ಬೇಗೂರು: ಹಿಂದುಳಿದ, ದಲಿತ ಹಾಗೂ ಮಹಿಳೆಯ ರಲ್ಲಿ ಸಮಾನತೆ ಸೋದರತೆ ಮತ್ತು ಸ್ವಾತಂತ್ರ್ಯ ಎಂಬ ತ್ರಿರತ್ನಗಳಿಗೆ ತನ್ನ ಜೀವನವನ್ನೆ ಮುಡಿಪಾಗಿಟ್ಟಿದ್ದ ಮಹಾ ಚೇತನ ಡಾ. ಬಿ. ಆರ್ ಅಂಬೇಡ್ಕರ್ ಎಂದು ವಕೀಲ ಎಂ.ಶಿವು ಅಭಿಪ್ರಾಯಪಟ್ಟರು. ಅವರು ಬೇಗೂರು ಸಮೀಪದ ಹಿರೀಕಾಟಿ ಗ್ರಾಮದಲ್ಲಿ ನಡೆದ 62 ನೇ ಪರಿನಿರ್ವಾಣ ದಿನದಲ್ಲಿ ಮಾತನಾಡಿ, ಡಾ. ಬಿ.ಆರ್.ಅಂಬೇಡ್ಕರ್ ಇಡೀ ವಿಶ್ವದ ಜ್ಞಾನದ ಸಂಕೇತವಾಗಿರುವ ಮಹಾ ಚೇತನ. ಇಂದು ಕೇವಲ ಭಾರತೀಯರಿಗೆ ಮಾತ್ರ ಸೀಮಿತವಾಗದೇ ಇಡೀ ವಿಶ್ವದಲ್ಲಿ ಅವರನ್ನು ಸ್ಮರಿಸಲಾಗುತ್ತಿದೆ. ಅವರು ವ್ಯಾಸಂಗ…
ಸರ್ಕಾರಿ ನೌಕರರ ಕ್ರೀಡಾಕೂಟ, ಸಾಂಸ್ಕøತಿಕ ಸ್ಪರ್ಧೆ ಆಯೋಜನೆಗೆ ಜಿಲ್ಲಾಧಿಕಾರಿ ಸೂಚನೆ
December 11, 2018ಚಾಮರಾಜನಗರ: ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಪ್ರಸಕ್ತ ಸಾಲಿನ ಕ್ರೀಡಾಕೂಟ ಹಾಗೂ ಸಾಂಸ್ಕøತಿಕ ಸ್ಪರ್ಧಾ ಕಾರ್ಯಕ್ರಮವನ್ನು ಈ ತಿಂಗಳ ಅಂತ್ಯದ ವೇಳೆಗೆ ಆಯೋಜಿಸಲು ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಸೂಚನೆ ನೀಡಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿ ಇಂದು ಜಿಲ್ಲಾಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕøತಿಕ ಸ್ಪರ್ಧೆಗಳ ಏರ್ಪಾಡು ಸಂಬಂಧ ಕರೆಯಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಜ್ಯ ಸರ್ಕಾರಿ ನೌಕರರ ಜಿಲ್ಲಾಮಟ್ಟದ ಕ್ರೀಡಾಕೂಟವನ್ನು ನಗರದ ಡಾ….
ಬಿಳಿಗಿರಿರಂಗನ ಬೆಟ್ಟದ ಹುಂಡಿಯಲ್ಲಿ 17.29 ಲಕ್ಷ ರೂ. ಸಂಗ್ರಹ
December 11, 2018ಚಾಮರಾಜನಗರ: ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದ ಶ್ರೀ ಬಿಳಿಗಿರಿರಂಗನಾಥಸ್ವಾಮಿ ದೇವಸ್ಥಾನದ ಗೋಲಕದಲ್ಲಿ ಸಂಗ್ರಹವಾಗಿದ್ದ ಹಣವನ್ನು ಇತ್ತೀಚೆಗೆ ಎಣಿಕೆ ಮಾಡ ಲಾಯಿತು. ಒಟ್ಟು 17,29,037 ರೂ. ಹಾಗೂ ಚಿನ್ನ ಮತ್ತು ಬೆಳ್ಳಿ ಪದಾರ್ಥ ಗಳು ಇದ್ದವು ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ. ಸಂಗ್ರಹವಾಗಿದ್ದ ಹಣವನ್ನು ದೇವಸ್ಥಾನಕ್ಕೆ ಸಂಬಂಧಿಸಿದ ಬ್ಯಾಂಕಿನ ಉಳಿತಾಯ ಖಾತೆಗೆ ಜಮಾ ಮಾಡಲಾಯಿತು. ಚಿನ್ನ ಮತ್ತು ಬೆಳ್ಳಿ ಪದಾರ್ಥಗಳು ಕಡಿಮೆ ಸಂಗ್ರಹವಾಗಿದ್ದ ಕಾರಣ ವೀಡಿಯೋ ಮಾಡಿ ಚೀಲದಲ್ಲಿ ಹಾಕಿ ಹುಂಡಿಯಲ್ಲಿ ಹಾಕಲಾಯಿತು. ಆರ್ಥಿಕ ವರ್ಷದ ಕೊನೆಯಲ್ಲಿ…
ಆಡಳಿತದಲ್ಲಿ ಶೇ. 100ರಷ್ಟು ಕನ್ನಡ ಅನುಷ್ಠಾನಗೊಳಿಸಿ
December 6, 2018ಚಾಮರಾಜನಗರ: ಆಡಳಿತ ದಲ್ಲಿ ಕನ್ನಡವನ್ನು ಶೇ. 100ರಷ್ಟು ಅನು ಷ್ಠಾನಗೊಳಿಸಲು ಎಲ್ಲಾ ಇಲಾಖೆ ಅಧಿಕಾರಿಗಳು ಮುಂದಾಗಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್.ಜಿ.ಸಿದ್ದರಾಮಯ್ಯ ಕಟ್ಟುನಿಟ್ಟಿನ ಸೂಚನೆ ನೀಡಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಕನ್ನಡ ಅನು ಷ್ಠಾನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕನ್ನಡ ಭಾಷೆಯನ್ನು ಎಲ್ಲಾ ಹಂತಗಳಲ್ಲಿ ಸಂಪೂರ್ಣವಾಗಿ ಅನುಷ್ಠಾನಗೊಳಿ ಸಲು 20 ಅಂಶಗಳ ಸುತ್ತೋಲೆಯನ್ನು ಕಡ್ಡಾ ಯವಾಗಿ ಜಾರಿಗೊಳಿಸುವಂತೆ ಸರ್ಕಾರ ಸೂಚಿಸಿದೆ. ಅದರ ಅನುಸಾರ…
ನಮ್ಮಲ್ಲಿ ನಾಲ್ವರಲ್ಲಿ ಒಬ್ಬರಿಗೆ ಟಿಕೆಟ್ ನೀಡಿ
December 6, 2018ಚಾಮರಾಜನಗರ: ಚಾಮ ರಾಜನಗರ ಲೋಕಸಭೆ (ಮೀಸಲು) ಕ್ಷೇತ್ರ ದಿಂದ ನಾನು ಸೇರಿದಂತೆ ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ, ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ರಮೇಶ್ ಹಾಗೂ ಜಿಪಂ ಮಾಜಿ ಅಧ್ಯಕ್ಷ ಎಸ್.ಮಹದೇವಯ್ಯ ನಾಲ್ವರು ಪ್ರಬಲ ಆಕಾಂಕ್ಷಿಗಳಾಗಿದ್ದು, ವರಿಷ್ಠರು ನಮ್ಮ ನಾಲ್ವರಲ್ಲಿ ಯಾರಿಗೆ ಟಿಕೆಟ್ ನೀಡಿದರೂ, ನಾವೆಲ್ಲಾ ಒಗ್ಗೂಡಿ ದುಡಿದು ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇವೆ ಎಂದು ಮಾಜಿ ಸಚಿವ ಹಾಗೂ ಮೈಸೂರು ಜಿಲ್ಲಾ ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಕೋಟೆ ಎಂ.ಶಿವಣ್ಣ ಹೇಳಿದರು. ನಗರದ ಜಿಲ್ಲಾ ಕಾರ್ಯನಿರತ ಪತ್ರಕ ರ್ತರ…
ವಿಕಲಚೇತನರ ಯೋಜನೆಗಳ ನೆರವಿಗೆ ಪುನರ್ವಸತಿ ಕಾರ್ಯಕರ್ತರ ನೇಮಕ
December 4, 2018ಚಾಮರಾಜನಗರ: ವಿವಿಧ ಇಲಾಖೆಗಳ ಸೌಲಭ್ಯಗಳನ್ನು ವಿಕಲಚೇತನ ರಿಗೆ ಅವರು ಇರುವ ಸ್ಥಳದಲ್ಲಿಯೇ ತಲುಪಿಸಲು ನೆರವಾಗುವ ನಗರ ಪಟ್ಟಣ ಪುನರ್ವಸತಿ ಕಾರ್ಯಕರ್ತರನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆಗೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ತಿಳಿಸಿದರು. ನಗರದ ಜೆ.ಎಚ್. ಪಟೇಲ್ ಸಭಾಂ ಗಣದಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಿಕಲಚೇತರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿಕಲಚೇತನರಿಗೆ ಸರ್ಕಾರಿ ಯೋಜನೆ ಗಳ…
ಕಾಗಲವಾಡಿಯಲ್ಲಿ ವಿಜೃಂಭಣೆಯ ಹಾಲರವೆ ಉತ್ಸವ
December 4, 2018ಚಾಮರಾಜನಗರ: ತಾಲೂಕಿನ ಕಾಗಲವಾಡಿ ಗ್ರಾಮದಲ್ಲಿ ಶ್ರೀಮಲೈ ಮಹ ದೇಶ್ವರಸ್ವಾಮಿಯ 10ನೇ ವಾರ್ಷಿ ಕೋತ್ಸವ, 101 ಹಾಲರವೆ ಪೂಜಾ ಮಹೋತ್ಸವ ಹಾಗೂ ಕಡೆಕಾರ್ತಿಕ ಸೋಮವಾರದ ವಿಶೇಷಪೂಜಾ ಮಹೋ ತ್ಸವ ವಿಜೃಂಭಣೆಯಿಂದ ನಡೆಯಿತು. ಗ್ರಾಮದ ಸರ್ಕಾರಿ ಶಾಲಾ ಆವರಣ ದಲ್ಲಿ ಶ್ರೀಮಹದೇಶ್ವರಸ್ವಾಮಿಗೆ ಪೂಜೆ ಸಲ್ಲಿಸಿ, ಅಲ್ಲಿಂದ ಸತ್ತಿಗೆ, ಸೂರಿಪಾನಿ, ಪೂಜಾ ಕುಣಿತ, ಗೊರವರಕುಣಿತ, ಡೊಳ್ಳುಕುಣಿತ, ಕಂಸಾಳೆಕುಣಿತ ತಂಡ, ವಾದ್ಯ ಗೋಷ್ಠಿಯೊಂದಿಗೆ ಹಾಲರವೆ ಉತ್ಸವ ಪ್ರಾರಂಭವಾಗಿ ಶ್ರೀಮಹದೇಶ್ವರರ ದೇವಾ ಲಯಕ್ಕೆ ತೆರಳಿ ಮುಕ್ತಾಯಗೊಂಡಿತು. ಮೆರವÀಣಿಗೆಯಲ್ಲಿ ಭಾಗವಹಿಸಿದ ಕಲಾ ತಂಡಗಳು ಉತ್ತಮ ಪ್ರದರ್ಶನ…
ನ್ಯಾಯಾಂಗ ವ್ಯವಸ್ಥೆಯಲ್ಲಿ ವಕೀಲ ವೃತ್ತಿ ಶ್ರೇಷ್ಠವಾದದ್ದು ನ್ಯಾಯಾಧೀಶ ಡಿ.ವಿನಯ್ ಅಭಿಮತ
December 4, 2018ಚಾಮರಾಜನಗರ: ನ್ಯಾಯಾಂಗ ವ್ಯವಸ್ಥೆಯಲ್ಲಿ ವಕೀಲ ವೃತ್ತಿ ಶ್ರೇಷ್ಠವಾ ದದ್ದು, ಎಲ್ಲಾ ಹುದ್ದೆಗಳಿಗಿಂತ ವಕೀಲ ವೃತ್ತಿ ಉತ್ತಮವಾದುದಾಗಿದೆ ಎಂದು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾ ಧೀಶ ಡಿ.ವಿನಯ್ ಹೇಳಿದರು. ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಜಿಲ್ಲಾ ವಕೀಲರ ಸಂಪs ಏರ್ಪಡಿಸಿದ್ದ ವಕೀಲರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮÁತನಾಡಿದ ಅವರು ಭಾರತದ ಪ್ರಥಮ ರಾಷ್ಟ್ರದs್ಯಕ್ಷರಾಗಿದ್ದ ಡಾ. ರಾಜೇಂದ್ರ ಪ್ರಸಾದ್ರವರ ಹುಟ್ಟುಹಬ್ಬವನ್ನು ವಕೀಲರ ದಿನಾಚರಣೆಯಾಗಿ ಆಚರಿಸು ತ್ತಿದ್ಧು ವಕೀಲ ವೃತ್ತಿಗೆ ತನ್ನದೇ ಆದ ಘನತೆ ಇದೆ. ಇದನ್ನು ಉಳಿಸಿಕೊಳ್ಳುವ ಮತ್ತು…
ಬೆಂಕಿ ಹಚ್ಚಿ ಪತ್ನಿ ಕೊಲೆ ಮಾಡಿದ ಪತಿಗೆ ಜೀವಾವಧಿ ಶಿಕ್ಷೆ
December 4, 2018ಚಾಮರಾಜನಗರ: ಬೆಂಕಿ ಹಚ್ಚಿ ಪತ್ನಿಯನ್ನು ಹತ್ಯೆಗೈದ ಪತಿಗೆ ಜೀವಾವಧಿ ಶಿಕ್ಷೆ ವಿಧಿಸಿ, ಚಾಮ ರಾಜನಗರ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಡಿ. ವಿನಯ್ ಅವರು ತೀರ್ಪು ನೀಡಿದ್ದಾರೆ. ಚಾಮರಾಜನಗರ ತಾಲೂಕು ಕೆರೆಹಳ್ಳಿ ಗ್ರಾಮದ ಮಂಜು ಶಿಕ್ಷೆಗೊಳಗಾದವನಾಗಿದ್ದು, ಈತನಿಗೆ ಹಾಸನ ಜಿಲ್ಲೆ ದೇವಿನಗರದ ನಂಜೇಗೌಡ ಎಂಬುವರ ಪುತ್ರಿಯನ್ನು 2007ರ ಏ.29 ರಂದು ಮದುವೆ ಮಾಡಿಕೊಡಲಾಗಿತ್ತು. ಮದುವೆ ನಂತರ ತವರಿನಿಂದ ಹಣ ತರುವಂತೆ ಮಂಜು ತನ್ನ ಪತ್ನಿಗೆ ಕಿರುಕುಳ ನೀಡುತ್ತಿದ್ದ. 2014ರ ಸೆಪ್ಟೆಂಬರ್ನಲ್ಲಿ ಪತ್ನಿ ಮೇಲೆ ಸೀಮೆಎಣ್ಣೆ ಸುರಿದು…
ಸರ್ಕಾರಿ ಶಾಲೆಯ ಹೆಚ್.ಎಂ. ಕೊಠಡಿಗೆ ಬೆಂಕಿ ಹಚ್ಚಲು ಯತ್ನ
December 4, 2018ಚಾಮರಾಜನಗರ: ನಗರದ ಸಂತೇಮರ ಹಳ್ಳಿ ರಸ್ತೆಯ ಉಪ್ಪಾರ ಬೀದಿಯಲ್ಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥ ಮಿಕ ಶಾಲೆಯ (ಅಂಚೆ ಕಚೇರಿ ಪಕ್ಕ) ಮುಖ್ಯೋಪಾಧ್ಯಾಯರ ಕೊಠಡಿಗೆ ಕಿಡಿಗೇಡಿಗಳು ಬೆಂಕಿ ಹಚ್ಚುವ ಯತ್ನ ನಡೆಸಿದ್ದಾರೆ. ಶಾಲೆಯ ಮುಖ್ಯೋಪಾಧ್ಯಾಯರ ಕೊಠಡಿಯ ಕಿಟಕಿಯ ಮೂಲಕ ಬೆಂಕಿಯ ಕಿಡಿಯನ್ನು ಕೊಠಡಿಯ ಒಂದು ಮೂಲೆಗೆ ಎಸೆಯಲಾಗಿದೆ. ಸ್ಥಳದಲ್ಲಿ ಯಾವುದೇ ವಸ್ತುಗಳು ಮತ್ತು ದಾಖಲಾತಿಗಳು ಇರದ ಕಾರಣ ಯಾವುದೇ ಅನಾಹುತ ವಾಗಲೀ ಅಥವಾ ನಷ್ಟ ಸಂಭವಿಸಿಲ್ಲ. ಕೊಠಡಿಯ ಒಳಕ್ಕೆ ಮದ್ಯದ ಬಾಟಲುಗಳನ್ನು ಎಸೆಯಲಾಗಿದೆ. ಈ ಬಗ್ಗೆ ಶಾಲೆಯ…










