ಕೊರೊನಾ ತಡೆಗೆ ರಾಜ್ಯ ಸರ್ಕಾರ ಮುನ್ನೆಚ್ಚರಿಕೆ ಕ್ರಮ: ಬೋಪಯ್ಯ
ಕೊಡಗು

ಕೊರೊನಾ ತಡೆಗೆ ರಾಜ್ಯ ಸರ್ಕಾರ ಮುನ್ನೆಚ್ಚರಿಕೆ ಕ್ರಮ: ಬೋಪಯ್ಯ

March 16, 2020

ವಿರಾಜಪೇಟೆ, ಮಾ.15- ರಾಜ್ಯದಲ್ಲಿ ಈಗಾಗಲೇ ಕೊರೊನಾ ವೈರಸ್ ಸೋಂಕು ತಡೆಗೆ ಸರ್ಕಾರ ಸೂಕ್ತ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ ಎಂದು ಶಾಸಕ ಕೆ.ಜಿ.ಬೋಪಯ್ಯ ತಿಳಿಸಿದರು.

ಇಲ್ಲಿನ ಪಪಂ ಪುರಭವನದಲ್ಲಿ ಶನಿ ವಾರ ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಕುರಿತು ಪಪಂ, ತಾಲೂಕು ಕಚೇರಿ, ಸ್ಥಳೀಯ ಮುಖ್ಯ ವೈದ್ಯರು ಹಾಗೂ ನಾಗರಿಕರ ಸಭೆಯಲ್ಲಿ ಮಾತನಾಡಿದ ಅವರು, ವಿಶ್ವ ದಾದ್ಯಂತ ವ್ಯಾಪಿಸಿರುವ ಈ ಕೊರೊನಾ ವೈರಸ್ ಬಗ್ಗೆ ಭಯ ಪಡುವ ಅಗತ್ಯವಿಲ್ಲ. ಈಗಾಗಲೇ ರಾಜ್ಯ ಸರ್ಕಾರ ಕೊರೊನಾ ತಡೆಗೆ ಸೂಕ್ತ ಕ್ರಮ ಕೈಗೊಂಡಿದೆ ಎಂದರು.

ತಾಲೂಕು ವೈದ್ಯಾಧಿಕಾರಿ ಯತಿರಾಜ್ ಮಾತನಾಡಿ, ಕೊರೊನಾ ವೈರಸ್‍ನಿಂದ ನಿಮ್ಮನ್ನು ನೀವೇ ರಕ್ಷಿಸಿಕೊಳ್ಳಬೇಕು. ಕೆಮ್ಮು, ಜ್ವರ ಹಾಗೂ ಉಸಿರಾಟದ ತೊಂದರೆ ಇದ್ದಲ್ಲಿ ತುರ್ತಾಗಿ ವೈದ್ಯರ ಸಲಹೆ ಪಡೆಯು ವಂತೆ ತಿಳಿಸಿದ ಅವರು, ವಿದೇಶದಿಂದ ಜಿಲ್ಲೆಗೆ ಆಗಮಿಸುವ ಭಾರತೀಯರು ಹಾಗೂ ವಿದೇಶಿಗರನ್ನು ರೋಗದ ಲಕ್ಷಣವಿರುವ ಬಗ್ಗೆ ತಪಾಸಣೆ ನಡೆಸಲಾಗುವುದು. ಈ ಬಗ್ಗೆ ಮುಂಜಾಗ್ರತಾ ಕ್ರಮ ವಹಿಸಲಾಗು ವುದು ಎಂದರು.

ತಾಲೂಕು ಮುಖ್ಯ ವೈದ್ಯಾಧಿಕಾರಿ ವಿಶ್ವ ನಾಥ್ ಸಿಂಪಿ ಮಾತನಾಡಿ, 2019ರ ಡಿ.31 ರಂದು ಚೀನಾದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಕೊರೊನಾ ಇದೀಗ ವಿಶ್ವದ ಎಲ್ಲಾ ದೇಶಗಳಿಗೂ ವ್ಯಾಪಿಸಿದೆ. ಹೀಗಾಗಿ ಕೊರೊನಾ ವೈರಸ್ ಹರಡದಂತೆ ತಡೆ ಯಲು ಆಗಾಗ್ಗೆ ಸಾಬೂನಿಂದ ಕೈ ತೊಳೆಯ ಬೇಕು. ಕೈ ಸ್ವಚ್ಛವಾಗಿದ್ದರೂ ಮತ್ತೆ ಮತ್ತೆ ತೊಳೆದುಕೊಳ್ಳಬೇಕು. ಕೆಮ್ಮು ಬಂದಾಗ ಮತ್ತು ಸೀನುವಾಗ ಮೂಗು ಮತ್ತು ಬಾಯಿ ಮುಚ್ಚಿಕೊಳ್ಳಬೇಕು. ರೋಗದ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸುವುದು. ಇದಕ್ಕಾಗಿ ಸರ್ಕಾರಿ ಆಸ್ಪತ್ರೆಯಲ್ಲಿ 5 ಕೊಠಡಿಗಳನ್ನು ಮಿಸಲಿರಿಸಲಾಗಿದೆ ಎಂದರು.
ಪಶುವೈದ್ಯಾಧಿಕಾರಿ ಡಾ.ಲತಾ ಮಾತ ನಾಡಿ, ಕೇರಳದಲ್ಲಿ ಹಕ್ಕಿಜ್ವರ ಕಾಣಿಸಿ ಕೊಂಡಿದ್ದು, ಈ ಸಂಬಂಧ ಕೊಡಗಿನ ಗಡಿಭಾಗದಲ್ಲಿ ಮುಂಜಾಗ್ರತಾ ಕ್ರಮವಾಗಿ ಸಿಬ್ಬಂದಿ ನಿಯೋಜಿಸಲಾಗಿದೆ ಎಂದರು.

ಹಿರಿಯ ವೈದ್ಯ ಡಾ.ಕಾರ್ಯಪ್ಪ, ಡಾ. ಫಾತೀಮ ಕಾರ್ಯಪ್ಪ, ಡಾ.ನರಸಿಂಹನ್, ಜಿಪಂ ಸದಸ್ಯ ಶಶಿಸುಬ್ರಮಣಿ, ಸಿಪಿಐ ಕ್ಯಾತೇಗೌಡ ಸಭೆಯನ್ನುದ್ದೇಶಿಸಿ ಮಾತನಾಡಿ ದರು. ಸಭೆಯಲ್ಲಿ ಪಪಂ ಮುಖ್ಯಾಧಿಕಾರಿ ಎ.ಎಂ.ಶ್ರೀಧರ್, ಸದಸ್ಯರಾದ ಎಂ.ಕೆ.ದೇಚಮ್ಮ, ಸಿ.ಕೆ.ಪೃಥ್ವಿನಾಥ್, ಡಿ.ಪಿ.ರಾಜೇಶ್, ಮಹ ಮದ್ ರಫಿ, ರಂಜಿ ಪೂಣಚ್ಚ, ಕೊಲತಂಡ ಬೋಪಯ್ಯ, ಎಂ.ಎಂ.ಶಶಿಧರನ್, ಏಜಾಜ್ ಅಹ್ಮದ್, ಠಾಣಾಧಿಕಾರಿ ಮರಿಸ್ವಾಮಿ, ಸೆಸ್ಕಾಂನ ಶಿವನೇಗೌಡ ಪಾಟೀಲ್, ಲೋಕೋಪ ಯೋಗಿ ಇಲಾಖೆ ಸಹಾಯಕ ಅಭಿಯಂತರ ಎಂ.ಇ.ಸುರೇಶ್, ದಲಿತ ಸಮಿತಿ ವೀರ ಭದ್ರಯ್ಯ, ಪಳನಿ ಪ್ರಕಾಶ್ ಇತರರಿದ್ದರು.

Translate »