ವಿರಾಜಪೇಟೆ: ವಿರಾಜಪೇಟೆ ಕೊಡವ ಸಮಾಜದಿಂದ ಹುತ್ತರಿ ಹಬ್ಬ ವನ್ನು ಸಾಂಪ್ರ ದಾಯಿಕವಾಗಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ನ.23 ರಂದು ರಾತ್ರಿ 7.30 ಗಂಟೆಗೆ ಕೊಡವ ಸಮಾಜದ ನೆಲ್ಲಕ್ಕಿಯಲ್ಲಿ ನೆರೆ ಕಟ್ಟಲಾಯಿತು. ರಾತ್ರಿ 8.30ಗಂಟೆಗೆ ಕೊಡವ ಸಮಾಜದ ಗದ್ದೆಯಲ್ಲಿ ಸಮುದಾಯದ ಹಿರಿಯರಾದ ಕೂತಂಡ ನಾಣಯ್ಯ ನೇತೃತ್ವದಲ್ಲಿ ಪೂಜೆ ನೆರವೇರಿಸಿ ಕದಿರು ತೆಗೆಯಲಾಯಿತು. ನಂತರ ಮೆರವಣಿಗೆ ಯಲ್ಲಿ ಸಾಮೂಹಿಕವಾಗಿ ಕೊಡವ ಸಮಾ ಜದ ಸಭಾಂಗಣಕ್ಕೆ ಆಗಮಿಸಿದ ಸಮು ದಾಯದವರು ನೆಲ್ಲಕ್ಕಿಯಲ್ಲಿ ಕದಿರಿಗೆ ಪೂಜೆ ಸಲ್ಲಿಸಿದ ಬಳಿಕ…
ಪರಿಸರ-ಮಾನವ ನಂಟಿನ ಸಂಕೇತ ‘ಪುತ್ತರಿ’
November 24, 2018ಎಲ್ಲಿ ಭೂರಮೆ ದೇವ ಸನ್ನಿಧಿ ಬಯಸಿ ಭಿಮ್ಮನೆ ಬಂದಳೋ ಎಲ್ಲಿ ಮೋಹನ ಗಿರಿಯ ಬೆರಗಿನ ರೂಪಿನಿಂದಲಿ ನಿಂದಳೋ ಎಲ್ಲಿ ಮುಗಿಲಲಿ ಮಿಂಚಿನೋಲ್ ಕಾವೇರಿ ಹೊಳೆಹೊಳೆ ಹೊಳೆವಳೋ ಎಲ್ಲಿ ನೆಲವನು ತಣಿಸಿ ಜನಮನ ಹೊಲದ ಕಳೆಕಳೆ ಕಳೆವಳೋ ಅಲ್ಲೆ ಆ ಕಡೆ ನೋಡಲಾ ಅಲ್ಲೆ ಕೊಡಗರ ನಾಡೆಲಾ ಅಲ್ಲೆ ಕೊಡಗರ ಬೀಡೆಲಾ ಮಂಗಳೂರು ಮೂಲದ ಮಡಿಕೇರಿಯಲ್ಲಿ ಕಾಲೇಜು ಉಪನ್ಯಾಸಕ ರಾಗಿದ್ದ ಕವಿ ಪಂಜೆ ಮಂಗೇಶರಾಯರು ಕೊಡಗನ್ನು ಹಾಡಿದ್ದು ಹೀಗೆ. ಕೆಲವೇ ಕೆಲವು ಪ್ಯಾರಾಗಳಲ್ಲಿ ಅವರು ಕೊಡಗಿನ ಚಿತ್ರವನ್ನು ಕಟ್ಟಿಕೊಟ್ಟ…
ಜಿಲ್ಲೆಯಾದ್ಯಂತ ಸಾಂಪ್ರದಾಯಕ ಹುತ್ತರಿ ಆಚರಣೆ: ಪಟಾಕಿಗಳ ಸದ್ದಿಲ್ಲ, ಪ್ರಕೃತಿ ವಿಕೋಪ ವ್ಯಾಪ್ತಿಯಲ್ಲಿ ಸಂಭ್ರಮವಿಲ್ಲ
November 24, 2018ಮಡಿಕೇರಿ: ಕೊಡಗಿನ ಪ್ರಮುಖ ಹಬ್ಬಗಳಲ್ಲಿ ಒಂದಾದ ಹುತ್ತರಿ ಹಬ್ಬವನ್ನು ಜಿಲ್ಲೆಯಾದ್ಯಂತ ಈ ಬಾರಿ ಸಂಪ್ರದಾಯ ದಂತೆ ಸರಳವಾಗಿ ಆಚರಿಸಲಾಯಿತು. ಕಕ್ಕಬ್ಬೆಯ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾ ಲಯದಲ್ಲಿ ರೋಹಿಣಿ ನಕ್ಷತ್ರದಲ್ಲಿ ರಾತ್ರಿ 7.15ಕ್ಕೆ ನೆರೆಕಟ್ಟಿ, ಬಳಿಕ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ 8.15ಕ್ಕೆ ಕದಿರು ತೆಗೆಯಲಾಯಿತು. ಆ ಮೂಲಕ ಜಿಲ್ಲೆ ಯಲ್ಲಿ ಇಗ್ಗುತ್ತಪ್ಪನ ಸನ್ನಿಧಿಯಲ್ಲಿ ಮೊದಲು ಹುತ್ತರಿ ಹಬ್ಬವನ್ನು ಆಚರಿಸಲಾಯಿತು. ತದನಂತರ ಜಿಲ್ಲೆಯ ವಿವಿಧೆಡೆ ಹಬ್ಬಾ ಚರಣೆ ನಡೆಸಲಾಯಿತು. ನಗರದ ಓಂಕಾರೇಶ್ವರ ದೇವಾಲಯ, ಕೊಡವ ಸಮಾಜ, ಗೌಡ…
ಮೈಸೂರು ಕೊಡವ ಸಮಾಜ, ಕೊಡಗು ಗೌಡ ಸಮಾಜದಿಂದ ಇಂದು ಹುತ್ತರಿ ಹಬ್ಬ
November 23, 2018ಮೈಸೂರು: ಮೈಸೂರು ಕೊಡವ ಸಮಾಜ ಮತ್ತು ಕೊಡಗು ಗೌಡ ಸಮಾಜದ ಸಂಯುಕ್ತ ಆಶ್ರಯದಲ್ಲಿ ನಾಳೆ (ನ. 23) ಸಂಜೆ 5.30 ಗಂಟೆ ನಂತರ ಕುವೆಂಪುನಗರದ ಆದಿಚುಂಚನಗಿರಿ ರಸ್ತೆಯಲ್ಲಿರುವ ಶ್ರೀಕಾವೇರಿ ಶಿಕ್ಷಣ ಸಂಸ್ಥೆ ಮೈದಾನದಲ್ಲಿ ಹುತ್ತರಿ ಹಬ್ಬ ಆಚರಿಸಲಾಗುವುದು. ಇದರ ಅಂಗವಾಗಿ ಕೊಡವ ಸಾಂಪ್ರದಾಯಿಕ ನೃತ್ಯ ಪ್ರದರ್ಶನವಿದೆ. ಸಂಜೆ 7.30 ಗಂಟೆಗೆ ನೆರೆ ಕಟ್ಟುವ ಕಾರ್ಯಕ್ರಮ ನಡೆಯಲಿದೆ. ರಾತ್ರಿ 8.30ಕ್ಕೆ ಹೊಸ ಭತ್ತದ ಕೊಯ್ಲು (ಕದಿರು), 9.30ಕ್ಕೆ ತಂಬಟ್ಟು ಪ್ರಸಾದ ವಿತರಣೆ ನಡೆಯಲಿದೆ. ಕಳೆದ ವರ್ಷ ವಿಜಯನಗರದ ಸಮಾಜದ…
ನಾಳೆ ಸಿಎನ್ಸಿ ಆಶ್ರಯದಲ್ಲಿ ಪುತ್ತರಿ ನಮ್ಮೆ
November 22, 2018ಕುಶಾಲನಗರ: ಕೂಡವ ನ್ಯಾಷ ನಲ್ ಕೌನ್ಸಿಲ್ (ಸಿಎನ್ಸಿ) ಆಶ್ರಯದಲ್ಲಿ 25ನೇ ವಾರ್ಷಿಕ ಸಾರ್ವತ್ರಿಕ ಪುತ್ತರಿ ನಮ್ಮೆ ಹಬ್ಬವನ್ನು ನ.23 ರಂದು ಪೂರ್ವಾಹ್ನ 10.30 ಗಂಟೆಗೆ ಚಿಕ್ಕಬೆಟ್ಟ ಗೇರಿಯ ನಂದಿನೆರವಂಡ ಉತ್ತಪ್ಪನವರ ಭತ್ತದ ಗದ್ದೆಯಲ್ಲಿ ಸಾಂಪ್ರದಾಯಿಕ ಕದಿರು ತೆಗೆಯುವ ಶಾಸ್ತ್ರದೊಂದಿಗೆ ನಡೆಯಲಿದೆ ಎಂದು ಸಿಎನ್ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಹೇಳಿದರು. ಬುಧವಾರ ಪತ್ರಿಕಾಗೋಷ್ಢಿಯಲ್ಲಿ ಮಾತ ನಾಡಿದ ಅವರು, ನಾಡಿನ ಜನತೆಗೆ ಸಿಎನ್ಸಿ ಸಂಘಟನೆ ಪುತ್ತರಿ ಹಬ್ಬದ ಹಾರ್ಧಿಕ ಶುಭಾಶಯವನ್ನು ಕೋರುತ್ತದೆ. ಈ ನಾಡಿಗೆ ಮತ್ತು ಜನತೆಗೆ ಶಾಂತಿ, ನೆಮ್ಮದಿ,…
ನವೆಂಬರ್ 23ರಂದು ಹುತ್ತರಿ ಹಬ್ಬ ಆಚರಣೆ
November 10, 2018ಮಡಿಕೇರಿ: ಕೊಡಗಿನ ಕುಲದೇವರೆಂದೇ ಪ್ರಸಿದ್ಧವಾಗಿ ರುವ ಪಾಡಿ ಶ್ರೀಇಗ್ಗುತ್ತಪ್ಪ ದೇವಸನ್ನಿಧಿಯಲ್ಲಿ ಹುತ್ತರಿ ಹಬ್ಬದ ದಿನ ಮತ್ತು ಮಹೂರ್ತವನ್ನು ಶ್ರೀ ಇಗ್ಗುತ್ತಪ್ಪ ದೇವಳದ ಪಾರಂಪರಿಕ ಜ್ಯೋತಿಷಿಯಾದ ಅಮ್ಮಂಗೇರಿ ಕಣಿಯರ ಕುಟುಂಬದ ಶಶಿಕುಮಾರ್ ನಿಶ್ಚಯಿಸಿದರು. ಅದರಂತೆ ನ.23 ರಂದು ಪಾಡಿ ಶ್ರೀ ಇಗ್ಗುತ್ತಪ್ಪ ದೇವಳ ದಲ್ಲಿ ಉತ್ಸವ, ದೇವರು ಮಲ್ಮ ಬೆಟ್ಟಕ್ಕೆ ಸಾಗುವುದು, ಪೂಜೆ ಪುನಸ್ಕಾರ ನಡೆಯಲಿದ್ದು, ಅದೇ ದಿನ ರಾತ್ರಿ ಹುತ್ತರಿ ಹಬ್ಬವು ನಡೆಯಲಿದೆ ಎಂದು ಶಶಿಕುಮಾರ್ ತಿಳಿಸಿದ್ದಾರೆ. ದೇವಪೋದ್: ನ.23 ರಂದು ರೋಹಿಣಿ ನಕ್ಷತ್ರದಲ್ಲಿ ಕದಿರು ತೆಗೆ…
ನ.24, ಹುತ್ತರಿ ಪ್ರಯುಕ್ತ ಕೊಡಗಿಗೆ ಸಾರ್ವತ್ರಿಕ ರಜೆ
November 5, 2018ಬೆಂಗಳೂರು: ರಾಜ್ಯ ಸರ್ಕಾರವು ಹುತ್ತರಿ ಹಬ್ಬದ ಅಂಗವಾಗಿ ನ.24ರಂದು ಕೊಡಗು ಜಿಲ್ಲೆಗೆ ಮಾತ್ರ ಅನ್ವಯಿಸುವಂತೆ ಸಾರ್ವತ್ರಿಕ ರಜೆ ಘೋಷಿಸಿದೆ. ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ರಾಜ್ಯ ಶಿಷ್ಟಾಚಾರ) ಅಧೀನ ಕಾರ್ಯ ದರ್ಶಿ ಡಾ.ಬಿ.ಎಸ್.ಮಂಜುನಾಥ್ ಅವರು ಆದೇಶ ಹೊರಡಿಸಿದ್ದಾರೆ.