ಮಡಿಕೇರಿ: ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರೆದಿದೆ. ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 78.96 ಮಿ.ಮೀ. ಕಳೆದ ವರ್ಷ ಇದೇ ದಿನ 3.74 ಮಿ.ಮೀ., ಜನವರಿಯಿಂದ ಇಲ್ಲಿಯವರೆಗಿನ ಮಳೆ 1681.38 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 815.65 ಮಿ.ಮೀ ಮಳೆಯಾಗಿತ್ತು. ಮಡಿಕೇರಿ ತಾಲೂಕಿನಲ್ಲಿ ಇಂದಿನ ಸರಾಸರಿ ಮಳೆ 104.40 ಮಿ.ಮೀ. ಕಳೆದ ವರ್ಷ ಇದೇ ದಿನ 5.85 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 2338.55 ಮಿ.ಮೀ,…
ದುಬಾರೆಯಲ್ಲಿ ರ್ಯಾಫ್ಟಿಂಗ್ ಟೆಂಡರ್ ಪ್ರಕ್ರಿಯೆಗೆ ಹೈಕೋರ್ಟ್ ತಡೆ
July 11, 2018ಮಡಿಕೇರಿ: ಪ್ರವಾಸಿತಾಣ ದುಬಾರೆಯಲ್ಲಿ ರ್ಯಾಫ್ಟಿಂಗ್ ನಡೆಸಲು ಸದ್ಯ ಕ್ಕಂತು ಅವಕಾಶ ದೊರೆಯುವ ಲಕ್ಷಣ ಗಳು ಗೋಚರಿಸುತ್ತಿಲ್ಲ. ನಂಜರಾಯ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಒಳ ಪಡುವ ದುಬಾರೆ ಪ್ರವಾಸಿ ತಾಣದಲ್ಲಿ ನೂರಾರು ಮಂದಿ ಸ್ಥಳೀಯರು ರ್ಯಾಫ್ಟಿಂಗ್ ಮೂಲಕ ಬದುಕು ಕಟ್ಟಿಕೊಂಡಿದ್ದರು. ಕೆಲವರು ಅಧಿಕೃತ ಪರವಾನಗಿ ಪಡೆದು ರ್ಯಾಫ್ಟಿಂಗ್ ನಡೆಸಿದರೆ, ಮತ್ತೆ ಕೆಲವರು ಯಾವುದೇ ದಾಖಲೆಗಳಿಲ್ಲದೆ ಸ್ಥಳೀಯ ರೆಂಬ ಪ್ರಭಾವ ಬಳಸಿ ರ್ಯಾಫ್ಟಿಂಗ್ ಉದ್ಯಮ ವನ್ನು ದಂಧೆಯಂತೆ ಪರಿವರ್ತಿಸಿದ್ದರು. ಮಾತ್ರವಲ್ಲದೇ ರ್ಯಾಫ್ಟಿಂಗ್ ಗೆ ಬರುವ ಹೊರ ಊರುಗಳ ಪ್ರವಾಸಿಗರಿಂದ ದುಬಾರಿ…
ಕ್ಲೀನರ್ ಚಾಲನೆ ಮಾಡುತ್ತಿದ್ದ ಲಾರಿ, ಬಸ್ಗೆ ಡಿಕ್ಕಿ
July 11, 2018ಮಡಿಕೇರಿ: ಹೆದ್ದಾರಿಯಲ್ಲಿ ಕ್ಷೀನರ್ ಓರ್ವ ಲಾರಿ ಚಾಲಿಸಲು ಹೋಗಿ ಬಸ್ಗೆ ಡಿಕ್ಕಿ ಪಡಿಸಿ ಧರ್ಮದೇಟು ತಿಂದ ಘಟನೆ ನಗರದ ಚೈನ್ಗೇಟ್ ಬಳಿ ನಡೆದಿದೆ. ಮೈಸೂರಿನಿಂದ ಮಡಿಕೇರಿ ಕಡೆಗೆ ಬರುತ್ತಿದ್ದ ಸರಕು ತುಂಬಿದ್ದ ಲಾರಿಯನ್ನು ಚಾಲಕ, ಕ್ಲೀನರ್ ರಾಜು ಎಂಬಾತನಿಗೆ ಚಾಲನೆ ಮಾಡಲು ನೀಡಿದ್ದ. ಚೈನ್ಗೇಟ್ ತಲುಪುತ್ತಿದ್ದಂತೆಯೇ ಲಾರಿ ಚಾಲಿಸುತ್ತಿದ್ದ ಕ್ಲೀನರ್ ರಾಜು, ಲಾರಿಯನ್ನು ಅಡ್ಡಾದಿಡ್ಡಿ ಚಾಲನೆ ಮಾಡಿ ಹಾಸನದಿಂದ ಮಡಿಕೇರಿ ಕಡೆಗೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ಗೆ ಡಿಕ್ಕಿ ಹೊಡೆದಿದ್ದಾನೆ. ಬಸ್ನ ಚಾಲಕ, ನಿರ್ವಾಹಕ ಮತ್ತು ಪ್ರಯಾಣಿಕರು ಲಾರಿ…
ವರುಣನ ಆರ್ಭಟಕ್ಕೆ ತತ್ತರಿಸಿದ ಕೊಡಗು
July 10, 2018ಮಡಿಕೇರಿ: ಪುನರ್ವಸು ಮಳೆಯ ಆರ್ಭಟಕ್ಕೆ ಮಡಿಕೇರಿ ನಗರ ತತ್ತರಿಸಿದ್ದು, ನಗರ ವ್ಯಾಪ್ತಿಯಲ್ಲಿ ಮೂರು ಮನೆಗಳು ಕುಸಿದು ಬಿದ್ದಿವೆ. ಮಡಿಕೇರಿಯ ತ್ಯಾಗರಾಜ ಕಾಲೋನಿ, ಗದ್ದುಗೆ ಹಿಂಭಾಗ ಸೋಮವಾರ ಬೆಳಗಿನ ಜಾವ ಸುಮಾರು 1.30 ರ ಸಮಯದಲ್ಲಿ ಮನೆಗಳ ಗೋಡೆ ಕುಸಿದು ಬಿದ್ದಿದ್ದು, ಮನೆಯೊಳಗಿದ್ದವರು ಪವಾಡ ಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗದ್ದುಗೆಯ ನಿವಾಸಿಗಳಾದ ಸುನೀತಾ, ಅಬೂಬ ಕ್ಕರ್ ಎಂಬುವರಿಗೆ ಸೇರಿದ ಮನೆಗಳು ಕುಸಿದು ಬಿದ್ದಿದ್ದು, ಸಾವಿರಾರು ರೂಪಾಯಿ ನಷ್ಟ ಸಂಭವಿಸಿದೆ. ಹೊಲಿಗೆ ಯಂತ್ರಗಳನ್ನೇ ನಂಬಿಕೊಂಡು ಬದುಕು ತ್ತಿದ್ದ ಸುನೀತಾ…
ಕಾಡಾನೆ ದಾಳಿ; ವ್ಯಕ್ತಿಗೆ ತೀವ್ರ ಗಾಯ
July 10, 2018ಮಡಿಕೇರಿ: ಕಾಡಾನೆ ದಾಳಿಯಿಂದ ಕಾಫಿಬೆಳೆಗಾರರೋರ್ವರು ಗಂಭೀರ ಗಾಯಗೊಂಡ ಘಟನೆ ನೆಲ್ಯಹುದಿಕೇರಿ ಸಮೀಪದ ಬೆಟ್ಟದಕಾಡು ಗ್ರಾಮದಲ್ಲಿ ಸಂಭವಿಸಿದೆ. ಬೆಟ್ಟದ ಕಾಡು ನಿವಾಸಿ ಮಹಮ್ಮದ್ ಆಲಿ ಎಂಬುವರೇ ಕಾಡಾನೆ ದಾಳಿಯಿಂದ ಗಾಯಗೊಂಡವರಾಗಿದ್ದಾರೆ. ಭಾನುವಾರ ಸಂಜೆ ಬೆಟ್ಟದ ಕಾಡುವಿನಲ್ಲಿರುವ ತಮ್ಮ ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರನ್ನು ಕಳುಹಿಸಿ ಮನೆಗೆ ತೆರಳುತ್ತಿದ್ದ ಮಹಮ್ಮದ್ ಆಲಿ ಮೇಲೆ ದಾಳಿ ನಡೆಸಿದ ಕಾಡಾನೆ ಗಂಭೀರವಾಗಿ ಗಾಯಗೊಳಿಸಿದೆ. ಈ ಸಂದರ್ಭ ಮಹಮ್ಮದ್ ಆಲಿ ಅವರ ಕಿರುಚಾಟವನ್ನು ಕೇಳಿ ಸ್ಥಳಕ್ಕೆ ಬಂದ ಗ್ರಾಮಸ್ಥರು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಳೆದ…
ಮಡಿಕೇರಿಯಲ್ಲಿ `ಯಾರಿಗಾಗಿ ನಮ್ಮವರ ಬಲಿದಾನ’ ಯೋಧ ನಮನ ಕಾರ್ಯಕ್ರಮ
July 9, 2018ಮಕ್ಕಳನ್ನು ಸೈನ್ಯಕ್ಕೆ ಸೇರಿಸಲು ಪೋಷಕರಿಗೆ ಸಲಹೆ ಮಡಿಕೇರಿ: ದೇಶ ಕಾಯುವುದು ಒಂದು ಪುಣ್ಯದ ಕೆಲಸವಾಗಿದ್ದು, ಪೋಷಕರು ತಮ್ಮ ಮಕ್ಕಳು ಡಾಕ್ಟರ್, ಎಂಜಿನಿಯರ್ ಆಗಬೇಕೆನ್ನುವ ಕನಸು ಕಾಣುವ ಬದಲು ಯೋಧನಾಗಬೇಕೆನ್ನುವ ಅಭಿಲಾಷೆ ಯನ್ನು ಹೊಂದಬೇಕೆಂದು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಫೋರಂ ಅಧ್ಯಕ್ಷ ನಿವೃತ್ತ ಕರ್ನಲ್ ಕಂಡ್ರ ತಂಡ ಸಿ. ಸುಬ್ಬಯ್ಯ ತಿಳಿಸಿದ್ದಾರೆ. ಕೊಡಗು ಯೋಧಾಭಿಮಾನಿ ಬಳಗದ ವತಿಯಿಂದ ನಗರದ ಕೊಡವ ಸಮಾಜದಲ್ಲಿ ನಡೆದ `ಯಾರಿಗಾಗಿ ನಮ್ಮವರ ಬಲಿ ದಾನ’ ಯೋಧ ನಮನ ಕಾರ್ಯಕ್ರಮ ವನ್ನು…
ಸಾಲ ಮನ್ನಾ ಕಾಫಿ ಬೆಳೆಗಾರರಿಗೆ ಕಹಿ!
July 8, 2018ಕೊಡಗಿನ ಡಿಸಿಸಿ ಬ್ಯಾಂಕ್ ವ್ಯಾಪ್ತಿಯ ಕೇವಲ 168 ಬೆಳೆಗಾರರಿಗೆ ಮಾತ್ರ ಸಾಲ ಮನ್ನಾ ಸೌಲಭ್ಯ ಸಹಕಾರ ಬ್ಯಾಂಕ್ಗಳಲ್ಲಿ ಸಾಲ ಪಡೆದಿರುವ 35 ಸಾವಿರ ಬೆಳೆಗಾರರು ಸೌಲಭ್ಯ ವಂಚಿತರು ಅವಿಭಕ್ತ ಕುಟುಂಬದ ರೈತರಿಗೆ ಸೌಲಭ್ಯ ಗಗನ ಕುಸುಮ ಮಡಿಕೇರಿ: ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಂಡಿಸಿದ ಬಜೆಟ್ ನಲ್ಲಿ ರಾಜ್ಯದ ರೈತರಿಗೆ 34 ಸಾವಿರ ಕೋಟಿ ರೂ. ಸುಸ್ತಿ ಸಾಲ ಮನ್ನಾ ಮಾಡು ವುದಾಗಿ ಘೋಷಿಸಿದ್ದಾರೆ. ಈ ಸಾಲ ಮನ್ನಾ ಕಾಫಿ ಬೆಳೆಗಾರರಿಗೂ ಅನ್ವಯಿಸು ತ್ತದೆಯಾದರೂ, ಸಹಕಾರಿ ಬ್ಯಾಂಕ್ಗಳಲ್ಲಿ ಸಾಲ…
ಚಿರತೆ ಹೋಲುವ ಪ್ರಾಣಿ ಪತ್ತೆ
July 8, 2018ಮಡಿಕೇರಿ: ನಾಪೋಕ್ಲುವಿನ ಚೆರಿಯಪರಂಬುವಿನ ಕಾಫಿತೋಟವೊಂದರಲ್ಲಿ ಚಿರತೆ ಮರಿಯನ್ನು ಹೋಲುವ ಪ್ರಾಣಿ ಪತ್ತೆಯಾಗಿದೆ. ಚೆರಿಯಪರಂಬುವಿನ ನಿವಾಸಿ ಹ್ಯಾರಿಸ್ ಎಂಬುವರ ತೋಟ ದಲ್ಲಿ ಪತ್ತೆಯಾದ ಎರಡು ಮರಿಗಳನ್ನು ಕಂಡು ಸ್ಥಳೀಯರು ಇವು ಚಿರತೆಯ ಮರಿ ಗಳೆಂದು ಭಾವಿಸಿದ್ದರಲ್ಲದೇ, ತೋಟದೊಳಗೆ ತಾಯಿ ಚಿರತೆ ಅವಿತುಕೊಂಡಿರುವ ಬಗ್ಗೆ ಆತಂಕಕ್ಕೆ ಒಳಗಾಗಿದ್ದರು. ಈ ಕುರಿತು ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕಾಗಮಿಸಿದ ಅರಣ್ಯಾಧಿ ಕಾರಿಗಳು ತೋಟದಲ್ಲಿ ಪತ್ತೆ ಯಾದ ಮರಿಗಳನ್ನು ಪರಿಶೀಲನೆ ನಡೆಸಿದರು. ಬಳಿಕ ಚಿರತೆಯನ್ನು ಹೋಲುವ ಎರಡು ಮರಿಗಳು ಪೆರ್ಪಣದ…
ಡಿವೈಎಸ್ಪಿ ಗಣಪತಿ ಆತ್ಮಹತ್ಯೆಗೆ ಎರಡು ವರ್ಷ ತಿಂಗಳಾಂತ್ಯದಲ್ಲಿ ಸುಪ್ರೀಂ ಕೋರ್ಟ್ಗೆ ಸಿಬಿಐ ವರದಿ ಸಾಧ್ಯತೆ
July 7, 2018ಮಡಿಕೇರಿ: ನಗರದ ವಿನಾ ಯಕ ಲಾಡ್ಜ್ನ 315ನೇ ನಂಬರ್ ಕೋಣೆ ಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಇಹ ಲೋಕ ತ್ಯಜಿಸಿದ್ದ, ಕೊಡಗು ಮೂಲದ ಡಿವೈಎಸ್ಪಿ ಮಾದಪಂಡ ಗಣಪತಿ ಸಾವಿಗೆ ಜುಲೈ 7ಕ್ಕೆ ಬರೋಬ್ಬರಿ ಎರಡು ವರ್ಷ ತುಂಬುತ್ತಿದೆ. ರಾಜ್ಯ ಸರಕಾರವನ್ನು ತಲ್ಲಣಗೊಳಿಸಿದ್ದ ಡಿವೈಎಸ್ಪಿ ಸಂಶಯಾ ಸ್ಪದ ಸಾವಿನ ಪ್ರಕರಣವನ್ನು ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಚೆನೈನ ಸಿಬಿಐ ತಂಡ ತನಿಖೆ ನಡೆಸುತ್ತಿದ್ದು, ಪ್ರಸ್ತುತ ತನಿಖೆ ಮುಂದುವರಿದಿದೆ. ಚೆನೈ ಸಿ.ಬಿ.ಐ ತಂಡ ಹಲವು ಬಾರಿ ಕೊಡಗಿಗೆ ಆಗಮಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ…
ಪೆರುಂಬಾಡಿ-ಮಾಕುಟ ರಸ್ತೆ: ಲಘು ವಾಹನ ಸಂಚಾರಕ್ಕೆ ಅವಕಾಶ
July 7, 2018ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಜೂನ್ ಎರಡನೇ ವಾರ ಸುರಿದ ಧಾರಾಕಾರ ಮಳೆಯಿಂದಾಗಿ ವಿರಾಜಪೇಟೆ ತಾಲೂಕಿನ ಕೊಣನೂರು-ಮಾಕುಟ ರಾಜ್ಯ ಹೆದ್ದಾರಿಯ ಲ್ಲಿರುವ ಪೆರುಂಬಾಡಿಯಿಂದ ಮಾಕುಟ್ಟವರೆಗಿನ ರಸ್ತೆ ಹಾಗೂ ಸೇತುವೆಗಳು ಮಣ್ಣು ಕುಸಿದು, ಮರಗಳು ಬಿದ್ದು ತುಂಬಾ ಹದಗೆಟ್ಟಿರುತ್ತದೆ. ಈ ರಸ್ತೆಯಲ್ಲಿ ಪ್ರತಿನಿತ್ಯ ಲಘು ಹಾಗೂ ಭಾರೀ ವಾಹನಗಳು ಸಂಚರಿಸುವುದರಿಂದ ಸಾರ್ವಜನಿಕ ಜೀವಕ್ಕೆ ತೊಂದರೆ ಉಂಟಾ ಗುವ ಸಾಧ್ಯತೆ ಇರುವುದರಿಂದ ರಸ್ತೆ ದುರಸ್ತಿ ಮಾಡುವ ಕಾರ್ಯ ಪೂರ್ಣಗೊಳ್ಳುವವರೆಗೆ ಈ ರಸ್ತೆ ಮಾರ್ಗ ಎಲ್ಲಾ ರೀತಿಯ ವಾಹನ ಗಳ ಸಂಚಾರವನ್ನು ತಾತ್ಕಾಲಿಕವಾಗಿ…