ಎಸ್‍ಸಿ, ಎಸ್‍ಟಿ ಹಿತರಕ್ಷಣಾ ಸಮಿತಿ ಸಭೆ: ಅಧಿಕಾರಿಗಳ ಗೈರು: ನೋಟಿಸ್ ನೀಡಿ, ಕ್ರಮಕ್ಕೆ ಆಗ್ರಹ
ಕೊಡಗು

ಎಸ್‍ಸಿ, ಎಸ್‍ಟಿ ಹಿತರಕ್ಷಣಾ ಸಮಿತಿ ಸಭೆ: ಅಧಿಕಾರಿಗಳ ಗೈರು: ನೋಟಿಸ್ ನೀಡಿ, ಕ್ರಮಕ್ಕೆ ಆಗ್ರಹ

December 11, 2019

ಸೋಮವಾರಪೇಟೆ, ಡಿ.10- ತಾಲೂಕು ಪರಿಶಿಷ್ಟ ಜಾತಿ ಮತ್ತು ಪಂಗಡದ ಹಿತ ರಕ್ಷಣಾ ಸಭೆ ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್ ಗೋವಿಂದರಾಜ್ ಅಧ್ಯ ಕ್ಷತೆಯಲ್ಲಿ ಮಂಗಳವಾರ ನಡೆಯಿತು.

ಈ ಹಿಂದೆ ನಡೆದ ಸಭೆಯಲ್ಲಿ ಅಧಿಕಾ ರಿಗಳು ಗೈರಾಗಿದ್ದು, ಅವರಿಗೆ ನೋಟಿಸ್ ನೀಡಲು ನಿರ್ಣಯ ಕೈಗೊಳ್ಳಲಾಗಿತ್ತು. ಮತ್ತೆ ಈ ಸಭೆಗೂ ಕೆಲವು ಅಧಿಕಾರಿಗಳು ಗೈರಾಗಿದ್ದಾರೆ. ಅವರಿಗೂ ನೋಟಿಸ್ ನೀಡಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಸಮಿತಿಯ ಸದಸ್ಯರು ಆಗ್ರಹಿಸಿದರು.

ಪಟ್ಟಣದಲ್ಲಿ ನಿರ್ಮಿಸುತ್ತಿರುವ ಅಂಬೇ ಡ್ಕರ್ ಭವನದ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಕಚೇರಿ ತೆರೆಯುವಂತೆ ಇಲಾಖೆ ತೀರ್ಮಾನಿಸಲಾಗಿದೆ. ಕಟ್ಟಡ ಸಮಾಜದ ಚಟುವಟಿಕೆಗಳಿಗೆ ಮಾತ್ರ ಬಳಕೆಯಾಗಬೇಕು ಎಂದು ಸದಸ್ಯ ಬಿ.ಈ.ಜಯೇಂದ್ರ ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಮಾಜಕಲ್ಯಾಣ ಇಲಾಖೆಯ ಅಧಿಕಾರಿ ಬಾಲಕೃಷ್ಣ, ಈ ಹಿಂದಿನ ಸಭೆಯಲ್ಲಿ ತೀರ್ಮಾನಿಸಿದಂತೆ ಈಗಾಗಲೇ ಇಲಾಖೆಯ ಜಿಲ್ಲಾ ಅಧಿ ಕಾರಿಗಳಿಗೆ ಪತ್ರ ಬರೆಯಲಾಗಿದೆ. ಶೀಘ್ರ ದಲ್ಲಿಯೇ ಕಟ್ಟಡದ ಕಾಮಗಾರಿ ಮುಗಿಸಿ ಇಲಾಖೆಗೆ ಕಟ್ಟಡವನ್ನು ಹಸ್ತಾಂತರಿಸು ವಂತೆ ಜಿಲ್ಲಾ ಪಂಚಾಯಿತಿ ಅಭಿಯಂತರ ರಿಗೆ ನಿರ್ದೇಶನ ನೀಡಿರುವುದಾಗಿ ಸಭೆಗೆ ತಿಳಿಸಿದರು. ದೊಡ್ಡಹಣಕೋಡು ಗ್ರಾಮದ ಪಾರಂಪರಿಕ ದೇವರ ಬನದ ಒತ್ತುವರಿ ಯಾಗಿದೆ ಎಂದು ತಿಳಿಸಲಾಗಿತ್ತು. ವಿಷ ಯಕ್ಕೆ ಸಂಬಂಧಿಸಿದಂತೆ, ಭೂ ದಾಖಲೆ ಗಳ ಸಹಾಯಕ ನಿರ್ದೇಶಕರು ಗ್ರಾಮದ ಸರ್ವೇ ನಂ.32/1ರಲ್ಲಿ ಸಂಪೂರ್ಣ ಜಾಗವಿದ್ದು, ದೇವರ ಬನಕ್ಕೆ ಪ್ರತ್ಯೇಕವಾಗಿ ಯಾವುದೇ ಸರ್ವೇ ನಂ. ಇಲ್ಲದಿರುವುದ ರಿಂದ ಸ್ಥಳ ಗುರುತಿಸಲು ಸಾಧ್ಯವಾಗುತ್ತಿಲ್ಲ ಎಂದು ವರದಿ ನೀಡಿರುವುದಾಗಿ ಭೂ ಮಾಪಕರು ಹಾಗೂ ಕಂದಾಯ ಇಲಾಖಾ ಧಿಕಾರಿ ವರದಿ ನೀಡಿರುವುದಾಗಿ ಸಭೆಗೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಹೇಳಿದರು. ದುಂಡಳ್ಳಿ ಗ್ರಾಮ ಪಂಚಾಯಿ ತಿಯ ಈರಮ್ಮನವರ ಮನೆಗೆ ತೆರಳುವ ರಸ್ತೆ ಅತಿಕ್ರಮವಾಗಿದ್ದು, ಬಿಡಿಸಿಕೊಡು ವಂತೆ ಕಳೆದ ಹಲವು ವರ್ಷಗಳಿಂದ ದೂರು ನೀಡಿದ್ದಾರೆ. ಹಿಂದಿನ ಸಭೆಯಲ್ಲಿ ಸ್ಥಳ ಪರಿಶೀಲನೆ ಮಾಡುವಂತೆ ನಿರ್ಣಯ ಕೈಗೊಳ್ಳಲಾಗಿತ್ತು. ಅದರಂತೆ ಈರಮ್ಮನ ವರು ಕಚೇರಿಗೆ ಯಾವುದೇ ದಾಖಲಾತಿ ನೀಡದಿರುವುದರಿಂದ ಸ್ಪಷ್ಟ ಮಾಹಿತಿ ಇರು ವುದಿಲ್ಲ ಎಂದು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗ ಮಾಹಿತಿ ನೀಡಿ ರುವುದಾಗಿ ಪಂಚಾಯಿತಿ ಅಭಿವೃದ್ಧಿ ಅಧಿ ಕಾರಿ ಸುಮೇಶ್ ತಿಳಿಸಿದರು.

2004ರಲ್ಲಿಯೇ ದೂರಿಗೆ ಸಂಬಂಧಿಸಿ ದಂತೆ ಸಭೆ ನಡೆಸಿ ಸ್ಥಳಕ್ಕೆ ಸಮಿತಿಯವರು ತೆರಳಿ ಪರಿಶೀಲಿಸುವಂತೆ ನಿರ್ಣಯ ಕೈಗೊಳ್ಳಲಾಗಿದೆ. ಹಿಂದಿನ ಸಭೆಯ ನಿರ್ಣ ಯಗಳಿಗೆ ಯಾವುದೇ ಬೆಲೆ ಇಲ್ಲದಂತಾ ಗಿದೆ ಎಂದು ಸದಸ್ಯ ಜಯೇಂದ್ರ ದೂರಿ ದರು. ಕೂಡಲೇ ಸಮಿತಿಯವರು ಸ್ಥಳಕ್ಕೆ ತೆರಳಿ ಸಮಸ್ಯೆ ಬಗೆಹರಿಸಲು ಮುಂದಾಗ ಬೇಕು ಎಂದರು.

ಹೇರೂರು ಜೇನು ಕುರುಬರ ಹಾಡಿ ಯಲ್ಲಿ 110 ಕುಟುಂಬಗಳು ವಾಸವಿದ್ದು, ಸ್ಥಳ ಸರ್ವೇಯಾದರೂ, ಇಂದಿಗೂ ಹಕ್ಕು ಪತ್ರ ವಿತರಿಸಿಲ್ಲ ಎಂದು ಸದಸ್ಯ ಜೆ.ಕೆ. ಸುಬ್ರಮಣಿ ಆರೋಪಿಸಿದರು. ಇಲ್ಲಿ ಕಳೆದ 50 ವರ್ಷಳಿಂದ ಜೇನು ಕುರುಬರು ವಾಸಿಸುತ್ತಿದ್ದು, ಈ ಸ್ಥಳ ಕೊಡಗು ಜಿಲ್ಲಾ ಸಮಾಜ ಕಲ್ಯಾಣ ಇಲಾಖಾಧಿಕಾರಿಯ ಹೆಸರಿನಲ್ಲಿರುತ್ತದೆ. ಹಕ್ಕು ಪತ್ರ ವಿತರಿಸಲು ಇದನ್ನು ವಿಶೇಷ ಪ್ರಕರಣ ಎಂದು ಪರಿ ಗಣಿಸಿ ಸರ್ಕಾರದ ನಿರ್ದೇಶನ ಕೋರಿ ಮಾನ್ಯ ತಹಶೀಲ್ದಾರ್ ಕಚೇರಿ ಮೂಲಕ ಉಪವಿಭಾಗಾಧಿಕಾರಿಗಳಿಗೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ತಹಶೀಲ್ದಾರ್ ಗೋವಿಂದರಾಜು ಸಭೆಗೆ ತಿಳಿಸಿದರು.

ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಜಾತಿ ಪ್ರಮಾಣ ಪತ್ರ ಮತ್ತು ದಾಖಲಾತಿಗ ಳನ್ನು ಮಾಡಿಕೊಡಲು ಅಧಿಕಾರಿಗಳು ಕಾಲಹರಣ ಮಾಡುತ್ತಿದ್ದಾರೆ ಎಂದು ಸುಬ್ರಮಣಿ ದೂರಿದರು. ಸಭೆಯಲ್ಲಿ ಸಮಿತಿ ಸದಸ್ಯರಾದ ತಾಪಂ ಅಧ್ಯಕ್ಷೆ ಪುಷ್ಪಾ ರಾಜೇಶ್, ಶನಿವಾರಸಂತೆ ಸ್ತ್ರೀ ಶಕ್ತಿ ಸಂಘದ ಅಧ್ಯಕ್ಷೆ ಸುಮತಿ, ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯಪಾಲ ಅಭಿಯಂತರರಾದ ರಮೇಶ್, ವೀರೇಂದ್ರ, ವೈದ್ಯಾಧಿಕಾರಿ ಚೇತನ್ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

Translate »