ಅರಸೀಕೆರೆ: ದ್ವಿಚಕ್ರ ಸೇರಿ ದಂತೆ ವಿವಿಧ ವಾಹನಗಳ ಖದೀಮನನ್ನು ಬಂಧಿಸುವಲ್ಲಿ ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದು, 18 ಲಕ್ಷ ರೂ. ಮೌಲ್ಯದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಪರ ಜಿಲ್ಲಾ ಪೊಲೀಸ್ ಅಧೀಕ್ಷ ನಾರಾಯಣ ತಿಳಿಸಿದರು. ಟಿಪ್ಪುಸುಲ್ತಾನ್ ಎಂಬಾತ ಬಂಧಿತ ಆರೋಪಿ. ನಗರದ ಪೊಲೀಸ್ ಠಾಣೆ ಆವರಣದಲ್ಲಿ ಕಳುವಾಗಿದ್ದ ವಾಹನಗಳೊಂದಿಗೆ ಪತ್ರಿಕಾಗೋಷ್ಠಿ ನಡೆಸಿದ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ಅಧೀಕ್ಷ ನಾರಾಯಣ ಅವರು, ಶಿವಮೊಗ್ಗ ನಗರ ವ್ಯಾಪ್ತಿಯ 21 ಪ್ರಕರಣಗಳು ಸಂಬಂಧಿಸಿದಂತೆ ಕಳುವಾಗಿದ್ದ ಒಟ್ಟು ರೂ, 6,50,00 ಮೌಲ್ಯದ…
ಅಭಿವೃದ್ಧಿ ಕಾರ್ಯಗಳಿಗೆ ಜನತೆಯಿಂದ ಫುಲ್ ಮಾಕ್ರ್ಸ್ಶಾಸಕ ಕೆ.ಎಂ.ಶಿವಲಿಂಗೇಗೌಡ ಮೆಚ್ಚುಗೆ ನುಡಿ
June 11, 2018ಅರಸೀಕೆರೆ: ರಾಜಕಾರಣ ಕ್ಕಾಗಿ ನನ್ನ ಕ್ಷೇತ್ರದಲ್ಲಿ ಜಾತಿ ರಾಜಕಾರಣ ಮಾಡಿದ್ದಲ್ಲಿ ನಾನು ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ. ಅಭಿವೃದ್ಧಿ ಕಾರ್ಯಗಳಿಗೆ ಫುಲ್ ಮಾಕ್ರ್ಸ್ ನೀಡಿ ನನ್ನನ್ನು ಸತತ 3ನೇ ಬಾರಿ ಗೆಲ್ಲಿಸಿದ್ದಾರೆ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ನುಡಿದರು. ನಗರದ ಗೃಹ ಕಚೇರಿಯಲ್ಲಿ ತಾಲೂಕು ಬೇಡ ಜಂಗಮ ಸಮಾಜದ ವತಿಯಿಂದ ನೀಡಿದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ನನ್ನ ಅಭಿವೃದ್ಧಿ ಕಾರ್ಯಗಳನ್ನು ಅರಿತು 3ನೇ ಬಾರಿ ದಾಖಲೆ ಮತಗಳ ಅಂತರಲ್ಲಿ ನನ್ನನ್ನು ಗೆಲ್ಲಿಸಿ ವಿಧಾನಸಭೆಗೆ ಕಳಿಸಿಕೊಟ್ಟಿ ರುವ ಕ್ಷೇತ್ರದ ಜನತೆಗೆ ನಾನು ಅಭಾರಿ…
ಪರೀಕ್ಷೆಗಿಂತ ಸಮಾಜ ನೀಡುವ ಅಂಕ ಬಹುಮುಖ್ಯ
June 1, 2018ಅರಸೀಕೆರೆ: ಕೆಲಸದ ಒತ್ತಡ ದಲ್ಲೂ ಸಿಬ್ಬಂದಿ ತಮ್ಮ ಮಕ್ಕಳ ವಿದ್ಯಾ ಭ್ಯಾಸದ ಕಡೆ ಹೆಚ್ಚಿನ ಗಮನ ಹರಿಸಿ ಉತ್ತಮ ಅಂಕಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸು ತ್ತಿರುವುದು ಇಲಾಖೆಗೆ ಹೆಮ್ಮೆ ಸಂಗತಿ ಎಂದು ಅರಸೀಕೆರೆ ವಲಯದ ಉಪ ಪೊಲೀಸ್ ಅಧೀಕ್ಷಕ ಸದಾನಂದ ತಪ್ಪಣ್ಣನವರ್ ಶ್ಲಾಘಿಸಿದರು. ನಗರದ ಡಿವೈಎಸ್ಪಿ ಕಚೇರಿ ಆವರಣ ದಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯು ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳನ್ನು ಪಡೆದ ಇಲಾಖೆ ಸಿಬ್ಬಂದಿ ಮಕ್ಕಳನ್ನು ಸನ್ಮಾನಿಸಿ ಮಾತ ನಾಡಿದ ಅವರು, ಇಲಾಖೆಯ ಕೆಲಸವೂ ಸೇರಿದಂತೆ ವೈಯಕ್ತಿಕ ಬದುಕಿನ…
ವಿದ್ಯುತ್ ಸ್ಪರ್ಶಿಸಿ ರೈತ ಸಾವು
May 30, 2018ಅರಸೀಕೆರೆ: ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ ಸಾವಿಗೀಡಾದ ಘಟನೆ ತಾಲೂಕಿನ ನಾಗವೇದಿ ಗ್ರಾಮದಲ್ಲಿ ನಡೆದಿದೆ. ಅರುಣ್ ಕುಮಾರ್ (45) ಮೃತ ರೈತ. ಜಮೀನಿಗೆ ಅಳವಡಿಸಿದ್ದ ತಂತಿ ಬೇಲಿಗೆ ವಿದ್ಯುತ್ ಪ್ರವಹಿಸಿ ಆಕಸ್ಮಿಕವಾಗಿ ಅರುಣ್ಗೆ ವಿದ್ಯುತ್ ಸ್ಪರ್ಶವಾಗಿದ್ದು, ಸ್ಥಳದಲ್ಲೇ ಅಸುನೀಗಿದ್ದಾರೆ. ಘಟನೆಯಿಂದ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಎಂ ಹೆಚ್ಡಿಕೆ ನುಡಿದಂತೆ ನಡೆಯಲಿ
May 29, 2018ಅರಸೀಕೆರೆ: ನೂತನ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಮ್ಮ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡ ಬೇಕೆಂದು ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಜಿ.ವಿ.ಟಿ ಬಸವರಾಜು ಆಗ್ರಹಿಸಿದರು. ತಾಲೂಕು ಬಿಜೆಪಿಯಿಂದ ನಗರದ ಪಿಪಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿದ ಸಂದರ್ಭದಲ್ಲಿ ಕಾರ್ಯ ಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ರೈತರು ಸಾಲದ ಸುಳಿಯಲ್ಲಿ ಸಿಲುಕಿ ಆತ್ಮಹತ್ಯೆ ಹಾದಿ ಹಿಡಿದಿದ್ದು ಕೂಡಲೇ ಕುಮಾರಸ್ವಾಮಿಯವರು ತಾವು ನುಡಿ ದಂತೆ ನಡೆದುಕೊಂಡು ಸಾಲಮನ್ನಾ ಮಾಡ…
ನೇಗಿಲು ಹಿಡಿದ ಕಾವಿಧಾರಿ ಮಠ ಮಂದಿರಗಳಿಗೆ ಮಾದರಿ
May 26, 2018ಅರಸೀಕೆರೆ: ಮಠದ ಆವರಣದ ಜಮೀನಲ್ಲಿ ಸ್ವಾಮೀಜಿಯೊಬ್ಬರು ಬೇಸಾಯ ಮಾಡಿ ಬೆಳೆದ ತರಕಾರಿ ಬೆಳೆದು ಭಕ್ತರ ದಾಸೋಹಕ್ಕೆ ಬಳಸುವ ಮೂಲಕ ಇತರೆ ಮಠ ಮಂದಿರಗಳಿಗೆ ಮಾದರಿಯಾಗಿದ್ದಾರೆ. ತಾಲೂಕಿನ ದೊಡ್ಡಮೇಟಿಕುರ್ಕೆ ಗ್ರಾಮದ ಬೂದಿಹಾಳ್ ವೀರಕ್ತ ಮಠದ ಶ್ರೀ ಶಶಿಶೇಖರ ಸಿದ್ದಬಸವ ಸ್ವಾಮೀಜಿ ನೇಗಿಲು ಹಿಡಿದು ಬೇಸಾಯ ಮಾಡುತ್ತಿದ್ದು, ಭೂ ಸೇವೆಗೆ ಅಸಡ್ಡೆ ತೋರುವ ಇಂದಿನ ಯುವ ಜನಾಂಗಕ್ಕೆ ಪದವೀಧರರಾದ ಈ ಸ್ವಾಮೀಜಿ ಸ್ಪೂರ್ತಿಯಾಗಿದ್ದಾರೆ. ಹತ್ತಾರು ವರ್ಷಗಳಿಂದ ಮಳೆ ಇಲ್ಲದೆ ತತ್ತರಿಸಿದ್ದ ತಾಲೂಕಿನ ರೈತಾಪಿ ಜನತೆಗೆ ಕಳೆದ ದಿನಗಳಿಂದ ಬೀಳುತ್ತಿರುವ ಮುಂಗಾರು…
ಅರಸೀಕೆರೆಯಲ್ಲಿ ಜೆಡಿಎಸ್, ಕಾಂಗ್ರೆಸ್ ನಡುವೆ ನೇರ ಹಣಾಹಣ
May 7, 2018ಅರಸೀಕೆರೆ: ಜಿಲ್ಲೆಯ ಅರಸೀ ಕೆರೆ ವಿಧಾನ ಸಭೆ ಕ್ಷೇತ್ರವು ಜಿಲ್ಲೆಯ ಉಳಿದ ಕ್ಷೇತ್ರಗಳಂತೆ ಈ ಬಾರಿಯ ಚುನಾವಣೆಯಲ್ಲಿ ಪ್ರತಿಷ್ಠಿತ ಕಣವಾಗಿದ್ದು, ಜೆಡಿಎಸ್, ಕಾಂಗ್ರೆಸ್ ನಡುವೆ ನೇರ ಹಣಾಹಣ ಏರ್ಪಟ್ಟಿದೆ. ಹಾಲಿ ಶಾಸಕ ಹಾಗೂ ಜೆಡಿಎಸ್ ಅಭ್ಯರ್ಥಿ ಕೆ.ಎಂ.ಶಿವಲಿಂಗೇಗೌಡ ತಮ್ಮ ಹತ್ತು ವರ್ಷಗಳ ಸಾಧನೆಗಳನ್ನುಜನರ ಮುಂದೆ ತೆಗೆದುಕೊಂಡು ಹೋಗುವ ಮೂಲಕ ಮೂರನೇ ಬಾರಿಗೆ ಗೆಲುವನ್ನು ತಮ್ಮ ದಾಗಿಸಿಕೊಳ್ಳುವ ಪ್ರಯತ್ನದಲ್ಲಿ ಹ್ಯಾಟ್ರಿಕ್ ಹೀರೋ ಆಗಲು ಹಗಲಿರುಳು ಶ್ರಮಿಸುತ್ತಿ ದ್ದಾರೆ. ಮತ್ತೊಂದೆಡೆ ಮಾಜಿ ಶಾಸಕ ದಿವಂಗತ ಜಿ.ಎಸ್ ಬಸವರಾಜು ಪುತ್ರ ಡಿ.ಬಿ.ಶಶಿಧರ್…
ಲೋಕ ಕಲ್ಯಾಣಾರ್ಥಕ್ಕೆ ಮಹಾಯಜ್ಞ
April 27, 2018ಅರಸೀಕೆರೆ: ಪಟ್ಟಣದ ಮಾರುತಿ ಸಚ್ಚಿದಾನಂದ ಆಶ್ರಮದಲ್ಲಿ ಲೋಕ ಕಲ್ಯಾಣಾರ್ಥವಾಗಿ ದಶ ದಿನಗಳ ಕಾಲ ನಡೆಯುತ್ತಿರುವ ಒಂದು ಕೋಟಿ ಆಂಜನೇಯ ಮಹಾಮಂತ್ರದ ಜಪ ಹಾಗೂ ಒಂದು ಲಕ್ಷ ಕದಳೀ ಮಧು ಮಿಶ್ರಿತ ಹನುಮಾನ್ ಮಹಾ ಯಜ್ಞ ನಿರ್ವಿಜ್ಞವಾಗಿ ಸಾಗುತ್ತಿದೆ. ಈ ಮಹಾಯಜ್ಞದಲ್ಲಿ ತಾಲೂಕಿ ನಿಂದಲ್ಲದೇ ರಾಜ್ಯದ ನಾನಾ ಭಾಗಗ ಳಿಂದ ನೂರಾರು ಸಂಖ್ಯೆಯಲ್ಲಿ ಭಕ್ತ ಸಮೂಹ ಪಾಲ್ಗೊಳ್ಳುವ ಮೂಲಕ ಕೃತಾರ್ಥರಾಗುತ್ತಿದ್ದಾರೆ. ಆಶ್ರಮದ ಅವ ಧೂತರಾದ ಸತೀಶ್ ಶರ್ಮ ಗುರೂಜಿ ಅವರ ಸಂಕಲ್ಪದಂತೆ ಲೋಕ ಕಲ್ಯಾಣಾ ರ್ಥವಾಗಿ ಕೋಟ್ಯಂತರ ರೂ….