ಬೇಲೂರು: ಕನ್ನಡದ ಪ್ರಥಮ ಶಿಲಾಶಾಸನ ಸಿಕ್ಕಿದಂತಹ ಹಲ್ಮಿಡಿ ಗ್ರಾಮ ವನ್ನು ನಿರ್ಲಕ್ಷಿಸುವುದು ಸರಿಯಲ್ಲ ಎಂದು ನಿತ್ಯೋತ್ಸವ ಕವಿ ಡಾ.ಕೆ.ಎಸ್.ನಿಸಾರ್ ಅಹ್ಮದ್ ಹೇಳಿದರು. ಸಮೀಪದ ಹಲ್ಮಿಡಿ ಗ್ರಾಮಕ್ಕೆ ಭೇಟಿ ನೀಡಿ ಶಿಲಾಶಾಸನಕ್ಕೆ ನಮಸ್ಕರಿಸಿ ಮಾತ ನಾಡಿದ ಅವರು, ಹಿಂದಿನ ಕಸಾಪ ಅಧ್ಯಕ್ಷ ಹೆಚ್.ಬಿ.ಮದನ್ ಹಾಗೂ ವಿನ್ಯಾಸಕ, ಖ್ಯಾತ ಸಂಶೋಧನಾ ಸಾಹಿತಿ ಡಾ.ಶ್ರೀವತ್ಸ ಎಸ್.ವಟಿ ಅವರ ಶ್ರಮದಿಂದ ಗ್ರಾಮದಲ್ಲಿ ಹಲ್ಮಿಡಿ ಶಾಸನ ಮಂಟಪ ನಿರ್ಮಾಣ ವಾಗಿದೆ. ಇದು ದೇಶಕ್ಕೆ ಒಂದು ಹೆಮ್ಮೆಯ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಆದರೆ, ಪ್ರಸ್ತುತದ…
ಲೋಕಸಭಾ ಚುನಾವಣೆ: ಸಿದ್ಧತೆಗೆ ಜಿಲ್ಲಾಧಿಕಾರಿ ಸೂಚನೆ
March 10, 20196,000 ಯುವ ಮತದಾರರು 8,000 ವಿಕಲಚೇತನ ಮತದಾರರ ನೋಂದಣಿ ಬಾಕಿ ಜಿಲ್ಲೆಯಲ್ಲಿ 20 ಕಡೆ ಚೆಕ್ಪೋಸ್ಟ್ ಸ್ಥಾಪನೆ ಹಾಸನ: ಮುಂಬರುವ ಲೋಕಸಭಾ ಚುನಾವಣೆಯನ್ನು ಅತ್ಯಂತ ಅಚ್ಚುಕಟ್ಟಾಗಿ ನಿಭಾಯಿಸಬೇಕಾಗಿದ್ದು ಇಡೀ ಜಿಲ್ಲಾಡಳಿತ ಒಂದು ತಂಡವಾಗಿ ಕಾರ್ಯ ನಿರ್ವಹಿಸಬೇಕಾಗಿದೆ. ಇದಕ್ಕಾಗಿ ಅಧಿಕಾರಿಗಳು ವ್ಯವಸ್ಥಿತ ಸಿದ್ಧತೆ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಸೂಚಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿ ಮತದಾರರ ನೋಂದಣಿ ಮತ್ತು ಜಾಗೃತಿ ಚಟುವಟಿಕೆಗಳನ್ನು ಚುರುಕು ಗೊಳಿಸುವುದು ಹಾಗೂ ಮತಗಟ್ಟೆಗಳ ಸುಸ್ಥಿತಿ ಸೇರಿದಂತೆ ಪರಿಶೀಲನೆ ಚುನಾವಣೆ ಪೂರ್ವ…
ಯುವ ಮತದಾರರ ನೋಂದಣಿ, ಮತದಾರರ ಜಾಗೃತಿ ಅಭಿಯಾನ ಮತದಾನ ಮಾಡಿ, ಮತದಾನಕ್ಕೆ ಪ್ರೇರೇಪಿಸಿ: ಡಿಸಿ
March 7, 2019ಹಾಸನ: ಪ್ರತಿಯೊಬ್ಬರೂ ಮತದಾನ ಮಾಡಿ, ಮತದಾನಕ್ಕೆ ಪ್ರೇರೇ ಪಿಸಬೇಕು. ಈ ಮೂಲಕ ರಾಜ್ಯದಲ್ಲಿಯೇ ಜಿಲ್ಲೆಯು ಮುಂಬರುವ ಲೋಕಸಭಾ ಚುನಾವಣೆ ಅತಿಹೆಚ್ಚು ಮತದಾನವಾದ ಜಿಲ್ಲೆಗಳ ಪಟ್ಟಿಯಲ್ಲಿ ಮೊದಲನೇ ಸ್ಥಾನಕ್ಕೆ ಬರುವಂತೆ ಎಲ್ಲರೂ ಸಹಕರಿಸಿ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಅಕ್ರಂಪಾಷ ಹೇಳಿದರು. ನಗರದ ಮಲ್ನಾಡ್ ಇಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಸ್ವೀಪ್ ಸಮಿತಿಯಿಂದ ಆಯೋಜಿಸಿದ್ದ ಯುವ ಮತದಾರರ ನೋಂದಣಿ ಹಾಗೂ ಮತದಾರರ ಜಾಗೃತಿ ಅಭಿಯಾನ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯಲ್ಲಿರುವ…
ಅಭಿನಂದನ್ ಎಲ್ಲರಿಗೂ ಸ್ಫೂರ್ತಿ: ರವೀಂದ್ರಮುನಿ
March 7, 2019ಅರಸೀಕೆರೆ: ಭಾರತೀಯ ವಾಯು ಸೈನ್ಯದ ವಿಂಗ್ ಕಮಾಂಡರ್ ಅಭಿನಂದನ್ ಎಲ್ಲರಿಗೂ ಸ್ಫೂರ್ತಿಯಾಗಿ ದ್ದಾರೆ ಎಂದು ಜೈನ್ ಸಮುದಾಯದ ಗುರುಗಳಾದ ರವೀಂದ್ರಮುನಿ ಹೇಳಿದರು. ನಗರದ ಪೇಟೆ ಬೀದಿಯಲ್ಲಿರುವ ಜೈನ್ ಸ್ಥಾನಿಕ್ನಲ್ಲಿ ಸಮಾಜದಿಂದ ನಡೆದ ಅಭಿ ನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಹಿಂಸವಾದಿ ಜೈನ ಧರ್ಮದಲ್ಲಿ ಹುಟ್ಟಿ ಬೆಳೆÀದ ಅಭಿನಂದನ್ ಇಂದು ಎಲ್ಲರಿಗೂ ಮಾದರಿಯಾಗಿ ಭಾರತಾಂಬೆÉಯ ಹೆಮ್ಮೆಯ ಪುತ್ರರಾಗಿದ್ದಾರೆ ಎಂದು ತಿಳಿಸಿದರು. ಗುರುಗಳಾದ ರಮಣೀಕ ಮುನಿ ಮಾತ ನಾಡಿ, ಇಂದಿನ ದಿನಗಳಲ್ಲಿ ಧಾರ್ಮಿಕ ಜೀವನದಲ್ಲಿ ಎಲ್ಲರೂ ಆಸಕ್ತಿ ತೋರಿಸದೇ ಬೋಗದ…
ಶೇ.100ರಷ್ಟು ತೆರಿಗೆ ಸಂಗ್ರಹಣೆ ಮಾಡುವಂತೆ ಡಿಸಿ ಸೂಚನೆ
March 7, 2019ಹಾಸನ: ನಗರ ಸ್ಥಳೀಯ ಸಂಸ್ಥೆಗಳಲ್ಲಿ ಬಾಕಿ ಉಳಿದಿರುವ ಕಾಮ ಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿ ಸುವುದರ ಜೊತೆಗೆ ಶೇ. 100ರಷ್ಟು ತೆರಿಗೆ ಸಂಗ್ರಹಣೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಅಕ್ರಂಪಾಷಾ ತಿಳಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿ ಮಂಗಳವಾರ ನಗರ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು ವಿವಿಧ ಹಣಕಾಸು ಯೋಜನೆಗಳು ಮತ್ತು ನಗರಾಭಿ ವೃದ್ಧಿ ನಿಧಿಯಿಂದ ಬಿಡುಗಡೆಯಾದ ಹಣ ವನ್ನು ಸಂಪೂರ್ಣವಾಗಿ ಸದ್ಬಳಕೆ ಮಾಡಿ ಕೊಳ್ಳಬೇಕು ಎಂದು ಸೂಚನೆ ನೀಡಿದರು. ಪ್ರತಿ…
ಕುಡಿಯುವ ನೀರಿನ ಕೊರತೆಯಾಗದಂತೆ ಮುಂಜಾಗ್ರತೆ ವಹಿಸಿ
March 7, 2019ಜಿಪಂ ಸಭೆಯಲ್ಲಿ ಅಧಿಕಾರಿಗಳಿಗೆ ಅಧ್ಯಕ್ಷೆ ಶ್ವೇತಾ ದೇವರಾಜ್ ಸೂಚನೆ ಹಾಸನ: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳ ಬಗ್ಗೆ ಅಧಿಕಾರಿಗಳು ವಿಶೇಷ ಕಾಳಜಿ ವಹಿಸಿ ಆದಷ್ಟು ಶೀಘ್ರವಾಗಿ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾದೇವರಾಜ್ ಸೂಚನೆ ನೀಡಿದರು. ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ತನ್ನ ಯೋಜನೆಗಳ ಅನುಷ್ಠಾನವನ್ನು ಚುರುಕುಗೊಳಿಸಬೇಕು…
ಪಲ್ಸ್ ಪೋಲಿಯೋ ಯಶಸ್ಸಿಗೆ ಶ್ರಮಿಸಲು ಜಿಲ್ಲಾಧಿಕಾರಿ ಸೂಚನೆ
March 6, 2019ಮಾ.10ರಿಂದ 13ರವರೆಗೆ ಎರಡನೇ ಹಂತದ ಪಲ್ಸ್ ಪೋಲಿಯೋ ಕಾರ್ಯಕ್ರಮ ಹಾಸನ: ‘ಪಲ್ಸ್ ಪೋಲಿಯೋ ಕಾರ್ಯಕ್ರಮವು ಒಂದು ರಾಷ್ಟ್ರೀಯ ಅಭಿ ಯಾನವಾಗಿದ್ದು, ಇದರ ಯಶಸ್ವಿಗೆ ಎಲ್ಲಾ ಇಲಾಖೆ ಅಧಿಕಾರಿ, ಸಿಬ್ಬಂದಿ ಶ್ರಮಿಸ ಬೇಕು’ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಸೂಚನೆ ನೀಡಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿ ಮಂಗಳವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಮಾ. 10 ರಿಂದ 13ರ ವರೆಗೆ ಎರಡನೇ ಹಂತದ ಪಲ್ಸ್ ಪೋಲಿಯೋ ಕಾರ್ಯ ಕ್ರಮ ನಡೆಯಲಿದೆ. ಇದೊಂದು ದೇಶದ ಮಹತ್ವದ ಆರೋಗ್ಯ…
ಮಾಲೀಕನ ಮನೆಯಲ್ಲಿ ಕಾರ್ಮಿಕನಿಂದ ಕಳವು: ಐವರು ಅಂತರರಾಜ್ಯ ಖದೀಮರ ಬಂಧನ, 14.10 ಲಕ್ಷ ನಗದು, 50 ಗ್ರಾಂ ಚಿನ್ನ ವಶ
March 6, 2019ಹಾಸನ: ಕೆಲಸ ನೀಡಿದ್ದ ಮಾಲೀಕರ ಮನೆಯಲ್ಲೇ ಲಕ್ಷಾಂತರ ರೂ. ನಗದು ಹಾಗೂ 1 ಕೆಜಿ ಚಿನ್ನಾಭರಣ ಕಳ್ಳತನ ಮಾಡಿ ಪರಾರಿಯಾಗಿದ್ದ ಐವರು ಆರೋಪಿಗಳನ್ನು ಹಾಸನ ನಗರ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಜಸ್ತಾನ್ ಮೂಲದ ಸಂತೋಷ್(24), ರತನ್ಸಿಂಗ್(48), ಇಂದ್ರಸಿಂಗ್(24), ರಾಮರಾಂ ದೇವಸಿ(28), ಮೀಟೂ ಸಿಂಗ್(25) ಬಂಧಿತ ಆರೋಪಿಗಳು. ಉಳಿದ ಲಕ್ಷ್ಮಣ್, ಆಕಾಶ್ ಮತ್ತು ಗಣಪತ್ ಎಂಬುವವರು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ನಗರದ ಅಜಾದ್ ರಸ್ತೆಯಲ್ಲಿರುವ ಆಂಥೋಣಿ ಅವರ ಮನೆಯಲ್ಲಿ ಕೆಲಸಕ್ಕೆ ಇದ್ದ ರಾಜಸ್ತಾನ್…
ಬಿಜೆಪಿಯಲ್ಲಿ ಕುಟುಂಬ ರಾಜಕಾರಣವಿಲ್ಲ: ಸಿ.ಟಿ.ರವಿ
March 6, 2019ಹಾಸನ: ಬಿಜೆಪಿಯಲ್ಲಿ ಯಾರು ಬೇಕಾದರೂ ಪ್ರಧಾನಿಯಾಗಬಹುದು. ನಮ್ಮಲ್ಲಿ ಕುಟುಂಬ ರಾಜಕಾರಣವಿಲ್ಲ ಎಂದು ಶಾಸಕ ಸಿ.ಟಿ.ರವಿ ಹೇಳಿದರು. ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿ ಷತ್ ಭವನದಲ್ಲಿ ಮಂಗಳವಾರ ಜಿಲ್ಲಾ ಮಟ್ಟದ ಪ್ರಬುದ್ಧರ ಸಭೆಯಲ್ಲಿ ಮಾತ ನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಅದೃಷ್ಟದಿಂದ ಪ್ರಧಾನಿ ಆಗಲಿಲ್ಲ. ಅವರ ಸಾಮಥ್ರ್ಯದ ಮೇಲೆ ಆಗಿದ್ದು, 130 ಕೋಟಿ ಜನರಲ್ಲಿ ಯಾರು ಬೇಕಾ ದರೂ ಪ್ರಧಾನಿ ಆಗಬಹುದು. ಆದರೆ ಒಂದೇ ಕುಟುಂಬದ ಸದಸ್ಯರನ್ನು ಪ್ರಧಾನಿ ಯಾಗಿ ಮಾಡುವುದು ನಮ್ಮ ಸಿದ್ಧಾಂತ…
ಅಸಂಘಟಿತ ಕಾರ್ಮಿಕರಿಗೆ 3 ಸಾವಿರ ವೃದ್ಧಾಪ್ಯ ವೇತನ
March 6, 2019ಹಾಸನ: ಅಸಂಘಟಿತ ಕಾರ್ಮಿ ಕರು 60 ವರ್ಷ ತುಂಬಿದ ನಂತರ ತಿಂಗಳಿಗೆ ಕನಿಷ್ಠ 3000 ವೃದ್ಧಾಪ್ಯ ವೇತನ ಪಡೆಯ ಬಹುದು ಎಂದು ಉಪ ಕಾರ್ಮಿಕ ಆಯುಕ್ತ ವೆಂಕಟೇಶ್ ಅಪ್ಪಯ್ಯ ಶಿಂದಿಹಟ್ಟಿ ತಿಳಿಸಿದರು. ನಗರದ ಜಿಲ್ಲಾ ಪಂಚಾಯಿತಿಯ ಹೇಮಾ ವತಿ ಸಭಾಂಗಣದಲ್ಲಿ ಮಂಗಳವಾರ ಕಾರ್ಮಿಕರ ರಾಜ್ಯ ವಿಮಾ ನಿಗಮದ ವತಿಯಿಂದ ಆಯೋ ಜಿಸಲಾಗಿದ್ದ ಪ್ರಧಾನಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆ ಅಸಂಘಟಿತ ಕಾರ್ಮಿಕರಿಗೆ ಪಿಂಚಣಿ ಯೋಜನೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಸಂಘಟಿತ ಕಾರ್ಮಿಕರಿಗೆ ವೃದ್ಧಾಪ್ಯ ಪಿಂಚಣಿಗಾಗಿ ಕೇಂದ್ರ…