ಬಲಮುರಿಯಲ್ಲಿ ಮುಳುಗಿ ಮೈಸೂರಿನ ವ್ಯಕ್ತಿ ಸಾವು
ಮೈಸೂರು

ಬಲಮುರಿಯಲ್ಲಿ ಮುಳುಗಿ ಮೈಸೂರಿನ ವ್ಯಕ್ತಿ ಸಾವು

April 23, 2019

ಮೈಸೂರು: ನಾಲ್ವರು ಸ್ನೇಹಿತರೊಂದಿಗೆ ಈಜಲು ಹೋಗಿದ್ದ ಮೈಸೂರು ವ್ಯಕ್ತಿ ಬಲಮುರಿಯಲ್ಲಿ ಮುಳುಗಿ ಸಾವನ್ನಪ್ಪಿರುವ ದುರಂತ ಭಾನುವಾರ ಮಧ್ಯಾಹ್ನ ಸಂಭವಿಸಿದೆ. ಮೈಸೂರಿನ ಹೆಬ್ಬಾಳು ಬಡಾವಣೆಯ ಸುಬ್ರಹ್ಮಣ್ಯೇಶ್ವರ ನಗರ ನಿವಾಸಿ ಲೇಟ್ ಬಸವರಾಜು ಅವರ ಮಗ ರಾಮು (40) ನೀರಲ್ಲಿ ಮುಳುಗಿ ಸಾವನ್ನ ಪ್ಪಿದವರು. ಭಾನುವಾರ ಮಧ್ಯಾಹ್ನ ಸುಮಾರು 12 ಗಂಟೆ ವೇಳೆಗೆ 5 ಮಂದಿ ಬೆಳಗೊಳ ಬಳಿಯ ಬಲಮುರಿಗೆ ತೆರಳಿದ್ದರು.

ಐವರು ಈಜಲು ಆರಂಭಿಸಿದ್ದಾರೆ. ಫಾಲ್ಸ್ ಹಿಂಭಾಗ ಈಜುತ್ತಿದ್ದ ರಾಮು, ಮುಳುಗಿ ದ್ದಾರೆ. ಅವರನ್ನು ರಕ್ಷಿಸಲು ಜೊತೆಯಲ್ಲಿದ್ದವರು ಪ್ರಯತ್ನಿಸಿದರಾದರೂ ಪ್ರಯೋಜನವಾಗಿಲ್ಲ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಕೆ.ಆರ್.ಎಸ್ ಠಾಣೆ ಸಬ್‍ಇನ್‍ಸ್ಪೆಕ್ಟರ್ ಕಿರಣ್‍ಕುಮಾರ್ ಹಾಗೂ ಸಿಬ್ಬಂದಿ, ಮಹಜರು ನಡೆಸಿ ಸಂಜೆ ವೇಳೆಗೆ ಈಜು ತಜ್ಞರನ್ನು ಕರೆಸಿ ರಾಮು ದೇಹವನ್ನು ಮೇಲೆತ್ತಿ ಇಂದು ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ವಾರಸುದಾರರಿಗೆ ಹಸ್ತಾಂತರಿಸಿದರು.

ಟ್ಯಾಂಕರ್ ಚಾಲಕನಾಗಿದ್ದ ರಾಮು, ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಕೆಆರ್‍ಎಸ್ ಠಾಣೆ ಪೊಲೀಸರು ತನಿಖೆ ನಡೆಸು ತ್ತಿದ್ದಾರೆ. ಬರೀ ಏಪ್ರಿಲ್ ತಿಂಗಳಲ್ಲಿ ಬಲಮುರಿ ಹಾಗೂ ಎಡಮುರಿ ಫಾಲ್ಸ್‍ನಲ್ಲಿ ಐವರು ದುರಂತ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳದಲ್ಲಿ ಎಚ್ಚರಿಕಾ ಫಲಕ, ಮಾರ್ಗದರ್ಶನ ಹಾಗೂ ಮಾಹಿತಿ ಬೋರ್ಡ್‍ಗಳನ್ನು ಅಳವಡಿಸಿ ಬ್ಯಾರಿಕೇಡ್ ಗಳ ಮೂಲಕ ಅಪಾಯದ ಸ್ಥಳಗಳಿಗೆ ಹೋಗದಂತೆ ಮುಂಜಾಗೃತಾ ಕ್ರಮಕೈಗೊಂಡಿ ದ್ದರೂ ಕೆಲ ಯುವಕರು, ವಿದ್ಯಾರ್ಥಿಗಳು ಅದನ್ನು ಲೆಕ್ಕಿಸದೆ ನೀರಿಗಿಳಿಯುತ್ತಿರುವುದ ರಿಂದ ಅನಾಹುತ ಸಂಭವಿಸುತ್ತಿವೆ ಎಂದು ಕೆಆರ್‍ಎಸ್ ಪೊಲೀಸರು ತಿಳಿಸಿದ್ದಾರೆ.

Translate »