ಮೈಸೂರು: ಕೇರಳದಲ್ಲಿ ನಿಫಾ ವೈರಾಣುವಿನ ರುದ್ರ ನರ್ತನದಿಂದಾಗಿ 15ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಮೈಸೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ವಿವಿಧ ರಾಜ್ಯಗಳ ಪ್ರವಾಸಿಗರು ಕೇರಳಕ್ಕೆ ಹೋಗುವುದನ್ನು ಮೊಟಕುಗೊಳಿಸಿ, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಾಸ್ತವ್ಯ ಹೂಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳು ಗಿಜಿಗುಡುತ್ತಿವೆ. ಪ್ರವಾಸಿಗರಿಗೆ ಅಚ್ಚುಮೆಚ್ಚಿನ ತಾಣವಾಗಿರುವ ಕೇರಳಕ್ಕೆ ಹೋಗುವ ಪ್ರವಾಸಿಗರಿಗೆ ನಿಫಾ ವೈರಸ್ ಕಂಟಕವಾಗಿ ಕಾಡಲಾರಂಭಿಸಿದ್ದು, ಕೇರಳಕ್ಕೆ ಬರದಂತೆ ತಡೆಯೊಡ್ಡಿದೆ. ಕಳೆದ ಮೂರ್ನಾಲ್ಕು ತಿಂಗಳ ಹಿಂದೆಯೇ ಆನ್ಲೈನ್ ಮೂಲಕ ಬುಕ್ ಮಾಡಿದ್ದ ವಿವಿಧ…
ಸಾರ್ಥಕತೆ ಇಲ್ಲದ ರೈತ ಸಂತೆಗಳು: ಸಾರ್ವಜನಿಕರ ತೆರಿಗೆ ಹಣ ಹೀಗೂ ಪೋಲಾಗುತ್ತಿದೆ…
May 25, 2018ಮೈಸೂರು: ಕಟ್ಟಿ ನಿಲ್ಲಿಸಿ ಉದ್ಘಾಟಿಸುವುದಕ್ಕೆ ಎಲ್ಲಿಲ್ಲದ ಉತ್ಸಾಹ. ಬಳಸಿಕೊಳ್ಳಲೇಕೊ ನಿರುತ್ಸಾಹ! ಇದರ ಪರಿಣಾಮ ಲಕ್ಷಾಂತರ ಹಣ ವ್ಯಯಿಸಿ ನಿರ್ಮಿಸಿದ ಕಟ್ಟಡಗಳು ಹಾಳು ಕೊಂಪೆಗಳಾಗುತ್ತಿವೆಯೇ ಹೊರತು ಬಳಕೆಗೆ ಮಾತ್ರ ಬಾರದಾಗಿವೆ. ಮೈಸೂರಿನ ವಿಜಯನಗರದ 2ನೇ ಹಂತದಲ್ಲಿರುವ ರೈತ ಸಂತೆ ಕಟ್ಟಡ ಸೇರಿದಂತೆ ಮೈಸೂರು ನಗರದ ವಿವಿಧ ಭಾಗಗಳಲ್ಲಿ ನಿರ್ಮಿಸಿರುವ ಕಿರು ಮಾರುಕಟ್ಟೆಗಳು ಹಲವು ವರ್ಷಗಳಿಂದ ಪ್ರಯೋಜನಕ್ಕೆ ಬಾರದಾಗಿವೆ. ಇದಕ್ಕೆ ಕಾರಣ, ಸಂಬಂಧಿಸಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗದ ನಿರ್ಲಕ್ಷ್ಯ ಎಂಬುದು ಸಾರ್ವಜನಿಕರ ವಲಯದಲ್ಲಿ ಕೇಳಿ ಬರುತ್ತಿರುವ ಆರೋಪ. ರೈತ…
ಮನಸೂರೆಗೊಳ್ಳುವ ನಮ್ಮ ಮೈಸೂರು
May 14, 2018ಯಾವುದೇ ರಾಷ್ಟ್ರದಲ್ಲಿನ ಪ್ರಮುಖ ನಗರಗಳು ಅಚ್ಚರಿಯ ಇತಿಹಾಸ ಹೊಂದಿ ರುವುದರ ಜೊತೆಗೆ ಯಾವುದಾದರೂ ಒಂದು ವೈಶಿಷ್ಟ್ಯತೆಗೆ ಹೆಸರಾಗಿರುತ್ತದೆ. ಭೌಗೋಳಿಕ ವಿಶೇಷ, ಸ್ಮಾರಕ, ಕಲೆ, ಸಂಸ್ಕೃತಿ, ತಿನಿಸು, ಸಾಧಕರು……ಹೀಗೆ ಯಾವುದಾದರು ಒಂದು ವಿಷಯಕ್ಕೆ ಖ್ಯಾತಿ ಪಡೆದಿರುತ್ತದೆ. ಆದರೆ ಭಾರತ ದೇಶದಲ್ಲಿ ಅನೇಕ ವಿಷಯಗಳಿಗೆ ವಿಶ್ವವಿಖ್ಯಾತಿ ಪಡೆದಿರುವ ಕೆಲವೇ ನಗರಗಳಲ್ಲಿ ನಮ್ಮ ಹೆಮ್ಮೆಯ ಮೈಸೂರು ನಗರವೂ ಸಹ ಒಂದು. ಸುವಾಸನೆ ಸೂಸುವ ಮೈಸೂರು ಮಲ್ಲಿಗೆಯಿಂದ ಹಿಡಿದು ಪರಂಪರೆಯ ದ್ಯೋತಕವಾದ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದವರೆವಿಗೆ ಮೈಸೂರಿನ ಹಿರಿಮೆಯಿದೆ. ಕರ್ನಾಟಕದ ‘ಸಾಂಸ್ಕೃತಿಕ…
ಮೈಸೂರಲ್ಲಿ ಭಾರೀ ಮಳೆ
May 3, 2018ಮೈಸೂರು: ಮೈಸೂರಿನಲ್ಲಿ ಬುಧವಾರ ರಾತ್ರಿ ಗುಡುಗು ಸಿಡಿಲಿ ನೊಂದಿಗೆ ಧಾರಾಕಾರ ಮಳೆ ಸುರಿಯಿತು. ಇದರಿಂದ ಮರಗಳು ಧರೆಗುರುಳಿದ್ದು, ಕೆಲ ಕಾಲ ವಾಹನ ಸಂಚಾರ ಸ್ಥಗಿತಗೊಂಡು, ಜನಜೀವನ ಅಸ್ತವ್ಯಸ್ತವಾಗಿತ್ತು. ಬುಧವಾರ ರಾತ್ರಿ 7.45 ಗಂಟೆ ವೇಳೆಗೆ ಆರಂಭವಾದ ಮಳೆ 10 ಗಂಟೆಯವರೆಗೂ ಜೋರಾಗಿಯೇ ಸುರಿಯಿತು. ಮಳೆಗೆ ಕನಕದಾಸ ನಗರದ ಕೌಟಿಲ್ಯ ಸ್ಕೂಲ್ ಸಮೀಪದ ರಸ್ತೆಯಲ್ಲಿ 2 ಹಾಗೂ ಯಾದವಗಿರಿಯ ಪರಮಹಂಸ ರಸ್ತೆಯಲ್ಲಿ ಮರಗಳು ಧರೆಗುರುಳಿವೆ. ವಿಷಯ ತಿಳಿದು ಎಂಸಿಸಿ ಅಭಯ ತಂಡ ಸ್ಥಳಕ್ಕಾಗ ಮಿಸಿ ಮರವನ್ನು ತೆರವುಗೊಳಿಸಿ, ರಸ್ತೆ…
ಮೈಸೂರಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಎಸ್ಪಿಪಿಐ, ಪಕ್ಷೇತರರು ಪಾದಯಾತ್ರೆ ಮೂಲಕ ಮತಯಾಚನೆ
April 28, 2018ಮೈಸೂರು: ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳು ಹಾಗೂ ಪಕ್ಷೇತರರು ಶುಕ್ರವಾರ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದರು. ಬಿರು ಬಿಸಿಲಿನಲ್ಲೂ ಬೆವರು ಸುರಿಸಿ ಪಾದಯಾತ್ರೆಯಲ್ಲಿ ಪಾಲ್ಗೊಂಡು ಮತದಾರರ ಮನವೊಲಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಕೃಷ್ಣರಾಜ ಕ್ಷೇತ್ರ: ಕೃಷ್ಣರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಜಿ ಸಚಿವ ಎಸ್.ಎ.ರಾಮದಾಸ್, ಶುಕ್ರವಾರ 15ನೇ ವಾರ್ಡ್ ವ್ಯಾಪ್ತಿಯ ವಿವೇಕಾನಂದನಗರದ ವಿವೇಕಾನಂದ ವೃತ್ತದ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ವಿವೇಕಾನಂದರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಇಂದಿನ ಪಾದಯಾತ್ರೆಗೆ ಚಾಲನೆ ನೀಡಿದರು. ಬಳಿಕ ವಿವೇಕಾನಂದ ವೃತ್ತದ ಸುತ್ತಲಿನ ಪ್ರದೇಶದಲ್ಲಿ ಪಾದಯಾತ್ರೆ…
ನಾಳೆ, ನಾಡಿದ್ದು ಮೈಸೂರಿನ ಕೆಲವೆಡೆ ನೀರು ಸರಬರಾಜು ವ್ಯತ್ಯಯ
April 26, 2018ಮೈಸೂರು: ತುರ್ತು ಕಾಮಗಾರಿ ನಿಮಿತ್ತ ಏ. 27 ಹಾಗೂ 28 ರಂದು ವಾರ್ಡ್ ನಂ. 19 ರಿಂದ 45 ರವರೆಗೆ, ಇದಕ್ಕೆ ಸಂಬಂಧಪಟ್ಟ ಡಿಎಂಎ ಪ್ರದೇಶಗಳು, ಹೊರವಲಯಗಳಾದ ಆರ್ಎಂಪಿ, ಬಿಇಎಂಎಲ್, ವಿಜಯನಗರ 3ನೇ ಹಂತ, ಹೆಬ್ಬಾಳು 1ನೇ ಹಂತ, 2ನೇ ಹಂತ ಮತ್ತು 3ನೇ ಹಂತ, ಕೆಹೆಚ್ಬಿ ಕಾಲೋನಿ, ಹೂಟಗಳ್ಳಿ, ಕುಂಬಾರಕೊಪ್ಪಲು, ಲೋಕನಾಯಕನಗರ, ಬಿ.ಎಂ.ಶ್ರೀನಗರ, ಬೃಂದಾವನ ಬಡಾವಣೆ, ವಿವಿ ಮೊಹಲ್ಲಾ, ಒಂಟಿಕೊಪ್ಪಲು, ವಿನಾಯಕನಗರ, ಮಂಜುನಾಥಪುರ, ಮಂಡಿಮೊಹಲ್ಲಾ, ಲಷ್ಕರ್ ಮೊಹಲ್ಲಾ, ವಿಜಯನಗರ 1 ಮತ್ತು 2ನೇ ಹಂತ, ಗೋಕುಲಂ,…
ಮತದಾನ ಕುರಿತು ಮೈಸೂರಲ್ಲಿ ಮಹಾ ಜಾಗೃತಿ ನಾಲ್ಕು ಪಥಗಳಲ್ಲಿ ಅರಿವಿನ ಜಾಥಾ
April 25, 2018ಮೈಸೂರು: ಮತ ಚಲಾಯಿಸುವುದು ನಿಮ್ಮ ಹಕ್ಕು, ಇದು ಆಯ್ಕೆಯಾಗದಿರಲಿ. ಮತ ಎಂದರೆ ಬರೀ ಒತ್ತುವುದಲ್ಲ ದೇಶದ ಪ್ರಗತಿಯನ್ನು ಮೇಲೆತ್ತುವುದು. ಬಳಸಿರಿ ಮತ ಎಂಬ ಅಸ್ತ್ರವ ಉಳಿಸಿರಿ ಪ್ರಜಾಪ್ರಭುತ್ವವ, ರೈತ ದೇಶದ ಬೆನ್ನೆಲುಬು, ಮತದಾರ ಪ್ರಜಾ ಪ್ರಭುತ್ವದ ಬೆನ್ನೆಲುಬು ಪ್ರಾಮಾಣ ಕ ಮತದಾರ ಈ ದೇಶದ ಸೂತ್ರಧಾರ ಎಂಬ ವಿವಿಧ ಘೋಷಣೆಗಳೊಂದಿಗೆ ಮತ ದಾರರಲ್ಲಿ ಜಾಗೃತಿ ಮೂಡಿಸಲಾಯಿತು. ಇತ್ತೀಚಿನ ಸಮೀಕ್ಷೆ ಪ್ರಕಾರ ಗ್ರಾಮೀಣ ಪ್ರದೇಶಕ್ಕಿಂತ ನಗರ ಪ್ರದೇಶಗಳಲ್ಲಿ ಮತ ದಾನದ ಪ್ರಮಾಣ ಕ್ಷೀಣವಾಗಿರುವುದನ್ನು ಮನಗಂಡ ಚುನಾವಣಾ ಆಯೋಗವು ಸ್ವೀಪ್…
ಪಾದಯಾತ್ರೆ ಮೂಲಕ ರಾಮದಾಸ್ ಮತಯಾಚನೆ
April 24, 2018ಮೈಸೂರು: ಮೈಸೂರಿನ ಕೆ.ಆರ್.ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವ ಎಸ್.ಎ.ರಾಮ ದಾಸ್ ಅವರು ಸೋಮವಾರ ಆಲನಹಳ್ಳಿ ಹಾಗೂ ಸಿದ್ದಾರ್ಥ ಬಡಾವಣೆಯಲ್ಲಿ ಪಾದ ಯಾತ್ರೆ ನಡೆಸಿ, ಮತಯಾಚನೆ ಮಾಡಿದರು. ಆಲನಹಳ್ಳಿಯಿಂದ ತಮ್ಮ ಬೆಂಬಲಿಗ ರೊಂದಿಗೆ ಪಾದಯಾತ್ರೆ ಆರಂಭಿಸಿದ ಎಸ್.ಎ. ರಾಮದಾಸ್, ಮನೆ ಮನೆಗೆ ತೆರಳಿ ಮತ ಯಾಚಿಸಿದರು. ಮನೆ ಬಾಗಿಲಿಗೆ ಬಂದ ರಾಮದಾಸ್ ಅವರನ್ನು ಉಪಚರಿಸುವುದರೊಂದಿಗೆ ತಮ್ಮ ತಮ್ಮ ಬಡಾವಣೆಯಲ್ಲಿ ರುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು. ಈ ವೇಳೆ ಮಾತನಾಡಿದ ಎಸ್.ಎ. ರಾಮದಾಸ್, ಆಲನಹಳ್ಳಿ ಬಡಾವಣೆಯ…