ಪೊನ್ನಂಪೇಟೆ: ಇಲ್ಲಿನ ನಾಗರಿಕ ವೇದಿಕೆಯ ಪದಾಧಿಕಾರಿಗಳು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಭೇಟಿ ಮಾಡಿ ಪೊನ್ನಂಪೇಟೆ ತಾಲೂಕು ರಚನೆ ಸಂಬಂಧ ಸಹಕಾರ ನೀಡುವಂತೆ ಮನವಿ ಮಾಡಿದರು. ಬೆಂಗಳೂರಿನ ದೇವೇಗೌಡರ ನಿವಾಸದಲ್ಲಿ ಮಾಜಿ ಪ್ರಧಾನಿಯನ್ನು ಭೇಟಿ ಮಾಡಿದ ವೇದಿಕೆಯ ಪದಾಧಿಕಾರಿಗಳು. ಕಳೆದ 10 ವರ್ಷಗಳಿಂದ ಪೊನ್ನಂಪೇಟೆ ತಾಲೂಕು ರಚನೆಗೆ ಬೇಕಾದ ಎಲ್ಲಾ ಸೌಕರ್ಯಗಳು ಪೊನ್ನಂಪೇಟೆಯಲ್ಲಿದ್ದು, ನ್ಯಾಯಾಲಯ, ನೋಂದಣಾಧಿಕಾರಿ ಕಚೇರಿ, ನಾಡ ಕಚೇರಿ ಸೇರಿದಂತೆ ವಿವಿಧ ಇಲಾಖಾ ಕಚೇರಿಗಳು ಇಲ್ಲಿವೆ. ಆದ್ದರಿಂದ ಪೊನ್ನಂಪೇಟೆ ತಾಲೂಕು ರಚನೆಗೆ ಘೋಷಿಸಲು ಶಿಫಾರಸ್ಸು ಮಾಡುವಂತೆ ಮನವಿ…
ಕೊಡವ ಹೆಣ್ಣು ಮಕ್ಕಳ ಸಾಧನೆ ಅದ್ವಿತೀಯ
February 21, 2019ವಿರಾಜಪೇಟೆ: ದೇಶ ವಿದೇಶಗಳಲ್ಲಿ ಕೊಡಗಿನ ಹೆಣ್ಣುಮಕ್ಕಳು ಕ್ರೀಡೆ ಸೇರಿದಂತೆ ವಿವಿಧ ರಂಗದಲ್ಲಿ ಸಾಧನೆ ಮಾಡಿ ಉನ್ನತ ಸ್ಥಾನಕ್ಕೆ ಏರಿದ್ದಾರೆ. ಹಿಂದಿ ನಿಂದಲೂ ಕೊಡಗಿನಲ್ಲಿ ಹೆಣ್ಣು ಮಕ್ಕಳಿಗೆ ಮಹತ್ವದ ಸ್ಥಾನ ನೀಡಿದ ಹೆಗ್ಗಳಿಕೆ ಕೊಡವ ಜನಾಂಗದ್ದಾಗಿದೆ ಎಂದು ಅಖಿಲ ಕೊಡವ ಸಮಾಜದ ಪೊಮ್ಮಕ್ಕಡ ಪರಿ ಷತ್ ಅಧ್ಯಕ್ಷೆ ಬಾಚರಣೆಯಂಡ ರಾಣು ಅಪ್ಪಣ್ಣ ಹೇಳಿದರು. ವಿರಾಜಪೇಟೆ ಅಖಿಲ ಕೊಡವ ಸಮಾಜದ ಸಭಾಂ ಗಣದಲ್ಲಿ ಆಯೋಜಿಸಲಾಗಿದ್ದ ‘ನಮ್ಮ ಸಂಸ್ಕøತಿ ಹಾಗೂ ಹೆಣ್ಣು ಮಕ್ಕಳು’ ಎಂಬ ವಿಚಾರ ಸಂಕಿರಣ ಮತ್ತು ಸನ್ಮಾನ ಸಮಾರಂಭದಲ್ಲಿ…
ಕನ್ನಡ ಸಾಹಿತ್ಯದ ಬೆಳವಣಿಗೆಗೆ ಸರ್ವಜ್ಞರ ಕೊಡುಗೆ ಅಪಾರ
February 20, 2019ಶಿವಾಜಿ ಜೀವನ ಮೌಲ್ಯ ಅಳವಡಿಸಿಕೊಳ್ಳಲು ಕರೆ ಮಡಿಕೇರಿ: ಕನ್ನಡ ಸಾಹಿತ್ಯದ ಬೆಳವಣಿಗೆಗೆ ಸರ್ವಜ್ಞರ ಕೊಡುಗೆ ಅಪಾರ ವಾದದ್ದು ಎಂದು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅಭಿಪ್ರಾಯಪಟ್ಟರು. ನಗರದ ಕೋಟೆ ಹಳೇ ವಿಧಾನ ಸಭಾಂ ಗಣದಲ್ಲಿ ಬುಧವಾರ ನಡೆದ ಸರ್ವಜ್ಞ ಜಯಂತಿ ಹಾಗೂ ಛತ್ರಪತಿ ಶಿವಾಜಿ ಮಹಾ ರಾಜರ ಜಯಂತಿ ಆಚರಣಾ ಸಮಾರಂಭ ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿರುವುದಕ್ಕೆ ಸರ್ವಜ್ಞರ ಕೊಡುಗೆ ಮಹ ತ್ತರವಾದದ್ದು. ಅವರು ರಚಿಸಿರುವ ವಚನ ಗಳಿಗೆ ಸಾರ್ವಕಾಲಿಕ ಮನ್ನಣೆ…
ವಿದ್ಯಾರ್ಥಿಗಳಿಗೆ ಕಾನೂನಿನ ಜ್ಞಾನ ಇರಬೇಕು
February 20, 2019ಮಡಿಕೇರಿ: ಸಾಮಾಜಿಕ ನ್ಯಾಯವು ಪ್ರಸ್ತುತ ಕಾಲಘಟ್ಟದಲ್ಲಿ ಸಮಾನತೆಯಾ ಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ವಿ.ವಿ.ಮಲ್ಲಾಪುರ ತಿಳಿಸಿದ್ದಾರೆ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ವತಿಯಿಂದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಸಭಾಂಗಣದಲ್ಲಿ ಬುಧ ವಾರ ನಡೆದ ‘ಅಂತರಾಷ್ಟ್ರೀಯ ಸಾಮಾ ಜಿಕ ನ್ಯಾಯ ದಿನಾಚರಣೆ ಮತ್ತು ಮಾನವ ಹಕ್ಕುಗಳು’ ಕುರಿತು ಕಾನೂನು ಅರಿವು ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತ ನಾಡಿದರು. ವಿದ್ಯಾರ್ಥಿಗಳಿಗೆ ಕಾನೂನಿನ ಬಗ್ಗೆ…
ಯಡೂರು ಸುತ್ತಮುತ್ತ ಮತದಾನ ಜಾಗೃತಿ ಜಾಥಾ
February 20, 2019ಸೋಮವಾರಪೇಟೆ: ಸಮೀಪದ ಯಡೂರು ಗ್ರಾಮದ ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಚುನಾವಣಾ ಸಾಕ್ಷರತಾ ಕ್ಲಬ್ ವತಿಯಿಂದ ಯಡೂರು ಗ್ರಾಮದ ಸುತ್ತಮುತ್ತ ಲಿನ ರಸ್ತೆಗಳಲ್ಲಿ ಮತದಾನದ ಜಾಗೃತಿ ಜಾಥಾ ನಡೆಯಿತು. ಕಾಲೇಜಿನ ವಿದ್ಯಾರ್ಥಿಗಳು ಮತದಾನ ನಮ್ಮ ಹಕ್ಕು, ಹದಿನೆಂಟು ವರ್ಷ ತುಂಬಿದ ಎಲ್ಲರೂ ಮತದಾನಕ್ಕೆ ಅರ್ಹರು, ಮತದಾನ ಒಂದು ಪವಿತ್ರ ಕಾರ್ಯ, ಮತದಾನ ಮಾಡುವಾಗ ಯಾವುದೇ ಪ್ರಲೋಭನೆಗಳಿಗೆ ಒಳಗಾಗಬೇಡಿ ಇತ್ಯಾದಿ ಘೋಷಣೆಗಳನ್ನು ಕೂಗುತ್ತಾ ಭಿತ್ತಿಪತ್ರಗಳನ್ನು ಪ್ರದರ್ಶಿಸುತ್ತಾ ಸಾಗುವ ಮೂಲಕ ಮತದಾರರಲ್ಲಿ ಮತದಾನದ ಕುರಿತು ಅರಿವು ಮೂಡಿಸಿದರು. ಈ…
ಚರಿತ್ರೆ ತಿರುಚುವಿಕೆಯಿಂದ ಕೋಮು ಭಾವನೆಗೆ ಧಕ್ಕೆ
February 20, 2019ವಿರಾಜಪೇಟೆ: ಚರಿತ್ರೆಯ ಮರು ಸೃಷ್ಟೀಕರಣದಿಂದ ಜಾತಿ ಧರ್ಮಗಳ ಬಗ್ಗೆ ವಿರೋಧಗಳು ಹುಟ್ಟಿಕೊಂಡು ಕೋಮು ಭಾವನೆಗಳಿಗೆ ಅವಕಾಶವಾಗುತ್ತದೆ. ಸಮಾಜ ದಲ್ಲಿ ಇಂದು ಚರಿತ್ರೆಗಳನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಮಂಗಳೂರು ವಿಶ್ವ ವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾ ಪಕ ಡಾ.ಪಿ.ಎಲ್. ಧರ್ಮ ಹೇಳಿದರು. ವಿರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗ ಮತ್ತು ಹಳೆ ವಿದ್ಯಾರ್ಥಿ ಸಂಘ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಕಾಲೇ ಜಿನ ಸಭಾಂಗಣದಲ್ಲಿ ಆಯೋಜಿಸಲಾ ಗಿದ್ದ ರಾಜ್ಯಶಾಸ್ತ್ರದ ಬೆಳಕು ಭಿತ್ತಿಪತ್ರಿಕೆಯ 6ನೇ ವರ್ಷದ ವಾರ್ಷಿಕೋತ್ಸವ…
ಯೋಧರ ಸಾವು ಸಂಭ್ರಮಿಸಿದವನ ವಿರುದ್ಧ ಕೇಸು ದಾಖಲು
February 20, 2019ಸೋಮವಾರಪೇಟೆ: ಕಾಶ್ಮೀ ರದ ಪುಲ್ವಾಮಾದಲ್ಲಿ ಉಗ್ರರ ಆತ್ಮಾಹುತಿ ದಾಳಿಗೆ ಸೈನಿಕರು ಹುತಾತ್ಮರಾದ ಮಾರನೇ ದಿನದಂದು ಪಟ್ಟಣದ ರೇಂಜರ್ ಬ್ಲಾಕ್ ನಲ್ಲಿ ವ್ಯಕ್ಯಿಯೋರ್ವ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾನೆ ಎಂಬ ಆರೋಪದಡಿ ಓರ್ವನ ವಿರುದ್ಧ ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರೇಂಜರ್ ಬ್ಲಾಕ್ ನಿವಾಸಿ ಷಂಶುದ್ಧೀನ್ ಆರೋಪಿ. ಹಿಂದೂ ಜಾಗರಣಾ ವೇದಿ ಕೆಯ ತಾಲ್ಲೂಕು ಅಧ್ಯಕ್ಷ ಎಂ.ಬಿ. ಉಮೇಶ್ ಅವರು ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ. ಫೆ.15ರಂದು ಸಂಜೆ 7 ಗಂಟೆಯ ಸುಮಾರಿಗೆ ರೇಂಜರ್ ಬ್ಲಾಕ್ನ ಷಂಶು ದ್ಧೀನ್…
ಎಮ್ಮೆಮಾಡುನಲ್ಲಿ ವ್ಯಕ್ತಿಯ ಶವ ಪತ್ತೆ
February 20, 2019ನಾಪೋಕ್ಲು: ಸಮೀಪದ ಎಮ್ಮೆಮಾಡುನಲ್ಲಿ ವಾರಸುದಾರರಿಲ್ಲದ ವ್ಯಕ್ತಿಯೊಬ್ಬರ ಶವವೊಂದು ಪತ್ತೆಯಾಗಿದೆ. ಸುಮಾರು 65 ವರ್ಷದ ವ್ಯಕ್ತಿಯ ಶವವು ಎಮ್ಮೆಮಾಡು ದರ್ಗಾದ ಸಮೀಪ ಪತ್ತೆಯಾಗಿ ವ್ಯಕ್ತಿಯ ಆಧಾರ್ ಕಾರ್ಡ್ ಲಭಿಸಿದ್ದು ಚೆಯ್ಯಂಡಾಣೆ ನರಿ ಯಂದಡ ಗ್ರಾಮದಲ್ಲಿ ಕೂಲಿಕಾರ್ಮಿಕನಾಗಿ ಕೆಲಸ ನಿರ್ವ ಹಿಸುತ್ತಿದ್ದ ಕೊರಟಕೂಡಿ ಇಸ್ಮಾಯಿಲ್ ಎಂದು ಗುರುತಿಸಲಾಗಿದೆ. ಮೃತದೇಹವನ್ನು ಮಡಿಕೇರಿ ಶವಾಗಾರದಲ್ಲಿ ಇರಿಸಲಾಗಿದ್ದು, ನಾಪೋಕ್ಲು ಪೊಲೀಸ್ ಠಾಣೆಯ ಎಎಸ್ಐ ವಿಶ್ವನಾಥ್ ಹಾಗೂ ಸಿಬ್ಬಂದಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಸವ ಪೂರ್ವ ಭ್ರೂಣ ಲಿಂಗಪತ್ತೆ ಅಪಾಯಕಾರಿ ಬೆಳವಣಿಗೆ
February 20, 2019ಮಡಿಕೇರಿ: ಸಮಾಜದಲ್ಲಿ ಸಮಾನವಾಗಿ ಬದುಕು ಕಟ್ಟಿಕೊಳ್ಳಲು ಲಿಂಗಾ ನುಪಾತದಲ್ಲಿ ಸಮತೋಲನ ಇರಬೇಕು. ಆದ್ದರಿಂದ ಹೆಣ್ಣು ಮತ್ತು ಗಂಡಿಗೆ ಸಮಾನ ಅವಕಾಶಗಳು ದೊರೆಯಬೇಕು ಎಂದು ನಗರಸಭೆ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಸ್ಥಳೀಯ ಜನಪ್ರತಿ ನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿ ಗಳು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯಕರ್ತರಿಗೆ ನಗರದ ಖಾಸಗಿ ಹೋಟೆಲ್ನಲ್ಲಿ ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ನಿಷೇಧ…
ವಿದ್ಯಾರ್ಥಿನಿಯ ಹತ್ಯೆ ಪ್ರಕರಣ: ಸಿದ್ದಾಪುರ ಗ್ರಾಪಂ ಮುಂದೆ ದಿಢೀರ್ ಪ್ರತಿಭಟನೆ; ತಹಶೀಲ್ದಾರ್ ತರಾಟೆಗೆ
February 19, 2019ಸಿದ್ದಾಪುರ: ಕಾಮುಕರ ಅಟ್ಟಹಾಸಕ್ಕೆ ಬಲಿಯಾದ ಸಂಧ್ಯಾಳ ಕುಟುಂಬಕ್ಕೆ ಪರಿಹಾರ ನೀಡಲು ಮುಂದಾಗದ ತಾಲೂಕು ಆಡಳಿತದ ವಿರುದ್ಧ ಸಿದ್ದಾಪುರ ಗ್ರಾಮ ಪಂಚಾಯಿತಿ ಮುಂದೆ ಜಸ್ಟಿಸ್ ಫಾರ್ ಸಂಧ್ಯಾ ಹೋರಾಟ ಸಮಿತಿಯ ಪ್ರಮುಖರು ದಿಢೀರ್ ಪ್ರತಿಭಟನೆ ನಡೆಸಿದರು. ಹತ್ಯೆಯಾಗಿ ಎರಡು ವಾರ ಕಳೆದರೂ ವಿರಾಜಪೇಟೆ ತಹಶೀಲ್ದಾರ್ ವಿದ್ಯಾರ್ಥಿನಿಯ ಮನೆಗೆ ಭೇಟಿ ನೀಡದ ಕಾರಣ ಹೋರಾಟ ಸಮಿತಿಯ ಪ್ರಮುಖರು, ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರರನ್ನು ತರಾಟೆಗೆ ತೆಗೆದುಕೊಂಡರು. ಹೋರಾಟ ಸಮಿತಿಯ ತಂಡ ಮಂಗಳ ವಾರ ಕೊಡಗು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ…