ಮದ್ದೂರು: ಪಟ್ಟಣದ ಎಪಿಎಂಸಿ ಮಾರುಕಟ್ಟೆಯಲ್ಲಿ ನಡೆಯುತ್ತಿರುವ 1.5ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಎಪಿಎಂಸಿ ಅಧ್ಯಕ್ಷ ಕುದರಗುಂಡಿ ನಾಗೇಶ್, ಉಪಾಧ್ಯಕ್ಷೆ ಮಮತಾ ಶಂಕರೇಗೌಡ ವೀಕ್ಷಿಸಿದರು. ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿಯೇ ಎಪಿಎಂಸಿ ಎಳನೀರು ಮಾರುಕಟ್ಟೆ ನಂಬರ್ ಒನ್ ಆಗಿದೆ. ಈ ಹಿಂದೆ ಮಾರುಕಟ್ಟೆಯ ರಸ್ತೆ ಸಂಪೂರ್ಣ ಹಾಳಾಗಿ ಧೂಳುಮಯವಾಗಿತ್ತು. ಪ್ರತಿನಿತ್ಯ ವಹಿವಾಟಿಗೆ ತೊಂದರೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರದಿಂದ 1.5ಕೋಟಿ ರೂ. ಬಿಡುಗಡೆಗೊಂಡು ಗುಣಮಟ್ಟದ ರಸ್ತೆ ನಿರ್ಮಾಣವಾಗುತ್ತಿದೆ ಎಂದರು. ಈ ಸಂದರ್ಭ ಎಪಿಎಂಸಿ ನಿರ್ದೇಶಕರಾದ ಕರಿಯಪ್ಪ, ಮಹೇಂದ್ರ, ಎಪಿಎಂಸಿ ಕಾರ್ಯದರ್ಶಿ…
ವಕೀಲರಿಂದ ಕಲಾಪ ಬಹಿಷ್ಕರಿಸಿ ಪ್ರತಿಭಟನೆ
June 26, 2018ಮದ್ದೂರು: ಕೇಂದ್ರ ಸರ್ಕಾರ ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡಿ ಕರ್ನಾಟಕದವರು ಬೆಳೆ ಪದ್ಧತಿ ಬದಲಾಯಿಸಬೇಕೆಂದು ಕಾವೇರಿ ಜಲಾನಯನ ಪ್ರದೇಶಕ್ಕೆ ಸೂಚಿಸಿರುವುದು ಸರಿಯಲ್ಲ ಎಂದು ಆರೋಪಿಸಿ ವಕೀಲರು ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಬೆಳೆ ಪದ್ಧತಿ ಬಗ್ಗೆ ನಿರ್ಧಾರ ಮಾಡುವ ವರು ಆ ಭಾಗದ ರೈತರು. ಈ ಹಿನ್ನೆಲೆ ಯಲ್ಲಿ ಕೇಂದ್ರ ಸರ್ಕಾರ ಕೂಡಲೇ ಕಾವೇರಿ ನಿರ್ವಹಣಾ ಮಂಡಳಿ ಪ್ರಸ್ತಾಪ ಹಿಂತೆಗೆದು ಕೊಳ್ಳಬೇಕು ಎಂದರು. ಕೃಷಿ, ವಿಜ್ಞಾನ ಕೇತ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ಕೇಂದ್ರ ಮತ್ತು ರಾಜ್ಯ…
ಎಚ್.ಡಿ.ಕುಮಾರಸ್ವಾಮಿ ಬಡ ಜನರ ಸಿಎಂ: ಹೆಚ್ಡಿಕೆ ಹಾಡಿ ಹೊಗಳಿದ ಸಚಿವ ಜಮೀರ್
June 24, 2018ಮದ್ದೂರು: ಎಚ್.ಡಿ.ಕುಮಾರ ಸ್ವಾಮಿ ನಮ್ಮ ಸಿಎಂ ಎನ್ನುವ ಮೂಲಕ ಸಚಿವ ಜಮೀರ್ ಅಹಮದ್ ಮತ್ತು ಸಿಎಂ ಎಚ್ಡಿಕೆ ನಡುವಿನ ಶೀಥಲ ಸಮರಕ್ಕೆ ಅಂತ್ಯ ಹಾಡಿದ್ದಾರೆ. ಪಟ್ಟಣಕ್ಕೆ ಶನಿವಾರ ಭೇಟಿ ನೀಡಿದ ಅವರು, ಕಾಂಗ್ರೆಸ್ ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಎಚ್ಡಿಕೆ ನಮ್ಮ ಸಿಎಂ, ಜನರ ಸಿಎಂ, ಬಡವರ ಸಿಎಂ ಎಂದು ಹಾಡಿಹೊಗಳಿದರು. ಬಡ ವರಿಗೆ ಮತ್ತಷ್ಟು ಕಾರ್ಯಕ್ರಮ ನೀಡಲು ಸಿಎಂ ಕುಮಾರಸ್ವಾಮಿ ಸಿದ್ಧರಿದ್ದಾರೆ. ಬಿಪಿಎಲ್ ಪಡಿತರ ಅಕ್ಕಿಯಲ್ಲಿ ಎರಡು ಕೆಜಿ ಅಕ್ಕಿ ಹೆಚ್ಚಳ ಮಾಡುವ ಸಾಧ್ಯತೆಯಿದೆ. ಈ…
ತಾಲೂಕು ಪಂಚಾಯಿತಿಗೆ ಗ್ರಾಪಂ ನೌಕರರ ಮುತ್ತಿಗೆ
June 24, 2018ಮದ್ದೂರು: ಎಲ್ಲಾ ಗ್ರಾಪಂ ನೌಕರರಿಗೆ ಸರ್ಕಾರದ ಆದೇಶದಂತೆ ವೇತನ ನೀಡುವಂತೆ ಒತ್ತಾಯಿಸಿ ಕರ್ನಾ ಟಕ ರಾಜ್ಯ ಗ್ರಾಪಂ ನೌಕರರ ಸಂಘದ ತಾಲೂಕು ಸಮಿತಿ ವತಿಯಿಂದ ಪಟ್ಟಣದ ತಾಪಂಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಯಿತು. ಈ ಕೂಡಲೇ ವೇತನ ಸೇರಿದಂತೆ ಇತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ಆದೇಶದಂತೆ 55,114 ನೌಕರರಿಗೆ ಸರ್ಕಾರದಿಂದ ಇಎಫ್ಎಂಎಸ್ ಮೂಲಕ ವೇತನ ಸಿಗುವಂತೆ ಕ್ರಮವಹಿಸಬೇಕು. ಜೂ.5 ರಂದು ವಿಸಿಯಲ್ಲಿಯ ನಿರ್ದೇಶನದಿಂದ ಗೊಂದಲವುಂಟಾಗಿದ್ದು ಸ್ವಚ್ಛತಾಗಾರರಿಗೆ, 2ನೇ ಬಿಲ್ ಕಲೆಕ್ಟರ್…
ಗಾರ್ಮೆಂಟ್ಸ್ ಮಹಿಳೆಯರ ಮುಷ್ಕರ 2ನೇ ದಿನಕ್ಕೆ ಉಪ ಆಯುಕ್ತರ ಮಾತುಕತೆ ವಿಫಲ
June 23, 2018ಮದ್ದೂರು: ಕನಿಷ್ಠ ವೇತನ ಜಾರಿಗೆ ಆಗ್ರಹಿಸಿ ತಾಲೂಕಿನ ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದಲ್ಲಿರುವ ಸಾಯಿ ಗಾರ್ಮೆಂಟ್ಸ್ ಮಹಿಳೆಯರು ನಡೆಸುತ್ತಿ ರುವ ಪ್ರತಿಭಟನೆ 2ನೇ ದಿನಕ್ಕೆ ಕಾಲಿಟ್ಟಿದೆ. ಇಂದು ಕೂಡ ಕಾರ್ಖಾನೆ ಆವರಣದಲ್ಲಿ ಜಮಾಯಿಸಿದ ಸಾವಿರಕ್ಕೂ ಹೆಚ್ಚು ಮಹಿಳಾ ಕಾರ್ಮಿಕರು ಕನಿಷ್ಠ ವೇತನ ಜಾರಿಯಾಗುವ ತನಕ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಕಾರ್ಖಾನೆ ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈಗ ನೀಡುತ್ತಿರುವ 7500 ರೂ. ಸಂಬಳ ಸಾಲುತ್ತಿಲ್ಲ. ಇದರಿಂದ ಸಂಸಾರ ನಿರ್ವಹಣೆ ಕಷ್ಟವಾಗಿದೆ. ಕನಿಷ್ಠ ವೇತನ…
ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಸಚಿವ ಡಿಸಿಟಿ ಚಾಲನೆ
June 18, 2018ಮದ್ದೂರು: ತಾಲೂಕಿನ ಸಮಗ್ರ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲಾ ಗುವುದು ಎಂದು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಭರವಸೆ ನೀಡಿದರು. ತಾಲೂಕಿನ ಮಾಲಗಾರನಹಳ್ಳಿಯಲ್ಲಿ ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಈ ತಿಂಗಳ ಅಂತ್ಯದಲ್ಲಿ ತಾಲೂಕಿನಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯ ಕೈಗೊಳ್ಳ ಲಾಗುವುದು. ಅಭಿವೃದ್ಧಿ ವಿಷಯದಲ್ಲಿ ಎಂದಿಗೂ ನಾನು ಹಿಂದೆ ಬೀಳುವುದಿಲ್ಲ ಎಂದು ತಿಳಿಸಿದರು. ನಾನು ಸಚಿವನಾದ ನಂತರ ತಾಲೂಕಿ ನಲ್ಲಿ ಮೊದಲಿನಂತೆ ಸಿಗುವುದಿಲ್ಲ ಎಂಬ ಆತಂಕ ಜನರಿಗೆ ಬೇಡ….
ಶಿಂಷಾನದಿ ಪುನಶ್ಚೇತನಕ್ಕೆ 126 ಕೋಟಿ ಯೋಜನೆ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಘೋಷಣೆ
June 16, 2018ಮದ್ದೂರು: ತಾಲೂಕಿನ ಶಿಂಷಾನದಿ ಪುನಶ್ಚೇತನಕ್ಕೆ 126 ಕೋಟಿ ರೂ.ಗಳ ಯೋಜನೆಯೊಂದನ್ನು ಸದ್ಯದಲ್ಲೇ ಜಾರಿಗೊಳಿಸಲಾಗುವುದು ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು.ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಪಟ್ಟಣಕ್ಕೆ ಆಗಮಿಸಿ, ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಈ ಯೋಜನೆಗೆ ಈಗಾಗಲೇ ತಾಂತ್ರಿಕ ಒಪ್ಪಿಗೆ ದೊರಕಿದೆ. ಸಚಿವ ಸಂಪುಟದ ಒಪ್ಪಿಗೆ ದೊರಕುತ್ತಿದ್ದಂತೆ ಶೀಘ್ರದಲ್ಲೇ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಘೋಷಿಸಿದರು. ಜಿಲ್ಲೆಯ ಜನತೆ 7 ತಾಲೂಕುಗಳಲ್ಲೂ ಜೆಡಿಎಸ್ ಪಕ್ಷಕ್ಕೆ ಅಭೂತಪೂರ್ವ ಗೆಲುವು ನೀಡಿದ್ದಾರೆ. ಈ ಋಣ ತೀರಿಸಲು ಜಿಲ್ಲೆಯ ಪ್ರತಿಷ್ಠಿತ…
ಮೂಲ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ಪ್ರತಿಭಟನೆ
June 13, 2018ಮದ್ದೂರು: ಕುಡಿಯುವ ನೀರು, ಸ್ವಚ್ಛತೆ ಸೇರಿದಂತೆ ಇತರೆ ಮೂಲ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಪಟ್ಟಣದ ಎಚ್.ಕೆ.ವಿ.ನಗರದ 1ನೇ ಕ್ರಾಸ್ ಬಡಾವಣೆಯ ನಿವಾಸಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.ಬಡಾವಣೆಯ ಮುಂಭಾಗ ಸಮಾವೇಶ ಗೊಂಡ ನಿವಾಸಿಗಳು ಪುರಸಭೆಯ ವಿರುದ್ಧ ಘೋಷಣೆ ಕೂಗಿದರು. ಬಡಾವಣೆಯಲ್ಲಿ 10 ವರ್ಷದದಿಂದ ಸಮರ್ಪಕವಾಗಿ ಸ್ವಚ್ಛತೆ ಮಾಡಿಲ್ಲ. ಚರಂಡಿ ಯಲ್ಲಿ ಹೂಳು ತುಂಬಿಕೊಂಡು ಗಬ್ಬು ನಾರು ತ್ತಿದೆ. ಜತೆಗೆ ಬಡಾವಣೆಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ ಎಂದು ದೂರಿದರು. ಅನೈರ್ಮಲ್ಯ ಹೆಚ್ಚಳದಿಂದ ಬಡಾವಣೆ ಯಲ್ಲಿ ಸೊಳ್ಳೆಗಳ ಹಾವಳಿ…
ಸ್ಥಳೀಯ ಸಂಸ್ಥೆಗಳಿಗೆ ನೀಡಿರುವ ಆದೇಶ ಖಂಡಿಸಿ ಪುರಸಭೆಗೆ ಮುತ್ತಿಗೆ
June 12, 2018ಮದ್ದೂರು: ಸಕ್ಷಮ ಪ್ರಾಧಿಕಾರ ದಿಂದ ವಿನ್ಯಾಸ ಅನುಮೋದನೆ ಪಡೆಯದ ಖಾತೆಗಳನ್ನು ರದ್ದು ಪಡಿಸಬೇಕೆಂದು ಪೌರಾ ಡಳಿತ ನಿರ್ದೇಶನಾಲಯ ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳಿಗೆ ನೀಡಿರುವ ಆದೇಶ ಸರಿಯಲ್ಲ ಎಂದು ಆರೋಪಿಸಿ ಕರುನಾಡ ಜನಜಾಗೃತಿ ಸೇನೆ ಮತ್ತು ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಕುರುನಾಡ ಜನಜಾಗೃತಿ ಸೇನೆ ಜಿಲ್ಲಾಧ್ಯಕ್ಷ ಮ.ನ.ಪ್ರಸನ್ನಕುಮಾರ್ ಮಾತನಾಡಿ, ಪ್ರಸ್ತುತ ಈ ಆದೇಶದಿಂದ ಇ-ಖಾತೆಗೆ (ಈ ಸ್ವತ್ತು) ಅರ್ಜಿ ಸಲ್ಲಿಸಿರುವ ನಾಗರಿಕರಿಗೆ ಇ-ಖಾತೆ ಸಿಗುತ್ತಿಲ್ಲ. ಇದರಿಂದ ಮದುವೆ, ಇನ್ನಿತರ…
70 ವರ್ಷಗಳ ಬಳಿಕ ಪಾಂಡವಪುರಕ್ಕೆ ಶಾಪ ವಿಮೋಚನೆ!
June 7, 2018ಮೇಲುಕೋಟೆಗೆ ಪ್ರಥಮ ಬಾರಿಗೆ ಮಂತ್ರಿಗಿರಿ- ಕಳಚಿದ ಸಚಿವ ಸ್ಥಾನವಿಲ್ಲದ ಕ್ಷೇತ್ರವೆಂಬ ಹಣೆಪಟ್ಟಿ ಸಕ್ಕರೆ ನಾಡಿಗೆ ಡಬಲ್ ಧಮಾಕ- ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣಗೆ ಸಚಿವ ಸ್ಥಾನ ನಾಗಯ್ಯ ಲಾಳನಕೆರೆ ಮಂಡ್ಯ: ಇದು ಪಾಂಡವಪುರ ಅಲಿಯಾಸ್ ಮೇಲುಕೋಟೆ ವಿಧಾನ ಸಭಾ ಕ್ಷೇತ್ರದ ರಾಜಕೀಯ ವೃತ್ತಾಂತ. ಸ್ವಾತಂತ್ರ್ಯ ಬಂದ 70 ವರ್ಷಗಳ ಬಳಿಕ ಇದೀಗ ಶಾಪವಿಮೋಚನೆ ಪಡೆದ ಕ್ಷೇತ್ರ ವೆಂಬ ಕೀರ್ತಿಗೆ ಭಾಜನವಾಗುತ್ತಿರುವ ಪಾಂಡವಪುರ ರಾಜಕೀಯ ಚಿತ್ರಣ!ವಿಧಾನಸಭಾ ಕ್ಷೇತ್ರವಾಗಿದ್ದ ಪಾಂಡವ ಪುರ. 2008ರಲ್ಲಿ ನಡೆದ ಕ್ಷೇತ್ರ ವಿಂಗಡಣೆ ಯಿಂದಾಗಿ ಮೇಲುಕೋಟೆ ಕ್ಷೇತ್ರವಾಗಿ ನಾಮಕರಣಗೊಂಡಿತು….