ಗೋಲಿಬಾರ್‍ಗೆ ಪ್ರತೀಕಾರವಾಗಿ ಪೆÇಲೀಸರ ಮೇಲೆ ಹಲ್ಲೆ; ಮಂಗಳೂರಲ್ಲಿ 8 ಯುವಕರ ಸೆರೆ
ಮೈಸೂರು

ಗೋಲಿಬಾರ್‍ಗೆ ಪ್ರತೀಕಾರವಾಗಿ ಪೆÇಲೀಸರ ಮೇಲೆ ಹಲ್ಲೆ; ಮಂಗಳೂರಲ್ಲಿ 8 ಯುವಕರ ಸೆರೆ

January 20, 2021

ಮಂಗಳೂರು, ಜ.19- ಕರ್ತವ್ಯ ನಿರತ ಪೆÇಲೀಸ್ ಹೆಡ್ ಕಾನ್‍ಸ್ಟೆಬಲ್‍ಗೆ ಡಿಸೆಂಬರ್ 16ರಂದು ಮಧ್ಯಾಹ್ನ ತಲವಾರು ದಾಳಿ ನಡೆಸಿದ ಪ್ರಕರಣವನ್ನು ಪೆÇಲೀಸರು ಭೇದಿಸಿದ್ದಾರೆ. 2019ರ ಡಿ.19 ರಂದು ನಡೆದ ಮಂಗಳೂರು ಗೋಲಿಬಾರ್‍ಗೆ ಪ್ರತೀಕಾರವಾಗಿ ಈ ಕೃತ್ಯ ಎಸಗಿ ರುವ ಮಾಹಿತಿ ದೊರೆತಿದೆ. ಈ ಸಂಬಂಧ 8 ಮಂದಿಯನ್ನು ಬಂಧಿಸಲಾಗಿದೆ.

ಮಂಗಳೂರಿನ ಬಂದರು ಠಾಣಾ ಪೆÇಲೀಸ್ ಹೆಡ್ ಕಾನ್‍ಸ್ಟೆಬಲ್ ಗಣೇಶ್ ಕಾಮತ್ ಹಾಗೂ ಮಹಿಳಾ ಸಿಬ್ಬಂದಿ ನಗರದ ನ್ಯೂಚಿತ್ರ ಸರ್ಕಲ್‍ನಲ್ಲಿ ಕರ್ತವ್ಯದಲ್ಲಿ ದ್ದರು. ಈ ವೇಳೆ ಬೈಕ್‍ನಲ್ಲಿ ಬಂದ ಇಬ್ಬರಲ್ಲಿ ಒಬ್ಬ ಬೈಕ್‍ನಿಂದ ಇಳಿದು ಪೆÇಲೀಸರು ಕುಳಿತಲ್ಲಿಗೆ ಹೋಗಿ ಗಣೇಶ್ ಕಾಮತ್ ಮೇಲೆ ತಲವಾರಿನಿಂದ ದಾಳಿ ನಡೆಸಿ ಬೈಕ್ ಏರಿ ಪರಾರಿಯಾಗಿದ್ದರು. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಪೆÇಲೀಸ್ ಆಯುಕ್ತ ಶಶಿಕುಮಾರ್, ಗೊಲೀಬಾರ್‍ಗೆ ಪ್ರತೀಕಾರವಾಗಿ ಪೆÇಲೀಸರ ಮೇಲೆ ಕೊಲೆ ಯತ್ನ ನಡೆಸಲಾಗಿದೆ ಎಂದು ತಿಳಿದು ಬಂದಿದ್ದು, 16 ವರ್ಷದ ಬಾಲಕ ನೊಬ್ಬ ಪೆÇಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ತಿಳಿಸಿದರು. ಬಂಟ್ವಾಳ ನಿವಾಸಿ ಮಹಮ್ಮದ್ ನವಾಝ್ (30), ಕುದ್ರೋಳಿ ನಿವಾಸಿ ಅನೀಶ್ ಅಶ್ರಫ್ (22), ಕುದ್ರೋಳಿ ನಿವಾಸಿ ಅಬ್ದುಲ್ ಖಾದರ್ ಫಹಾದ್ (23), ಬಜ್ಪೆ ನಿವಾಸಿ ಶೇಖ್ ಮಹಮ್ಮದ್ ಹ್ಯಾರಿಸ್ ಯಾನಿ ಜಿಗ್ರಿ (31), ಕುದ್ರೋಳಿ ನಿವಾಸಿ ರಾಹಿಲ್ ಯಾನೆ ಚೋಟು ರಾಹಿಲ್ (18), ತಣ್ಣೀರು ಬಾವಿ ನಿವಾಸಿ ಮಹಮ್ಮದ್ ಖಾಯೀಸ್ (24) ಬಂಧಿತರು.

 

 

Translate »