ಮೈಸೂರು: ಶತ ಮಾನದಷ್ಟು ಹಳೆಯದಾದ ಮೈಸೂರು ಸಂಸ್ಥಾನದ ಅಂದಿನ ಅಂಚೆ ವಿತರಕ ಬಸಪ್ಪ ಹಾಗೂ ಅಶ್ವದಳದ ಅಧಿಕಾರಿ ಭುಜಂಗರಾವ್ ಪ್ರತಿಮೆಗಳ ಸ್ಥಳಾಂತರ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾ ಪರಂ ಪರೆ ಸಮಿತಿಯ ಸದಸ್ಯ ಪ್ರೊ.ರಂಗರಾಜು ನೇತೃತ್ವದ ತಂಡ ಸೋಮವಾರ ಸಂಜೆ ಸ್ಥಳ ಪರಿಶೀಲಿಸಿತು. ಮೈಸೂರು ರೇಸ್ಕೋರ್ಸ್ ರಸ್ತೆಯ ಕರ್ನಾಟಕ ಸಶಸ್ತ್ರ ಮೀಸಲು ಪೊಲೀಸ್ನ (ಕೆಎಸ್ಆರ್ಪಿ) ಅಶ್ವಾರೋಹಿ ದಳದ ಪ್ರವೇಶ ದ್ವಾರದ ಮುಂಭಾಗದಲ್ಲಿ ಬಲ ಭಾಗದಲ್ಲಿ ಬಸಪ್ಪರ ಪ್ರತಿಮೆ ಹಾಗೂ ಎಡಭಾಗದಲ್ಲಿ ಭುಜರಂಗರಾವ್ ಪ್ರತಿಮೆ ಗಳಿದ್ದು, ಇವೆರಡು ಪ್ರತಿಮೆಗಳನ್ನು ಸುಮಾರು…
ರಾಯಚೂರು ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾವಿನ ಸೂಕ್ತ ತನಿಖೆಗೆ ಆಗ್ರಹಿಸಿ ಪ್ರತಿಭಟನೆ
April 23, 2019ಮೈಸೂರು: ರಾಯಚೂರು ನಗರದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ್ ಅನುಮಾ ನಾಸ್ಪದ ಸಾವು ಪ್ರಕರಣ ಸಂಬಂಧ ಸೂಕ್ತ ತನಿಖೆಗೆ ಒತ್ತಾಯಿಸಿ ಹಾಗೂ ಇನ್ನಿತರ ವಿಷಯಗಳಿಗೆ ಸಂಬಂಧಿಸಿದಂತೆ ಮೈಸೂರು ನಗರದಲ್ಲಿ ಸೋಮವಾರ ಪ್ರತ್ಯೇಕ ಮೂರು ಪ್ರತಿಭಟನೆಗಳು ನಡೆದವು. ನ್ಯಾಯಾಲಯದ ಎದುರಿನ ಗಾಂಧಿ ಪುತ್ಥಳಿ ಎದುರು ಜಮಾಯಿಸಿದ ಗಂಧದ ಗುಡಿ ಫೌಂಡೇಷನ್ ಕಾರ್ಯಕರ್ತರು, ಮಧು ಪತ್ತಾರ್ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಶೀಘ್ರವೇ ತನಿಖೆ ಪೂರ್ಣಗೊಳಿಸಿ ಕೃತ್ಯ ನಡೆಸಿದ ಪಾತಕಿಗಳನ್ನು ಗಲ್ಲಿಗೇರಿಸಬೇಕು. ಇಂತಹ ಕಠಿಣ ಶಿಕ್ಷೆ ವಿಧಿಸದಿದ್ದಲ್ಲಿ ಇಂತಹ ಕೃತ್ಯಗಳು…
ಬಲಮುರಿಯಲ್ಲಿ ಮುಳುಗಿ ಮೈಸೂರಿನ ವ್ಯಕ್ತಿ ಸಾವು
April 23, 2019ಮೈಸೂರು: ನಾಲ್ವರು ಸ್ನೇಹಿತರೊಂದಿಗೆ ಈಜಲು ಹೋಗಿದ್ದ ಮೈಸೂರು ವ್ಯಕ್ತಿ ಬಲಮುರಿಯಲ್ಲಿ ಮುಳುಗಿ ಸಾವನ್ನಪ್ಪಿರುವ ದುರಂತ ಭಾನುವಾರ ಮಧ್ಯಾಹ್ನ ಸಂಭವಿಸಿದೆ. ಮೈಸೂರಿನ ಹೆಬ್ಬಾಳು ಬಡಾವಣೆಯ ಸುಬ್ರಹ್ಮಣ್ಯೇಶ್ವರ ನಗರ ನಿವಾಸಿ ಲೇಟ್ ಬಸವರಾಜು ಅವರ ಮಗ ರಾಮು (40) ನೀರಲ್ಲಿ ಮುಳುಗಿ ಸಾವನ್ನ ಪ್ಪಿದವರು. ಭಾನುವಾರ ಮಧ್ಯಾಹ್ನ ಸುಮಾರು 12 ಗಂಟೆ ವೇಳೆಗೆ 5 ಮಂದಿ ಬೆಳಗೊಳ ಬಳಿಯ ಬಲಮುರಿಗೆ ತೆರಳಿದ್ದರು. ಐವರು ಈಜಲು ಆರಂಭಿಸಿದ್ದಾರೆ. ಫಾಲ್ಸ್ ಹಿಂಭಾಗ ಈಜುತ್ತಿದ್ದ ರಾಮು, ಮುಳುಗಿ ದ್ದಾರೆ. ಅವರನ್ನು ರಕ್ಷಿಸಲು ಜೊತೆಯಲ್ಲಿದ್ದವರು ಪ್ರಯತ್ನಿಸಿದರಾದರೂ…
ಡಿಯೋ ಸ್ಕೂಟರ್ಗೆ ಸ್ವಿಫ್ಟ್ ಡಿಸೈರ್ ಕಾರು ಡಿಕ್ಕಿ: ಮೈಸೂರಲ್ಲಿ ಕೇರಳ ಯುವಕ ಸಾವುಮತ್ತೋರ್ವನಿಗೆ ಗಾಯ
April 23, 2019ಮೈಸೂರು: ಮಾರುತಿ ಸ್ವಿಫ್ಟ್ ಡಿಸೈರ್ ಕಾರೊಂದು ಡಿಯೋ ಸ್ಕೂಟರ್ಗೆ ಡಿಕ್ಕಿ ಹೊಡೆದ ಪರಿಣಾಮ ಕೇರಳದ ಯುವಕನೋರ್ವ ಸ್ಥಳದಲ್ಲೇ ಸಾವನ್ನ ಪ್ಪಿದ್ದು, ಮತ್ತೋರ್ವ ತೀವ್ರವಾಗಿ ಗಾಯಗೊಂಡಿರುವ ಘಟನೆ ಮೈಸೂರಿನ ಜೆ.ಕೆ. ಮೈದಾನದ ಬಳಿಯ ಸಿಗ್ನಲ್ ಲೈಟ್ ಸರ್ಕಲ್ನಲ್ಲಿ ಇಂದು ಮುಂಜಾನೆ ಸಂಭವಿಸಿದೆ. ಕೇರಳದ ವೈನಾಡಿನ ಅರವಿಂದ(20) ಸಾವನ್ನಪ್ಪಿದವನು. ಘಟನೆಯಿಂದ ತೀವ್ರವಾಗಿ ಗಾಯಗೊಂಡಿರುವ ವಿಪಿನ್(21)ನನ್ನು ಕೆ.ಆರ್.ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಹಳೇ ಆರ್ಎಂಸಿ ಕಡೆಯಿಂದ ಡಿಯೋ ಸ್ಕೂಟರ್ನಲ್ಲಿ ಗಾಯತ್ರಿ ಭವನ ಕಡೆಗೆ ಹೋಗು ತ್ತಿದ್ದ ವೇಳೆ ರೈಲ್ವೇ ನಿಲ್ದಾಣದ ಕಡೆಯಿಂದ ವೇಗವಾಗಿ…
ಬೈಕಿಗೆ ವಾಹನ ಡಿಕ್ಕಿ: ವ್ಯಕ್ತಿ ಸಾವು
April 23, 2019ಮೈಸೂರು: ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾದ ಪರಿಣಾಮ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಭಾನುವಾರ ಸಂಭವಿಸಿದೆ. ಮಂಡ್ಯ ಜಿಲ್ಲೆ, ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಗ್ರಾಮದವರಾದ ಲೇಟ್ ಮಾದೇಗೌಡರ ಮಗ ಜಯಕುಮಾರ್(50) ಸಾವನ್ನಪ್ಪಿದವರು. ಶ್ರೀರಂಗಪಟ್ಟಣದಲ್ಲಿ ವಾಸವಿದ್ದ ಅವರು ಬಾಬು ರಾಯನ ಕೊಪ್ಪಲಿನಲ್ಲಿ ಸಿನಿಮಾ ಮಂದಿರವನ್ನು ಬಾಡಿಗೆಗೆ ಪಡೆದು ನಡೆಸುತ್ತಿದ್ದರು. ಏ.19ರಂದು ಬಾಬುರಾಯನಕೊಪ್ಪಲಿನಿಂದ ಬೈಕಿನಲ್ಲಿ ಶ್ರೀರಂಗಪಟ್ಟಣಕ್ಕೆ ಹೋಗುತ್ತಿ ದ್ದಾಗ ಹಿಂದಿನಿಂದ ಬಂದ ವಾಹನವೊಂದು ಕಾವೇರಿ ನದಿ ಸೇತುವೆ ಬಳಿ ರಾತ್ರಿ 8.15 ಗಂಟೆ ವೇಳೆಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ. ತಲೆಗೆ…
ನಾಳೆ ವಿವಿಧೆಡೆ ವಿದ್ಯುತ್ ನಿಲುಗಡೆ
April 23, 2019ಮೈಸೂರು: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವತಿಯಿಂದ ಏ.24ರಂದು 66/11 ಕೆ.ವಿ ದೇವನೂರು (ಮೈಸೂರು) ವಿದ್ಯುತ್ ವಿತರಣಾ ಕೇಂದ್ರಗಳಿಂದ 11 ಕೆ.ವಿ. ಕಾವೇರಿ ಫೀಡರ್ನಲ್ಲಿ ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ. ಏ.24 ರಂದು ಬೆಳಿಗ್ಗೆ 11ರಿಂದ ಸಂಜೆ 4 ಗಂಟೆವರೆಗೆ ಡಾ|| ರಾಜ್ ಕುಮಾರ್ ರಸ್ತೆ, ಸಾತಗಳ್ಳಿ, ಕಲ್ಯಾಣಗಿರಿ, ಎಲ್.ಐ.ಜಿ, ಎಂ.ಐ.ಜಿ. ಮನೆಗಳು, ಗೌಸಿಯಾನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ನ.ರಾ. ಮೊಹಲ್ಲಾ ವಿಭಾಗದ ಕಾರ್ಯ ಮತ್ತು ಪಾಲನೆ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂಬೇಡ್ಕರ್ರವರ ಅಪರೂಪದ ಛಾಯಾಚಿತ್ರ ಪ್ರದರ್ಶನ
April 23, 2019ಮೈಸೂರು: ನಗರದ ಕ್ಯಾತಮಾರನಹಳ್ಳಿಯ ಜೈಭೀಮ್ ಪ್ರಜ್ಞಾವಂತ ಯುವಕರ ಬಳಗದ ವತಿಯಿಂದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಅಂಗವಾಗಿ ಇಲ್ಲಿನ ಚಿಕ್ಕಗರಡಿ ಮುಂಭಾಗ ಡಾ.ಅಂಬೇಡ್ಕರ್ರವರ ಅಪ ರೂಪದ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು. ಡಾ.ಅಂಬೇಡ್ಕರ್ರವರ ಜೀವನಾಧಾರಿತ ಅಪರೂಪದ ಛಾಯಾಚಿತ್ರ ಪ್ರದರ್ಶನವನ್ನು ನಗರಪಾಲಿಕೆ ಸದಸ್ಯ ಶ್ರೀಧರ್ ಉದ್ಘಾಟಿಸಿ, ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ನಂತರ ಮಾತನಾಡಿದ ಅವರು, ಬಾಬಾ ಸಾಹೇಬ್ ಅಂಬೇಡ್ಕರ್ ಬರೆದ ಸಂವಿಧಾನದಿಂದ ಇಂದು ಸಮಾಜದಲ್ಲಿ ಸಮಾನತೆ ಕಾಣಲು ಸಾಧ್ಯವಾಗಿದೆ. ದಲಿತರು, ಹಿಂದುಳಿದವರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿದಾಗ ಮಾತ್ರ…
ಕಸದ ಬುಟ್ಟಿಗಳಿದ್ದ ಸ್ಟ್ಯಾಂಡ್ ಈಗ ಮಕ್ಕಳ ಉಯ್ಯಾಲೆ ಆಟಿಕೆ!
April 23, 2019ಮೈಸೂರು: ಮೈಸೂರು ನಗರ ಪಾಲಿಕೆ, ಚಿಕ್ಕಗಡಿಯಾರ ಬಳಿ ಅಳವಡಿಸಿರುವ ಕಸ ಸಂಗ್ರಹಿಸುವ ಪ್ಲಾಸ್ಟಿಕ್ ಬುಟ್ಟಿ ನಾಪತ್ತೆಯಾಗಿದ್ದು, ಇದಕ್ಕೆ ಆಧಾರವಾಗಿ ಅಳವಡಿಸಿದ್ದ ಕಬ್ಬಿಣದ ಸ್ಟಾಂಡೀಗ ಚಿಕ್ಕ ಮಕ್ಕಳ ಉಯ್ಯಾಲೆ ಆಟಿಕೆಯಾಗಿ ಪರಿವರ್ತಿತವಾಗಿದೆ. ಮೈಸೂರು ನಗರ ಹೃದಯ ಭಾಗದ ದೇವರಾಜ ಮಾರುಕಟ್ಟೆ ಮುಂಭಾಗದ ಚಿಕ್ಕಗಡಿಯಾರ ಬಳಿ ಮಕ್ಕಳಿಬ್ಬರು ಕಸ ಹಾಕುವ ಪ್ಲಾಸ್ಟಿಕ್ ಬುಟ್ಟಿಗೆ ಆಧಾರವಾಗಿ ಅಳವಡಿಸಿದ್ದ ಕಬ್ಬಿಣದ ಸ್ಯಾಂಡ್ನಲ್ಲಿ ಸ್ವಚ್ಛಂದವಾಗಿ ಉಯ್ಯಾಲೆ ಆಡುತ್ತಿದ್ದಾರೆ. ಆದರೆ, ಕಸ ಸಂಗ್ರಹಿಸಲು ಇಟ್ಟಿದ್ದ ಪ್ಲಾಸ್ಟಿಕ್ ಬುಟ್ಟಿಗಳನ್ನು ಕಳವು ಮಾಡಿರುವುದರ ಪರಿವೇ ಇಲ್ಲದ ಮಕ್ಕಳು, ಉಯ್ಯಾಲೆ…
ಅಸಹಜ ಲೈಂಗಿಕ ಕ್ರಿಯೆಗೆ ನಕಾರ: ವ್ಯಕ್ತಿಯ ಮೇಲೆ ಹಲ್ಲೆ
April 23, 2019ಮೈಸೂರು: ಅಸಹಜ ಲೈಂಗಿಕ ಕ್ರಿಯೆಗೆ ಒಪ್ಪದ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿದ್ದ ನಾಲ್ವರು ತೃತೀಯ ಲಿಂಗಿಗಳು ಸೇರಿದಂತೆ 6 ಮಂದಿಯನ್ನು ಮೈಸೂರಿನ ಲಷ್ಕರ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಿಲಾದ್ ಪಾರ್ಕ್ ಸಮೀಪ ಶನಿವಾರ ಮುಸ್ತಾಫ ಎಂಬುವರ ಮೇಲೆ ಹಲ್ಲೆ ನಡೆಸಿದ್ದ ತೌಸೀಫ್, ರವೀಂದ್ರಕುಮಾರ್ ಹಾಗೂ ನಾಲ್ವರು ತೃತೀಯ ಲಿಂಗಿಗಳನ್ನು ಪೊಲೀಸರು ಬಂಧಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ. ಅಪರಿಚಿತರು ಹಲ್ಲೆ ನಡೆಸಿದ್ದಾಗಿ ಹೇಳಿದ್ದ ಮುಸ್ತಾಫ, ಪೊಲೀಸರು ವಿಚಾರಣೆ ತೀವ್ರಗೊಳಿಸಿದಾಗ ತನ್ನ ತೃತೀಯಲಿಂಗಿ ಸ್ನೇಹಿತರಾದ ನಗೀನಾ ಹಾಗೂ ಸಹಚರರು ಹಲ್ಲೆ…
ಸ್ಫೋಟದಲ್ಲಿ ಸ್ಥಳೀಯರ ಪಾತ್ರ, ಮಾಹಿತಿ ನೀಡಿದರೂ ಅಧಿಕಾರಿಗಳು ನಿಷ್ಕ್ರೀಯ
April 23, 2019ಕೊಲಂಬೊ (ಶ್ರೀಲಂಕಾ): ಭಾನುವಾರ ಶ್ರೀಲಂಕಾ ರಾಜಧಾನಿ ಕೊಲಂಬೋದಲ್ಲಿ ನಡೆದ ಸರಣಿ ಸ್ಫೋಟದ ಹೊಣೆಯನ್ನು ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ ವಾ ದರೂ, ಶ್ರೀಲಂಕಾದ ನ್ಯಾಷನಲ್ ತೌಹಿದ್ ಜಮಾತ್ ಸಂಘ ಟನೆಯ ಕೈವಾಡ ಇದೆ ಎಂದು ಶ್ರೀಲಂಕಾ ಆರೋಗ್ಯ ಸಚಿವ ಹಾಗೂ ಸರ್ಕಾರದ ವಕ್ತಾರ ರಜಿತಾ ಸೇನಾ ರತ್ನೆ ತಿಳಿಸಿದ್ದಾರೆ. ಭಾನುವಾರ ನಡೆದ ಎಲ್ಲಾ 8 ದಾಳಿ ಗಳಲ್ಲೂ ಸ್ಥಳೀಯರ ಕೈವಾಡವಿರುವ ಸಾಧ್ಯತೆ ಇದೆ ಎಂದಿರುವ ಅವರು, ಉಗ್ರರ ದಾಳಿಯ ಬಗ್ಗೆ ರಾಷ್ಟ್ರೀಯ ಗುಪ್ತಚರ ಸಂಸ್ಥೆಯು ಏ.11ರಂದು ಪೊಲೀಸ್ ಮಹಾ…