ಸುಂಟಿಕೊಪ್ಪದಲ್ಲಿ ಮನೆ ಮನೆಗೆ ತರಕಾರಿ ಮಾರಲು ದೃಢೀಕರಣ ಪತ್ರ ನೀಡಲು ನಿರ್ಧಾರ
ಕೊಡಗು

ಸುಂಟಿಕೊಪ್ಪದಲ್ಲಿ ಮನೆ ಮನೆಗೆ ತರಕಾರಿ ಮಾರಲು ದೃಢೀಕರಣ ಪತ್ರ ನೀಡಲು ನಿರ್ಧಾರ

April 2, 2020

ಸುಂಟಿಕೊಪ್ಪ, ಏ.1- ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತರಕಾರಿ ವ್ಯಾಪಾರಸ್ಥರಿಗೆ ವಾಹನದಲ್ಲಿ ತರಕಾರಿ ಗಳನ್ನು ಗ್ರಾಹಕರ ಮನೆ ಮನೆಗಳಿಗೆ ತೆರಳಿ ನಿಗದಿತ ದರದಲ್ಲಿ ಮಾರಲು ದೃಢೀಕರಣ ಪತ್ರ ನೀಡಲಾಗುವುದೆಂದು ಸೋಮವಾರ ಪೇಟೆ ಡಿವೈಎಸ್‍ಪಿ ಶೈಲೆಂದ್ರ ತಿಳಿಸಿದರು.

ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ನಡೆದ ತರಕಾರಿ ಹಾಗೂ ದಿನಸಿ ವ್ಯಾಪಾರಸ್ಥರ ಸಭೆಯಲ್ಲಿ ಮಾತನಾಡಿದ ಅವರು, ದಿನಸಿ ಅಂಗಡಿಯವರು ಕೂಡ ಗ್ರಾಹಕರು ದಿನಸಿ ವಸ್ತುಗಳ ಪಟ್ಟಿ ಮಾಡಿ ಕಳುಹಿಸಿದಾಗ ಸಾಮಾಗ್ರಿಗಳನ್ನು ಅಂಗಡಿ ಸಹಾಯಕನ ಮೂಲಕ ಮನೆ ಮನೆಗೆ ತಲುಪಿಸುವ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಪಟ್ಟಣದಲ್ಲಿ ದಿನಸಿ ಹಾಗೂ ತರಕಾರಿ ಖರೀದಿಸಲು ಬರುತ್ತಿರುವ ಗ್ರಾಹಕರನ್ನು ನಿಯಂತ್ರಿಸಬಹುದು ಎಂದು ಹೇಳಿದರು. ಹಾಪ್‍ಕಾಮ್ ದರದ ಅನ್ವಯ ತರಕಾರಿ ಮಾರಾಟ ಮಾಡತಕ್ಕದ್ದು, ಇಲ್ಲದಿದ್ದಲ್ಲಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು. ಪಟ್ಟಣದಲ್ಲಿ ಸುಮ್ಮನೆ ಅಡ್ಡಾಡುವ ದ್ವಿಚಕ್ರ ವಾಹಗಳನ್ನು ಮುಟ್ಟು ಗೋಲು ಹಾಕಿಕೊಂಡು ಮೊಕದ್ದಮೆ ದಾಖಲಿಸುವಂತೆ ಇದೇ ಸಂದರ್ಭ ಠಾಣಾ ಧಿಕಾರಿಗಳಿಗೆ ಡಿವೈಎಸ್‍ಪಿ ಸೂಚಿಸಿದರು. ಸಭೆಯಲ್ಲಿ ವೃತ್ತ ನಿರೀಕ್ಷಕ ಮಹೇಶ್, ಸುಂಟಿಕೊಪ್ಪ ಠಾಣಾಧಿಕಾರಿ ಮಹೇಶ್, ಸುಂಟಿಕೊಪ್ಪ ಗ್ರಾ.ಪಂ. ಪಿಡಿಓ ವೇಣುಗೋಪಾಲ್ ಹಾಜರಿದ್ದರು.

Translate »