ಹಾಸನ ಹಾಲು ಒಕ್ಕೂಟದಿಂದ 50 ಲಕ್ಷ ರೂ. ಕೊಡುಗೆ: ಸಚಿವ ರೇವಣ್ಣ ವಿತರಣೆ ಹಾಸನ: ಹಾಸನ ಹಾಲು ಒಕ್ಕೂಟದ ವತಿಯಿಂದ ನಗರದಲ್ಲಿನ ಪ್ರಧಾನ ಹಾಲು ಉತ್ಪಾದನಾ ಘಟಕದಲ್ಲಿ ವಿಶ್ವ ಹಾಲು ದಿನವನ್ನು ಶನಿವಾರ ಆಚರಿಸಲಾಯಿತು. ಇದೇ ವೇಳೆ ಜಿಲ್ಲೆಯ ವಿವಿಧ ಸರಕಾರಿ ಕಾಲೇಜುಗಳಿಗೆ 125 ಕಂಪ್ಯೂಟರ್ಗಳನ್ನು ಒಕ್ಕೂಟದ ಅಧ್ಯಕ್ಷರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ವಿತರಿಸಿದರು. ನಂತರ ಮಾತನಾಡಿದ ಅವರು, ಹಾಸನ ಹಾಲು ಒಕ್ಕೂಟ ವ್ಯಾಪ್ತಿಯ ಸರಕಾರಿ ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣ ಕೊಡಿಸಬೇಕೆಂಬ ನಿಟ್ಟಿನಲ್ಲಿ ಒಟ್ಟು…
ಮಳೆಗಾಲದಲ್ಲಿ ಸೋರುವ ದೇಗುಲ; ಜೀರ್ಣೋದ್ಧಾರಕ್ಕೆ ಭಕ್ತರ ಆಗ್ರಹ
June 2, 2019ರಾಮನಾಥಪುರ: ರಾಮ ನಾಥಪುರದ ಕಾವೇರಿ ನದಿ ದಂಡೆಯ ಲ್ಲಿನ ಶ್ರೀರಾಮೇಶ್ವರಸ್ವಾಮಿ ದೇವಾಲಯ ಜೀರ್ಣೋದ್ಧಾರಕ್ಕಾಗಿ 4.80 ಕೋಟಿ ರೂ. ವೆಚ್ಚದ ಅಂದಾಜು ಪಟ್ಟಿ ತಯಾರಿಸಿ ಸರ್ಕಾರಕ್ಕೆ ಕಳುಹಿಸಿಕೊಟ್ಟಿದ್ದು, ಅಡಳಿತಾ ತ್ಮಕ ಅನುಮೋದನೆ ನೀಡುವಂತೆ ರಾಜ್ಯ ಸರ್ಕಾರವನ್ನು ಕಾವೇರಿ ನದಿ ಸ್ವಚ್ಛ್ಚತಾ ಅಂದೋಲನ ಸಮಿತಿ ಒತ್ತಾಯಿಸಿದೆ. ದೇವಸ್ಥಾನ ಶಿಥಿಲವಾಗಿದ್ದು, ಆದಷ್ಟು ಬೇಗ ಜೀರ್ಣೋದ್ಧಾರ ಮಾಡಿಸುವಂತೆ ಇಲ್ಲಿಯ ದೇವಸ್ಥಾನದ ಅಭಿವೃದ್ಧಿ ಸಮಿತಿ ಯವರು ಮನವಿ ಮಾಡಿದ್ದರಿಂದ ಪುರಾ ತತ್ವ ಇಲಾಖೆಯ ಮೈಸೂರಿನ ಅಧಿಕಾರಿ ಎ.ಇ.ಪೂಜಾರ್ ಅವರು 4.80 ಕೋಟಿ ರೂ. ಅಂದಾಜು…
ಆರೋಪಿ ಕಾವ್ಯಳ ಜೊತೆ ಪತಿ ಸತೀಶ್
June 1, 2019ಹಾಸನ/ಶ್ರೀರಂಗಪಟ್ಟಣ: ಹಾಸನ ಮತ್ತು ಶ್ರೀರಂಗ ಪಟ್ಟಣದಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಪತ್ನಿಯರೇ ತಮ್ಮ ಪತಿಯರನ್ನು ಹತ್ಯೆ ಮಾಡಿದ್ದು, ಪೊಲೀಸರಿಂದ ಬಂಧನ ಕ್ಕೊಳಗಾಗಿದ್ದಾರೆ. ಗ್ರಾನೈಟ್ ಉದ್ಯಮಿಯಾಗಿದ್ದ ಪತಿ ಎರಡನೇ ಮದುವೆಯಾದಾಗ ಆತನ ಆಸ್ತಿಗಾಗಿ ಮೊದಲ ಪತ್ನಿ ಸುಪಾರಿ ಪತಿಯನ್ನು ಹತ್ಯೆ ಮಾಡಿದ್ದರೆ, ಶ್ರೀರಂಗ ಪಟ್ಟಣ ತಾಲೂಕು ಅರಕೆರೆ ಗ್ರಾಮದಲ್ಲಿ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿ ಯನ್ನು ಪ್ರಿಯಕರ ಮತ್ತಿತರರೊಡನೆ ಸೇರಿ ಪತ್ನಿಯೇ ಕೊಂದಿದ್ದಾಳೆ. ಶ್ರೀರಂಗಪಟ್ಟಣ ವರದಿ: ಯುವಕನೊಬ್ಬನ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಗೃಹಿಣಿ, ತನ್ನ ಈ…
ಎತ್ತಿನಹೊಳೆ: ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಪ್ರತಿಭಟನೆ
May 31, 2019* ಸಕಲೇಶಪುರದ ಹೆಬ್ಬನಹಳ್ಳಿಯಲ್ಲಿ ನಡೆಯುತ್ತಿರುವ ಕಾಮಗಾರಿ ತಡೆದ ರೈತರು * ಸರ್ಕಾರಿ ಜಾಗದಲ್ಲಿ ಗುಡಿಸಲು ನಿರ್ಮಿಸಿ ಪ್ರತಿಭಟಿಸಿದ ಎಡೇಹಳ್ಳಿ ಗ್ರಾಮಸ್ಥರು ಸಕಲೇಶಪುರ: ಸೂಕ್ತ ಪರಿ ಹಾರ ವಿತರಿಸಿದ ನಂತರವಷ್ಟೇ ಎತ್ತಿನಹೊಳೆ ಯೋಜನೆಯ ಕಾಮಗಾರಿ ನಿರ್ವಹಿಸ ಬೇಕು ಎಂದು ಆಗ್ರಹಿಸಿ ಸಕಲೇಶಪುರ ಹಾಗೂ ಬೇಲೂರಿನಲ್ಲಿ ರೈತರು, ಮುಖಂಡರು ಪ್ರತಿಭಟನೆ ನಡೆಸಿದರು. ಸಕಲೇಶಪುರ ತಾಲೂಕಿನ ಬೆಳ ಗೋಡು ಹೋಬಳಿಯ ಹೆಬ್ಬನಹಳ್ಳಿಯಲ್ಲಿ ನಡೆಯುತ್ತಿರುವ ಎತ್ತಿನಹೊಳೆ ಕಾಮ ಗಾರಿ ಸ್ಥಳದಲ್ಲಿ ಗುರುವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಭೀಮವಾದ) ಸಂಘಟನೆ ನೇತೃತ್ವದಲ್ಲಿ ಸಮಾವೇಶ ಗೊಂಡ…
ದೇಗುಲ ಆವರಣದಲ್ಲಿ ಗಂಡು ಮಗು ಪತ್ತೆ
May 31, 2019ಚನ್ನರಾಯಪಟ್ಟಣ: ಹಿರೀಸಾವೆ ಗ್ರಾಮದ ಶ್ರೀಕಾಳಿ ಕಾಂಬ ಕಮ್ಮಟೇಶ್ವರ ದೇಗುಲ ಆವರಣದಲ್ಲಿ ಅಂದಾಜು 15 ದಿನಗಳ ಹಿಂದಷ್ಟೇ ಜನಿಸಿರುವ ಗಂಡು ಮಗುವೊಂದು ಸಿಕ್ಕಿದೆ. ಮಗು ಅಳುವ ಶಬ್ದ ಕೇಳಿಬಂದ ಹಿನ್ನೆಲೆಯಲ್ಲಿ ಸ್ಥಳೀಯ ರಾದ ಭಾಗ್ಯಮ್ಮ ಎಂಬುವರು ದೇಗುಲ ಆವರಣಕ್ಕೆ ತೆರಳಿ, ಜಗುಲಿಯ ಮೇಲೆ ಕೈಚೀಲದಲ್ಲಿ ಮಗು ಇರುವುದನ್ನು ನೋಡಿ ತಕ್ಷಣ ಅಕ್ಕಪಕ್ಕದವರನ್ನು ಕೂಗಿದ್ದಾರೆ. ಸ್ಥಳೀಯರೆಲ್ಲ ಸೇರಿ ಬಾಟಲ್ ಮೂಲಕ ಹಾಲುಣಿಸಿ ಮಗುವಿನ ಹಾರೈಕೆ ಮಾಡಿದ್ದು, ಸ್ವಲ್ಪ ಅಸ್ವಸ್ಥಗೊಂಡಂತೆ ಕಂಡಿದ್ದರಿಂದ ತಕ್ಷಣ ಹಿರೀಸಾವೆ ಸಮು ದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ….
ಪುರಸಭೆ, ಆರೋಗ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ
May 31, 2019ಬೇಲೂರು: ಮಲೇರಿಯಾ ಹಾಗೂ ಚಿಕೂನ್ ಗುನ್ಯಾದಂತಹ ರೋಗ ಗಳಿಂದ ಜನರು ನರಳುತ್ತಿದ್ದರೂ ಪುರಸಭೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿ ಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋ ಪಿಸಿ, ಪಟ್ಟಣದ ಮೀನು ಮಾರುಕಟ್ಟೆ ಸಮೀಪ ಸಾರ್ವಜನಿಕರು ಪ್ರತಿಭಟನೆ ನಡೆಸಿದರು. ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ಪಟ್ಟಣದಲ್ಲಿ ಸ್ವಚ್ಛತೆಯನ್ನು ಕಡೆಗಣಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ತಾಲೂಕು ಟಿಪ್ಪು ಸಂಘರ್ಷ ಸಮಿತಿ ಅಧ್ಯಕ್ಷ ಜಾಕೀರ್ ಪಾಷಾ ಮಾತ ನಾಡಿ, 21, 22 ಮತ್ತು 23ನೇ ವಾರ್ಡ್ ಗಳಲ್ಲಿ ಸ್ವಚ್ಛತೆ ಇಲ್ಲದೆ ಚರಂಡಿ…
ಮೇವು ಬ್ಯಾಂಕ್ಗೆ ಶಾಸಕ ಶಿವಲಿಂಗೇಗೌಡ ಚಾಲನೆ
May 31, 2019ಅರಸೀಕೆರೆ: ತಾಲೂಕಿನ ಕಣಕಟ್ಟೆ ಹೋಬಳಿಯ ಜೆ.ಸಿ.ಪುರ ಎಪಿ ಎಂಸಿ ಆವರಣದಲ್ಲಿ ತೆರೆಯಲಾಗಿರುವ ಮೇವು ಬ್ಯಾಂಕ್ಗೆ ಗೃಹ ಮಂಡಳಿಯ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ.ಶಿವ ಲಿಂಗೇಗೌಡ ಚಾಲನೆ ನೀಡಿದರು. ಬಳಿಕ, ಮಾತನಾಡಿದ ಅವರು, ಹಿಂದೆ ಈ ಪ್ರದೇಶದಲ್ಲಿ ಉತ್ತಮ ಮಳೆ ಬೆಳೆಯಾ ಗುವ ಮೂಲಕ ಸ್ಥಳೀಯ ಜನತೆ ಕೊಡಗೈ ದಾನಿಗಳಾಗಿದ್ದರು. ಆದರೆ, ಪ್ರಕೃತಿ ವಿಕೋಪ ದಿಂದ ದಶಕದಿಂದಲೂ ಸರಿಯಾದ ಮಳೆ ಇಲ್ಲದೇ ಕೆರೆ ಕಟ್ಟೆಗಳು ಬರಿದಾಗಿದೆ. ಜಾನು ವಾರುಗಳಿಗೆ ಮೇವಿನ ಸಮಸ್ಯೆ ತಲೆದೋ ರಿದೆ. ಈ ನಿಟ್ಟಿನಲ್ಲಿ ಮೇವು…
ಸ್ಥಳೀಯ ಸಂಸ್ಥೆ: ಶಾಂತಿಯುತ ಮತದಾನ
May 30, 2019ಅರಕಲಗೂಡು ಶೇ. 83.14, ಆಲೂರು ಶೇ. 81.44 ಮತ ಚಲಾವಣೆ ಹಾಸನ: ಜಿಲ್ಲೆಯ ಅರಕಲಗೂಡು ಹಾಗೂ ಆಲೂರು ಪಟ್ಟಣ ಪಂಚಾಯಿತಿಗಳಿಗೆ ಬುಧವಾರ ಶಾಂತಿಯುತವಾಗಿ ಮತದಾನ ನಡೆದಿದೆ. ಅರಕಲಗೂಡು ಪಟ್ಟಣದ 3ನೇ ವಾರ್ಡ್ನಲ್ಲಿ ಮತದಾರರಿಗೆ ವಿತರಿಸಲು ತಂದಿದ್ದ 50 ಸಾವಿರ ಮೌಲ್ಯದ 46 ಚೀಲ ಅಕ್ಕಿ ವಶ, ಕೆಲವೆಡೆ ಮತಯಂತ್ರ ದೋಷವನ್ನು ಹೊರತು ಪಡಿಸಿದರೆ ಬೇರೆ ಯಾವುದೇ ಅಹಿತಕರ ಘಟನೆ ನಡೆದಿ ರುವ ಬಗ್ಗೆ ವರದಿಯಾಗಿಲ್ಲ. ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ಮತ ದಾನಕ್ಕೆ ಅವಕಾಶ…
ಹಾಸನ ಜಿಲ್ಲಾಧಿಕಾರಿಯಾಗಿ ಅಕ್ರಂಪಾಷ ಮರು ನಿಯೋಜನೆ
May 30, 2019ಹಾಸನ: ಹಾಸನ ಜಿಲ್ಲಾಧಿಕಾರಿಯಾಗಿ ಅಕ್ರಂ ಪಾಷ ಅವರನ್ನು ಮರು ನಿಯೋಜನೆÉ ಮಾಡಲಾಗಿದೆ. ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ವರ್ಗಾವಣೆಗೊಂಡಿದ್ದ ಅಕ್ರಂಪಾಷ ಮತ್ತೆ ಹಾಸನ ಜಿಲ್ಲಾಧಿಕಾರಿ ಯಾಗಿ ರಾಜ್ಯ ಸರ್ಕಾರ ವರ್ಗಾವಣೆ ಮಾಡಿದ್ದು, ಸ್ಥಳೀಯ ಸಂಸ್ಥೆಯ ಚುನಾವಣೆಯ ಪ್ರಕ್ರಿಯೆ ಮುಕ್ತವಾದ ಬಳಿಕ ಅಧಿಕಾರ ವಹಿಸಿ ಕೊಳ್ಳುವಂತೆ ಸೂಚನೆ ನೀಡಲಾಗಿದೆ. ಇನ್ನೂ ಜಿಲ್ಲಾಧಿಕಾರಿಯಾಗಿದ್ದ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರಿಗೆ ಯಾವುದೇ ಸ್ಥಳ ತೋರಿಸಿಲ್ಲ. ಬಿಜೆಪಿ ಮುಖಂಡರ ದೂರಿನ ಅನ್ವಯ ಅಕ್ರಂಪಾಷ ಅವರನ್ನು ಚುನಾವಣಾ ಆಯೋಗದ ನಿರ್ದೇನದ ಮೇರೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್…
ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ
May 30, 2019ಬೇಲೂರು: ಪಟ್ಟಣದ ಮಲ್ಲಿ ಕಾರ್ಜುನ ಮೆಡಿಕಲ್ ಆವರಣದಲ್ಲಿ ದೇಶ ಭಕ್ತರ ಬಳಗದಿಂದ ಏರ್ಪಡಿಸಿದ್ದ ವೀರ ಸಾವರ್ಕರ್ ಜನ್ಮ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ 2018-19ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ. 90ಕ್ಕೂ ಅಧಿಕ ಅಂಕಗಳನ್ನು ಪಡೆದ ಗೆಂಡೇಹಳ್ಳಿ ಸರ್ಕಾರಿ ಶಾಲೆಯ ರಕ್ಷಿತ್, ಚೀಕನಹಳ್ಳಿ ಸರ್ಕಾರಿ ಶಾಲೆಯ ಸಾಗರ್, ತಾರೀಮರ ಸರ್ಕಾರಿ ಶಾಲೆಯ ಶಶಾಂಕ್ ವಿದ್ಯಾರ್ಥಿ ಗಳನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಬಳಗದ ಅಧ್ಯಕ್ಷ ಡಾ.ಸಂತೋಷ್ ಮಾತನಾಡಿ, ವೀರ ಸಾವರ್ಕರ್ ಅವರು ಒಬ್ಬ ದೇಶ ಭಕ್ತನಾಗಿರದೆ ಉತ್ತಮ ವಾಗ್ಮಿ ಯಾಗಿದ್ದರು….