ಕೊಡಗು

ಕೊರೊನಾ ತಡೆಗೆ ರಾಜ್ಯ ಸರ್ಕಾರ ಮುನ್ನೆಚ್ಚರಿಕೆ ಕ್ರಮ: ಬೋಪಯ್ಯ
ಕೊಡಗು

ಕೊರೊನಾ ತಡೆಗೆ ರಾಜ್ಯ ಸರ್ಕಾರ ಮುನ್ನೆಚ್ಚರಿಕೆ ಕ್ರಮ: ಬೋಪಯ್ಯ

March 16, 2020

ವಿರಾಜಪೇಟೆ, ಮಾ.15- ರಾಜ್ಯದಲ್ಲಿ ಈಗಾಗಲೇ ಕೊರೊನಾ ವೈರಸ್ ಸೋಂಕು ತಡೆಗೆ ಸರ್ಕಾರ ಸೂಕ್ತ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ ಎಂದು ಶಾಸಕ ಕೆ.ಜಿ.ಬೋಪಯ್ಯ ತಿಳಿಸಿದರು. ಇಲ್ಲಿನ ಪಪಂ ಪುರಭವನದಲ್ಲಿ ಶನಿ ವಾರ ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಕುರಿತು ಪಪಂ, ತಾಲೂಕು ಕಚೇರಿ, ಸ್ಥಳೀಯ ಮುಖ್ಯ ವೈದ್ಯರು ಹಾಗೂ ನಾಗರಿಕರ ಸಭೆಯಲ್ಲಿ ಮಾತನಾಡಿದ ಅವರು, ವಿಶ್ವ ದಾದ್ಯಂತ ವ್ಯಾಪಿಸಿರುವ ಈ ಕೊರೊನಾ ವೈರಸ್ ಬಗ್ಗೆ ಭಯ ಪಡುವ ಅಗತ್ಯವಿಲ್ಲ. ಈಗಾಗಲೇ ರಾಜ್ಯ ಸರ್ಕಾರ ಕೊರೊನಾ ತಡೆಗೆ…

ಬೈಲುಕುಪ್ಪೆ ಟಿಬೇಟಿಯನ್ ಶಿಬಿರದಲ್ಲಿ ಕಟ್ಟೆಚ್ಚರ
ಕೊಡಗು

ಬೈಲುಕುಪ್ಪೆ ಟಿಬೇಟಿಯನ್ ಶಿಬಿರದಲ್ಲಿ ಕಟ್ಟೆಚ್ಚರ

March 16, 2020

ಮಡಿಕೇರಿ,ಮಾ.15-ಕೊಡಗು ಜಿಲ್ಲೆ ಯಲ್ಲಿ ಕೊರೊನಾ ವೈರಸ್ ಹರಡುವು ದನ್ನು ತಡೆಯಲು ಜಿಲ್ಲಾಡಳಿತ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದ್ದು, ಕುಶಾಲನಗರ ಸಮೀಪದ ಬೈಲುಕುಪ್ಪೆಯ ಟಿಬೆಟಿಯನ್ ಶಿಬಿರದಲ್ಲಿ ಆರೋಗ್ಯ ಇಲಾಖೆ ವಿಶೇಷ ನಿಗಾ ಇಟ್ಟಿದೆ. ಕೊರೊನಾ ಮಹಾಮಾರಿ ಕಾಣಿಸಿ ಕೊಂಡಿರುವ ಚೀನಾ ದೇಶದೊಂದಿಗೆ ಟಿಬೆಟ್ ಗಡಿ ಹಂಚಿಕೊಂಡಿದ್ದು, ಟಿಬೆಟ್ ನಲ್ಲೂ ಕೊರೊನಾ ಸೋಂಕು ಹರಡಿದೆ. ಬೌದ್ಧ ಭಿಕ್ಷುಗಳು ಟಿಬೆಟ್‍ಗೆ ಹೋಗಿ ಬರು ವುದು ಸಾಮಾನ್ಯವಾಗಿರುವ ಹಿನ್ನಲೆಯಲ್ಲಿ, ಆರೋಗ್ಯ ಇಲಾಖೆ ಸಿಬ್ಬಂದಿಗಳು ಪ್ರತಿ ಶಿಬಿರಕ್ಕೂ ತೆರಳಿ ಕೊರೊನಾ ವೈರಸ್ ಮತ್ತು ಶುಚಿತ್ವದ…

ಸುಂಟಿಕೊಪ್ಪ ಸಂತೆ ಬಂದ್ ; ವರ್ತಕರು, ಪೊಲೀಸರ ವಾಗ್ವಾದ
ಕೊಡಗು

ಸುಂಟಿಕೊಪ್ಪ ಸಂತೆ ಬಂದ್ ; ವರ್ತಕರು, ಪೊಲೀಸರ ವಾಗ್ವಾದ

March 16, 2020

ಸುಂಟಿಕೊಪ್ಪ,ಮಾ.15-ಸುಂಟಿಕೊಪ್ಪ ಪಟ್ಟಣಕ್ಕೆ ಸಂತೆ ದಿನವಾದ ಭಾನುವಾರ ಕೊರೊನಾ ಭೀತಿಯ ಮಿಶ್ರ ಪ್ರತಿಕ್ರಿಯೆಯಿಂದ ವ್ಯಾಪಾರಸ್ಥರು, ಗ್ರಾಹಕರು ಹಾಗೂ ಇಲ್ಲಿನ ಗ್ರಾಮ ಪಂಚಾಯಿತಿ, ಪೊಲೀಸರ ನಡುವೆ ಕೆಲಕಾಲ ಗೊಂದಲ ಉಂಟಾಯಿತು. ಮಾ.14ರ ಸಂಜೆ 5.30 ಗಂಟೆಗೆ ಗ್ರಾ.ಪಂ.ನಿಂದ ಭಾನುವಾರ ಸಂತೆ ವ್ಯಾಪರ ರದ್ದುಗೊಳಿಸಲಾಗಿದೆ. ವ್ಯಾಪಾರಸ್ಥರು ಗ್ರಾಹಕರು ಸಹಕರಿಸಬೇ ಕೆಂದು ಧ್ವನಿವರ್ಧಕದ ಮೂಲಕ ಪ್ರಚಾರ ನಡೆಸಲಾಗಿತ್ತು. ಸುಂಟಿಕೊಪ್ಪ ಸಂತೆಗೆ ಪಿರಿಯಾಪಟ್ಟಣ, ಕೊಣನೂರು, ಹುಣಸೂರು, ಹೆಬ್ಬಾಲೆ, ಕುಶಾಲನಗರ, ಮಾದಾಪುರ, ಗರ್ವಾಲೆ, ಸೂರ್ಲಬ್ಬಿ ಮೊದಲಾದ ಕಡೆಗಳಿಂದ ತರಕಾರಿ, ಬಟ್ಟೆ, ದಿನಸಿ ವ್ಯಾಪಾರಕ್ಕೆ ಕಳೆದ 50…

ಗ್ರಾಮೀಣ ಸಂಸ್ಕøತಿ ಉಳಿಸಲು ಸಲಹೆ
ಕೊಡಗು

ಗ್ರಾಮೀಣ ಸಂಸ್ಕøತಿ ಉಳಿಸಲು ಸಲಹೆ

March 16, 2020

ವೀರಾಜಪೇಟೆ,ಮಾ.15-ವಿದ್ಯಾರ್ಥಿಗಳ ಲ್ಲಿರುವ ಪ್ರತಿಭೆಯನ್ನು ಹೊರತೊರಲು ಕಾಲೇಜು ಮಟ್ಟದಲ್ಲಿ ತಮ್ಮಲ್ಲಿರುವ ಪ್ರತಿಭೆ ಯನ್ನು ಪ್ರದರ್ಶಿಸುವ ಮೂಲಕ ನಮ್ಮ ಸಂಸ್ಕøತಿಯನ್ನು ಉಳಿಸಿ ಬೆಳೆಸುವಂತಾಗ ಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಹೇಳಿದರು. ಸರಕಾರಿ ಪ್ರಥಮ ದರ್ಜೆ ಕಾಲೇಜು ವಿರಾಜಪೇಟೆಯಲ್ಲಿ ನಡೆದ ಕನ್ನಡ-ಇಂಗ್ಲಿಷ್ ಮತ್ತು ಇತಿಹಾಸ ವಿಭಾಗದ ವತಿಯಿಂದ ರಚಿಸಲಾಗಿರುವ ವಿದ್ಯಾರ್ಥಿ ಭ್ರಾತೃತ್ವ ವೇದಿಕೆಯ ವತಿಯಿಂದ ಆಯೋ ಜಿಸಲಾಗಿದ್ದ ”ಸುಗ್ಗಿ ಸಂಭ್ರಮ-ಟಿ 20” ಎಂಬ ರಾಜ್ಯಮಟ್ಟದ ಎರಡು ದಿನಗಳ ಸ್ಪರ್ಧಾ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು,…

ವಿದೇಶದಿಂದ ಬರುವವರ ಬಗ್ಗೆ ಮಾಹಿತಿ ನೀಡಲು ಡಿಸಿ ಮನವಿ
ಕೊಡಗು

ವಿದೇಶದಿಂದ ಬರುವವರ ಬಗ್ಗೆ ಮಾಹಿತಿ ನೀಡಲು ಡಿಸಿ ಮನವಿ

March 14, 2020

ಮಡಿಕೇರಿ,ಮಾ.13-ಕೊಡಗು ಜಿಲ್ಲೆ ಯಲ್ಲಿ ಕೊರೊನಾ ಸೋಂಕಿನ ಪ್ರಕರಣ ಇದುವರೆಗೆ ವರದಿಯಾಗಿಲ್ಲ. ಆದರೂ ಒಬ್ಬರು ಕೊಡಗು ವೈದ್ಯಕೀಯ ಕಾಲೇಜು ಆಸ್ಪತ್ರೆಯ ವಿಶೇಷ ವಾರ್ಡ್‍ನಲ್ಲಿ ದಾಖಲಾಗಿದ್ದು, ಕೊರೊನಾ ಸಂಬಂಧಿಸಿದಂತೆ ವರದಿಗಾಗಿ ಕಾಯಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ. ನಗರದ ಜಿ.ಪಂ.ಕೆಡಿಪಿ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಕೊಡಗಿನಲ್ಲಿ ಈವರೆಗೂ ಕೊರೊನಾ ಸೋಂಕಿನ ಪ್ರಕರಣ ವರದಿ ಯಾಗಿಲ್ಲ. ದುಬೈನಿಂದ ಮರಳಿದ ವ್ಯಕ್ತಿ ಯೋರ್ವರಿಗೆ ಗಂಟಲು ನೋವು ಕಾಡಿದ ಹಿನ್ನೆಲೆಯಲ್ಲಿ ಅವರು ಆಸ್ಪತ್ರೆಗೆ ಸ್ವಯಂ ದಾಖಲಾಗಿ ಪರೀಕ್ಷೆ…

ಕಳತ್ಮಾಡು ಲಯನ್ಸ್ ಪ್ರೌಢಶಾಲೆ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಲು ಡಿಸಿ ಸೂಚನೆ
ಕೊಡಗು

ಕಳತ್ಮಾಡು ಲಯನ್ಸ್ ಪ್ರೌಢಶಾಲೆ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಲು ಡಿಸಿ ಸೂಚನೆ

March 14, 2020

ಮಡಿಕೇರಿ ಮಾ.13-ಇತ್ತೀಚೆಗೆ ಗೋಣಿಕೊಪ್ಪ ಕಳತ್ಮಾಡುವಿನ ಲಯನ್ಸ್ ಪ್ರೌಢಶಾಲೆಯ ವಿದ್ಯಾರ್ಥಿಗಳು ದುಬಾರೆಗೆ ಪ್ರವಾಸ ತೆರಳಿದ್ದ ಸಂದರ್ಭದಲ್ಲಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದು, ಈ ಸಂಬಂಧ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರ ವಿರುದ್ಧ ಮಂಡಳಿಯು ಒಂದು ವಾರದೊಳಗೆ ಅಗತ್ಯ ಕ್ರಮ ಕೈಗೊಂಡು ವರದಿ ನೀಡಬೇಕು. ಇಲ್ಲದಿದ್ದಲ್ಲಿ ಆಡಳಿತ ಮಂಡಳಿ ವಿರುದ್ಧ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಶಿಕ್ಷಣ ಇಲಾಖೆಗೆ ಎಚ್ಚರಿಕೆ ನೀಡಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರ…

ಕೊಡಗು ಜಿಲ್ಲೆಯಲ್ಲೂ ಸಭೆ ಸಮಾರಂಭ ನಡೆಸದಂತೆ ಸೂಚನೆ
ಕೊಡಗು

ಕೊಡಗು ಜಿಲ್ಲೆಯಲ್ಲೂ ಸಭೆ ಸಮಾರಂಭ ನಡೆಸದಂತೆ ಸೂಚನೆ

March 14, 2020

ಮಡಿಕೇರಿ,ಮಾ.13-ರಾಜ್ಯದಲ್ಲಿ ಕೋವಿಡ್-19 (ಕೊರೋನಾ) ವೈರಸ್ ನಿಂದ ವ್ಯಕ್ತಿ ಮೃತಪಟ್ಟ ಘಟನೆ ನಡೆದಿರುವ ಹಿನ್ನಲೆಯಲ್ಲಿ ರಾಜ್ಯ ಸರಕಾರ ಒಂದು ವಾರಗಳ ಕಾಲ ಹೆಚ್ಚು ಜನ ಸೇರುವ ಸಭೆ ಸಮಾರಂಭಗಳನ್ನು ನಡೆಸದಂತೆ ಸೂಚನೆ ನೀಡಿದ್ದು, ಕೊಡಗು ಜಿಲ್ಲೆಯಲ್ಲಿ ಈ ಕುರಿತು ಆತಂಕ ಪ್ರಾರಂಭವಾಗಿದೆ. ರಾಜ್ಯ ಸರಕಾರದ ಸೂಚನೆಯಂತೆ ಜಿಲ್ಲೆ ಯಲ್ಲೂ ಯಾವುದೇ ಸಭೆ ಸಮಾರಂಭ ನಡೆಸುವಂತಿಲ್ಲ. ಆದರೆ ಈಗಾಗಲೇ ಜಿಲ್ಲೆ ಯಲ್ಲಿ ಮದುವೆ, ನಾಮಕರಣ, ನಿಶ್ಚಿ ತಾರ್ಥ, ದೇವರ ಹಬ್ಬಗಳು, ದೇವಾಲಯ ಗಳ ವಾರ್ಷಿಕೋತ್ಸವ ಕೂಡ ನಡೆಯು ತ್ತಿದ್ದು, ಸಮಾರಂಭ…

ಕೊರೊನಾ; ಜನದಟ್ಟಣೆ ಪ್ರದೇಶದಲ್ಲಿ ನಿಗಾವಹಿಸಲು ಸಲಹೆ
ಕೊಡಗು

ಕೊರೊನಾ; ಜನದಟ್ಟಣೆ ಪ್ರದೇಶದಲ್ಲಿ ನಿಗಾವಹಿಸಲು ಸಲಹೆ

March 11, 2020

ಮಡಿಕೇರಿ,ಮಾ.10-ಕೊರೊನಾ ವೈರಸ್ ಬಗ್ಗೆ ಜಿಲ್ಲೆಯ ಪ್ರವಾಸಿ ತಾಣಗಳು, ಬಸ್ ನಿಲ್ದಾಣಗಳು, ರೆಸಾರ್ಟ್‍ಗಳು, ಹೋಂ ಸ್ಟೇಗಳು ಹಾಗೂ ಹೋಟೆಲ್‍ಗಳಲ್ಲಿ ಹೆಚ್ಚಿನ ನಿಗಾ ವಹಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸಲಹೆ ಮಾಡಿದ್ದಾರೆ. ಕೊರೊನಾ ವೈರಸ್ ಸಂಬಂಧ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಇಲಾಖೆ ಅಧಿಕಾರಿ ಗಳೊಂದಿಗೆ ಮಂಗಳವಾರ ಸಭೆ ನಡೆಸಿದರು. ಕೊರೊನಾ ವೈರಸ್ ಬೆಂಗಳೂರಿನಲ್ಲೂ ಕಂಡುಬಂದಿರುವ…

ಖಾಸಗಿ ಜಾಗದಲ್ಲಿ ಬಿದಿರು ಬೆಳೆಯಲು ಸಲಹೆ
ಕೊಡಗು

ಖಾಸಗಿ ಜಾಗದಲ್ಲಿ ಬಿದಿರು ಬೆಳೆಯಲು ಸಲಹೆ

March 11, 2020

ಗೋಣಿಕೊಪ್ಪ,ಮಾ.10- 2 ವರ್ಷದಲ್ಲಿ 2.2 ಲಕ್ಷ ಹೆಕ್ಟೇರ್ ಖಾಸಗಿ ಜಾಗದಲ್ಲಿ ಬಿದಿರು ಬೆಳೆಯಲು ಗುರಿ ಹೊಂದಲಾಗಿದೆ. ಬಿದಿರು ಬೆಳೆಗೆ ಸಿಗುತ್ತಿರುವ ಪ್ರೋತ್ಸಾಹವನ್ನು ಕೃಷಿ ಕರು ಸದ್ಭಳಕೆ ಮಾಡಿಕೊಂಡು ದೇಶಕ್ಕೆ ಬೇಕಿ ರುವ ಬಿದಿರು ಸಂಪನ್ಮೂಲ ಬೇಡಿಕೆ ಪೂರೈ ಸಲು ಕೈಜೋ ಡಿಸಬೇಕಿದೆ ಎಂದು ಅರಣ್ಯ ಇಲಾಖೆ ಕೊಡಗು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ.ಹೀರಾಲಾಲ್ ಹೇಳಿದರು. ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದಲ್ಲಿ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿದ್ಯಾಲಯ, ಪೊನ್ನಂ ಪೇಟೆ ಅರಣ್ಯ ಮಹಾವಿದ್ಯಾಲಯ, ರಾಷ್ಟ್ರೀಯ ಬಿದಿರು…

ವಿರಾಜಪೇಟೆಯಲ್ಲಿ ಧ್ಯಾನ ಸಭಾಂಗಣ ಉದ್ಘಾಟನೆ
ಕೊಡಗು

ವಿರಾಜಪೇಟೆಯಲ್ಲಿ ಧ್ಯಾನ ಸಭಾಂಗಣ ಉದ್ಘಾಟನೆ

March 11, 2020

ವೀರಾಜಪೇಟೆ,ಮಾ.10-ದೀಪವನ್ನು ಬೆಳಗುವುದು ನಮ್ಮ ಬದುಕಿನಲ್ಲಿ ಬೆಳಕನ್ನು ನೀಡಲೆಂದು, ದೀಪ ಹಚ್ಚುವುದರಿಂದ ಭಾರತ ದೇಶದಲ್ಲಿಯೇ ಮಹತ್ವದ ಸಂಪ್ರದಾಯ ವಿದೆ ಎಂದು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ಜರ್ಮನಿ ರಾಜಯೋಗ ಸೇವಾ ಕೇಂದ್ರಗಳ ನಿರ್ದೇಶಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಸುದೇಶ್‍ಜೀ ಹೇಳಿದರು. ವೀರಾಜಪೇಟೆ ಅಪ್ಪಯ್ಯಸ್ವಾಮಿ ರಸ್ತೆಯ ಲ್ಲಿರುವ ಬ್ರಹ್ಮಾಕುಮಾರೀಸ್ ಜ್ಞಾನ ಗಂಗಾ ಭವನದ ‘ರಾಜಯೋಗ ಧ್ಯಾನ ಸಭಾಂ ಗಣದ ಉದ್ಘಾಟನಾ ಸಮಾರಂಭ’ದಲ್ಲಿ ಭಾಗವಹಿಸಿ, ಜಗತ್ತಿನಲ್ಲಿರುವಂತ ಜ್ಯೋತಿ ಬೆಳಕಿನ ವಿಶೇಷ ಶಕ್ತಿಯಾಗಿದ್ದು, ಮಾನವನ ನಾನು ನನ್ನದು ಎಂಬುದನ್ನು ಹೋಗ ಲಾಡಿಸಿ ಮನಸ್ಸಿಗೆ ಶಾಂತಿ ನೆಮ್ಮದಿಯನ್ನು…

1 29 30 31 32 33 187
Translate »