ಚಾಮರಾಜನಗರ: ನಾಳೆಯಿಂದ (ಶುಕ್ರವಾರ) ಆರಂಭ ವಾಗಲಿರುವ ದ್ವಿತೀಯ ಪಿಯುಸಿ ಪರೀ ಕ್ಷೆಯನ್ನು ಜಿಲ್ಲೆಯಲ್ಲಿ 7054 ವಿದ್ಯಾ ರ್ಥಿಗಳು ಬರೆಯಲಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 16 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಚಾಮರಾಜನಗರ ತಾಲೂಕಿನಲ್ಲಿ 4, ಯಳಂದೂರು ತಾಲೂ ಕಿನಲ್ಲಿ 2, ಕೊಳ್ಳೇಗಾಲ ತಾಲೂಕಿನಲ್ಲಿ 5, ಹನೂರು ತಾಲೂಕಿನಲ್ಲಿ 2, ಗುಂಡ್ಲು ಪೇಟೆ ತಾಲೂಕಿನಲ್ಲಿ 3 ಕೇಂದ್ರಗಳನ್ನು ಸ್ಥಾಪಿಸಲಾಗಿದೆ. 3,379 ಬಾಲಕರು, 3,675 ಬಾಲಕಿಯರು ಸೇರಿ ಒಟ್ಟು 7054 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ. ಇದರಲ್ಲಿ 6003 ವಿದ್ಯಾರ್ಥಿಗಳು ಹೊಸ ಬರು, 815…
ಅಪ್ರಾಪ್ತ ಬಾಲಕಿ ಹತ್ಯೆ: ಆರೋಪಿಗೆ ಶಿಕ್ಷೆ
February 28, 2019ಚಾಮರಾಜನಗರ: ಅಪ್ರಾಪ್ತ ಬಾಲಕಿಯನ್ನು ಕೆರೆಗೆ ತಳ್ಳಿ ಕೊಲೆ ಮಾಡಿದ ಆರೋಪಿಗೆ ನಗರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 5 ವರ್ಷಗಳ ಕಠಿಣ ಕಾರಾಗೃಹ ಮತ್ತು 25 ಸಾವಿರ ರೂ. ದಂಡ ವಿಧಿಸಿ ಗುರುವಾರ ತೀರ್ಪು ನೀಡಿದೆ. ಕೇರಳ ರಾಜ್ಯದ ವೈನಾಡು ಜಿಲ್ಲೆಯ ಅಬ್ದುಲ್ ರೆಹಮಾನ್ ಶಿಕ್ಷೆಗೆ ಒಳಗಾದವನು. ಅಬ್ದುಲ್ ರೆಹಮಾನ್ ವೈನಾಡಿನ ಅಪ್ರಾಪ್ತ ಬಾಲಕಿಯನ್ನು ಕಾಲೇಜಿನಲ್ಲಿ ಪರಿಚಯ ಮಾಡಿಕೊಂಡು ಪ್ರೀತಿಸು ತ್ತಿದ್ದನು. 2014 ಫೆಬ್ರವರಿ 14ರಂದು ಯುವ ತಿಯ ಹುಟ್ಟುಹಬ್ಬ ಇತ್ತು. ಅದೇ ದಿನ ಪ್ರೇಮಿಗಳ…
ಬೊಲೆರೊ-ಬೈಕ್ ಡಿಕ್ಕಿ: ಇಬ್ಬರು ವಿದ್ಯುತ್ ಗುತ್ತಿಗೆದಾರು ಸಾವು
February 28, 2019ಚಾಮರಾಜನಗರ: ತಾಲೂಕಿನ ಬೆಂಡರ ವಾಡಿ ಗ್ರಾಮದ ಕೆರೆ ಬಳಿ ಬೈಕ್ಗೆ ಬೊಲೆರೊ ವಾಹನ ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಇಬ್ಬರು ಗುತ್ತಿಗೆದಾರರು ಮೃತಪಟ್ಟಿರುವ ಘಟನೆ ಗುರುವಾರ ಸಂಭವಿಸಿದೆ. ಮೈಸೂರಿನ ವಿದ್ಯಾರಣ್ಯಪುರಂ ನಿವಾಸಿ, ಮೈಸೂರು ಜಿಲ್ಲಾ ವಿದ್ಯುತ್ ಗುತ್ತಿಗೆದಾರ ಸಂಘದ ಸಂಘಟನಾ ಕಾರ್ಯದರ್ಶಿ ಎಂ.ಎಸ್.ಗಿರೀಶ್ಬಾಬು ಹಾಗೂ ಕುವೆಂಪುನಗರದ ಕುಮಾರ್ ಮೃತಪಟ್ಟವರು. ಎಂ.ಎಸ್.ಗಿರೀಶ್ಬಾಬು ಮತ್ತು ಕುಮಾರ್ ಬೈಕ್ನಲ್ಲಿ ಮೈಸೂರಿನಿಂದ ಚಾಮರಾಜನಗರಕ್ಕೆ ಬರುತ್ತಿದ್ದರು. ಬೊಲೆರೊ ವಾಹನ ಚಾಮರಾಜನಗದಿಂದ ಮೈಸೂರಿಗೆ ತೆರಳುತ್ತಿತ್ತು. ಈ ವೇಳೆ ಬೆಂಡರವಾಡಿ ಕೆರೆ ಬಳಿ ಈ ಎರಡು ವಾಹನಗಳಿಗೆ…
ಬೆಂದ ಬಂಡೀಪುರದಲ್ಲಿ ಸಿಎಂ ವೈಮಾನಿಕ ಸಮೀಕ್ಷೆ
February 28, 2019ಗುಂಡ್ಲುಪೇಟೆ: ಕಳೆದ ಆರು ದಿನಗಳಿಂದ ಬೆಂಕಿಯ ಕೆನ್ನಾಲಿಗೆ ಸುಟ್ಟು ಕರಕಲಾದ ಬಂಡೀಪುರ ರಾಷ್ಟ್ರೀಯ ಉದ್ಯಾನದ ಪ್ರದೇಶಗಳಿಗೆ ಬುಧವಾರ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಪ್ರವಾಸೋ ದ್ಯಮ ಸಚಿವ ಸಾ.ರಾ. ಮಹೇಶ್ ವೈಮಾ ನಿಕ ಸಮೀಕ್ಷೆ ನಡೆಸಿದರು. ಮಧ್ಯಾಹ್ನ 12.30ರ ವೇಳೆಗೆ ಬೆಂಗ ಳೂರಿನಿಂದ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಮುಖ್ಯಮಂತ್ರಿಗಳು ಹುಲಿ ಯೋಜನೆಯ ವ್ಯಾಪ್ತಿಯಲ್ಲಿನ ಕಾಡ್ಗಿಚ್ಚಿ ನಿಂದ ಹೆಚ್ಚು ಹಾನಿಗೊಳಗಾಗಿರುವ ಹಿಮ ವದ್ ಗೋಪಾಲಸ್ವಾಮಿಬೆಟ್ಟ, ಮದ್ದೂರು ಅರಣ್ಯ ವಲಯ, ಮೂಲೆಹೊಳೆ ಅರಣ್ಯ ಹಾಗೂ ಕರಡಿಬೆಟ್ಟ ಅರಣ್ಯ ವಲಯ, ಕುಂದಕೆರೆ…
ಪಾಕಿಸ್ತಾನದ ಮೇಲೆ ಭಾರತ ಬಾಂಬ್ ದಾಳಿ: ಗುಂಡ್ಲುಪೇಟೆ, ಚಾ.ನಗರದಲ್ಲಿ ಬಿಜೆಪಿ ವಿಜಯೋತ್ಸವ
February 28, 2019ಚಾಮರಾಜನಗರ: ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ಭಾರತ ಬಾಂಬ್ ದಾಳಿ ನಡೆಸಿದ್ದನ್ನು ಸ್ವಾಗತಿಸಿ ಹಾಗೂ ಉಗ್ರರನ್ನು ಬಲಿ ಪಡೆದಿದ್ದಕ್ಕೆ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಬುಧವಾರ ವಿಜಯೋತ್ಸವ ಆಚರಿಸಿದರು. ಪಕ್ಷದ ಜಿಲ್ಲಾ ಕಾರ್ಯಾಲಯದಿಂದ ಭಾರತದ ಬಾವುಟ ಹಿಡಿದು ವಿಜಯೋ ತ್ಸವದ ಮೆರವಣಿಗೆಯನ್ನು ಮುಖಂಡರು ಹಾಗೂ ಕಾರ್ಯಕರ್ತರು ಆರಂಭಿಸಿದರು. ಪ್ರಮುಖ ಬೀದಿಗಳ ಮೂಲಕ ಭುವನೇಶ್ವರಿ ವೃತ್ತದಲ್ಲಿ ಸಮಾವೇಶಗೊಂಡರು. ಅಲ್ಲಿ ಪಟಾಕಿ ಸಿಡಿಸಿ ಸಂಭ್ರಮ ವ್ಯಕ್ತಪಡಿಸಿದರು. ಪುಲ್ವಾಮಾ ದಾಳಿ ನಡೆದ 12 ದಿನಗಳ ಲ್ಲಿಯೇ ಭಾರತ ಪಾಕಿಸ್ತಾನದ ಮೇಲೆ ತನ್ನ ಸೇಡನ್ನು…
ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಜಿಪಂ ಸಿಇಓ ವರ್ಗ: ಕೆ.ಎಸ್. ಲತಾಕುಮಾರಿ ಚಾ.ನಗರ ನೂತನ ಸಿಇಓ
February 28, 2019ಚಾಮರಾಜನಗರ: ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯಾಗಿ ಸಿ. ಸತ್ಯಭಾಮ ಬುಧ ವಾರ ಅಧಿಕಾರ ಸ್ವೀಕರಿಸಿದ ಕೆಲ ಗಂಟೆಗಳಲ್ಲೇ ಅವರನ್ನು ಮತ್ತೆ ವರ್ಗಾಯಿಸಲಾಗಿದೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಗಿದ್ದ ಡಾ. ಕೆ. ಹರೀಶ್ಕುಮಾರ್ ಅವರನ್ನು ಉತ್ತರ ಕನ್ನಡದ ಜಿಲ್ಲಾಧಿಕಾರಿಯಾಗಿ ವರ್ಗಾಯಿ ಸಲಾಗಿತ್ತು. ಈ ಸ್ಥಾನಕ್ಕೆ ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಆಗಿದ್ದ ಸಿ. ಸತ್ಯಭಾಮ ರನ್ನು ನಿಯೋಜಿಸಲಾಗಿತ್ತು. ಸಿ. ಸತ್ಯಭಾಮ ಅವರು ಈ ಹಿಂದೆ ಜಿಲ್ಲೆಯಲ್ಲಿ ಉಪವಿಭಾಗಾ ಧಿಕಾರಿಯಾಗಿ…
ಇವಿಎಂ, ವಿವಿ ಪ್ಯಾಟ್ ಜಾಗೃತಿ ಅವಶ್ಯ: ನ್ಯಾ. ಬಸವರಾಜ
February 28, 2019ಚಾಮರಾಜನಗರ: ಮತದಾನದ ಪ್ರಾಮುಖ್ಯತೆ ಕುರಿತು ಜನರಲ್ಲಿ ವ್ಯಾಪಕ ವಾಗಿ ಜಾಗೃತಿ ಮೂಡಿಸುವ ಕಾರ್ಯ ಕ್ರಮಗಳು ಅತ್ಯಂತ ಅವಶ್ಯವಾಗಿವೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶರಾದ ಜಿ. ಬಸವರಾಜ ಅಭಿಪ್ರಾಯಪಟ್ಟರು. ನಗರದ ವ್ಯಾಜ್ಯ ಪೂರ್ವ ಪರ್ಯಾಯ ಪರಿಹಾರ ಕೇಂದ್ರದಲ್ಲಿ ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ ಮತ್ತು ಜಿಲ್ಲಾ ವಕೀಲರ ಸಂಘ ಸಹ ಯೋಗದಲ್ಲಿ ಮತದಾನದ ಬಗ್ಗೆ ಜಾಗೃತಿ ಹಾಗೂ ಮತದಾನ ಯಂತ್ರ, ವಿವಿ ಪ್ಯಾಟ್ ಪ್ರಾತ್ಯಕ್ಷಿಕೆ…
ವಾಯುವಿಹಾರಿಗಳಿಗೆ ಬೈಕ್ ಡಿಕ್ಕಿ: ಗಾಯಾಳು ಸಾವು
February 28, 2019ಚಾಮರಾಜನಗರ: ತಾಲೂಕಿನ ದೊಡ್ಡ ರಾಯಪೇಟೆ ಕ್ರಾಸ್ ಬಳಿ ಇರುವ ಪೆಟ್ರೋಲ್ ಬಂಕ್ ಸಮೀಪ ವಾಯುವಿಹಾರಿಗಳಿಗೆ ಬೈಕ್ ಡಿಕ್ಕಿ ಹೊಡೆದು ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ದೊಡ್ಡರಾಯಪೇಟೆ ಗ್ರಾಮದ ಕುಮಾರಸ್ವಾಮಿ (39) ಮೃತ ಪಟ್ಟವರು. ದೊಡ್ಡರಾಯಪೇಟೆ ಕ್ರಾಸ್ ಬಳಿ ಇರುವ ಪೆಟ್ರೋಲ್ ಬಂಕ್ ಬಳಿ ಫೆ.21ರ ಮುಂಜಾನೆ ವಾಯುವಿಹಾರಕ್ಕೆ ತೆರಳಿದ್ದ ಮೂವರಿಗೆ ಬೈಕ್ ಡಿಕ್ಕಿ ಹೊಡೆದಿತ್ತು. ಈ ವೇಳೆ ನಂಜಮ್ಮಣಿ (45) ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಗಾಯಗೊಂಡಿದ್ದ ಕುಮಾರಸ್ವಾಮಿ ಅವರನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ರಾತ್ರಿ…
ಬಂಡೀಪುರದಲ್ಲಿ ಪ್ರಾಣಿ-ಪಕ್ಷಿಗಳ ಸದ್ದಿಲ್ಲ… ಕಂಡಲ್ಲೆಲ್ಲಾ ಬೂದಿ ರಾಶಿ… ರಾಶಿ…
February 26, 2019ಬಂಡೀಪುರ: ಹಸಿರಿನಿಂದ ಸದಾ ಕಂಗೊಳಿಸುತ್ತಿದ್ದ, ಜಿಂಕೆಗಳ ಹಿಂಡು-ಹಿಂಡು ಕಾಣ ಬರುತ್ತಿದ್ದ ಜಗತ್ ಪ್ರಸಿದ್ಧ ಜಾಗದಲ್ಲಿ ಈಗ ನೀರವ ಮೌನ. ದಿನ ನಿತ್ಯ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಸಫಾರಿಗೆ ತೆರಳುವ ಜಾಗ ಬಿಕೋ….. ಹಕ್ಕಿಗಳ ಚಿಲಿಪಿಲಿ ಸದ್ದಿಲ್ಲ…. ಎಲ್ಲಿ ನೋಡಿದರಲ್ಲಿ ಬೂದಿ ಬೂದಿ…. ಗುಡ್ಡಗಳು ಬೋಳು ಬೋಳು…. ಇವು ಕಂಡು ಬರುತ್ತಿರುವುದು ಬಂಡೀಪುರ ಅರಣ್ಯದಲ್ಲಿ. ಕಳೆದ ನಾಲ್ಕೈದು ದಿನಗಳಿಮದ ಹೊತ್ತಿ ಉರಿಯುತ್ತಿರುವ ಬೆಂಕಿಯ ಜ್ವಾಲೆಗೆ ಬಂಡೀ ಪುರ ಅರಣ್ಯ ಅಕ್ಷರಶಃ ನಲುಗಿದೆ. ಸಾವಿರಾರು ಎಕರೆ ಅರಣ್ಯ ಪ್ರದೇಶ ನಾಶವಾಗಿದೆ….
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಶ್ರಮಿಸಲು ಸಚಿವ ಸತೀಶ್ ಜಾರಕಿಹೊಳಿ ಮನವಿ
February 26, 2019ಗುಂಡ್ಲುಪೇಟೆ: ಜಿಲ್ಲೆಯು ಕಾಂಗ್ರೆಸ್ನ ಭದ್ರಕೋಟೆಯಾ ಗಿದ್ದು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಇನ್ನೂ ಹೆಚ್ಚಿನ ಮತ ಗಳ ಅಂತರದಿಂದ ಕಾಂಗ್ರೆಸ್ ಗೆಲುವು ಸಾಧಿಸಲು ಕಾರ್ಯಕರ್ತರು ಶ್ರಮಿಸಬೇಕು ಎಂದು ಅರಣ್ಯ ಸಚಿವ ಸತೀಶ್ ಜಾರಕಿ ಹೋಳಿ ಕಾರ್ಯಕರ್ತರಿಗೆ ಮನವಿ ಮಾಡಿದರು. ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಆಯೋ ಜಿಸಿದ್ದ ಜನಸಂಪರ್ಕ ಅಭಿಯಾನದ ಕರಪತ್ರ ವನ್ನು ಬಿಡುಗಡೆಗೊಳಿಸಿ ಅವರು ಮಾತ ನಾಡಿದರು. ಸಂಸದ ಆರ್. ಧ್ರುವನಾರಾಯಣ್ ಸರಳ ಹಾಗೂ ಸಜ್ಜನಿಕೆಯ ವ್ಯಕ್ತಿಯಾಗಿದ್ದು, ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಹೆಚ್ಚು ಶ್ರಮಿಸಿ ದ್ದಾರೆ. ಆದ್ದರಿಂದ ಕಾರ್ಯಕರ್ತರು…