ಮಳೆ ಹಾನಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಸೂಚನೆ ಭತ್ತದ ಖರೀದಿ ಕೇಂದ್ರ ತೆರೆಯಲು ಒತ್ತಾಯ =ಜಿಲ್ಲೆಯ 17 ಕಡೆ ಮರಳು ತೆಗೆಯಲು ಅನುಮತಿ ಕುಶಾಲನಗರದ ಕಲಾಭವನ ಶೀಘ್ರ ಉದ್ಘಾಟನೆಗೆ ಆಗ್ರಹ ಗ್ರಾಪಂ ವ್ಯಾಪ್ತಿಯಲ್ಲಿ ಕನ್ನಡ ನಾಮಫಲಕ ಅಳವಡಿಸಲು ಒತ್ತಾಯ ಮಡಿಕೇರಿ, ಡಿ.10- ನಗರದ ಜಿಲ್ಲಾ ಪಂಚಾಯಿತಿ ನೂತನ ಭವನದಲ್ಲಿ ಮಂಗಳವಾರ ಜಿಪಂ ಅಧ್ಯಕ್ಷ ಬಿ.ಎ.ಹರೀಶ್ ಅವರ ನೇತೃತ್ವದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಜಿಲ್ಲೆಯ ಅಭಿವೃದ್ಧಿಯ ಕುರಿತು ಹಲವು ವಿಚಾರಗಳನ್ನು ಚರ್ಚಿಸಲಾಯಿತು. ರಸ್ತೆ ಅಭಿವೃದ್ಧಿಗೆ ಸೂಚನೆ: ಈಗಾಗಲೇ ಮಳೆ…
ಎಸ್ಸಿ, ಎಸ್ಟಿ ಹಿತರಕ್ಷಣಾ ಸಮಿತಿ ಸಭೆ: ಅಧಿಕಾರಿಗಳ ಗೈರು: ನೋಟಿಸ್ ನೀಡಿ, ಕ್ರಮಕ್ಕೆ ಆಗ್ರಹ
December 11, 2019ಸೋಮವಾರಪೇಟೆ, ಡಿ.10- ತಾಲೂಕು ಪರಿಶಿಷ್ಟ ಜಾತಿ ಮತ್ತು ಪಂಗಡದ ಹಿತ ರಕ್ಷಣಾ ಸಭೆ ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್ ಗೋವಿಂದರಾಜ್ ಅಧ್ಯ ಕ್ಷತೆಯಲ್ಲಿ ಮಂಗಳವಾರ ನಡೆಯಿತು. ಈ ಹಿಂದೆ ನಡೆದ ಸಭೆಯಲ್ಲಿ ಅಧಿಕಾ ರಿಗಳು ಗೈರಾಗಿದ್ದು, ಅವರಿಗೆ ನೋಟಿಸ್ ನೀಡಲು ನಿರ್ಣಯ ಕೈಗೊಳ್ಳಲಾಗಿತ್ತು. ಮತ್ತೆ ಈ ಸಭೆಗೂ ಕೆಲವು ಅಧಿಕಾರಿಗಳು ಗೈರಾಗಿದ್ದಾರೆ. ಅವರಿಗೂ ನೋಟಿಸ್ ನೀಡಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಸಮಿತಿಯ ಸದಸ್ಯರು ಆಗ್ರಹಿಸಿದರು. ಪಟ್ಟಣದಲ್ಲಿ ನಿರ್ಮಿಸುತ್ತಿರುವ ಅಂಬೇ ಡ್ಕರ್ ಭವನದ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು,…
ಎ.ಡಿವಿಜನ್ ಹಾಕಿ ಲೀಗ್: ಬೊಟ್ಯತ್ನಾಡ್ ಚಾಂಪಿಯನ್
December 11, 2019ಗೋಣಿಕೊಪ್ಪ, ಡಿ.10- ಹಾಕಿಕೂರ್ಗ್ ಸಹಯೋಗದಲ್ಲಿ ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಆಯೋ ಜಿಸಿದ್ದ ಪುರುಷರ ಎ.ಡಿವಿಜನ್ ಹಾಕಿ ಲೀಗ್ನ ಚಾಂಪಿಯನ್ ಆಗಿ ಬೊಟ್ಯ ತ್ನಾಡ್ ತಂಡ ಹೊರಹೊಮ್ಮಿದೆ. ಮಂಗಳವಾರ ನಡೆದ ಫೈನಲ್ನಲ್ಲಿ ಸೋಲನುಭವಿಸಿದ ನಾಪೋಕ್ಲು ಶಿವಾಜಿ ತಂಡವು ರನ್ನರ್ ಅಪ್ ಸ್ಥಾನದ ಮೂಲಕ ದ್ವಿತೀಯ ಸ್ಥಾನ ಅಲಂಕರಿಸಿತು. ಪಂದ್ಯದ ಅವಧಿಯಲ್ಲಿ 3-3 ಗೋಲು ಗಳ ಮೂಲಕ ಟೈ ಫಲಿತಾಂಶ ನೀಡಿತು. ಬೊಟ್ಯತ್ನಾಡ್ ಪರ 5ನೇ ನಿಮಿಷ, ಹಾಗೂ 38ನೇ ನಿಮಿಷದಲ್ಲಿ(ಪಿ.ಸಿ) ಅವಕಾಶವನ್ನು ಬೋಪಣ್ಣ ಗೋಲಾಗಿ ಪರಿವರ್ತಿಸಿದರು….
ಸುಂದರ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿಗಳ ಪಾತ್ರ ಮುಖ್ಯ
December 11, 2019ವಿರಾಜಪೇಟೆ, ಡಿ.10- ಸುಂದರ ಸಮಾಜ ನಿರ್ಮಾಣ ಮಾಡುವಲ್ಲಿ ವಿದ್ಯಾರ್ಥಿಗಳ ಪಾತ್ರ ಬಹು ಮುಖ್ಯ, ಸಮಾಜಕ್ಕೆ ಮಾರಕವಾದ ಪಿಡುಗುಗಳಿಗೆ ಯುವಜನತೆ ದಾಸರಾಗುತ್ತಿರು ವುದು ಕಳವಳಕಾರಿ ಸಂಗತಿ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಎನ್.ವಿ.ಕೊನಪ್ಪ ಹೇಳಿದರು. ಇಲ್ಲಿನ ಸ್ಥಳೀಯ ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ವಿರಾಜಪೇಟೆ ನಗರ ಪೊಲೀಸ್ ಠಾಣೆಯಿಂದ ಅಪರಾಧÀ ತಡೆ ಮಾಸಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೊಬ್ಬ ನಾಗರಿಕರು ಕಾನೂನÀನ್ನು ಪ್ರತಿಯೊಂದು ಹಂತದಲ್ಲೂ ಪಾಲಿಸುವಂತಾಗಬೇಕು. ಇತ್ತೀಚೆಗೆ…
ಇಂದು ಚಿಕ್ಕಬೆಟ್ಟಗೇರಿಯಲ್ಲಿ ‘ಹುತ್ತರಿ ಹಬ್ಬ’
December 11, 2019ಮಡಿಕೇರಿ, ಡಿ.10- ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್ಸಿ) ಸಂಘಟನೆಯಿಂದ ಕೊಡಗಿನ ಸುಗ್ಗಿ ಹಬ್ಬವಾದ ಹುತ್ತರಿಯನ್ನು ಡಿ.11ರಂದು ಚಿಕ್ಕಬೆಟ್ಟಗೇರಿಯ ನಂದಿನೆರವಂಡ ಉತ್ತಪ್ಪ ಅವರ ಭತ್ತÀದ ಗದ್ದೆಯಲ್ಲಿ ಸಾರ್ವತ್ರಿಕವಾಗಿ ಆಚರಿಸಲಾಗುವುದು ಎಂದು ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದರು. ನಗರದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾಷೆ ಹಾಗೂ ಸಂಸ್ಕøತಿ ಉಳಿಯ ಬೇಕಾದರೆ ಆಯಾ ಪ್ರದೇಶದ ಹಬ್ಬ ಹರಿದಿನಗಳನ್ನು ಸಾರ್ವತ್ರಿಕವಾಗಿ ಆಚರಿಸುವಂತಾಗಬೇಕು. ಆ ಮೂಲಕ ಜಗತ್ತಿನ ಗಮನ ಸೆಳೆಯುವಂತಾಗಬೇಕು ಎಂದು ಅಭಿಪ್ರಾಯಪಟ್ಟರು. ಸಿಎನ್ಸಿ ಸಂಘಟನೆಯು ಕೊಡವ ಬುಡಕಟ್ಟು ಜಗತ್ತಿನ ಸಂಸ್ಕøತಿಯ…
ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು: ಜಿಲ್ಲಾದ್ಯಂತ ಸಂಭ್ರಮಾಚರಣೆ
December 10, 2019ಪಟಾಕಿ ಸಿಡಿಸಿ, ಸಿಹಿ ಹಂಚಿ ಖುಷಿಪಟ್ಟ ಕಾರ್ಯಕರ್ತರು, ಮೋದಿ, ಯಡಿಯೂರಪ್ಪ ಪರ ಘೋಷಣೆ ಮಡಿಕೇರಿ, ಡಿ.9- ರಾಜ್ಯದ 15 ವಿಧಾನ ಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ 12 ಸ್ಥಾನಗಳಲ್ಲಿ ಗೆಲುವನ್ನು ಸಾಧಿಸಿದ ಹಿನ್ನೆಲೆ ಮಡಿಕೇರಿ, ಕುಶಾಲನಗರ, ಸೋಮವಾರ ಪೇಟೆ, ಗೋಣಿಕೊಪ್ಪಲು ಸೇರಿದಂತೆ ಜಿಲ್ಲೆಯ ವಿವಿಧೆಡೆ ಸೋಮವಾರ ಬಿಜೆಪಿ ಕಾರ್ಯ ಕರ್ತರು, ಮುಖಂಡರು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು. ಮಡಿಕೇರಿ ವರದಿ: ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ…
ಜಿಲ್ಲಾಡಳಿತದಿಂದ ಶಾಶ್ವತ ಪರಿಹಾರದ ಭರವಸೆ: ಗಂಜಿ ಕೇಂದ್ರ ಬಿಟ್ಟು ತೆರಳಲು ಮುಂದಾದ ಸಂತ್ರಸ್ತರು
December 10, 2019ಸಿದ್ದಾಪುರ, ಡಿ.9- ಜಿಲ್ಲಾಡಳಿತದಿಂದ ಶಾಶ್ವತ ಪರಿಹಾರ ಕೊಡಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ನೆಲ್ಯಹುದಿಕೆರಿ ಸರ್ಕಾರಿ ಶಾಲೆಯ ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ಸಂತ್ರಸ್ತರು ಕೇಂದ್ರ ಬಿಟ್ಟು ತೆರಳಲು ಮುಂದಾ ಗಿದ್ದಾರೆ ಎಂದು ಸಂತ್ರಸ್ತರ ಹೋರಾಟ ಸಮಿತಿ ಅಧ್ಯಕ್ಷ ಪಿ.ಆರ್ ಭರತ್ ತಿಳಿಸಿದರು. ಸಂತ್ರಸ್ತರ ಕೇಂದ್ರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಹಲವು ವರ್ಷಗಳಿಂದಲೂ ಕಾವೇರಿ ನದಿಯ ದಡದಲ್ಲಿ ಮನೆಗಳನ್ನು ಕಟ್ಟಿಕೊಂಡು ಜೀವನ ನಡೆಸುತ್ತಿದ್ದೇವು. ಆದರೆ, ಕಳೆದ ಆಗಸ್ಟ್ ತಿಂಗಳಿನಲ್ಲಿ ಸುರಿದ ಮಹಾ ಮಳೆಯಿಂದ ಪ್ರವಾಹಕ್ಕೆ ಸಿಲುಕಿ…
ದೇವಾಲಯದ ಬೀಗ ಮುರಿದು 5 ಲಕ್ಷ ಮೌಲ್ಯದ ಚಿನ್ನಾಭರಣ ಕಳವು
December 10, 2019ಮಡಿಕೇರಿ, ಡಿ.9- ದೇವಸ್ಥಾನದ ಬೀಗ ಮುರಿದು 5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಎರಡು ಹುಂಡಿಯಲ್ಲಿದ್ದ ಹಣವನ್ನು ಖದೀಮರು ಕಳವು ಮಾಡಿರುವ ಘಟನೆ ನಗರದ ಹೊರವಲಯದ ಶ್ರೀಭಗವತಿ ಮಹಿಷಿ ಮರ್ದಿನಿ ದೇವಾಲಯದಲ್ಲಿ ನಡೆದಿದೆ. ಸೋಮವಾರ ಬೆಳಗಿನ ಜಾವ ದೇವಾಲಯದ ಅರ್ಚಕರು ಪೂಜೆಗೆಂದು ದೇವಾಲಯಕ್ಕೆ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಕಳ್ಳರ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ಘಟನೆ ವಿವರ: ಶ್ರೀಭಗವತಿ ಮಹಿಷಿ…
ಗುಡುಗಿನ ಶಬ್ಧಕ್ಕೆ ಕಾಲೂರಿನಲ್ಲಿ ಕಾಡುತ್ತಿದೆ ಭಯ…
May 8, 2019ಮಡಿಕೇರಿ: ಕಾಲೂರಿನಲ್ಲಿ ಪ್ರಸ್ತುತ ವಾಸವಿರುವ ಗ್ರಾಮಸ್ಥರು ದೊಡ್ಡ ಗುಡುಗಿನ ಶಬ್ದಕ್ಕೆ ಮತ್ತೆ ಬೆಟ್ಟ ಕುಸಿಯಿತೇನೋ ಎಂಬ ಭಯದಿಂದ ನಡಗುವಂತಾಗಿದೆ. ಇನ್ನೇನು ಊರಿಗೆ ಕಾಲಿಡಲಿರುವ ಮಳೆ ರಾಯ ಎಂತಹ ಅನಾಹುತ ಸೃಷ್ಟಿಸುತ್ತಾನೋ ಎಂಬ ಆತಂಕ ಗ್ರಾಮಸ್ಥರನ್ನು ಕಾಡುತ್ತಿದೆ. ಕಾಲೂರಿನಲ್ಲಿ ಕಳೆದ ವರ್ಷದ ಜಲ ಪ್ರಳಯಕ್ಕೆ ಒಂದೇ ಕಡೆ 35 ಎಕರೆಗಳಷ್ಟು ಭತ್ತದ ಗದ್ದೆಗಳು ಸಂಪೂರ್ಣವಾಗಿ ಜಲಾ ವೃತಗೊಂಡು ಮರಳು, ಮಣ್ಣಿನಿಂದ ಮುಚ್ಚಿ ಭತ್ತ ಬೆಳೆಯಲಾಗುತ್ತಿತ್ತು ಎಂಬ ಕುರುಹೇ ಇಲ್ಲದಂತೆ ಗದ್ದೆಯ ಇರುವಿಕೆ ಯನ್ನೇ ಮುಚ್ಚಿ ಹಾಕಿವೆ. ಜೀವನ ಅಂತೂ…
ಸೋಮವಾರಪೇಟೆ, ವಿರಾಜಪೇಟೆಯಲ್ಲಿ ಬಸವ ಜಯಂತಿ ಆಚರಣೆ
May 8, 2019ಸೋಮವಾರಪೇಟೆ: ಶ್ರೀ ಬಸವೇಶ್ವರ ಯುವಕ ಸಂಘ, ವೀರಶೈವ ಸಮಾಜ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ವತಿಯಿಂದ ಅರ್ಥಪೂರ್ಣವಾಗಿ ಬಸವ ಜಯಂತಿಯನ್ನು ಇಂದಿಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, 12ನೇ ಶತಮಾನದಲ್ಲಿ ಅನುಭವ ಮಂಟಪ ರಚಿಸಿ ಪ್ರಜಾಪ್ರಭತ್ವಕ್ಕೆ ನಾಂದಿ ಹಾಡಿದ್ದಾರೆ. ಬಸವೇಶ್ವರರ ಜನ್ಮ ದಿನಾಚರಣೆಯನ್ನು ಒಂದು ವರ್ಗ ಸೀಮಿತಗೊಳಿಸದೇ ಇಡೀ ದೇಶದಲ್ಲಿ ಎಲ್ಲರೂ ಒಟ್ಟಾಗಿ ಆಚರಿಸುವಂ ತಾಗಬೇಕು. ಅವರ ಆದರ್ಶಗಳನ್ನು ಎಲ್ಲರೂ ಮೈ ಗೂಡಿಸಿಕೊಳ್ಳುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇ ಕೆಂದರು. ಕಾರ್ಯಕ್ರಮ…