ಕೀವ್, ಮಾ.3- ಎಂಟನೇ ದಿನವಾದ ಇಂದು ರಷ್ಯಾ ಪಡೆಗಳು ಉಕ್ರೇನ್ ಮೇಲೆ ದಾಳಿಯನ್ನು ತೀವ್ರಗೊಳಿಸಿವೆ. ಬಂದರು ನಗರ ಮರಿಯೂಪೋಲ್ ಬಹುತೇಕ ರಷ್ಯಾ ವಶವಾಗಿದ್ದರೆ, ಖೇರ್ಸಸ್ ನಗರದ ಮೇಲೆ ರಷ್ಯಾ ಸಂಪೂರ್ಣ ನಿಯಂತ್ರಣ ಸಾಧಿಸಿದೆ. ಉಕ್ರೇನ್ ರಾಜಧಾನಿ ಕೀವ್ ಮತ್ತು ಎರಡನೇ ದೊಡ್ಡ ನಗರ ಖಾರ್ಕಿವ್ನಲ್ಲಿ ರಷ್ಯಾ ಮತ್ತು ಉಕ್ರೇನ್ ಪಡೆಗಳ ನಡುವೆ ಭೀಕರ ಕಾಳಗ ನಡೆಯುತ್ತಿದೆ. ಬಲಿಷ್ಠ ರಷ್ಯಾ ವಿರುದ್ಧ ವೀರಾವೇಶವಾಗಿ ಹೋರಾಟ ನಡೆಸುತ್ತಿ ರುವ ಉಕ್ರೇನ್ ಸೈನಿಕರು ಇರ್ಪಿನ್ ನಗರದ ಸಮೀಪ ರಷ್ಯಾದ ಎಸ್ಯು-30 ಫೈಟರ್…
ಕರ್ನಾಟಕದ ಪ್ರತಿಭಾನ್ವಿತ ವಿದ್ಯಾರ್ಥಿ ನವೀನ್ ಸೇರಿ ಭಾರತದ ಇಬ್ಬರ ಬಲಿ ಪಡೆದ ಉಕ್ರೇನ್ ಯುದ್ಧ
March 3, 2022ಕೀವ್, ಮಾ.2-ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ದಲ್ಲಿ ಮಂಗಳವಾರ ಉಕ್ರೇನ್ನ 2ನೇ ದೊಡ್ಡ ನಗರ ಖಾರ್ಕಿವ್ನಲ್ಲಿ ರಾಜ್ಯದ ಹಾವೇರಿ ಜಿಲ್ಲೆ ಚಳಗೆರೆ ಗ್ರಾಮದ ಶೇಖಪ್ಪ ಗ್ಯಾನಗೌಡರ್ ಪುತ್ರ ನವೀನ್ ಗ್ಯಾನಗೌಡರ್ ರಷ್ಯಾ ಶೆಲ್ ದಾಳಿಯಿಂದ ಮಂಗಳ ವಾರ ಬೆಳಗ್ಗೆ ಮೃತಪಟ್ಟರೆ, ಬುಧವಾರ ಪಂಜಾಬ್ನ ಬರ್ನಾಲ್ ಗ್ರಾಮದ ಚಂದನ್ ಜಿಂದಾಲ್ ಬ್ರೇನ್ ಸ್ಟೋಕ್ನಿಂದ ಮೃತ ಪಟ್ಟಿದ್ದಾರೆ. ಉಕ್ರೇನ್ ಮೇಲೆ ರಷ್ಯಾ ದಾಳಿ ಆರಂಭಿಸಿ ಏಳು ದಿನಗಳಾಗಿದೆ. ಘನ ಘೋರ ಯುದ್ಧ ಮುಂದುವರೆದಿದೆ. ಖಾರ್ಕಿವ್ನ ಹಾರ್ಕಿವ್ ನ್ಯಾಷನಲ್ ಮೆಡಿಕಲ್…
ಉಕ್ರೇನ್ನಿಂದ ಬೆಂಗಳೂರಿಗೆ ಬಂದ ವಿದ್ಯಾರ್ಥಿಗಳ ಸ್ವಾಗತಿಸಿದ ಸಚಿವ ಅಶೋಕ್
February 28, 2022ಬೆಂಗಳೂರು,ಫೆ.27-ವಿದ್ಯಾಭ್ಯಾಸಕ್ಕೆಂದು ಉಕ್ರೇನ್ಗೆ ತೆರಳಿದ್ದ ಕರ್ನಾಟಕ ವಿದ್ಯಾರ್ಥಿಗಳ ಪೈಕಿ 13 ಜನರು ಭಾನುವಾರ ಬೆಂಗಳೂರಿಗೆ ಆಗಮಿಸಿದ್ದು, ಅವರನ್ನು ಸಚಿವ ಆರ್.ಅಶೋಕ್ ಸ್ವಾಗತಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿ ವರು, ದೆಹಲಿಯಿಂದ ಇನ್ನೂ 18 ಜನರು ಆಗಮಿಸಲಿ ದ್ದಾರೆ. ರಾಜ್ಯ ಕಂದಾಯ ಇಲಾಖೆಯಿಂದ ಕರ್ನಾಟಕ ಭವನದಲ್ಲಿ ಅಗತ್ಯ ವ್ಯವಸ್ಥೆ ಮಾಡಲಾಗಿದೆ ಎಂದರು. ಉಕ್ರೇನ್ನಿಂದ ಆಗಮಿಸಿದವರು ಕರ್ನಾ ಟಕ ಭವನದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಬೆಂಗಳೂರಿಗೆ ಬರಲು ಅವರಿಗೆ ಟಿಕೆಟ್ ಬುಕ್ ಮಾಡಲಾಗಿದೆ. ಈ ಕುರಿತು ಸಿಎಂ ಜೊತೆಯೂ ಮಾತುಕತೆ ನಡೆಸಿದ್ದೇನೆ…
ಪೆÇೀಲಿಯೋ ಲಸಿಕೆ ಅಭಿಯಾನಕ್ಕೆ ಸಿಎಂ ಚಾಲನೆ
February 28, 2022ಬೆಂಗಳೂರು, ಫೆ.27- ಆರೋಗ್ಯ ಇಲಾಖೆ ರಾಜ್ಯದಾದ್ಯಂತ ಪಲ್ಸ್ ಪೆÇೀಲಿಯೋ ಲಸಿಕೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ಅಭಿಯಾನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಭಾನುವಾರ ಚಾಲನೆ ನೀಡಿದ್ದಾರೆ. ಬೆಂಗಳೂರಿನಲ್ಲಿ 4 ವರ್ಷದ ಒಳಗಿನ ಮಗುವಿಗೆ ಪೆÇೀಲಿಯೋ ಲಸಿಕೆ ಹಾಕುವ ಮೂಲಕ ಮುಖ್ಯಮಂತ್ರಿಗಳು ಅಭಿಯಾನಕ್ಕೆ ಚಾಲನೆ ನೀಡಿದರು. ಈ ವೇಳೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಪಂಚಮಸಾಲಿ ಹರಿಹರ ಗುರುಪೀಠದ ಶ್ರೀ ವಚನಾನಂದ ಸ್ವಾಮೀಜಿ ಹಾಗೂ ಇತರರು ಉಪಸ್ಥಿತರಿದ್ದರು. ಆರೋಗ್ಯ ಇಲಾಖೆಯು ರಾಜ್ಯದಾದ್ಯಂತ 5 ವರ್ಷದೊಳಗಿನ 64.77 ಲಕ್ಷ ಮಕ್ಕಳಿಗೆ ಪೆÇೀಲಿಯೋ ಹನಿ…
15 ಸಾವಿರ ಶಿಕ್ಷಕರ ನೇಮಕ
February 24, 2022ಬೆಂಗಳೂರು,ಫೆ.23-ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ (6ರಿಂದ 8ನೇ ತರಗತಿ) ಬೋಧನೆಗೆ 15 ಸಾವಿರ ಪದವೀ ಧರ ಶಿಕ್ಷಕರ(ಜಿಪಿಟಿ) ನೇಮಕಾತಿ ಮಾಡಿಕೊಳ್ಳುವ ಸಂಬಂಧ ರಾಜ್ಯ ಸರ್ಕಾರವು ಅಧಿಸೂಚನೆ ಹೊರಡಿಸಿದೆ. ಇದೇ ಮೊದಲ ಬಾರಿಗೆ ನೇಮಕಾತಿಯಲ್ಲಿ ತೃತೀಯ ಲಿಂಗಿಗಳಿಗೂ ಶೇ.1ರಷ್ಟು ಮೀಸಲಾತಿ ಕಲ್ಪಿಸಿದೆ. ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ಸಾರ್ವಜನಿಕ ಶಿಕ್ಷಣ ಇಲಾಖೆ) (ನೇಮಕಾತಿ) (ವಿಶೇಷ) ನಿಯಮಗಳು- 2022 ಅನ್ನು ಪ್ರಕಟಿಸಿದ್ದ ಕರಡು ಅಧಿಸೂಚನೆಗಳಿಗೆ ಸಲ್ಲಿಕೆ ಯಾಗಿದ್ದ ಆಕ್ಷೇಪಣೆಗಳನ್ನು ಪರಿಗಣಿಸಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ಎಚ್.ಎಸ್. ಶಿವಕುಮಾರ್…
ರಾಹುಲ್ ಗಾಂಧಿ ಸಮ್ಮುಖದಲ್ಲಿ ಇಂದು ರಾಜ್ಯ ನಾಯಕರ ಸಭೆ
February 24, 2022ಬೆಂಗಳೂರು, ಫೆ.23(ಕೆಎಂಶಿ)- ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನಡುವೆ ಮುಸುಕಿನ ಗುದ್ದಾಟಕ್ಕೆ ಇತಿಶ್ರೀ ಹಾಡಲು ಪಕ್ಷದ ದೆಹಲಿ ವರಿಷ್ಠರು ರಾಜ್ಯ ನಾಯಕರಿಗೆ ಬುಲಾವ್ ಮಾಡಿ ದ್ದಾರೆ. ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆ ಯಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯುವ ಹೊಸ್ತಿಲಲ್ಲಿದೆ, ಆದರೆ ರಾಜ್ಯ ನಾಯಕರ ಭಿನ್ನಾಭಿಪ್ರಾಯದಿಂದ ಪಕ್ಷಕ್ಕೆ ಹಿನ್ನಡೆ ಯಾಗುವ ಸಾಧ್ಯತೆ ಇದೆ. ಇದರ ಸುಳಿವು ಅರಿತ ರಾಹುಲ್ ಗಾಂಧಿ, ರಾಜ್ಯ ನಾಯಕರಲ್ಲಿರುವ ಭಿನ್ನಾಭಿಪ್ರಾಯ ಕೊನೆ ಗೊಳಿಸಲು ನಾಳೆ ದೆಹಲಿಯಲ್ಲಿ…
ಅಪರಿಚಿತ ಯುವತಿಯರ ಮೂಲಕ ಹರ್ಷನ ಹತ್ಯೆ ಸಂಚು
February 24, 2022ಶಿವಮೊಗ್ಗ, ಫೆ.23-ಭಜರಂಗ ದಳ ಕಾರ್ಯಕರ್ತ ಹರ್ಷನನ್ನು ಹಂತಕರು ಇಬ್ಬರು ಯುವತಿಯರ ಮೂಲಕ ಹತ್ಯೆ ಮಾಡಿದ ಸಂಶಯ ದಟ್ಟವಾಗುತ್ತಿದೆ. ಹತ್ಯೆ ಯಾಗುವುದಕ್ಕೆ ಕೆಲ ನಿಮಿಷ ಗಳ ಮುನ್ನ ಅಪರಿಚಿತ ಇಬ್ಬರು ಯುವತಿಯರು ಹರ್ಷನ ಮೊಬೈಲ್ಗೆ ವೀಡಿಯೋ ಕಾಲ್ ಮಾಡಿ, ಸಹಾಯ ಕೋರಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ. ಈ ಸಂಬಂಧ ಮಾಧ್ಯಮಗಳೊಂದಿಗೆ ಮಾತ ನಾಡಿದ ಹರ್ಷನ ಸ್ನೇಹಿತ, ಅಂದು ಯುವತಿಯರು ವೀಡಿಯೋ ಕಾಲ್ ಮಾಡದಿದ್ದರೆ ನಾವು ಘಟನೆ ನಡೆದ ಸ್ಥಳಕ್ಕೆ ಹೋಗುತ್ತಿರಲಿಲ್ಲವೇನೋ ಎಂದು ತಿಳಿಸಿದ್ದಾನೆ. ಘಟನೆ ನಡೆದ ದಿನ…
ಅಧಿವೇಶನ ಅಂತ್ಯ
February 23, 2022ಬೆಂಗಳೂರು, ಫೆ.22(ಕೆಎಂಶಿ)- ಸಚಿವ ಕೆ.ಎಸ್. ಈಶ್ವರಪ್ಪ ಅವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರ ಅಹೋರಾತ್ರಿ ಧರಣಿಯಿಂದಾಗಿ ವಿಧಾನಸಭೆ ಅಧಿವೇಶನ ಪೂರ್ವ ನಿಗದಿತ ಸಮಯ ಕ್ಕಿಂತ ಮೊದಲೇ ಮೊಟಕುಗೊಂಡಿತು. ಕಾಂಗ್ರೆಸ್ ಸದಸ್ಯರು 6 ನೇ ದಿನವಾದ ಇಂದೂ ಕೂಡ ತಮ್ಮ ನಿರ್ಧಾರದಿಂದ ಹಿಂದೆ ಸರಿಯದೆ ಕಲಾಪ ನಡೆಯಲು ಅವಕಾಶ ಮಾಡಿಕೊಡದ ಕಾರಣ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾರ್ಚ್ 4ಕ್ಕೆ ಸದನವನ್ನು ಮುಂದೂಡಿದರು. ಬೆಳಗ್ಗೆ ಸದನ ಸೇರುತ್ತಿದ್ದಂತೆ ಸಭಾಧ್ಯಕ್ಷರು, ಧರಣಿ ಹಿಂಪಡೆದು ಕಲಾಪ ನಡೆಸಲು ಅವಕಾಶ ಮಾಡಿಕೊಡಿ,…
ಹರ್ಷ ಹತ್ಯೆ ಸಂಬಂಧ 6 ಮಂದಿ ಬಂಧನ
February 23, 2022ಶಿವಮೊಗ್ಗ, ಫೆ. 22- ಬಜರಂಗದಳ ಕಾರ್ಯ ಕರ್ತ ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೂ 6 ಮಂದಿ ಆರೋಪಿಗಳನ್ನು ಬಂಧಿ ಸಲಾಗಿದೆ. ಈ ಕುರಿತು ಶಿವಮೊಗ್ಗ ದಲ್ಲಿ ಎಸ್ಪಿ ಬಿ.ಎಂ.ಲಕ್ಷ್ಮೀಪ್ರಸಾದ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು, ನಿನ್ನೆ ಪ್ರಕರಣಕ್ಕೆ ಸಂಬಂಧಿ ಸಿ ದಂತೆ ಆರೋಪಿಗಳಾದ ಕಾಸಿಮ್, ನದೀಮ್ ಬಂಧಿಸ ಲಾಗಿತ್ತು. ಉಳಿದ ನಾಲ್ವರು ಆರೋಪಿಗಳನ್ನು ಇಂದು ಬಂಧಿಸಲಾಗಿದೆ. ಬಂಧಿತ ಆರೋಪಿಗಳೆಲ್ಲರೂ ಶಿವಮೊಗ್ಗ ನಗರದ ನಿವಾಸಿಗಳು. ಪ್ರಕರಣದಲ್ಲಿ ಈವರೆಗೆ 6 ಆರೋಪಿಗಳನ್ನು ಬಂಧಿಸಲಾಗಿದೆ. ಇದುವರೆಗೆ 13 ಎಫ್ಐಆರ್ ದಾಖಲಾಗಿವೆ…
ರಾಜ್ಯದ ಪ್ರಗತಿ, ಎಲ್ಲಾ ವರ್ಗಕ್ಕೆ ನ್ಯಾಯ ಕಲ್ಪಿಸುವ ಬಜೆಟ್
February 23, 2022ಬೆಂಗಳೂರು, ಫೆ.22(ಕೆಎಂಶಿ)- ರಾಜ್ಯದ ಅಭಿವೃದ್ಧಿಯನ್ನು ಬಿಂಬಿಸುವ ಜನಪರ ಬಜೆಟ್ ಮಂಡಿಸುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ವಿಧಾನ ಸಭೆಯಲ್ಲಿಂದು ಪ್ರಕ ಟಿಸಿದ್ದಾರೆ. ರಾಜ್ಯ ಪಾಲರ ಭಾಷಣಕ್ಕೆ ವಂದನಾ ನಿರ್ಣ ಯದ ಪ್ರಸ್ತಾವದ ಮೇಲೆ ಮಾತನಾಡಿದ ಮುಖ್ಯಮಂತ್ರಿ, ರಾಜ್ಯದ ಪ್ರಗತಿಗೆ ಪೂರಕವಾದ ಹಾಗೂ ಎಲ್ಲಾ ವರ್ಗದವರಿಗೆ ನ್ಯಾಯ ಒದಗಿ ಸುವ ಮುಂಗಡ ಪತ್ರ ಇದಾಗಿರುತ್ತದೆ ಎಂದರು. ರಾಜ್ಯಪಾಲರ ಭಾಷಣದ ಮೇಲೆ ವಿಸ್ತøತ ಚರ್ಚೆ ನಡೆದಿದ್ದರೆ ಸರ್ಕಾರವನ್ನು ಅಭಿವೃದ್ಧಿ ಕಾರ್ಯಕೈಗೊಳ್ಳಲು ಮತ್ತಷ್ಟು ಪ್ರೇರೇಪಿಸಬಹುದಿತ್ತು. ಆದರೆ ಪ್ರತಿಪಕ್ಷ ಕಾಂಗ್ರೆಸ್ ಚರ್ಚೆಗೆ ಅವಕಾಶ ನೀಡದೆ…