ಮಂಗಳೂರು, ಜ.20(ಎಸಿಪಿ)-ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಪತ್ತೆಯಾಗುತ್ತಿದ್ದಂತೆಯೇ ಮಂಗಳೂರು ನಗರ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ, ಬಾಂಬ್ ಇರಿಸಿದ ಶಂಕಿತನ ಹೆಜ್ಜೆ ಜಾಡು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಬಾಂಬ್ ನಿಷ್ಕ್ರಿಯಗೊಳಿಸುವ ಕಾರ್ಯಾಚರಣೆ ಯನ್ನು ಬೆಂಗಳೂರಿನಿಂದ ಆಗಮಿಸಿದ್ದ ತಂಡ ನಡೆಸುತ್ತಿದ್ದರೆ, ಇತ್ತ ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಎ.ಹರ್ಷ, ದುಷ್ಕರ್ಮಿಯ ಪತ್ತೆಗಾಗಿ 3 ತಂಡಗಳನ್ನು ರಚಿಸಿದ್ದರು. ಒಂದು ತಂಡ ನಾಕಾಬಂದಿ ನಿರ್ಮಿಸಿ ವಾಹನ ತಪಾಸಣೆಯಲ್ಲಿ ತೊಡಗಿದ್ದರೆ, ಮತ್ತೊಂದು ತಂಡ ಸೂಕ್ಷ್ಮ ಪ್ರದೇಶಗಳಲ್ಲಿ ಬಂದೋಬಸ್ತ್ನಲ್ಲಿ ನಿರತವಾಗಿತ್ತು. ತಾಂತ್ರಿಕ…
ಜ.23ರಂದು ಬಹು ಬೇಡಿಕೆಯ ಮೈಸೂರು ಜಿಲ್ಲಾ ಆಸ್ಪತ್ರೆ ನೂತನ ಕಟ್ಟಡ ಉದ್ಘಾಟನೆ
January 21, 2020ಮೈಸೂರು, ಜ. 20(ಆರ್ಕೆ)- ಮೈಸೂರಿನ ಕೆಆರ್ಎಸ್ ರಸ್ತೆಯಲ್ಲಿ ಮೇಟಗಳ್ಳಿ ಬಳಿ ಸಾಂಕ್ರಾ ಮಿಕ ರೋಗಗಳ ಆಸ್ಪತ್ರೆ ಆವರಣದಲ್ಲಿ ನಿರ್ಮಿ ಸಿರುವ ನೂತನ ಜಿಲ್ಲಾ ಆಸ್ಪತ್ರೆ ಕಟ್ಟಡ ಜನವರಿ 23ರಂದು ಉದ್ಘಾಟನೆಗೊಳ್ಳುತ್ತಿದೆ. ಆಸ್ಪತ್ರೆ ಕಟ್ಟಡದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಈ ಕುರಿತು ಮಾಹಿತಿ ನೀಡಿದ ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ, 75.32 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ 250 ಹಾಸಿಗೆ ಸಾಮ ಥ್ರ್ಯದ ಮೈಸೂರು ಜಿಲ್ಲಾ ಆಸ್ಪತ್ರೆ ಕಟ್ಟಡವನ್ನು ಆರೋಗ್ಯ ಸಚಿವ ಶ್ರೀರಾಮುಲು, ಜ.23ರಂದು ಸಂಜೆ 4 ಗಂಟೆಗೆ…
ಅಂಬೇಡ್ಕರ್ ವಿಚಾರಧಾರೆ, ಚಿಂತನೆ ಅಳವಡಿಸಿಕೊಳ್ಳುವಲ್ಲಿ ಭಾರತ ವಿಫಲ
January 21, 2020ಮೈಸೂರು, ಜ.20(ಆರ್ಕೆಬಿ)- ಪ್ರಸ್ತುತದಲ್ಲಿ ದೇಶ ದಲ್ಲಿ ಡಾ.ಅಂಬೇಡ್ಕರ್ ಅವರ ವಿಚಾರಧಾರೆ ಹಾಗೂ ಚಿಂತನೆಗಳನ್ನು ಅಳವಡಿಸಿಕೊಳ್ಳುವಲ್ಲಿ ವಿಫಲ ವಾಗಿದ್ದೇವೆ ಎಂದು ಕುವೆಂಪು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಪಿ.ವೆಂಕಟರಾಮಯ್ಯ ಇಂದಿಲ್ಲಿ ಬೇಸರ ವ್ಯಕ್ತಪಡಿಸಿದರು. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕಾವೇರಿ ಸಭಾಂಗಣದಲ್ಲಿ ಕರಾಮುವಿಯ ಡಾ.ಬಿ. ಆರ್.ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಸೋಮವಾರ `ಡಾ.ಅಂಬೇಡ್ಕರ್ ಅವರ ಆಲೋಚನೆಗಳು ಭಾರತದ ಸಾಮಾಜಿಕ-ಆರ್ಥಿಕ ಅಭಿವೃದ್ಧಿ’ ಕುರಿತ ಎರಡು ದಿನದ ರಾಷ್ಟ್ರೀಯ ಸಮ್ಮೇ ಳನಕ್ಕೆ ಚಾಲನೆ ನೀಡಿ ಮಾತನಾಡಿದರು. ಅರ್ಥಶಾಸ್ತ್ರಜ್ಞ, ಸಾಮಾಜಿಕ ಚಿಂತಕ, ಕಾನೂನು…
ರಂಗಭೂಮಿ ಸಾಧಕರಾದ ಅಡ್ಡಂಡ ಕಾರ್ಯಪ್ಪ, ವೇಣುಗೋಪಾಲ್, ಶಶಿಕಲಾರಿಗೆ ಅಭಿನಂದನೆ
January 21, 2020ಮೈಸೂರು,ಜ.20(ಎಸ್ಬಿಡಿ)- ನಿಜ ವಾದ ಕಲೆ ಪರಿವರ್ತನೆ ಸಾಧಿಸುತ್ತದೆ ಎಂದು ಹಿರಿಯ ವಿದ್ವಾಂಸ ಪ್ರೊ.ಮಲೆ ಯೂರು ಗುರುಸ್ವಾಮಿ ಅಭಿಪ್ರಾಯಿಸಿದರು. ಮೈಸೂರಿನ ಕನ್ನಡ ಸಾಹಿತ್ಯ ಕಲಾ ಕೂಟ ಹಾಗೂ ಕದಂಬ ರಂಗ ವೇದಿಕೆ ಸಹ ಯೋಗದಲ್ಲಿ ರಂಗಾಯಣದ ಶ್ರೀರಂಗ ವೇದಿಕೆಯಲ್ಲಿ ಸೋಮವಾರ ಏರ್ಪಡಿ ಸಿದ್ದ, ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ, ಕರ್ನಾಟಕ ನಾಟಕ ಅಕಾ ಡೆಮಿ ಪ್ರಶಸ್ತಿ ಪುರಸ್ಕøತರಾದ ವೇಣು ಗೋಪಾಲ್ ಹಾಗೂ ಶಶಿಕಲಾ ಅವರ ಅಭಿನಂದನಾ ಸಮಾರಂಭದಲ್ಲಿ ಮಾತ ನಾಡಿದ ಅವರು, ಸಾಧಕರನ್ನು ಗೌರವಿಸು ವುದು ಸಂಸ್ಕøತಿ ಪ್ರತೀಕ…
ಆರೋಪಿಗಳ ಪರ ವಕಾಲತು ವಹಿಸಲು ರಾಜ್ಯದ ವಿವಿಧೆಡೆಯಿಂದ ಬಂದ ವಕೀಲರ ದಂಡು
January 21, 2020ಮೈಸೂರು,ಜ.20(ಎಂಟಿವೈ)- ದೆಹಲಿ ಜೆಎನ್ಯು ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆ ಖಂಡಿಸಿ ಜ.8ರಂದು ಸಂಜೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿ ಆವರಣದಲ್ಲಿ ನಡೆಸಿದ ಪ್ರತಿಭಟನೆಯಲ್ಲಿ `ಫ್ರೀ ಕಾಶ್ಮೀರ’ ಫಲಕ ಪ್ರದರ್ಶಿಸಿದ್ದ ಯುವತಿ ನಳಿನಿ ಬಾಲಕುಮಾರ್ ಹಾಗೂ ಪ್ರತಿಭ ಟನೆಯ ನೇತೃತ್ವ ವಹಿಸಿದ್ದ ಮೈಸೂರು ವಿವಿ ಸಂಶೋಧÀಕರ ಸಂಘದ ಅಧ್ಯಕ್ಷ ಮರಿ ದೇವಯ್ಯ ಪರ ವಕಾಲತ್ತು ವಹಿಸಲು ವಿವಿ ಧೆಡೆಯಿಂದ ಆಗಮಿಸಿದ್ದ 163 ವಕೀಲರು ಸೋಮವಾರ ಅರ್ಜಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ `ಫ್ರೀ ಕಾಶ್ಮೀರ’ ಫಲಕ ಪ್ರದರ್ಶಿಸಿದ್ದು, ದೇಶದ್ರೋಹಿ…
ಮೊಬೈಲ್ ಅನಿವಾರ್ಯವಲ್ಲ… ಪ್ರಚಲಿತ ವಿದ್ಯಮಾನ ತಿಳಿದುಕೊಳ್ಳಿ… ಓದುವ ಹವ್ಯಾಸ ರೂಢಿಸಿಕೊಳ್ಳಿ…
January 21, 2020ಮೈಸೂರು, ಜ.20(ಆರ್ಕೆಬಿ)-ಕಾಲೇಜು ವಿದ್ಯಾರ್ಥಿನಿಯರು ಅರ್ಧಕ್ಕೆ ಕಾಲೇಜು ಬಿಟ್ಟು ಹೋಗುತ್ತಿರುವುದೇಕೆ? ಪ್ರೇಮ, ಪ್ರೀತಿ ಎಂದು ಹಲವರು ಕಾಲೇಜು ಬಿಟ್ಟ ಉದಾ ಹರಣಗಳಿವೆ. ಇದಕ್ಕೆ ಪರಿಹಾರವೇನು? ಅಪರಿಚಿತ ವ್ಯಕ್ತಿಗಳಿಂದ ನಾವು ಸುರಕ್ಷಿತ ವಾಗಿರಲು ಏನು ಮಾಡಬೇಕು? ಬ್ಯಾಂಕ್ ಇನ್ನಿತರ ಖಾತೆ ಲೂಟಿಯಾಗುವುದನ್ನು ತಪ್ಪಿಸುವುದು ಹೇಗೆ? ಅಪರಾಧ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿರುವ ಸಾಮಾಜಿಕ ಜಾಲತಾಣಗಳು ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿವೆಯೇ? ಮೈಸೂರಿನ ಮಹಾರಾಣಿ ಕಲಾ ಕಾಲೇ ಜಿನ ಜಯಲಕ್ಷ್ಮಮ್ಮಣ್ಣಿ ಸಭಾಂಗಣದಲ್ಲಿ ಕಾಲೇಜಿನ ಸ್ನಾತಕ ಮತ್ತು ಸ್ನಾತಕೋತ್ತರ ಕೇಂದ್ರ, ಮನೋವಿಜ್ಞಾನ ವಿಭಾಗ, ಐಕ್ಯೂ ಎಸ್ಇ…
ಇಂಧನ ಉಳಿತಾಯ, ಪರಿಸರ ರಕ್ಷಣೆಗಾಗಿ ಸೈಕ್ಲೋಥಾನ್
January 21, 2020ಮೈಸೂರು, ಜ.20(ಆರ್ಕೆಬಿ)- ಸ್ವಚ್ಛ ಮೈಸೂರು, ಸ್ವಚ್ಛ ಭಾರತ, ಪೆಟ್ರೋಲಿಯಂ ಇಂಧನ ಉಳಿತಾಯ ಮತ್ತು ಪರಿಸರ ಸಂರಕ್ಷಣೆ ಕುರಿತಂತೆ ಜನಜಾಗೃತಿ ಮೂಡಿಸಲು ಭಾನುವಾರ ಮುಂಜಾನೆ ನೂರಾರು ಮಂದಿ `ಸಾಕ್ಷಂ-2020’ ಸೈಕ್ಲೋಥಾನ್ ನಡೆಸಿದರು. ಮೈಸೂರು ಜಿಲ್ಲಾ ಸೈಕಲ್ ಅಸೋಸಿಯೇಷನ್, ಮೈಸೂರು ನಗರಪಾಲಿಕೆ, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್, ಆಯಿಲ್ ಇಂಡಸ್ಟ್ರೀಸ್ ಆಶ್ರಯದಲ್ಲಿ ನಡೆದ ಸೈಕ್ಲೋಥಾನ್ನಲ್ಲಿ ಯುವಕರು, ವಿದ್ಯಾರ್ಥಿಗಳು, ಮಹಿಳೆಯರು, ಶಾಲಾ ಮಕ್ಕಳು ಭಾಗವಹಿಸಿ 5 ಕಿ.ಮೀ. ಸೈಕಲ್ ತುಳಿದು, ಪೆಟ್ರೋಲಿಯಂ ಉತ್ಪನ್ನಗಳ ಉಳಿತಾಯ ಹಾಗೂ ಸದ್ವಿನಿಯೋಗದಿಂದ ಆರೋಗ್ಯ ಮತ್ತು ಪರಿಸರ…
ಜಿಲ್ಲಾ ಉಸ್ತುವಾರಿ ಸಚಿವರ ಮೈಸೂರು ಪ್ರವಾಸ ಕಾರ್ಯಕ್ರಮ
January 21, 2020ಮೈಸೂರು, ಜ.20- ವಸತಿ, ತೋಟಗಾರಿಕೆ, ರೇಷ್ಮೆ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ಜ.25 ಮತ್ತು 26 ರಂದು ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಜ.25ರಂದು ರಾತ್ರಿ 8 ಗಂಟೆಗೆ ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಸಾರ್ವಜನಿಕರನ್ನು ಭೇಟಿ ಮಾಡುವರು. ಜ.26ರಂದು ಬೆಳಿಗ್ಗೆ 9 ಗಂಟೆಗೆ ಜಿಲ್ಲಾಡಳಿತ ವತಿಯಿಂದ ಆಯೋಜಿಸಿರುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಬೆಳಿಗ್ಗೆ 11.30 ಗಂಟೆಗೆ ಸುತ್ತೂರು ಶ್ರೀಕ್ಷೇತ್ರದಲ್ಲಿ ಆಯೋಜಿ ಸಿರುವ ಸುತ್ತೂರು ಜಾತ್ರಾ ಮಹೋತ್ಸವದ ಕೃಷಿ ಮೇಳ ಮತ್ತು…
ಬೆಳೆ ಸಮೀಕ್ಷೆ: ರೈತರಿಂದ ಆಕ್ಷೇಪಣೆ ಆಹ್ವಾನ
January 21, 2020ಮೈಸೂರು, ಜ.20- ರಾಜ್ಯದಲ್ಲಿ 2017ರ ಮುಂಗಾರು ಅವಧಿಯಿಂದ ಜಿಪಿಎಸ್ ಆಧಾರಿತ ಮೊಬೈಲ್ ಆ್ಯಪ್ ಬಳಸಿ ಬೆಳೆ ಸಮೀಕ್ಷೆಯನ್ನು ಮಾಡಲಾಗುತ್ತದೆ. ಮೊಬೈಲ್ ಆ್ಯಪ್ ಬಳಸಿ ಮಾಡಲಾದ ಬೆಳೆ ಸಮೀಕ್ಷೆ ಯನ್ನು ಸಂಗ್ರಹಿಸಿ ಮೇಲ್ವಿಚಾರಕರ ಮೂಲಕ ಅನುಮೋದನೆ ಮಾಡಿದ ಬೆಳೆ ಮಾಹಿತಿಯನ್ನು ಪಹಣಿಯಲ್ಲಿ ನಮೂದಿಸುವುದಲ್ಲದೆ, ಸರ್ಕಾರದ ಎಲ್ಲಾ ಯೋಜನೆಗಳಡಿ ಬಳಸುವಂತೆ ಸರ್ಕಾರಿ ಆದೇಶವನ್ನು ಈಗಾಗಲೇ ಹೊರಡಿಸಲಾಗಿದೆ. ಆದ್ದ ರಿಂದ ರೈತರು ಬೆಳೆ ಸಮೀಕ್ಷೆಯಲ್ಲಿನ ಮಾಹಿತಿ ಬಗ್ಗೆ ತಮ್ಮ ಆಕ್ಷೇಪಣೆಗಳನ್ನು ಜ.30ರೊಳಗೆ ಸಲ್ಲಿಸಬಹುದಾಗಿದೆ. ಆಕ್ಷೇಪಣೆ ವ್ಯಕ್ತಪಡಿಸುವ ವಿಧಾನ: ರೈತರು ತಮ್ಮ ಆಕ್ಷೇಪಣೆಗಳನ್ನು…
ಫೆ.14ರಿಂದ ಬಣ್ಣದ ಲೋಕದ ಅಪರೂಪ `ಬಹುರೂಪಿ’ ನಾಟಕೋತ್ಸವ
January 21, 2020ಹಿರಿಯ ನಟ ಅನಂತ್ನಾಗ್ ಅವರಿಂದ ಉದ್ಘಾಟನೆ, `ಗಾಂಧಿ ಪಥ’ ಶೀರ್ಷಿಕೆಯಡಿ ಈ ಬಾರಿ ಮಹಾ ನಾಟಕೋತ್ಸವ: ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಮೈಸೂರು, ಜ.20(ಪಿಎಂ)- ಬಣ್ಣದ ಲೋಕದ ಅಪರೂಪದ `ಬಹುರೂಪಿ’ ಮೈಸೂರು ರಂಗಾಯಣದ ಪ್ರತಿಷ್ಠಿತ ಉತ್ಸವಗಳ ಪೈಕಿ ಬಹುಮುಖ್ಯವಾದ ರಾಷ್ಟ್ರೀಯ ನಾಟಕೋತ್ಸವ. ಪ್ರತಿವರ್ಷ ಸಂಕ್ರಾಂತಿ ಹಬ್ಬದ ಸುಗ್ಗಿ ಸಂಭ್ರಮದಲ್ಲಿ ಇದರ ವರ್ಣರಂಜಿತ ಲೋಕ ತೆರೆದು ಕೊಳ್ಳುವುದು ವಾಡಿಕೆ. ಆದರೆ ಈ ಬಾರಿ ತುಸು ತಡವಾಗಿಯಾದರೂ ವೈವಿ ಧ್ಯತೆಯನ್ನು ವೃದ್ಧಿಸಿಕೊಂಡು ಫೆ.14ರಿಂದ 19ರವರೆಗೆ ಮೈಸೂರಿನಲ್ಲಿ ಹಬ್ಬದ ಸಡಗರ ಮೂಡಿಸಲಿದೆ….










