ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೂಲಿ  ಕಾರ್ಮಿಕನ ಹತ್ಯೆ
ಮೈಸೂರು

ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೂಲಿ ಕಾರ್ಮಿಕನ ಹತ್ಯೆ

March 25, 2019

ಮೈಸೂರು: ದುಷ್ಕರ್ಮಿಗಳ ಗುಂಪೊಂದು ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬನ ಮೇಲೆ ಮಾರ ಣಾಂತಿಕ ಹಲ್ಲೆ ನಡೆಸಿ, ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆಗೈದಿರುವ ಘಟನೆ ಕಳೆದ ರಾತ್ರಿ ಮೈಸೂರು ತಾಲೂಕಿನ ಗುಂಗ್ರಾಲ್ ಛತ್ರದ ಲಲಿತಾದ್ರಿ ಲೇಔಟ್‍ನಲ್ಲಿ ನಡೆದಿದೆ.

ಮೈಸೂರಿನ ಕುಂಬಾರಕೊಪ್ಪಲಿನ ನಿವಾಸಿ ರಂಗನಾಯಕ (50) ಎಂಬು ವರೇ ಹತ್ಯೆಗೀಡಾದವರಾಗಿ ದ್ದಾರೆ. ತೆಂಗಿನ ಮರದಲ್ಲಿ ಎಳನೀರು ಕೀಳುವ ಕೂಲಿ ಕೆಲಸ ಮಾಡಿಕೊಂಡಿರುವ ರಂಗ ನಾಯಕ, ಗುಂಗ್ರಾಲ್ ಛತ್ರಕ್ಕೆ ಶನಿವಾರ ಹೋಗಿದ್ದರು. ಈ ವೇಳೆ ರಾತ್ರಿ ಅಲ್ಲಿಯೇ ಬಾರ್‍ನಲ್ಲಿ ಮದ್ಯ ಸೇವಿಸಿ ಮಲಗಿದ್ದರು. ರಾತ್ರಿ ಆ ಸ್ಥಳಕ್ಕೆ ಬಂದ ಕಿಡಿಗೇಡಿಗಳ ಗುಂಪು ಬಾರ್ ಮುಂದೆ ಮಲಗಿದ್ದ ರಂಗ ನಾಯಕನ ಮೇಲೆ ಹಲ್ಲೆ ನಡೆಸಿದೆ. ಅಲ್ಲದೇ ತಲೆಯ ಮೇಲೆ ಕಲ್ಲನ್ನು ಎತ್ತಿ ಹಾಕಿ ಕೊಲೆಗೈಯ್ಯಲಾಗಿದೆ.

ಬಾರ್‍ನ ಭದ್ರತಾ ಸಿಬ್ಬಂದಿ ಇಂದು ಬೆಳಿಗ್ಗೆ ಕರ್ತವ್ಯಕ್ಕೆ ಹಾಜರಾಗಲು ಬಂದಾಗ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ. ಕೂಡಲೇ ಸ್ಥಳೀಯರಿಗೆ ಈ ವಿಷಯ ತಿಳಿಸಿದ ಭದ್ರತಾ ಸಿಬ್ಬಂದಿ ಕೆಂಪಯ್ಯ, ಇಲವಾಲ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀ ಸರು, ಶ್ವಾನದಳ ಮತ್ತು ಬೆರಳಚ್ಚು ಸಿಬ್ಬಂದಿ ಗಳನ್ನು ಕರೆಸಿ ಪರಿಶೀಲಿಸಿದರು. ಈ ವೇಳೆ ಶ್ವಾನ ದಳ ಅಲ್ಲಿಯೇ ಸುತ್ತಮುತ್ತ ಓಡಾಡಿ ವಾಪಸ್ಸಾಯಿತು. ಅಲ್ಲದೇ ಬಾರ್‍ನ ಬಳಿ ಆರೋಪಿಗಳು ಬಂದಿ ರುವ ಸುಳಿವನ್ನು ಶ್ವಾನ ನೀಡಿದ್ದು, ಇದು ತನಿಖೆಗೆ ಸಹಕಾರಿಯಾಗಿದೆ.

ಬಾರ್‍ನಲ್ಲಿ ಕಳ್ಳತನ ಮಾಡಲು ಪ್ರಯತ್ನಿಸಿ ಆನಂತರ ಅಲ್ಲಿಯೇ ಮಲ ಗಿದ್ದ ರಂಗನಾಯಕನ ಮೇಲೆ ಹಲ್ಲೆ ನಡೆಸಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ಈ ಕೃತ್ಯ ಬಾರ್‍ನ ಹೊರಗೆ ಅಳವ ಡಿಸಿರುವ ಸಿಸಿ ಕ್ಯಾಮರಾದಲ್ಲಿ ಸೆರೆ ಯಾಗಿದೆ. ಕಿಡಿಗೇಡಿಗಳು ತಮ್ಮ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರು ವುದರಿಂದ ಸಿಕ್ಕಿ ಬೀಳುವ ಆತಂಕದಲ್ಲಿ ಸಿಸಿ ಕ್ಯಾಮರಾವನ್ನು ಧ್ವಂಸ ಮಾಡಿ ಪರಾರಿ ಯಾಗಿದ್ದಾರೆ. ಆದರೆ ಹಾರ್ಡ್ ಡಿಸ್ಕ್ ನಲ್ಲಿ ಕಿಡಿಗೇಡಿಗಳ ಕೃತ್ಯ ದಾಖಲಾಗಿ ರುವುದರಿಂದ ಶೀಘ್ರವೇ ಆರೋಪಿ ಗಳನ್ನು ಬಂಧಿಸುವುದಾಗಿ ಪೊಲೀ ಸರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Translate »