Tag: Hassan

ಇಬ್ಬೀಡು ಗ್ರಾಪಂನಿಂದ ಫಲಾನುಭವಿಗಳಿಗೆ ಹೊಲಿಗೆಯಂತ್ರ, ಸೈಕಲ್ ವಿತರಣೆ
ಹಾಸನ

ಇಬ್ಬೀಡು ಗ್ರಾಪಂನಿಂದ ಫಲಾನುಭವಿಗಳಿಗೆ ಹೊಲಿಗೆಯಂತ್ರ, ಸೈಕಲ್ ವಿತರಣೆ

February 7, 2019

ಬೇಲೂರು: ತಾಲೂಕಿನ ಇಬ್ಬೀಡು ಗ್ರಾಮ ಪಂಚಾಯಿತಿಯಿಂದ ಪ್ರಸಕ್ತ ಸಾಲಿನ ಶೇ. 5ರ ಅನುದಾನದಡಿ 6 ಜನ ನಿರುದ್ಯೋಗಿ ಯುವತಿಯರಿಗೆ ಹೊಲಿಗೆ ಯಂತ್ರ ಹಾಗೂ ಅಂಗವಿಕಲ ರಿಗೆ ಮೂರು ಚಕ್ರದ ಸೈಕಲ್ ವಿತರಿಸಲಾ ಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ದಿನಮಣಿ ಹೇಳಿದರು. ಕಾರ್ಯಕ್ರಮದಲ್ಲಿ ಅಂಗವಿಕಲರಿಗೆ ಸೈಕಲ್ ಹಾಗೂ ಯುವತಿಯರಿಗೆ ಹೊಲಿಗೆ ಯಂತ್ರ ವಿತರಿಸಿ ಮಾತನಾಡಿದ ಅವರು, ಶೇ. 5ರ ವಿಕಲಚೇತನರ ಅನುದಾನದಡಿ ಅಂಗವಿಕಲ ರಿಗೆ ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳಲು 6 ಜನರಿಗೆ ಮೂರು ಚಕ್ರದ ಸೈಕಲ್ ಹಾಗೂ ನಿರು…

ಗಾಂಧೀಜಿ ತತ್ವ, ಸರಳತೆ ಸರ್ವಕಾಲಿಕ: ಪ್ರಸನ್ನಕುಮಾರ್ ಸುರೆ
ಹಾಸನ

ಗಾಂಧೀಜಿ ತತ್ವ, ಸರಳತೆ ಸರ್ವಕಾಲಿಕ: ಪ್ರಸನ್ನಕುಮಾರ್ ಸುರೆ

February 7, 2019

ಅರಸೀಕೆರೆ: ಜಗತ್ತು ಕಂಡ ಶ್ರೇಷ್ಠ ಚಿಂತಕ, ನುಡಿದಂತೆ ನಡೆದು ವಿಶ್ವಕ್ಕೆ ಆದರ್ಶಪ್ರಾಯರಾದ ಗಾಂಧೀಜಿ ಅವರ ಸರಳತೆ ಹಾಗೂ ತತ್ವಗಳು ಸರ್ವ ಕಾಲಿಕವಾಗಿವೆ ಎಂದು ಶಿಕ್ಷಕ ಪ್ರಸನ್ನ ಕುಮಾರ್ ಸುರೆ ಅಭಿಪ್ರಾಯ ವ್ಯಕ್ತಪಡಿಸಿದರು. ತಾಲೂಕಿನ ಬಾಣಾವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‍ಎಸ್ ಎಸ್ ಘಟಕದಿಂದ ಚಿಕ್ಕೂರು ಗ್ರಾಮದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ವಾರ್ಷಿಕ ಶಿಬಿರ ದಲ್ಲಿ ‘ಗಾಂಧೀ ಮತ್ತು ಗ್ರಾಮೀಣಾಭಿ ವೃದ್ಧಿ’ ಎಂಬ ವಿಷಯದ ಬಗ್ಗೆ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಗಾಂಧೀಜಿ ಅವರ ವಿಚಾರಧಾರೆಗಳ…

ಸಂಶೋಧನೆಯಲ್ಲಿ ಸತ್ಯ ಸಂಗತಿ ಕ್ರೂಢೀಕರಿಸಲು ಸಲಹೆ
ಹಾಸನ

ಸಂಶೋಧನೆಯಲ್ಲಿ ಸತ್ಯ ಸಂಗತಿ ಕ್ರೂಢೀಕರಿಸಲು ಸಲಹೆ

February 7, 2019

ಹಾಸನ: ಸಂಶೋ ಧನೆಯಲ್ಲಿ ಸತ್ಯ ಸಂಗತಿಯನ್ನು ಮರೆಮಾ ಚದೆ ಅವುಗಳನ್ನು ಕ್ರೋಢೀಕರಿಸಬೇಕು ಎಂದು ಸಹಾಯಕ ಪ್ರಾಧ್ಯಾಪಕ ಡಾ.ಜೆ.ಡಿ. ಜಯದೇವೇಗೌಡ ಸಲಹೆ ನೀಡಿದರು. ನಗರದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜಿನ(ಸ್ವಾಯತ್ತ) ಸಭಾಂಗಣದಲ್ಲಿ ಗುರುವಾರ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದಿಂದ ಏರ್ಪಡಿಸಿದ್ದ ‘ಸಾಮಾಜಿಕ ಸಂಶೋಧನಾ ವಿಧಾನಗಳು’ ಕುರಿತು ನಡೆದ ವಿಶೇಷ ಉಪನ್ಯಾಸ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು. ಸಂಶೋಧನೆಯಲ್ಲಿ ವಿಷಯದ ಆಯ್ಕೆ ಮುಖ್ಯವಾಗಿದ್ದು, ಮಾರ್ಗದರ್ಶಕರ ಸಲಹೆ ಮೇರೆಗೆ ಸಂಶೋಧನೆ ನಡೆಸಬೇಕಾ ಗುತ್ತದೆ. ಸಂಶೋಧಕರು ಯಾವುದೇ ಕಾರಣಕ್ಕೆ ಪೂರ್ವಾಗ್ರಹ ಪೀಡಿತರಾಗದೆ,…

ಆರೋಗ್ಯ, ಸಮಾಜ ಕಲ್ಯಾಣ ಇಲಾಖೆ ಸಮನ್ವಯ ಸಮಿತಿ ಸಭೆ
ಹಾಸನ

ಆರೋಗ್ಯ, ಸಮಾಜ ಕಲ್ಯಾಣ ಇಲಾಖೆ ಸಮನ್ವಯ ಸಮಿತಿ ಸಭೆ

February 7, 2019

ಅಪೌಷ್ಠಿಕತೆ ನಿಯಂತ್ರಿಸಲು ಸಿಇಓ ಸೂಚನೆ ಹಾಸನ: ಜಿಲ್ಲೆಯಲ್ಲಿ ಅಪೌಷ್ಟಿಕತೆ ಸಂಪೂರ್ಣ ನಿಯಂತ್ರಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಎಲ್ಲಾ ರೀತಿಯ ಕ್ರಮ ವಹಿಸ ಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಸಿ. ಪುಟ್ಟಸ್ವಾಮಿ ಸೂಚನೆ ನೀಡಿದರು. ನಗರದ ಜಿಲ್ಲಾ ಪಂಚಾಯಿತಿ ಸಭಾಂ ಗಣದಲ್ಲಿ ಗುರುವಾರ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಏರ್ಪಡಿಸಲಾಗಿದ್ದ…

ಶ್ರವಣಬೆಳಗೊಳ ಶಾಲಾ ಮಕ್ಕಳಿಂದ ಕುರುಕ್ಷೇತ್ರ ನಾಟಕ
ಹಾಸನ

ಶ್ರವಣಬೆಳಗೊಳ ಶಾಲಾ ಮಕ್ಕಳಿಂದ ಕುರುಕ್ಷೇತ್ರ ನಾಟಕ

February 7, 2019

ಹಾಸನ: ಸಿನಿಮಾಗಳದ್ದೇ ಅಬ್ಬರ ವಿರುವ ಈ ಕಾಲದಲ್ಲಿ ಪೌರಾಣಿಕ ನಾಟಕ ಗಳನ್ನು ಮಾಡುವುದಿರಲಿ, ನೋಡುವುದಕ್ಕೂ ಜನರು ಮೂಗು ಮುರಿಯುತ್ತಿದ್ದಾರೆ. ಅದರಲ್ಲೂ ಈಗಿನ ಮಕ್ಕಳಿಗೆ ಇವುಗಳ ಸ್ಪಷ್ಟ ಪರಿಚಯವೂ ಇಲ್ಲ. ಆದರೆ ಇಲ್ಲಿನ ಮಕ್ಕಳು ಪೌರಾಣಿ ಕರ ಪಾತ್ರಗಳಿಗೆ ಜೀವ ತುಂಬುವ ಮೂಲಕ ನಾಟಕ ಕಲೆಯನ್ನು ಉಳಿಸಿ-ಬೆಳೆಸುವ ಮಹತ್ವದ ಕಾರ್ಯ ಮಾಡುತ್ತಿದ್ದಾರೆ. ಹಾಸನ ಜಿಲ್ಲೆಯ ಶ್ರವಣಬೆಳಗೊಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಪೌರಾಣಿಕ ನಾಟಕ ಪ್ರದರ್ಶನದ ಮೂಲಕ ಕಲಾ ಆರಾಧಕರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಮಕ್ಕಳಿಗೆ ಪಾಠ, ಪ್ರವ…

ಸ್ವಚ್ಛ ಭಾರತ್ ಮಿಷನ್ ಜಾಗೃತಿ ಬೀದಿ ನಾಟಕ
ಹಾಸನ

ಸ್ವಚ್ಛ ಭಾರತ್ ಮಿಷನ್ ಜಾಗೃತಿ ಬೀದಿ ನಾಟಕ

February 7, 2019

ಹಾಸನ: ಜಿಲ್ಲಾ ಪಂಚಾಯಿತಿ, ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ ಯೋಜನೆ ಯಡಿ ಘನ, ದ್ರವ, ತ್ಯಾಜ್ಯ ನಿರ್ವಹಣೆ ಕುರಿತಂತೆ ಜಿಲ್ಲಾ ಪಂಚಾಯಿತಿ ಆವರಣ ದಲ್ಲಿ ಹಮ್ಮಿಕೊಳ್ಳಲಾಗಿದ್ದ ಬೀದಿನಾಟಕ ಕಾರ್ಯಕ್ರಮಕ್ಕೆÀ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜು ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಕಸ ವಿಂಗಡಣೆ ಮತ್ತು ವಿಲೇವಾರಿಯು ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿರದೆ ಗ್ರಾಮೀಣ ಪ್ರದೇಶದ ಜನರಿಗೂ ಇದರ ಬಗ್ಗೆ ತಿಳುವಳಿಕೆ ಅಗತ್ಯ. ಗ್ರಾಮ ಪಂಚಾ ಯಿತಿಗಳಿಂದ ಸಂಗ್ರಹವಾಗುವ ಕಸ, ಪ್ಲಾಸ್ಟಿಕ್ ಇತರೆ ಮರು ಬಳಕೆ…

ನೆರೆ ಸಂತ್ರಸ್ತರಿಗೆ ಮನೆ ನಿರ್ಮಿಸಿಕೊಳ್ಳಲು ಆದೇಶ ಪತ್ರ ವಿತರಣೆ
ಹಾಸನ

ನೆರೆ ಸಂತ್ರಸ್ತರಿಗೆ ಮನೆ ನಿರ್ಮಿಸಿಕೊಳ್ಳಲು ಆದೇಶ ಪತ್ರ ವಿತರಣೆ

February 7, 2019

ರಾಮನಾಥಪುರ: ಕಾವೇರಿ ನದಿ ಪ್ರವಾಹದ ನೀರು ಆವರಿಸಿ ಮನೆಗಳು ಶಿಥಿಲವಾಗಿದ್ದ ಪ್ರಕರಣದಲ್ಲಿ ಸಂತ್ರಸ್ತರು ಮನೆ ನಿರ್ಮಿಸಿಕೊಳ್ಳಲು ಆದೇಶಪತ್ರ ವಿತರಿಸಲಾಗುತ್ತಿದೆ ಎಂದು ಶಾಸಕ ಎ.ಟಿ.ರಾಮಸ್ವಾಮಿ ತಿಳಿಸಿದರು. ಇಲ್ಲಿಯ ಕಾವೇರಿ ನದಿ ದಂಡೆಯಲ್ಲಿ ರುವ ಶ್ರೀ ರಾಮೇಶ್ವರ ದೇವಾಲಯ ಆವರಣದಲ್ಲಿ 44 ಪ್ರವಾಹ ಸಂತ್ರಸ್ತರಿಗೆ ಬಸವವಸತಿ ಯೋಜನೆಯಡಿ ಮನೆ ನಿರ್ಮಿಸಲು ಆದೇಶಪತ್ರ ವಿತರಿಸಿ ಅವರು ಮಾತನಾಡಿದರು. ರಾಮನಾಥಪುರದಲ್ಲಿ ಶ್ರೀರಾಮೇಶ್ವರ ದೇವಾಲಯದ ಆಸುಪಾಸಿನಲ್ಲಿ ಆಗಸ್ಟ್ 2018ರಲ್ಲಿ ಹಿಂದೆಂದೂ ಕಾಣದ ಪ್ರವಾ ಹವು ಬಂದು ಆಸ್ತಿಪಾಸ್ತಿ ನಾಶವಾಗಿದ್ದು ಅತ್ಯಂತ ನೋವಿನ ಸಂಗತಿಯಾಗಿದೆ. ಕಾವೇರಿ…

ಪ್ರತಿಭಾವಂತ ಶಿಕ್ಷಕರಿಗೆ ಪ್ರೋತ್ಸಾಹ ನೀಡಲು ಸಲಹೆ
ಹಾಸನ

ಪ್ರತಿಭಾವಂತ ಶಿಕ್ಷಕರಿಗೆ ಪ್ರೋತ್ಸಾಹ ನೀಡಲು ಸಲಹೆ

February 7, 2019

ಅರಸೀಕೆರೆ: ಪ್ರಾಥಮಿಕ ಶಾಲಾ ಶಿಕ್ಷಕರಲ್ಲಿ ವಿವಿಧ ಪ್ರತಿಭೆಗಳಿದ್ದು, ಆ ಪ್ರತಿಭೆ ಗಳನ್ನು ಪೋಷಿಸಿ ಬೆಳೆಸಬೇಕಾದ ಜವಾ ಬ್ದಾರಿ ಎಲ್ಲ ಶಿಕ್ಷಕರ ಸಂಘ ಸಂಸ್ಥೆಗಳಿಗೆ ಇರಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್‍ಕುಮಾರ್ ಸಲಹೆ ನೀಡಿದರು. ಜನವರಿ 28 ಮತ್ತು 30 ರಂದು ಛತ್ತೀಸ್ ಗಡದಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ 100 ಮೀ ಓಟದಲ್ಲಿ ಕಂಚಿನ ಪದಕ, ಮತ್ತು 200 ಮೀ, ಓಟ ದಲ್ಲಿ ಬೆಳ್ಳಿಪದಕ ಪಡೆದ ತಾಲೂಕಿನ ಗಂಡಸಿ ಕ್ಲಸ್ಟರ್‍ನ ಸಿ.ಆರ್.ಪಿ ಕಲಾವತಿ ಅವರಿಗೆ ಪಟ್ಟಣದಲ್ಲಿ…

ಸಂಚಾರಿ ನಿಯಮ ಪಾಲಿಸುವಂತೆ ವಿದ್ಯಾರ್ಥಿಗಳಿಗೆ ಸಲಹೆ
ಹಾಸನ

ಸಂಚಾರಿ ನಿಯಮ ಪಾಲಿಸುವಂತೆ ವಿದ್ಯಾರ್ಥಿಗಳಿಗೆ ಸಲಹೆ

February 7, 2019

ಬೇಲೂರು: ಕಾಲೇಜು ವಿದ್ಯಾರ್ಥಿ ಗಳು ವಾಹನ ಚಾಲನಾ ಪರವಾನಗಿ ಇಲ್ಲದೇ, ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನಗಳನ್ನು ಬಳಸುವುದು ಅಪರಾಧ ಮತ್ತು ಅಪಾಯ ಕಾರಿಯಾಗಿದ್ದು, ವಿದ್ಯಾರ್ಥಿಗಳು ಸಂಚಾರಿ ನಿಯಮ ಪಾಲಿಸಬೇಕು ಎಂದು ಸರ್ಕಲ್ ಇನ್‍ಸ್ಪೆಕ್ಟರ್ ಲೋಕೇಶ್ ಹೇಳಿದರು. ಪಟ್ಟಣದಲ್ಲಿ ಆರಕ್ಷಕ ಇಲಾಖೆ, ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಿಂದ ನಡೆದ ರಸ್ತೆ ಸುರಕ್ಷತಾ ಅರಿವಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಯುವ ಜನಾಂಗವು ಉತ್ಸಾಹಭರಿತ ರಾಗಿ ವಾಹನ ಚಲಾವಣೆಯ ಮಾಡು ತ್ತಿದ್ದಾರೆ. ಈ ಸಂದರ್ಭದಲ್ಲಿ ತಮ್ಮ…

ರೈತ ಪರ ಬಜೆಟ್ ಮಂಡನೆಗೆ ಸಿದ್ಧತೆ: ಸಚಿವ ಗುಬ್ಬಿ ಶ್ರೀನಿವಾಸ್
ಹಾಸನ

ರೈತ ಪರ ಬಜೆಟ್ ಮಂಡನೆಗೆ ಸಿದ್ಧತೆ: ಸಚಿವ ಗುಬ್ಬಿ ಶ್ರೀನಿವಾಸ್

February 7, 2019

ಹಾಸನ: ಬಜೆಟ್ ರೈತ ಪರವಾಗಿರಲಿದೆ. ರೈತರ ಸಾಲ ಮನ್ನಾ ಯೋಜನೆಗೆ ಬಜೆಟ್‍ನಲ್ಲಿ 24,000 ಕೋಟಿ ರೂ. ಅನುದಾನ ಮೀಸಲಿ ರಿಸುವ ನಿರೀಕ್ಷೆ ಇದೆ ಎಂದು ಸಣ್ಣ ಕೈಗಾರಿಕೆ ಸಚಿವರಾದ ಗುಬ್ಬಿ ಶ್ರೀನಿವಾಸ್ ಹೇಳಿದರು. ನಗರದ ಪರಿವೀಕ್ಷಣಾ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ, ಮೇವಿನ ಸಮಸ್ಯೆ, ಬರನಿರ್ವಹಣೆ ಹಾಗೂ ಇನ್ನಿತರ ಸಮಸ್ಯೆಗಳ ಬಗ್ಗೆ ಸಂಪುಟ ಉಪಸಮಿತಿಗಳು ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಪರಿಶೀಲನೆ ನಡೆಸಿದೆ. ಜನ ಸಾಮಾನ್ಯರಿಗೆ ತೊಂದರೆಯಾಗದಂತೆ ಮುಂಜಾಗ್ರತೆ ವಹಿಸಬೇಕು ಎಂದು…

1 47 48 49 50 51 103
Translate »