ಮೈಸೂರು: ಮೈಸೂ ರಿನ ಕಲಾಮಂದಿರದಲ್ಲಿ ಚಾರ್ವಾಕ ಸಂಸ್ಥೆ ಪ್ರಸ್ತುತಪಡಿಸಿದ ‘ಬುದ್ಧಯಾನ’ 6 ಗಂಟೆ ಗಳ ರಂಗಪ್ರಯೋಗದಲ್ಲಿ ಯುದ್ದದಿಂದ ಯಾವುದೇ ಸಮಸ್ಯೆ ಬಗೆಹರಿಯದು, ಉದ್ದೇಶ ಈಡೇರದು. ಯುದ್ದ ಮತ್ತೊಂದು ಯುದ್ದಕ್ಕೆ ನಾಂದಿ.ಯುದ್ದದಲ್ಲಿ ಗೆದ್ದದ್ದು ಅಹಂಕಾರ ಸೋತಿದ್ದು ಮನುಷ್ಯತ್ವ ಎಂಬುದನ್ನು ಸಾರಲಾಯಿತು. ಗೀರಿಶ್ ಮಾಚಳ್ಳಿ ನಿರ್ದೇಶನದಲ್ಲಿ ಮೂಡಿಬಂದ ‘ಬುದ್ಧಯಾನ’ ನಾಟಕ ದಲ್ಲಿ ಬುದ್ಧನ ಜೀವನದ ಬಹುಮುಖ್ಯ ಘಟನೆಗಳನ್ನು ರಂಗದ ಮೇಲೆ ಕಲಾಭಿ ಮಾನಿಗಳ ಮನಮುಟ್ಟುವಂತೆ ಬಿತ್ತರಿಸ ಲಾಯಿತು. ಕಲಾವಿದರಾದ ಮಹದೇವ ಸ್ವಾಮಿ, ಗಣೇಶ್, ಕೆ.ಕಿರಣ್ಕುಮಾರ್, ಸುರೇಶ್, ಸೃಜನ್ ಸೂರ್ಯ, ಧನುಷ್,…
ಮತದಾರರಿಗೆ ಹಣ ಹಂಚುತ್ತಿದ್ದಾಗಲೇ ಸಿಕ್ಕಿಬಿದ್ದ ಜೆಡಿಎಸ್ ಮುಖಂಡನ ಪುತ್ರ
April 23, 2019ಶಿವಮೊಗ್ಗ: ಮಾಜಿ ಶಾಸಕ, ಜೆಡಿಎಸ್ ಮುಖಂಡ ಅಪ್ಪಾಜಿ ಗೌಡ ಅವರ ಪುತ್ರ ಅಜಿತ್ ಕುಮಾರ್ ಮತದಾರರಿಗೆ ಹಣ ಹಂಚುತ್ತಿದ್ದಾಗಲೇ ಆದಾಯ ತೆರಿಗೆ (ಐಟಿ) ಇಲಾಖೆ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. ಭದ್ರಾವತಿಯ ಎಂಪಿಎಂ ಸುರಗಿ ತೋಪಿನಲ್ಲಿ ಅಜಿತ್ ಕುಮಾರ್ ಹಣ ಹಂಚುತ್ತಿದ್ದರು. ಈ ಕುರಿತು ಐಟಿ ಅಧಿಕಾರಿಗಳಿಗೆ ಖಚಿತ ಮಾಹಿತಿ ಸಿಕ್ಕಿತ್ತು. ಹೀಗಾಗಿ ಎಂಪಿಎಂ ಠಾಣೆಯ ಪೆÇಲೀಸರ ಸಹಕಾರದಿಂದ ದಾಳಿ ಮಾಡಿದ ಅಧಿಕಾರಿಗಳು 1.39 ಲಕ್ಷ ರೂ. ನಗದು ಹಣವನ್ನು ಜಪ್ತಿ ಮಾಡಿದ್ದಾರೆ. ಶಿವಮೊಗ್ಗಕ್ಕೆ ಹೊರಟಿದ್ದ ಕಾರಿನ ಸ್ಟೆಪ್ನಿಯಲ್ಲಿತ್ತು…
ಲಕ್ಷ್ಮಿಹೆಬ್ಬಾಳ್ಕರ್ ಬೆಂಬಲಿಗನ ಬಳಿ 14 ಲಕ್ಷ ಹಣ ಪತ್ತೆ, ಬಂಧನ
April 23, 2019ಬೆಳಗಾವಿ: ಜಿಲ್ಲೆಯ ಪ್ರಭಾವಿ ಕಾಂಗ್ರೆಸ್ ಹಾಗೂ ಬಿಜೆಪಿ ಸಂಸದರು, ಶಾಸಕರ ಬೆಂಬಲಿಗರ ನಿವಾಸಗಳು ಮತ್ತು ಇನ್ನಿತರ ಸ್ಥಳಗಳ ಮೇಲೆ ಆದಾಯ ತೆರಿಗೆ ಅಧಿಕಾರಿ ಗಳು ಸೋಮವಾರ ಬೆಳಿಗ್ಗೆಯಿಂದಲೇ ದಾಳಿನಡೆಸಿ, ಸುಮಾರು 14 ಲಕ್ಷ ರೂಪಾಯಿ ಲೆಕ್ಕವಿಡದ ಹಣ ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಬೆಂಬಲಿಗ ಶ್ರೀಕಾಂತ್ ಮುನವಳ್ಳಿ ಅವರ ಕಾರು ತಡೆದು ತಪಾಸಣೆ ನಡೆಸಿದ್ದು, ಅದರಲ್ಲಿ ಅಡಗಿಸಿಟ್ಟಿದ್ದ 14ಲಕ್ಷ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಶ್ರೀಕಾಂತ್ ಮುನವಳ್ಳಿ ಅವರನ್ನು ಐಟಿ ಅಧಿಕಾರಿಗಳು…
ಸಾಹಿತಿ ಚಂಪಾಗೆ ಬಸವಶ್ರೀ ಪ್ರಶಸ್ತಿ
April 23, 2019ಚಿತ್ರದುರ್ಗ: ಚಿತ್ರದುರ್ಗದ ಮುರುಘರಾಜೇಂದ್ರ ಮಠ ಪ್ರದಾನ ಮಾಡುವ ಈ ಸಾಲಿನ ಪ್ರತಿಷ್ಠಿತ ಬಸವಶ್ರೀ ಪ್ರಶಸ್ತಿಗೆ ಖ್ಯಾತ ಸಾಹಿತಿ, ವಿಮರ್ಶಕರಾದ ಚಂದ್ರಶೇಖರ ಪಾಟೀಲ ಆಯ್ಕೆಯಾಗಿ ದ್ದಾರೆ. “ಸಾಹಿತ್ಯ ಕ್ಷೇತ್ರಕ್ಕೆ ಚಂದ್ರಶೇಖರ ಪಾಟೀಲರು ಸಲ್ಲಿಸಿದ ಕೊಡುಗೆಯನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗುತ್ತಿದೆ. ಬರುವ ಮೇ 7ರಂದು ನಡೆಯಲಿರುವ ಬಸವ ಜಯಂತಿ ವಿಶೇಷ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ ಎಂದು ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಹೇಳಿದ್ದಾರೆ. ಪ್ರಶಸ್ತಿಯು ಐದು ಲಕ್ಷ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಕಳೆದ…
ಭೂಮಿ ಮೇಲಿನ ಒತ್ತಡ ತಪ್ಪದಿದ್ದರೆ ಕಾದಿದೆ ಆಪತ್ತು
April 22, 2019ಮೈಸೂರು: ಕೃಷಿ ಭೂಮಿ ಹಾಗೂ ಗುಡ್ಡ ಕಡಿದು ಬಡಾ ವಣೆ ನಿರ್ಮಾಣ ಮಾಡುತ್ತಿರುವುದ ರಿಂದಲೇ ಭೂಮಿ ಮೇಲೆ ಒತ್ತಡ ಹೆಚ್ಚಾ ಗುತ್ತಿದ್ದು, ಇವುಗಳನ್ನು ತಡೆದು ಭೂಮಿ ಯನ್ನು ರಕ್ಷಿಸದಿದ್ದರೆ ಮುಂದಿನ ಪೀಳಿಗೆಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಕೆ.ವಂಟಿಗೋಡಿ ವಿಷಾದಿಸಿದ್ದಾರೆ. ಮೈಸೂರು ಜಿಲ್ಲಾ ಪಂಚಾಯತ್ನ ಅಬ್ದುಲ್ ನಜೀರ್ಸಾಬ್ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿ.ಪಂ ಹಾಗೂ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ `ವಿಶ್ವ ಭೂ’ ದಿನಾಚರಣೆ ಕಾರ್ಯ…
ಚಾಮುಂಡಿಬೆಟ್ಟದಲ್ಲಿ ನೂರು ಗಿಡ ನೆಟ್ಟು ಪರಿಸರ ಸಂರಕ್ಷಣೆ ಸಂದೇಶ
April 22, 2019ಮೈಸೂರು: ವಿಶ್ವ ಭೂಮಿ ದಿನಾಚರಣೆ ಅಂಗವಾಗಿ ನಮ್ಮ ಮೈಸೂರು ಫೌಂಡೆಷನ್ ಹಾಗೂ ಐಸಿಐಸಿಐ ಬ್ಯಾಂಕ್ ಸ್ಕಿಲ್ ಡೆವಲಪ್ಮೆಂಟ್ ಸಂಸ್ಥೆ ಜಂಟಿ ಆಶ್ರಯ ದಲ್ಲಿ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ನೂರು ಗಿಡಗಳನ್ನು ನೆಡಲಾಯಿತು. ಗಿಡ ನೆಡುವ ಕಾರ್ಯಕ್ಕೆ ಚಾಲನೆ ನೀಡಿದ ಮಾಜಿ ಶಾಸಕ ಎಂ.ಕೆ.ಸೋಮ ಶೇಖರ್, ಗಿಡ-ಮರ, ಪ್ರಾಣಿ-ಪಕ್ಷಿ ಸಂಕುಲ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಈ ನಿಟ್ಟಿನಲ್ಲಿ ಇಂದು ಗಿಡಗಳನ್ನು ನೆಡುವ ಕಾರ್ಯಕ್ರಮ ಏರ್ಪಡಿಸಿರುವುದು ಉತ್ತಮ ಕಾರ್ಯ. ಜೊತೆಗೆ ಎರಡೂ ಸಂಘಟನೆಗಳು ಚಾಮುಂಡಿಬೆಟ್ಟದಲ್ಲಿ ಗಿಡ-ಮರ ಹಾಗೂ ಪ್ರಾಣಿ-ಪಕ್ಷಿ ಸಂಕುಲಕ್ಕೆ ಬೇಸಿಗೆಯಲ್ಲಿ…
ಏ.26ರಿಂದ ಕಲಾಮಂದಿರದ ಕಿರುರಂಗಮಂದಿರದಲ್ಲಿ ರಂಗವಲ್ಲಿ ನಗೆಹಬ್ಬ
April 22, 2019ಮೈಸೂರು: ಹೆಸ ರಾಂತ ಹಾಸ್ಯ ನಟ ಚಾರ್ಲಿ ಚಾಪ್ಲಿನ್ ಜನ್ಮ ದಿನದ ಹಿನ್ನೆಲೆಯಲ್ಲಿ ಮೈಸೂರಿನ ರಂಗವಲ್ಲಿ ತಂಡ ಕಲಾಮಂದಿರದ ಕಿರು ರಂಗ ಮಂದಿರದಲ್ಲಿ ಏ.26ರಿಂದ 28 ರವರೆಗೆ `ರಂಗವಲ್ಲಿ ನಗೆಹಬ್ಬ-2019’ ಹಾಸ್ಯ ನಾಟಕ ಪ್ರದರ್ಶನ ಆಯೋಜಿಸಿದೆ. ಹಾಸ್ಯಭರಿತ ಕಥೆ ಹೊಂದಿರುವ ಮೂರು ನಾಟಕ ಪ್ರದರ್ಶಿಸುವ ಮೂಲಕ ರಂಗಾ ಸಕ್ತರನ್ನು ನಗೆಗಡಲಲ್ಲಿ ತೇಲಿಸಲು ಸಜ್ಜಾಗಿದೆ. ಕಳೆದ 13 ವರ್ಷಗಳಿಂದ ಮೈಸೂರು ರಂಗಭೂಮಿಯಲ್ಲಿ ನಿರಂತರ ರಂಗಚಟು ವಟಿಕೆಯಿಂದ ರಂಗಾಸಕ್ತರ ಗಮನ ಸೆಳೆ ದಿರುವ ನಮ್ಮ ರಂಗವಲ್ಲಿ ತಂಡ ಹೆಸ ರಾಂತ…
ಮೂವರು ಅರಣ್ಯ ಸಿಬ್ಬಂದಿ ಅಮಾನತು: ಎಸಿಎಫ್, ಆರ್ಎಫ್ಓಗೆ ನೋಟೀಸ್ ಜಾರಿ
April 22, 2019ಮೈಸೂರು: ನಾಗರ ಹೊಳೆ ರಾಷ್ಟ್ರೀಯ ಉದ್ಯಾನವನದ ಮೇಟಿಕುಪ್ಪೆ ವಲಯದಲ್ಲಿ ಮರಗಳ ಹನನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವ ರನ್ನು ಅಮಾನತು ಮಾಡಿ, ಎಸಿಎಫ್ ಮತ್ತು ಆರ್ಎಫ್ಓಗೆ ಕಾರಣ ಕೇಳಿ ನೋಟೀಸ್ ಜಾರಿಗೊಳಿಸಲಾಗಿದೆ. ಹೆಚ್.ಡಿ.ಕೋಟೆ ತಾಲೂಕಿನ ವ್ಯಾಪ್ತಿ ಯಲ್ಲಿ ನಾಗರಹೊಳೆ ರಾಷ್ಟ್ರೀಯ ಉದ್ಯಾನ ವನದ ಮೇಟಿಕುಪ್ಪೆ ವಲಯದ ಸೋರೆ ಕುಪ್ಪೆ ಬೀಟ್ನ ಕಲ್ಲಹಳ್ಳ-ಗುಡಿಹಳ್ಳದ ಬಳಿ ಲಕ್ಷಾಂತರ ರೂ. ಮೌಲ್ಯದ 8 ರಿಂದ 10 ಸಾಗುವಾನಿ ಮರಗಳ 3 ದಿನಗಳ ಹಿಂದೆ ಕಡಿಯಲಾಗಿದೆ. ಸ್ಥಳದಲ್ಲಿದ್ದ ಸುಮಾರು 8 ರಿಂದ 10 ಅಡಿ…
ಶ್ರೀಲಂಕಾದಲ್ಲಿ ಸರಣಿ ಸ್ಫೋಟ
April 22, 2019ಕೊಲಂಬೋ (ಶ್ರೀಲಂಕಾ): ಎಲ್ಟಿಟಿಇ ಪತನದ ನಂತರ ಹತ್ತು ವರ್ಷಗಳ ಕಾಲ ಶಾಂತಿ ಜೀವನ ನಡೆಸುತ್ತಿದ್ದ ಶ್ರೀಲಂಕಾ ಪ್ರಜೆಗಳು, ಇಂದು ಮತ್ತೊಂದು ಭಯೋತ್ಪಾದಕ ಸಂಘಟನೆಯ ದಾಳಿಯಿಂದಾಗಿ ಆಘಾತಗೊಂಡಿದ್ದಾರೆ. ಕ್ರೈಸ್ತರು ಈಸ್ಟರ್ ಹಬ್ಬದ ಸಂಭ್ರಮದಲ್ಲಿದ್ದಾಗಲೇ ಭಯೋತ್ಪಾ ದಕರು ಶ್ರೀಲಂಕಾದ ಮೂರು ಚರ್ಚ್ಗಳು ಮತ್ತು ಮೂರು ಪಂಚತಾರಾ ಹೋಟೆಲ್ಗಳು ಸೇರಿದಂತೆ 8 ಕಡೆ ಸರಣಿ ಬಾಂಬ್ ಸ್ಫೋಟ ಮಾಡುವ ಮೂಲಕ ಅಟ್ಟಹಾಸ ಮೆರೆದಿದ್ದಾರೆ. ಭಾನುವಾರ ಬೆಳಿಗ್ಗೆ 8.45ರ ಸುಮಾರಿನಲ್ಲಿ ಚರ್ಚ್ಗಳಲ್ಲಿ ಪ್ರಾರ್ಥನೆ ನಡೆಯುತ್ತಿದ್ದ ವೇಳೆಯೇ ಬಾಂಬ್ಗಳು ಸ್ಫೋಟವಾಗಿವೆ. ಈ ಸರಣಿ ಸ್ಫೋಟದಲ್ಲಿ…
ನಾನಿರಬೇಕು ಇಲ್ಲವೇ ಭಯೋತ್ಪಾದಕರು ಇರಬೇಕು: ಪ್ರಧಾನಿ ಮೋದಿ ಶಪಥ!
April 22, 2019ಅಹ್ಮದಾಬಾದ್:ಭಯೋತ್ಪಾದನೆ ನಿರ್ಮೂ ಲನೆ ಮಾಡಿಯೇ ತೀರುವುದಾಗಿ ಶಪಥ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಒಂದೋ ನಾನಿರಬೇಕು ಇಲ್ಲವೇ ಭಯೋತ್ಪಾದಕರು ಇರಬೇಕು ಎಂದು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ. ಲೋಕಸಭಾ ಚುನಾವಣೆಗೆ ಏ.23ರಂದು 3ನೇ ಹಂತದ ಮತದಾನ ನಡೆಯಲಿದ್ದು, ಗುಜರಾತ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಸಾರ್ವಜನಿಕ ಸಭೆಯನ್ನುದ್ದೇ ಶಿಸಿ ಮಾತನಾಡಿದರು. ನನ್ನ ಪ್ರಧಾನಿ ಹುದ್ದೆ ಉಳಿಯು ತ್ತದೆಯೋ ಇಲ್ಲವೋ. ಆದರೆ ಭಯೋತ್ಪಾದಕರಿರಬೇಕು ಅಥವಾ ನಾನು ಇರಬೇಕು ಎಂಬುದನ್ನು ನಾನು ನಿರ್ಧ ರಿಸಿಯಾಗಿದೆ ಎಂದು ಮೋದಿ ಹೇಳಿದರು. ವಿಂಗ್ ಕಮಾಂಡರ್ ಅಭಿನಂದನ್…