ಮಡಿಕೇರಿ, ಏ.17- ತಾಲೂಕಿನ ಕಡಂಗ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಕೆ.ಎಂ.ವಿಮಲ ಸರ್ಕಾರದ ಆದೇಶದಂತೆ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ವಿದ್ಯಾರ್ಥಿ ಗಳ ಪೋಷಕರನ್ನು ದೂರ ವಾಣಿ ಮೂಲಕ ಸಂಪರ್ಕಿಸಿ ಒಂದನೇ ಹಂತದಲ್ಲಿ ಶೇ. 60 ಅಕ್ಷರ ದಾಸೋಹ ಆಹಾರವನ್ನು ಪೋಷಕರಿಗೆ ವಿತರಿಸಿದರು. ಶಾಲೆಯಿಂದ ಬಟ್ಟೆಯ ಚೀಲದಲ್ಲಿ ಆಹಾರವನ್ನು ಅವರ ಸ್ವಂತ ಕಾರಿನಲ್ಲಿ ತುಂಬಿ ವಿದ್ಯಾರ್ಥಿಗಳ ಪೋಷಕರಿಗೆ ಆಹಾರವನ್ನು ವಿತರಿಸಿದ್ದು, ಇದರಿಂದ ಹಷರ್Àಗೊಂಡ ವಿದ್ಯಾರ್ಥಿಗಳ ಪೋಷಕರು ಶಿಕ್ಷಕಿ ಕೆ.ಎಂ.ವಿಮಲ ಅವರ ಮಾನವೀಯತೆಯ ಕಾರ್ಯಕ್ಕೆ ಅಭಿನಂದನೆ…
‘ಕೊರೊನಾ ವಾರಿಯರ್ಸ್ಗೆ ಗೌರವ’ ವಿಶೇಷ ಸರಣಿ ಕಾರ್ಯಕ್ರಮ
April 18, 2020ಮಡಿಕೇರಿ,ಏ.17-ಮಡಿಕೇರಿ ಆಕಾಶವಾಣಿ ಕೇಂದ್ರದಿಂದ ಏ.20ರಂದು ಸಂಜೆ 5 ಗಂಟೆಗೆ ‘ಕೊರೊನಾ ವಾರಿಯರ್ಸ್ಗೆ ಗೌರವ’ ವಿಶೇಷ ಸರಣಿ ಕಾರ್ಯಕ್ರಮ ಬಿತ್ತರವಾಗುತ್ತಿದೆ. ಕೊರೊನಾ-19ರ ಸಂದರ್ಭದಲ್ಲಿ ಸಮಾಜದ ಆರೋಗ್ಯವನ್ನು ಕಾಪಾಡಲು ಶ್ರಮಿಸುತ್ತಿರುವ ಆರೋಗ್ಯ ಇಲಾಖೆಯ ಸಿಬ್ಬಂದಿಗಳೊಂದಿಗೆ ನೇರ-ಫೋನ್ ಇನ್ ಸಂವಾದ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ವೈದ್ಯರು, ವೈದ್ಯಕೀಯ ಸಿಬ್ಬಂದಿ ಭಾಗವಹಿಸಿ ತಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ಹಂಚಿಕೊಳ್ಳಲಿದ್ದಾರೆ. ರೇಡಿಯೋ ಕೇಳುಗರು ದೂ.ಸಂ. 9740871827ಕ್ಕೆ ಆರೋಗ್ಯ ಇಲಾಖೆಯ ಕೆಲಸಗಳ ಬಗ್ಗೆ ತಮ್ಮ ಅಭಿಪ್ರಾಯ ಅನಿಸಿಕೆಗಳನ್ನು ಎಸ್ಎಂಎಸ್ ಹಾಗೂ ವಾಟ್ಸ್ಆಪ್ ಮೂಲಕ ಕಳುಹಿಸುವುದರೊಂದಿಗೆ ಈ ಕಾರ್ಯಕ್ರಮದಲ್ಲಿ…
ಚಾಲಕನ ನಿಯಂತ್ರಣ ತಪ್ಪಿ ಮನೆಗೆ ನುಗ್ಗಿದ ಗೂಡ್ಸ್ ವಾಹನ
April 18, 2020ಮಡಿಕೇರಿ, ಏ.17- ಹುಣಸೂರಿನಿಂದ ಮಡಿಕೇರಿಗೆ ತರಕಾರಿ ಕೊಂಡೊಯ್ಯುತ್ತಿದ್ದ ಗೂಡ್ಸ್ ವಾಹನ ಕುಶಾಲನಗರ-ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯ ಬಸವನಹಳ್ಳಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಮನೆಯೊಂದಕ್ಕೆ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಶುಕ್ರವಾರ ಬೆಳಗಿನ 4.45ರ ನಸುಕಿನ ಸಮಯದಲ್ಲಿ ಈ ಘಟನೆ ನಡೆದಿದ್ದು, ವಾಹನ ಚಾಲಕ ಮತ್ತು ವಾಹನದಲ್ಲಿದ್ದ ಮತ್ತೊಬ್ಬ ಯುವಕ ಸಣ್ಣಪುಟ್ಟ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದ ಕುರಿತು ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ. ಘಟನೆ ವಿವರ: ಮಡಿಕೇರಿ ಮಹದೇವಪೇಟೆ ನಿವಾಸಿ ಕುಮಾರ್…
ಪೊಲೀಸ್ ಬಂದೋಬಸ್ತ್ನಲ್ಲಿ ದಿನಸಿ, ತರಕಾರಿ ಖರೀದಿ
April 2, 2020ಮಡಿಕೇರಿ, ಏ.1- ಕೊರೊನಾ ಸೋಂಕು ಹರಡುವ ಹಿನ್ನಲೆ ಮತ್ತು ಜಿಲ್ಲೆಯ ಜನರ ಸುರಕ್ಷತಾ ಹಿತದೃಷ್ಟಿಯಿಂದ ಕೊಡಗು ಜಿಲ್ಲಾಡಳಿತ ವಾರದಲ್ಲಿ 3 ದಿನಗಳ ಕಾಲ ಮಾತ್ರವೇ ದಿನಸಿ, ತರಕಾರಿ ಮತ್ತು ದಿನ ಬಳಕೆಯ ವಸ್ತುಗಳನ್ನು ಕೊಳ್ಳಲು ಜನರಿಗೆ ಅವಕಾಶ ಮಾಡಿಕೊಟ್ಟಿದೆ. ಸೋಮ ವಾರ, ಬುಧವಾರ ಮತ್ತು ಶುಕ್ರವಾರಗಳಂದು ಮಾತ್ರವೇ ಸಾಮೂಹಿಕವಾಗಿ ಸಂತೆ ಮಾದರಿ ಯಲ್ಲಿ ತರಕಾರಿ ವಸ್ತುಗಳನ್ನು ಕೊಳ್ಳಲು ಅನುವು ಮಾಡಿಕೊಡಲಾಗಿತ್ತು. ಜಿಲ್ಲೆಯ ಎಲ್ಲಾ ಕಡೆಗಳಲ್ಲೂ ಈ ಬಾರಿ ತರಕಾರಿ ಮತ್ತು ಅಗತ್ಯ ವಸ್ತುಗಳನ್ನು ಕೊಳ್ಳಲು ಜನರು ಮುಗಿ…
ಸುಂಟಿಕೊಪ್ಪದಲ್ಲಿ ಮನೆ ಮನೆಗೆ ತರಕಾರಿ ಮಾರಲು ದೃಢೀಕರಣ ಪತ್ರ ನೀಡಲು ನಿರ್ಧಾರ
April 2, 2020ಸುಂಟಿಕೊಪ್ಪ, ಏ.1- ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತರಕಾರಿ ವ್ಯಾಪಾರಸ್ಥರಿಗೆ ವಾಹನದಲ್ಲಿ ತರಕಾರಿ ಗಳನ್ನು ಗ್ರಾಹಕರ ಮನೆ ಮನೆಗಳಿಗೆ ತೆರಳಿ ನಿಗದಿತ ದರದಲ್ಲಿ ಮಾರಲು ದೃಢೀಕರಣ ಪತ್ರ ನೀಡಲಾಗುವುದೆಂದು ಸೋಮವಾರ ಪೇಟೆ ಡಿವೈಎಸ್ಪಿ ಶೈಲೆಂದ್ರ ತಿಳಿಸಿದರು. ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ನಡೆದ ತರಕಾರಿ ಹಾಗೂ ದಿನಸಿ ವ್ಯಾಪಾರಸ್ಥರ ಸಭೆಯಲ್ಲಿ ಮಾತನಾಡಿದ ಅವರು, ದಿನಸಿ ಅಂಗಡಿಯವರು ಕೂಡ ಗ್ರಾಹಕರು ದಿನಸಿ ವಸ್ತುಗಳ ಪಟ್ಟಿ ಮಾಡಿ ಕಳುಹಿಸಿದಾಗ ಸಾಮಾಗ್ರಿಗಳನ್ನು ಅಂಗಡಿ ಸಹಾಯಕನ ಮೂಲಕ ಮನೆ ಮನೆಗೆ ತಲುಪಿಸುವ ಕೆಲಸ ಮಾಡಬೇಕು….
ಕೊಡಗಿನಲ್ಲಿ ಕಟ್ಟುನಿಟ್ಟಿನ ಲಾಕ್ಡೌನ್
April 1, 2020ಮಡಿಕೇರಿ, ಮಾ.31- ಮಡಿಕೇರಿಯಲ್ಲಿ ಮಂಗಳವಾರವೂ ಲಾಕ್ಡೌನ್ ಆದೇಶ ಕಟ್ಟು ನಿಟ್ಟಾಗಿ ಪಾಲನೆಯಾಗಿದೆ. ದಿನ ದಿಂದ ದಿನಕ್ಕೆ ಜಿಲ್ಲೆಯ ಜನರೂ ಕೂಡ ಕೊರೊನಾ ಮಹಾಮಾರಿಯ ಬಗ್ಗೆ ಜಾಗೃತಿಗೊಂಡಿದ್ದು, ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯ ಆದೇಶಗಳನ್ನು ಯಥಾವತ್ತಾಗಿ ಪಾಲಿಸುತ್ತಿದ್ದಾರೆ. ಕೊರೊನಾ ಸೋಂಕು ತಗುಲಿರುವ ಒಂದು ಪ್ರಕರಣ ಕೊಡಗು ಜಿಲ್ಲೆಯಲ್ಲಿ ದೃಢಪಟ್ಟ ಬಳಿಕ ಕೊಡಗು ಜಿಲ್ಲಾಡಳಿತ ಸೋಂಕು ವ್ಯಾಪಿಸದಂತೆ ಎಲ್ಲಾ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದ್ದು, ಜನತೆ ಕೂಡ ಕೈಜೋಡಿಸಿದ್ದಾರೆ. ಎಂದಿನಂತೆ ಬೆಳಗ್ಗೆ 6 ಗಂಟೆಯಿಂದ 8 ಗಂಟೆಯ ವರೆಗೆ ಹಾಲು ಮತ್ತು…
ಕೊರೊನಾ; ಜಿಲ್ಲಾಡಳಿತದ ಕ್ರಮಕ್ಕೆ ಸಚಿವ ಸೋಮಣ್ಣ ಮೆಚ್ಚುಗೆ
April 1, 2020ಮಡಿಕೇರಿ, ಮಾ.31- ಕೊಡಗಿನಲ್ಲಿ ಕೊರೊನಾ ಸೋಂಕು ಹರಡದಂತೆ ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಮತ್ತು ಇದಕ್ಕಾಗಿ ಹಗಲು ರಾತ್ರಿ ಶ್ರಮಿಸಿದ ಸಿಬ್ಬಂದಿಗಳ ಕಾರ್ಯ ಶ್ಲಾಘನೀಯ ಎಂದು ವಸತಿ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಮೆಚ್ಚುಗೆ ವ್ಯಕ್ತಪಡಿಸಿದರು. ಕೊಡಗು ಜಿಲ್ಲೆಯ ಈ ಕಾರ್ಯ ಎಲ್ಲರಿಗೂ ಮಾದರಿಯಾಗಿದ್ದು, ಮುಖ್ಯಮಂತ್ರಿಗಳ ಪರವಾಗಿ ತಾವು ಇದನ್ನು ಅಭಿನಂದಿಸುವುದಾಗಿ ತಿಳಿಸಿ ದರು. ಮಡಿಕೇರಿಯ ಜಿಪಂ ಭವನದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಸಚಿವ ವಿ. ಸೋಮಣ್ಣ, ಕೊಡಗು ಜಿಲ್ಲೆಯ ಆರೋಗ್ಯ…
ಕೊಡಗು ಜಿಲ್ಲೆಯಲ್ಲಿ ನಿಷೇಧಾಜ್ಞೆ
March 27, 2020ಕೊಡಗು, ಮಾ.27: ಕೊಡಗು ಜಿಲ್ಲೆಯಲ್ಲಿ ದಿನಾಂಕ 22.03.2020ರ ಮಧ್ಯ ರಾತ್ರಿಯಿಂದ ದಿನಾಂಕ 14.04.2020ರ ವರೆಗೆ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಯಲ್ಲಿದ್ದು, ಸಾರ್ವಜನಿಕರು ಅತ್ಯವಶ್ಯಕ ವಸ್ತುಗಳನ್ನು ಖರೀದಿಸಲು ಬೆಳಗ್ಗೆ 6:00 ರಿಂದ ಅಪರಾಹ್ನ 12:00 ಗಂಟೆಯವರೆಗೆ ಸಮಯವನ್ನು ಈ ಹಿಂದೆ ನಿಗಧಿಗೊಳಿಸಲಾಗಿತ್ತು. ಮುಂದುವರೆದು, ಜಿಲ್ಲೆಗೆ ಹೊಂದಿಕೊಂಡಂತೆ ಇರುವ ನೆರೆಯ ಜಿಲ್ಲೆ ಮತ್ತು ರಾಜ್ಯಗಳಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿದ್ದು, ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಮುಂಜಾಗ್ರತೆಯನ್ನು ವಹಿಸಬೇಕಾದ ಕಾರಣ ದಿನಾಂಕ 27.03.2020ರಂದು ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿ, ಸಾರ್ವಜನಿಕರು ಅತ್ಯವಶ್ಯಕ ವಸ್ತುಗಳನ್ನು ಖರೀದಿಸಲು…
ಮನೆಯಲ್ಲಿ ಸಂಪರ್ಕ ತಡೆಯಲ್ಲಿರುವವರ ಬಗ್ಗೆ ವಿಶೇಷ ಗಮನಹರಿಸಲು ಸೂಚನೆ
March 21, 2020ಮಡಿಕೇರಿ,ಮಾ.20-ವಿದೇಶದಿಂದ ಆಗಮಿಸಿ ಮನೆಗಳಲ್ಲಿಯೇ ಸಂಪರ್ಕ ತಡೆ ಯಲ್ಲಿರುವವರ (ಹೋಂ ಕ್ವೆರೆಂಟೈನ್) ಬಗ್ಗೆ ವಿಶೇಷ ಗಮನ ಹರಿ ಸುವಂತೆ ಅಧಿಕಾರಿ ಗಳಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸೂಚಿಸಿದ್ದಾರೆ. ನಗರದ ಜಿಲ್ಲಾಧಿ ಕಾರಿ ಕಚೇರಿ ಸಭಾಂ ಗಣದಲ್ಲಿ ವಿವಿಧ ಅಧಿ ಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಹಲವರು ಮನೆಗಳಲ್ಲಿಯೇ ಸಂಪರ್ಕ ತಡೆಯಲ್ಲಿದ್ದು, ಇವರ ಚಲನ ವಲನಗಳ ಬಗ್ಗೆ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ವಿಶೇಷ ಗಮನ ಹರಿಸಬೇಕು ಎಂದರು. ತಹಶೀಲ್ದಾರರು, ತಾ.ಪಂ.ಇಒಗಳು ಮತ್ತು…
ಕೊಡಗಿನಲ್ಲಿ ಕೊರೊನಾ ದೃಢ: ಮಂಡ್ಯ, ಮೈಸೂರಿನಲ್ಲಿ ಆತಂಕ
March 20, 2020ಸೋಂಕಿತ ವ್ಯಕ್ತಿ ಓಡಾಡಿದ ಮಾರ್ಗಗಳ ಸಂಪೂರ್ಣ ವಿವರ ಮಡಿಕೇರಿ, ಮಾ.19- ಕೊಡಗು ಜಿಲ್ಲೆಯ ಕೊಂಡಂಗೇರಿಯ 35 ವರ್ಷದ ವ್ಯಕ್ತಿಯೊಬ್ಬ ರಿಗೆ ಕೊರೊನಾ ವೈರಸ್ ತಗುಲಿರುವ ಬಗ್ಗೆ ಮೈಸೂರು ಮೆಡಿಕಲ್ ಕಾಲೇಜಿನ ವರದಿಯಿಂದ ದೃಢಪಟ್ಟಿದೆ. ಇದರಿಂದಾಗಿ ಇಡೀ ಕೊಡಗು ಜಿಲ್ಲೆ ಮಾತ್ರವಲ್ಲದೇ, ಬೆಂಗಳೂರು, ಮಂಡ್ಯ, ಮೈಸೂರು ಬೆಚ್ಚಿ ಬಿದ್ದಿದೆ. ಈ ವ್ಯಕ್ತಿ ದುಬೈನಿಂದ ಬೆಂಗಳೂರಿಗೆ ಬಂದಿಳಿದ್ದು, ಬಳಿಕ ರಾಜಹಂಸ ಬಸ್ ನಲ್ಲಿ ಮಂಡ್ಯ, ಮೈಸೂರಿನ ಹೊಟೇಲ್ನಲ್ಲಿ ಊಟೋಪಚಾರವನ್ನೂ ಮಾಡಿದ್ದಾನೆ. ಮಾ.15ರ ಸಂಜೆ 4.30ಕ್ಕೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ…