ಮೇವು ಬ್ಯಾಂಕ್‍ಗೆ ಶಾಸಕ ಶಿವಲಿಂಗೇಗೌಡ ಚಾಲನೆ
ಹಾಸನ

ಮೇವು ಬ್ಯಾಂಕ್‍ಗೆ ಶಾಸಕ ಶಿವಲಿಂಗೇಗೌಡ ಚಾಲನೆ

May 31, 2019

ಅರಸೀಕೆರೆ: ತಾಲೂಕಿನ ಕಣಕಟ್ಟೆ ಹೋಬಳಿಯ ಜೆ.ಸಿ.ಪುರ ಎಪಿ ಎಂಸಿ ಆವರಣದಲ್ಲಿ ತೆರೆಯಲಾಗಿರುವ ಮೇವು ಬ್ಯಾಂಕ್‍ಗೆ ಗೃಹ ಮಂಡಳಿಯ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ.ಶಿವ ಲಿಂಗೇಗೌಡ ಚಾಲನೆ ನೀಡಿದರು.

ಬಳಿಕ, ಮಾತನಾಡಿದ ಅವರು, ಹಿಂದೆ ಈ ಪ್ರದೇಶದಲ್ಲಿ ಉತ್ತಮ ಮಳೆ ಬೆಳೆಯಾ ಗುವ ಮೂಲಕ ಸ್ಥಳೀಯ ಜನತೆ ಕೊಡಗೈ ದಾನಿಗಳಾಗಿದ್ದರು. ಆದರೆ, ಪ್ರಕೃತಿ ವಿಕೋಪ ದಿಂದ ದಶಕದಿಂದಲೂ ಸರಿಯಾದ ಮಳೆ ಇಲ್ಲದೇ ಕೆರೆ ಕಟ್ಟೆಗಳು ಬರಿದಾಗಿದೆ. ಜಾನು ವಾರುಗಳಿಗೆ ಮೇವಿನ ಸಮಸ್ಯೆ ತಲೆದೋ ರಿದೆ. ಈ ನಿಟ್ಟಿನಲ್ಲಿ ಮೇವು ಬ್ಯಾಂಕ್ ಪ್ರಾರಂ ಭಿಸಲಾಗಿದ್ದು, ರೈತರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಣಕಟ್ಟೆ ಹೋಬಳಿ ಸೇರಿದಂತೆ ಕ್ಷೇತ್ರದ ಕಸಬಾ, ಗಂಡಸಿ ಮತ್ತು ಬಾಣಾವರ ಹೋಬಳಿಗಳ ಪ್ರತಿ ಹಳ್ಳಿಗಳಿಗೆ ಶಾಶ್ವತ ವಾಗಿ ಕುಡಿಯುವ ನೀರು ಸರಬರಾಜು ಯೋಜನೆಯನ್ನು ಅನುಷ್ಠಾನಕ್ಕೆ ತರಲು ಕಾಮಗಾರಿಗಳು ನಡೆಯುತ್ತಿವೆ. ಜಿಲ್ಲಾಡ ಳಿತ ಸರ್ಕಾರಕ್ಕೆ ಈಗಾಗಲೇ ಕ್ಷೇತ್ರದ ಬರಗಾಲ ಪರಿಸ್ಥಿತಿಯ ವರದಿ ಕಳುಹಿಸಿದೆ. ರೈತಾಪಿ ಜನರು ಯಾವುದೇ ಸಮಸ್ಯೆಗಳಿಗೆ ಎದೆಗುಂದದೇ ದೈನಂದಿನ ಚಟುವಟಿಕೆ ಗಳಲ್ಲಿ ತೊಡಗಿಕೊಳ್ಳಲಿ. ರೈತರಿಗೆ ಅವಶ್ಯಕ ವಾಗಿರುವ ಮೇವು ಮತ್ತು ಕುಡಿಯುವ ನೀರನ್ನು ಜಿಲ್ಲಾ ಮತ್ತು ತಾಲೂಕು ಆಡಳಿ ತವು ಸರಬರಾಜು ಮಾಡಲಿದೆ ಎಂದರು.

ತಹಸೀಲ್ದಾರ್ ಸಂತೋಷ್‍ಕುಮಾರ್ ಮಾತನಾಡಿದರು. ಈ ಸಂದರ್ಭದಲ್ಲಿ ಪಶು ವೈದ್ಯಕೀಯ ಸಹಾಯಕ ನಿರ್ದೇಶಕ ರಂಗನಾಥ್, ಮುಖಂಡರಾದ ಧರ್ಮ ಶೇಖರ್, ಕರಿಯಪ್ಪ, ಮಂಜುನಾಥ, ಸೇರಿದಂತೆ ಗ್ರಾಮಸ್ಥರು ಮತ್ತು ಫಲಾನು ಭವಿಗಳು ಭಾಗವಹಿಸಿದ್ದರು.

Translate »