ಮೈಸೂರು: ಸದ್ಯದಲ್ಲೇ ನಿವೃತ್ತರಾಗಲಿರುವ ಇಬ್ಬರು ಪ್ರಾಂಶುಪಾಲರನ್ನು ಹಾಗೂ ಮೇ 31ರಂದು ನಿವೃತ್ತರಾಗಲಿರುವ ಇಬ್ಬರು ಸೇರಿದಂತೆ ಈಗಾಗಲೇ ನಿವೃತ್ತರಾಗಿರುವ ನಾಲ್ವರು ಒಟ್ಟು 6 ಮಂದಿ ಪಿಯು ಕಾಲೇಜುಗಳ ಪ್ರಾಂಶುಪಾಲರು ಹಾಗೂ ಮೇ 31ರಂದು ನಿವೃತ್ತರಾಗಲಿರುವ ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಡಾ.ದಯಾನಂದ್ ಅವರನ್ನು ಸೋಮವಾರ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಆಶ್ರಯದಲ್ಲಿ ಸನ್ಮಾನಿಸಲಾಯಿತು. ಮೈಸೂರಿನ ಜಯಲಕ್ಷ್ಮಿಪುರಂ ಮಹಾ ಜನ ಪದವಿಪೂರ್ವ ಕಾಲೇಜಿನ ವಿವೇಕಾ ನಂದ ಸಭಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಸದ್ಯದಲ್ಲೇ ನಿವೃತ್ತರಾಗಲಿ ರುವ…
ಪ್ರೊ.ಎಸ್.ಎಲ್.ಬೆಳಗಲಿ ಅವರಿಗೆ ಅಭಿನಂದನೆ
May 28, 2019ಮೈಸೂರು: ಸೇವೆಯಿಂದ ನಿವೃತರಾದ ಮೈಸೂರು ವಿವಿ ಪರಿಸರ ವಿಜ್ಞಾನ ಅಧ್ಯಯನ ವಿಭಾಗದ ಪ್ರಾಧ್ಯಾ ಪಕ ಪ್ರೊ.ಎಸ್.ಎಲ್.ಬೆಳಗಲಿ ಅವರನ್ನು ಆತ್ಮೀಯವಾಗಿ ಅಭಿನಂದಿಸಿ, ಬೀಳ್ಕೊಡಲಾಯಿತು. ಮಾನಸಗಂಗೋತ್ರಿ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಪ್ರೊ. ಎಸ್.ಎಲ್.ಬೆಳಗಲಿ ಅಭಿನಂದನಾ ಸಮಿತಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಎಸ್.ಎನ್.ಹೆಗಡೆ ಅವರು ಪ್ರೊ. ಎಸ್.ಎಲ್.ಬೆಳಗಲಿ ದಂಪತಿಗಳನ್ನು ಸನ್ಮಾನಿಸಿ ಅಭಿನಂದಿಸಿದರು. ಬಳಿಕ ಮಾತನಾಡಿದ ಅವರು, ಶಿಕ್ಷಕರಿಗೆ ನಿವೃತ್ತಿ ಎಂಬುದಿಲ್ಲ. ಶೈಕ್ಷಣಿಕ ಕ್ಷೇತ್ರದಲ್ಲಿ ನಿವೃತ್ತಿ ನಂತರವೂ ಏನಾದರೂ ಕೆಲಸ ಇದ್ದೇ ಇರುತ್ತದೆ. ಶಿಕ್ಷಣ ವಲಯದಂತೆ ಬೇರೆ…
ಅರಣ್ಯದ ಕೆರೆಯಲ್ಲಿ ಹೆಬ್ಬಾವಿಗೆ ರಕ್ಷಣೆ
May 28, 2019ಮೈಸೂರು: ಮೈಸೂರಿನ ರಾಜೀವ್ನಗರದ ಆರ್ಟಿಓ ಕಚೇರಿಯ ಆವರಣದಲ್ಲಿರುವ ಡ್ರೈವಿಂಗ್ ಟ್ರ್ಯಾಕ್ ಬಳಿ ರಕ್ಷಣೆ ಮಾಡಲಾಗಿದ್ದ, ಬೃಹತ್ ಗಾತ್ರದ ಹೆಬ್ಬಾವನ್ನು ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ಹುಣಸೂರು ತಾಲೂಕಿನ ಅರಬ್ಬಿತಿಟ್ಟು ಅರಣ್ಯ ಪ್ರದೇಶದ ಕೆರೆಯಲ್ಲಿ ಸುರಕ್ಷಿತವಾಗಿ ಬಿಡಲಾ ಯಿತು. ಶನಿವಾರ ಸಂಜೆ ಮಳೆ ಸುರಿಯುತ್ತಿದ್ದಾಗ ಭಾರೀ ಗಾತ್ರದ ಹೆಬ್ಬಾವು ಆರ್ಟಿಓ ಕಚೇರಿಯ ಡ್ರೈವಿಂಗ್ ಟ್ರ್ಯಾಕ್ ಬಳಿ ಹರಿದಾಡುತ್ತಿರುವು ದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ಕೂಡಲೇ ಉರಗ ತಜ್ಞ ಸ್ನೇಕ್ ಶ್ಯಾಂ ಅವರಿಗೆ ವಿಷಯ ತಿಳಿಸಿದ್ದರು. ಸ್ಥಳಕ್ಕಾಮಿಸಿದ ಉರಗ ತಜ್ಞ ಸ್ನೇಕ್ ಶ್ಯಾಂ…
ಚುರುಕುಗೊಂಡ ಸಿಐಡಿ ಅಧಿಕಾರಿಗಳ ತನಿಖೆ
May 28, 2019ಮೈಸೂರು: ಮೇ 16ರಂದು ಬೆಳಿಗ್ಗೆ ಮೈಸೂರಿನ ಹೆಬ್ಬಾಳು ರಿಂಗ್ ರಸ್ತೆ ಜಂಕ್ಷನ್ನಲ್ಲಿ ನಡೆಯಿತೆನ್ನಲಾದ ಶೂಟೌಟ್ ಪ್ರಕರಣದ ಸುತ್ತ ಅನುಮಾನಗಳ ಹುತ್ತವೇ ಬೆಳೆಯುತ್ತಿದೆ. ಪ್ರಕರಣದ ಸತ್ಯಾಸತ್ಯತೆ ಅರಿಯಲು ಬೆಂಗಳೂರಿನಿಂದ ಬಂದಿರುವ ಡಿವೈಎಸ್ಪಿ ಚಂದ್ರಶೇಖರ್ ನೇತೃತ್ವದ ಐವರು ಸಿಐಡಿ ಅಧಿಕಾರಿಗಳು, ಪಂಜಾಬ್ ಮೂಲದ ಸುಕ್ವಿಂ ದರ್ ಸಿಂಗ್ ಎಂಬಾತನ ಮೇಲೆ ಶೂಟೌಟ್ ಮಾಡಿದ ವಿಜಯನಗರ ಠಾಣೆಯ ಅಂದಿನ ಇನ್ಸ್ಪೆಕ್ಟರ್ ಬಿ.ಜಿ. ಕುಮಾರ್ ಹಾಗೂ ಆ ವೇಳೆ ಸ್ಥಳದಲ್ಲಿದ್ದರೆನ್ನಲಾದ ಓರ್ವ ಎಎಸ್ಐ ಸೇರಿ ನಾಲ್ವರು ಸಿಬ್ಬಂದಿಯನ್ನು ತೀರ್ವ ವಿಚಾರಣೆ ಗೊಳಪಡಿಸಿದ್ದಾರೆ. ಪ್ರಕರಣದ…
ಮೇ 30ರಂದು ಬೆಂಗಳೂರಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಭಾರೀ ಪ್ರತಿಭಟನೆ
May 28, 2019ಮೈಸೂರು: ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಶಾಲೆ ಗಳಲ್ಲಿ ಆರಂಭಿಸುತ್ತಿರುವ ಎಲ್ಕೆಜಿ ಹಾಗೂ ಯುಕೆಜಿ ಜವಾಬ್ದಾರಿಯನ್ನು ಅಂಗನವಾಡಿ ಗಳಿಗೆ ಅಧಿಕೃತವಾಗಿ ವಹಿಸಲು ಆಗ್ರಹಿಸಿ ಮೇ 30ರಂದು ಬೆಳಿಗ್ಗೆ 11.30ಕ್ಕೆ ಬೆಂಗ ಳೂರಿನಲ್ಲಿ ಭಾರೀ ಪ್ರತಿಭಟನೆ ಹಮ್ಮಿಕೊಳ್ಳ ಲಾಗಿದೆ ಎಂದು ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಎಚ್.ಎಸ್. ಸುನಂದಾ ಇಂದಿಲ್ಲಿ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಕೇಂದ್ರ ರೈಲ್ವೆ ನಿಲ್ದಾಣ ದಿಂದ ಸ್ವಾತಂತ್ರ್ಯ ಉದ್ಯಾನವನದವರೆಗೆ ರ್ಯಾಲಿ ನಡೆಯಲಿದೆ. ಸುಮಾರು…
ಅಂಗೈಯಲ್ಲಿ ಸಾವಿಗೆ ಕಾರಣ ಬರೆದುಕೊಂಡು ಮಹಿಳೆ ಆತ್ಮಹತ್ಯೆ
May 28, 2019ಅರಸೀಕೆರೆ: ಜಮೀನು ಖಾತೆ ಮಾಡಿಸುವ ವಿಚಾರದಲ್ಲಿ ಸಂಬಂಧಿಕ ನಿಂದಲೇ ವಂಚನೆಗೊಳಗಾದ ಮಹಿಳೆಯೊಬ್ಬರು ತಮ್ಮ ಅಂಗೈ ಯಲ್ಲೇ ಸಾವಿಗೆ ಕಾರಣ ಬರೆದುಕೊಂಡು ಆತ್ಮಹತ್ಯೆ ಮಾಡಿ ಕೊಂಡಿರುವ ಘಟನೆ ತಾಲೂಕಿನ ಗಂಡಸಿ ಹೋಬಳಿಯ ಜೀಕನ ಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿ ಸಿದ್ದಮಲ್ಲಯ್ಯ ಅವರ ಪತ್ನಿ ವೀಣಾ (37) ಅವರು ತಮ್ಮ ಸಂಬಂಧಿಕ ಲೋಕೇಶ್ ನಿಂದ ವಂಚನೆಯಾಗಿದೆ ಎಂದು ಕೈಮೇಲೆ ತನ್ನ ಆತ್ಮಹತ್ಯೆಗೆ ಕಾರಣ ಬರೆದುಕೊಂಡು ವಿಷ ಸೇವಿಸಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖ ಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ…
ಸರಕು ವಾಹನಗಳಲ್ಲಿ ಜನರನ್ನು ಸಾಗಿಸದಂತೆ ಜಾಗೃತಿ ಜಾಥಾ
May 28, 2019ಮೈಸೂರು: ಸರಕು ವಾಹನಗಳಲ್ಲಿ ಅಕ್ರಮವಾಗಿ ಪ್ರಯಾಣಿಕ ರನ್ನು ಕೊಂಡೊಯ್ಯಬಾರದು ಹಾಗೂ ಆಟೋ -ವ್ಯಾನ್ಗಳಲ್ಲಿ ಸಾಮಥ್ರ್ಯಕ್ಕಿಂತ ಹೆಚ್ಚು ಶಾಲಾ ಮಕ್ಕಳನ್ನು ಕರೆದೊಯ್ಯ ಬಾರದು ಎಂದು ಅರಿವು ಮೂಡಿಸಲು ಸಂಚಾರ ಪೊಲೀಸರು ಸೋಮವಾರ ಮೈಸೂರಿನ ಪ್ರಮುಖ ರಸ್ತೆಗಳಲ್ಲಿ ಜಾಗೃತಿ ಜಾಥಾ ನಡೆಸಿದರು. ಮೈಸೂರಿನ ವಿವಿಪುರಂ ಸಂಚಾರ ಠಾಣೆ ವತಿಯಿಂದ ಏರ್ಪಡಿಸಿದ್ದ ಜಾಗೃತಿ ಜಾಥಾಗೆ ಸಂಚಾರ ವಿಭಾಗದ ಎಸಿಪಿ ಜಿ.ಎನ್.ಮೋಹನ್ ಅವರು ಮೈಸೂರಿನ ಜಯಲಕ್ಷ್ಮಿಪುರಂನಲ್ಲಿರುವ ಮಹಾಜನ ಪ್ರೌಢಶಾಲೆ ಬಳಿ ಚಾಲನೆ ನೀಡಿದರು. ಸರಕು ಸಾಗಾಣೆ ವಾಹನಗಳಲ್ಲಿ ಕಾರ್ಮಿ ಕರು ಹಾಗೂ ಪ್ರಯಾಣಿಕರನ್ನು…
ಕೆ.ಆರ್.ಆಸ್ಪತ್ರೆಗೆ ಬೇಕಿದೆ ತುರ್ತು ಚಿಕಿತ್ಸೆ
May 27, 2019ಮೈಸೂರು: ಮೈಸೂರಿನ ಕೆ.ಆರ್.ಆಸ್ಪತ್ರೆ ಹಲವು ಗಂಭೀರ ಸಮಸ್ಯೆಗಳಿಂದ ಬಳಲುತ್ತಿದ್ದು, ತುರ್ತು ಚಿಕಿತ್ಸೆಯ ಅಗತ್ಯವಿದೆ. ಬಡ ರೋಗಿಗಳಿಗೆ ಉಚಿತ ಆರೋಗ್ಯ ಸೇವೆ ಕಲ್ಪಿಸುವ ಮಹೋದ್ದೇಶದಿಂದ ಮಹಾರಾಜರು ಸ್ಥಾಪಿಸಿದ ದೊಡ್ಡಾಸ್ಪತ್ರೆ ವ್ಯವಸ್ಥೆಯೇ ಬದಲಾ ದಂತಿದೆ. ಕೆಲ ಗೊಂದಲದಿಂದಾಗಿ ಕೇಂದ್ರದ `ಆಯುಷ್ಮಾನ್ ಭಾರತ್’ ಹಾಗೂ ರಾಜ್ಯದ `ಆರೋಗ್ಯ ಕರ್ನಾಟಕ’ ಆರೋಗ್ಯ ಯೋಜನೆ ಸಮರ್ಪಕವಾಗಿ ಅನುಷ್ಠಾನವಾಗಿಲ್ಲ. ಪಡಿತರ ಚೀಟಿ, ಆಧಾರ್ ಕಾರ್ಡ್ ಹಿಡಿದು ಉಚಿತ ಚಿಕಿತ್ಸೆ ಸಿಗಬಹುದೆಂದು ಇಲ್ಲಿಗೆ ಬರುವ ಬಡ ರೋಗಿಗಳು, ಅಗತ್ಯ ಮಾಹಿತಿ ಲಭ್ಯವಿಲ್ಲದೆ ಕಂಗಾಲಾಗಿದ್ದಾರೆ. ಆರೋಗ್ಯ ಯೋಜನೆಯಡಿ ಯಾವೆಲ್ಲಾ…
ಮನುಷ್ಯನ ಮಾತಿನಿಂದ ಸಂಸ್ಕಾರ ತಿಳಿಯುತ್ತದೆ
May 27, 2019ಮೈಸೂರು: ಮನುಷ್ಯ ಎಷ್ಟೇ ಚಿನ್ನಾಭರಣ ಧರಿಸಿ ದರೂ ಆತನ ಗುಣ, ಸಂಸ್ಕಾರ, ಬದ್ಧತೆ ಲೋಕಕ್ಕೆ ತಿಳಿಯುವುದು ಆಡುವ ಮಾತಿ ನಿಂದ ಮಾತ್ರ ಎಂದು ವಿದ್ವಾನ್ ಬೆ.ನಾ. ವಿಜಯೀಂದ್ರಾಚಾರ್ಯ ಅಭಿಪ್ರಾಯಪಟ್ಟರು. ಮೈಸೂರು ಸರಸ್ವತಿಪುರಂ ಶ್ರೀಕೃಷ್ಣ ಧಾಮ ಟ್ರಸ್ಟ್ ವತಿಯಿಂದ ಭಾನುವಾರ ಆಯೋಜಿಸಿದ್ದ ರಜತ ಮಹೋತ್ಸವ ಸಂಭ್ರಮದ ಎರಡನೇ ದಿನ ಕಾರ್ಯ ಕ್ರಮದಲ್ಲಿ ವಿದ್ವಾನ್ ಡಾ.ಹೆಚ್.ವಿ.ನಾಗ ರಾಜರಾವ್ ಅಭಿನಂದನಾ ಸಮಾರಂಭ ದಲ್ಲಿ ಭಾಗವಹಿಸಿ ಮಾತನಾಡಿದರು. ಡಾ.ನಾಗರಾಜ ರಾವ್ ಅವರು, ತಾವು ಎಷ್ಟೇ ಎತ್ತರಕ್ಕೆ ಬೆಳೆದಿದ್ದರೂ ಅವರ ಸಜ್ಜನಿಕೆಯ ಮೌಲ್ಯಗಳು ಎಲ್ಲರನ್ನು…
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲಯನ್ಸ್ ದಕ್ಷಿಣ ಕೇಸರಿ ಪ್ರಶಸ್ತಿ ಪ್ರದಾನ
May 27, 2019ಮೈಸೂರು: ವಿದ್ಯಾರ್ಥಿಗಳು ಶಿಕ್ಷಣದ ಮೂಲಕ ಗುಣ ಮಟ್ಟದ ಜೀವನ, ಸಾಮಾಜಿಕ ಬದ್ಧತೆ, ಆರ್ಥಿಕ ಶಿಸ್ತು ಹಾಗೂ ಪರಿಸರದ ಪ್ರಜ್ಞೆ ಮೂಡಿಸಿಕೊಂಡು ಯುವಕರು ದೇಶಕ್ಕೆ ಆಸ್ತಿಯಾಗಬೇಕು ಎಂದು ಮೈಸೂರು ವಿಶ್ವವಿದ್ಯಾ ನಿಲಯದ ಕುಲಸಚಿವ ಪ್ರೊ.ಲಿಂಗರಾಜ ಗಾಂಧಿ ಕಿವಿಮಾತು ಹೇಳಿದರು. ಮೈಸೂರು ವಿವಿ ಮಾನಸ ಗಂಗೋತ್ರಿ ಆವರಣ ವಿಜ್ಞಾನಭವನದಲ್ಲಿ ಲಯನ್ ಕ್ಲಬ್ ಆಫ್ ಮೈಸೂರು ಸೌತ್(ಜಿಲ್ಲೆ-317ಎ) ವತಿಯಿಂದ ಎಸ್ಎಸ್ಎಲ್ಸಿ ಯಲ್ಲಿ ಅತೀ ಹೆಚ್ಚು ಅಂಕಪಡೆದ ದಕ್ಷಿಣ ಕೇಸರಿ ಪ್ರಶಸ್ತಿ ಹಾಗೂ ಕ್ರೀಡಾ ಕ್ಷೇತ್ರ ಸಾಧಕರಿಗೆ ಅಭಿನಂದಿಸುವ ಕಾರ್ಯಕ್ರಮ ದಲ್ಲಿ ಭಾಗವಹಿಸಿ…










