ಗುಂಡ್ಲುಪೇಟೆ: ಅಕ್ರಮವಾಗಿ ಹೊಂದಿದ್ದ ಬಂದೂಕಿನೊಡನೆ ವನ್ಯಜೀವಿಗಳ ಬೇಟೆಗೆ ತೆರಳಿದ್ದ ತಾಲೂ ಕಿನ ಬನ್ನೀತಾಳಪುರ ಗ್ರಾಮದ ಬೇಟೆಗಾರನನ್ನು ಜಿಲ್ಲಾ ಅಪರಾಧ ತಡೆ ವಿಭಾಗದ ಪೆÇಲೀಸರು ಬಂಧಿಸಿದ್ದಾರೆ. ತಾಲೂಕಿನ ಬನ್ನೀತಾಳಪುರ ಗ್ರಾಮದ ಸಿದ್ದಶೆಟ್ಟಿ ಎಂಬುವರ ಮಗ ಬಸವರಾಜು(40) ಬಂಧಿತ ಆರೋಪಿ. ಈತ ಬಂದೂಕು, ಟಾರ್ಚ್, ಮಚ್ಚು ಹಾಗೂ ಇತರ ಪರಿಕರಗಳೊಡನೆ ಬೇಟೆಗೆ ಹೊಂಚು ಹಾಕುತ್ತಿದ್ದಾಗ ಚಾಮರಾಜನಗರ ತಾಲೂಕಿನ ಅರಳೀಕಟ್ಟೆ ಸಮೀಪ ಬಂಧಿಸಿದ್ದಾರೆ. ಆರೋಪಿಯನ್ನು ಬಂದೂಕಿನೊಂದಿಗೆ ಚಾಮ ರಾಜನಗರ ಗ್ರಾಮಾಂತರ ಪೆÇಲೀಸ್ ಠಾಣೆಗೆ ಒಪ್ಪಿಸಿದ್ದು ಪ್ರಕರಣ ದಾಖಲಾಗಿದೆ. ಈ ಕಾರ್ಯಾಚರಣೆಯಲ್ಲಿ ಜಿಲ್ಲಾ…
ಮಾನಸಿಕ ಹಿಂಸೆ ಆರೋಪ ಬಾಲಮಂದಿರದ ಬಾಲಕಿಯರಿಂದ ಪ್ರತಿಭಟನೆ
February 21, 2019ಚಾಮರಾಜನಗರ: ನಗರದ ಸರ್ಕಾರಿ ಬಾಲಕಿಯರ ಬಾಲಮಂದಿರದ ಮೇಲ್ವಿಚಾರಕಿ ಮತ್ತು ಅಡುಗೆ ಮಾಡುವ ಸಿಬ್ಬಂದಿ ತಮಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಬಾಲಮಂದಿರ ದಲ್ಲಿ ಇರುವ ಬಾಲಕಿಯರು ನಗರದ ಜಿಲ್ಲಾಡಳಿತ ಭವ ನದ ಎದುರು ಗುರುವಾರ ಪ್ರತಿಭಟನೆ ನಡೆಸಿದರು. ಭವನದ ಬಳಿ ದಿಢೀರ್ ಪ್ರತ್ಯಕ್ಷಗೊಂಡ ಬಾಲಮಂದಿರದ ಬಾಲಕಿ ಯರು ಘೋಷಣೆಗಳನ್ನು ಆಕ್ರೋಶ ವ್ಯಕ್ತಪಡಿಸಿದರು. ಬಾಲಮಂದಿರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮೇಲ್ವಿಚಾರಕಿ ಹಾಗೂ ಅಡುಗೆ ಮಾಡುವ ಮಹಿಳೆ ಯನ್ನು ಈ ಕೂಡಲೇ ಬದಲಾಯಿಸಬೇಕು. ಈ ಬಗ್ಗೆ ನಾವು ಹಲವು ಬಾರಿ…
ವಿಜ್ಞಾನ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ
February 21, 2019ಗುಂಡ್ಲುಪೇಟೆ: ಚಿತ್ರದುರ್ಗದ ಚಿಂತನಾ ಪ್ರಕಾ ಶನದ ವತಿಯಿಂದ ಆಯೋಜಿಸಿದ್ದ ಅಂತ ರಾಷ್ಟ್ರೀಯ ವಿಜ್ಞಾನ ಪರೀಕ್ಷೆಯಲ್ಲಿ ಪಟ್ಟಣದ ಸೇಂಟ್ ಜಾನ್ಸ್ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಜಿ.ಎಸ್. ದರ್ಶನ್ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ. 2018-19ನೇ ಸಾಲಿಗೆ ಚಿತ್ರದುರ್ಗದ ಚಿಂತನಾ ಪ್ರಕಾಶನವು ಅಂತರಾಷ್ಟ್ರೀಯ ವಿಜ್ಞಾನ ಪರೀಕ್ಷೆಯನ್ನು ಆಯೋಜಿಸಿತ್ತು. ಇದರಲ್ಲಿ ಜಿ.ಎಸ್.ದರ್ಶನ್ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆಯುವುದರೊಂದಿಗೆ ಶಾಲೆಗೆ ಕೀರ್ತಿ ತಂದಿದ್ದಾನೆಂದು ತರಬೇತು ದಾರರಾದ ಶ್ರೀಮತಿ ಮತ್ತು ಶಿಕ್ಷಕ ವೃಂದ ಅಭಿನಂದಿಸಿದ್ದಾರೆ. ಈತ ಪತ್ರಕರ್ತ ಸೋಮಶೇಖರ್ ಮತ್ತು ಎಂ.ಶಾಂತ ಅವರ…
ರಾಜ್ಯದಲ್ಲಿ 11 ಸಾವಿರ ಕರ್ನಾಟಕ ಪಬ್ಲಿಕ್ ಶಾಲೆ ತೆರೆಯಲು ಸರ್ಕಾರ ಚಿಂತನೆ
February 21, 2019ಗುಂಡ್ಲುಪೇಟೆ: ರಾಜ್ಯಾದ್ಯಂತ 11 ಸಾವಿರ ಕರ್ನಾಟಕ ಪಬ್ಲಿಕ್ ಶಾಲೆ ತೆರೆಯುವ ಉದ್ದೇಶ ಸರ್ಕಾರದ ಮುಂದಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಎಂ.ಪುಟ್ಟರಂಗಶೆಟ್ಟಿ ಹೇಳಿದರು. ತಾಲೂಕಿನ ಹಂಗಳ ಗ್ರಾಮದಲ್ಲಿ ಸಾರ್ವ ಜನಿಕ ಶಿಕ್ಷಣ ಇಲಾಖೆ ವತಿಯಿಂದ ಆಯೋ ಜಿಸಿದ್ದ ಕರ್ನಾಟಕ ಪಬ್ಲಿಕ್ ಶಾಲೆ ಹಾಗೂ ಶಾಲಾ ಮಕ್ಕಳಿಗೆ ಸೈಕಲ್ ವಿತರಣೆ ಮತ್ತು ಪ್ರಯೋಗಾಲಯ ಉದ್ಘಾಟನೆ ಸಮಾ ರಂಭವನ್ನು ಉದ್ದೇಶಿಸಿ ಮಾತನಾಡಿದರು. ಶಿಕ್ಷಣ ಕ್ಷೇತ್ರದ ಬಲವರ್ಧನೆಗೆ ಬದ ಲಾವಣೆ ತಂದು ಒಂದರಿಂದ ಹನ್ನೆರಡನೇ ತರಗತಿಯವರೆಗೆ…
ಮ.ಬೆಟ್ಟದಲ್ಲಿ ಇಂದು ಹನೂರು ತಾಲೂಕು ಪ್ರಥಮ ಸಾಹಿತ್ಯ ಸಮ್ಮೇಳನ
February 21, 2019ಕೊಳ್ಳೇಗಾಲ: ಹನೂರು ತಾಲೂಕಾಗಿ ಘೋಷಣೆಗೊಂಡ ಬಳಿಕ ಮಲೆಮಹ ದೇಶ್ವರರ ಸನ್ನಿ ಧಿಯಲ್ಲಿ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವು ಫೆ.21 ರಂದು ಜರುಗಲಿದ್ದು, ಅದಕ್ಕಾಗಿ ಸಾಹಿತ್ಯ ಪರಿ ಷತ್ ಅಗತ್ಯ ಸಿದ್ದತೆ ಕೈಗೊಂಡಿದೆ. ಪ್ರಥಮ ಸಮ್ಮೇಳನಕ್ಕೆ ಸರ್ವಾಧ್ಯಕ್ಷ ಡಾ.ಕೇಶವನ್ ಪ್ರಸಾದ್ ಅವರನ್ನು ಆಯ್ಕೆ ಮಾಡಲಾಗಿದೆ. ಫೆ.21ರ ಬೆಳಗ್ಗೆ ದ್ವಜಾ ರೋಹಣ ಜರುಗಲಿದ್ದು, ತಹಸಿಲ್ದಾರ್ ನಾಗರಾಜು, ಹನೂರು ಅಧ್ಯಕ್ಷ ಶ್ರೀನಿವಾಸ ನಾಯ್ಡು. ವೃತ್ತ ನಿರೀಕ್ಷಕ ಮಹೇಶ್ ಸಮ್ಮುಖದಲ್ಲಿ ರಾಷ್ಟ್ರದ್ವಜ, ಕನ್ನಡ ಧ್ವಜ ಹಾಗೂ ಪರಿಷತ್ತಿನ ದ್ವಜಾರೋಹಣ ಕಾರ್ಯಕ್ರಮ ಜರುಗಲಿದೆ. ಬೆಳಗ್ಗೆ…
ಜಿಲ್ಲಾ ಪಂಚಾಯತ್ ಸಿಇಓ ಹರೀಶ್ ಕುಮಾರ್ ವರ್ಗಾವಣೆ ನೂತನ ಸಿಇಓ ಸಿ.ಸತ್ಯಭಾಮ
February 21, 2019ಚಾಮರಾಜನಗರ: ಲೋಕ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾ ವಣಾ ಆಯೋ ಗದ ನಿರ್ದೇಶ ನದ ಮೇರೆಗೆ ರಾಜ್ಯ ಸರ್ಕಾರ ಜಿಪಂ ಸಿಇಓಗಳನ್ನು ವರ್ಗಾ ವರ್ಗಿ ಮಾಡಿದ್ದು, ಚಾಮರಾಜನಗರ ಜಿಪಂ ನೂತನ ಸಿಇಓ ಆಗಿ ಸಿ.ಸತ್ಯ ಭಾಮ ನಿಯೋಜಿಸಲ್ಪಟ್ಟಿದ್ದಾರೆ. ಈವರೆವಿಗೂ ಇಲ್ಲಿ ಜಿಲ್ಲಾ ಪಂಚಾ ಯಿತಿ ಸಿಇಓ ಆಗಿದ್ದ ಡಾ.ಕೆ. ಹರೀಶ್ ಕುಮಾರ್ ಅವರನ್ನು ದಕ್ಷಿಣ ಕನ್ನಡ ಜಿಪಂ ಸಿಇಓ ಆಗಿ ವರ್ಗಾವಣೆ ಮಾಡಲಾಗಿದೆ. ಸತ್ಯಭಾಮ ಅವರು ನಾಳೆ (ಫೆ.21)ಯೇ ಇಲ್ಲಿಗೆ ಆಗಮಿಸಿ ಅಧಿಕಾರ ಸ್ವೀಕರಿಸ ಲಿದ್ದಾರೆ ಎಂದು…
ಚಾಮರಾಜನಗರ ಕ್ಷೇತ್ರಕ್ಕೆ ಬಿಜೆಪಿಯಿಂದ ನಾನೂ ಪ್ರಬಲ ಆಕಾಂಕ್ಷಿ
February 21, 2019ಚಾಮರಾಜನಗರ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಚಾಮರಾಜ ನಗರ ಮೀಸಲು ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಲು ನಾನೊಬ್ಬ ಪ್ರಬಲ ಆಕಾಂಕ್ಷಿ ಆಗಿ ದ್ದೇನೆ ಎಂದು ಪಕ್ಷದ ರಾಜ್ಯ ಕಾರ್ಯಕಾರಿಣಿಯ ವಿಶೇಷ ಆಹ್ವಾನಿತರು ಆದ ಹಿರಿಯ ವಕೀಲ ಎಸ್. ಅರುಣ್ಕುಮಾರ್ ಹೇಳಿದರು. ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನ ದಲ್ಲಿ ಬುಧವಾರ ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದ ಅವರು, ಕಳೆದ ಎಂಟಂತ್ತು ವರ್ಷ ಗಳಿಂದ ನಾನು ಬಿಜೆಪಿಯಲ್ಲಿ ಸಕ್ರಿಯ ಕಾರ್ಯ ಕರ್ತನಾಗಿ ಪಕ್ಷದ ಏಳಿಗೆಗಾಗಿ ಹಗಲಿರುಳು ಶ್ರಮಿಸುತ್ತಿದ್ದೇನೆ. ಪಕ್ಷದ ರಾಜ್ಯ ಕಾರ್ಯಕಾರಿಣಿ…
ಛತ್ರಪತಿ ಶಿವಾಜಿ ಶೌರ್ಯ, ಪರಾಕ್ರಮ ಸ್ಮರಣೀಯ
February 21, 2019ಚಾಮರಾಜನಗರ: ಛತ್ರಪತಿ ಶಿವಾಜಿ ಅವರ ಶೌರ್ಯ, ಪರಾಕ್ರಮ, ಸೇನಾ ಬಲ ಆಡಳಿತ ಸಾಮಥ್ರ್ಯ ಕೊಡುಗೆಯು ಸದಾ ಸ್ಮರಣೀಯವಾಗಿದೆ ಎಂದು ಜಿಲ್ಲಾ ಧಿಕಾರಿ ಬಿ.ಬಿ. ಕಾವೇರಿ ಅವರು ತಿಳಿಸಿದರು. ಜಿಲ್ಲಾಡಳಿತ ಭವನದಲ್ಲಿರುವ ಕೆಡಿಪಿ ಸಭಾಂಗಣದಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಶಿವಾಜಿ ಅವರು ಅಪ್ರತಿಮ ಹೋರಾ ಟಗಾರರಾಗಿದ್ದರು. ಸೇನಾ ಬಲವನ್ನು ಸಂಘ ಟಿಸಿದ್ದರು. ನೌಕಾಪಡೆ…
ಮಹಿಳೆಯನ್ನು ಮಂಚಕ್ಕೆ ಕರೆದ ಆರೋಪ: ಗ್ರಾಪಂ ಸದಸ್ಯ ಸೇರಿ ಐವರ ವಿರುದ್ಧ ಪ್ರಕರಣ ದಾಖಲು
February 21, 2019ಮೈಸೂರು: ಮನೆಯ ಸ್ಕೆಚ್ ಕಾಪಿ ಕೊಡಿಸುವಂತೆ ಕೇಳಿದ ಮಹಿಳೆಯನ್ನು ಗ್ರಾಪಂ ಸದಸ್ಯನೋರ್ವ ಮಂಚಕ್ಕೆ ಕರೆದನೆಂದು ಆರೋಪಿಸಲಾಗಿದ್ದು, ಈ ಸಂಬಂಧ ಗ್ರಾಮ ದಲ್ಲಿ ಪಂಚಾಯ್ತಿ ನಡೆದ ವೇಳೆ ಆತನ ಬೆಂಬಲಿಗರು ಇಬ್ಬರ ಮೇಲೆ ಹಲ್ಲೆ ನಡೆಸಿದ್ದಾ ರೆಂದು ಈ ಸಂಬಂಧ ಓರ್ವ ಮಹಿಳೆ ಸೇರಿ ಐವರ ವಿರುದ್ಧ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಧನಗಳ್ಳಿ ಗ್ರಾಮದ ಗ್ರಾಪಂ ಸದಸ್ಯ ಪಿ.ಲಿಂಗ ರಾಜು ಎಂಬಾತನೇ ಮಹಿಳೆಯನ್ನು ಮಂಚಕ್ಕೆ ಕರೆದ ಆರೋಪಕ್ಕೆ ಗುರಿಯಾದವನಾಗಿದ್ದು, ಧನಗಳ್ಳಿ ಗ್ರಾಮದ ಸ್ವಾಮಿ, ಸುರೇಶ, ಚಿಕ್ಕಮ್ಮ…
9ನೇ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ತೆರೆ: ಜನರು ಮೌಢ್ಯಕ್ಕೆ ಆದ್ಯತೆ ನೀಡುತ್ತಿದ್ದಾರೆ
February 20, 2019ಚಾಮರಾಜನಗರ: ಜಿಲ್ಲೆಯ ಜನರು ಮೌಢ್ಯತೆಗೆ ಆದ್ಯತೆ ನೀಡುತ್ತಿದ್ದಾರೆ. ಇದರಿಂದ ದುಂದುವೆಚ್ಚ ಹೆಚ್ಚಾಗುತ್ತಿದೆ. ಜಿಲ್ಲೆಯ ಸಾಹಿತಿಗಳು ಜನರ ಈ ಮೌಢ್ಯವನ್ನು ನಿವಾರಿಸಲು ಪ್ರಯತ್ನಗ ಳನ್ನು ನಡೆಸಬೇಕು ಎಂದು ಸಂಸದ ಆರ್. ಧ್ರುವನಾರಾಯಣ್ ಹೇಳಿದರು. ನಗರದ ಜೆ.ಎಚ್.ಪಟೇಲ್ ಸಭಾಂಗಣ ದಲ್ಲಿ ಮೂರು ದಿನಗಳ ಕಾಲ ನಡೆದ 9ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸಮಾ ರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಜನರು ಶಿಕ್ಷಣಕ್ಕೆ ಆದ್ಯತೆ ನೀಡದೇ, ಶಾಸಕರನ್ನು, ಸಂಸದರನ್ನು ದೇವಸ್ಥಾನ ನಿರ್ಮಿಸಲು ಅನುದಾನ ನೀಡಿ ಎಂದು ಕೇಳು ತ್ತಾರೆ. ಊರಿನಲ್ಲಿ ಅನೇಕ…










