೇಶ್ವರ ಸ್ವಾಮಿ ಕ್ಷೇತ್ರದಲ್ಲಿ ನಿರ್ಮಾಣಗೊಂಡಿ ರುವ ನೂತನ ಯಾತ್ರಿ ನಿವಾಸ ಹಾಗೂ ರಾಜಗೋಪುರ ಲೋಕಾರ್ಪಣೆಗೊಳ್ಳದೆ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಶ್ರೀಕ್ಷೇತ್ರದ ದೇವಾಲಯದ ರಾಜ ಗೋಪುರ ಉದ್ಯಮಿ ಅರುಣ್ಕುಮಾರ್ ಅವರ ನೇತೃತ್ವದಲ್ಲಿ ನಿರ್ಮಾಣಗೊಂಡು 3 ವರ್ಷ ಕಳೆದಿದೆ. ಜೊತೆಗೆ, 2012ರ ಮೇ 12ರಂದು ದೇವಾಲಯದ ಸಮೀಪ ದಲ್ಲಿ ಯಾತ್ರಿ ನಿವಾಸ ಕಟ್ಟಡ ನಿರ್ಮಾ ಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾ ಯಿತು….
‘ಹಾಸನದಲ್ಲಿ ಗೋಲಿಬಾರ್ ಆದ್ರೆ ಅದಕ್ಕೆ ಡಿಸಿ ಹೊಣೆ’
May 9, 2019ಹಾಸನ: ಆಲೂಗಡ್ಡೆ ಬಿತ್ತನೆ ಬೀಜ ವಿತರಣಾ ವ್ಯವಸ್ಥೆ ಯಲ್ಲಿ ಲೋಪ ಉಂಟಾಗಿ, ಗೋಲಿಬಾರ್ ಏನಾದರೂ ಆದರೆ, ಅದಕ್ಕೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರೇ ನೇರ ಹೊಣೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ ಕಿಡಿಕಾರಿದ್ದಾರೆ. ನಗರದಲ್ಲಿ ಬುಧವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಚುನಾ ವಣೆ ಮುಗಿದು ಹಲವು ದಿನ ಕಳೆದರೂ ರೈತರ ಬಗ್ಗೆ ಚರ್ಚಿಸಲು ಜಿಲ್ಲಾಧಿಕಾರಿಗೆ ಸಮಯ ಇಲ್ಲ. ಬರ ಪರಿಹಾರ ಕಾಮಗಾರಿ ಗಾಗಿ ಸರ್ಕಾರ ಜಿಲ್ಲೆಗೆ 8 ಕೋಟಿ ಬಿಡು ಗಡೆ ಮಾಡಿದೆ….