ಚಾಮರಾಜನಗರ: ಜಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರು ತಮ್ಮ ಸಂಪುಟ ಸಹೋದ್ಯೋಗಿ ಸಚಿವ ಎನ್.ಮಹೇಶ್ ವಿರುದ್ಧ ಮತ್ತೆ ಹರಿಹಾಯ್ದಿದ್ದಾರೆ. ಚಾಮರಾಜನಗರ ಮತ್ತು ಯಳಂದೂರು ಕೆರೆಗಳಿಗೆ ನೀರು ತುಂಬಿಸುವ ಕಾಮ ಗಾರಿ ಪರಿಶೀಲನೆ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಎನ್. ಮಹೇಶ್ ಸರ್ಕಾರಕ್ಕೆ ನೀಡಿರುವ ಬೆಂಬಲ ವಾಪಸ್ ಪಡೆದರೆ ಸರ್ಕಾರವೇನೂ ಉರುಳುವುದಿಲ್ಲ. ಆದರೆ, ಕಾಂಗ್ರೆಸ್ ಕೈಕೊಟ್ಟರೆ ಮಹೇಶ್ ಸಚಿವ ಸ್ಥಾನ ಕಳೆದು ಕೊಳ್ಳಬೇಕಾಗುತ್ತದೆ ಎಂದಿದ್ದಾರೆ. ಕೋಮುವಾದಿ ಪಕ್ಷವನ್ನು ಹೊರಗಿಡ ಬೇಕೆಂಬ ಉದ್ದೇಶದಿಂದ ಮೂರು ಪಕ್ಷಗಳು ಸೇರಿ ಸರ್ಕಾರ…
ಇಂದು ವಿದ್ಯುತ್ ವ್ಯತ್ಯಯ
September 28, 2018ಚಾಮರಾಜನಗರ: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮವು ತಾಲೂಕಿನ ಪಣ್ಯದಹುಂಡಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಸೆಪ್ಟೆಂಬರ್ 28ರಂದು ತ್ರೈಮಾಸಿಕ ಕಾರ್ಯನಿರ್ವಹಣೆ ಕಾರ್ಯವನ್ನು ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ಅಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಪಣ್ಯದಹುಂಡಿ, ದಾಸನೂರು, ಇಂಡಸ್ಟ್ರಿಯಲ್ ಏರಿಯಾ, ಕೆಲ್ಲಂಬಳ್ಳಿ, ಬೆಂಡರವಾಡಿ, ಮಹದೇವನಗರ, ಬದನಗುಪ್ಪೆ, ತೊರವಳ್ಳಿ ಎನ್ಜೆವೈ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಕಾರ್ಯನಿವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದರ್ಬಾರ್ ಗಣಪತಿ ವಿಸರ್ಜನೆ
September 28, 2018ಚಾಮರಾಜನಗರ: ನಗರದ ರಥದ ಬೀದಿಯಲ್ಲಿ ಪ್ರತಿಷ್ಠಾಪಿಸಿದ್ದ ಶ್ರೀ ವಿದ್ಯಾಗಣಪತಿಯನ್ನು ಗುರುವಾರ ಬೆಳಗಿನ ಜಾವ ಇಲ್ಲಿನ ದೊಡ್ಡ ಅರಸನ ಕೊಳ ದಲ್ಲಿ ವಿಸರ್ಜಿಸಲಾಯಿತು. ಗುರುವಾರ ಬೆಳಿಗ್ಗೆ ಗುರುನಂಜಶೆಟ್ಟರ ವೃತ್ತದ ಮುಂಭಾಗ ದಿಂದ ಆರಂಭವಾಗಿದ್ದ ಮೆರವಣಿಗೆ ನಗರದ ನಾನಾ ಬೀದಿಗಳಲ್ಲಿ ಸಾಗಿತ್ತು. ಅಂತಿಮವಾಗಿ ಗುರುವಾರ ಬೆಳಗಿನ ಜಾವ ಸುಮಾರು 3 ಗಂಟೆ ವೇಳೆಯಲ್ಲಿ ಕ್ರೇನ್ ಮೂಲಕ ತುಂತುರ ಮಳೆಯ ನಡುವೆ ದರ್ಬಾರ್ ಗಣಪತಿಯನ್ನು ಕೊಳದಲ್ಲಿ ವಿಸರ್ಜಿಸಲಾಯಿತು. ಈ ವೇಳೆ ಬಾಣ ಬಿರುಸುಗಳ ಚಿತ್ತಾರ ಗಮನ ಸೆಳೆಯಿತು. ಪಟಾಕಿ ಸಿಡಿಸಲಾಯಿತು. ನೂರಾರು…
ಚಾಮರಾಜನಗರದಲ್ಲಿ ದರ್ಬಾರ್ ಗಣಪತಿಯ ಆಕರ್ಷಕ ಮೆರವಣಿಗೆ
September 27, 2018ಚಾಮರಾಜನಗರ: ನಗರದ ರಥದ ಬೀದಿಯಲ್ಲಿ ಶ್ರೀ ವಿದ್ಯಾ ಗಣಪತಿ ಮಂಡಳಿ ಪ್ರತಿಷ್ಠಾಪಿಸಿದ್ದ ಶ್ರೀ ವಿದ್ಯಾಗಣಪತಿಯ ವಿಸರ್ಜನಾ ಮೆರವಣಗೆಯು ನಗರದಲ್ಲಿ ಬುಧವಾರ ನಾನಾ ಕಲಾ ತಂಡಗಳ ಆಕರ್ಷಕ ಮೆರವಣಿಗೆಯೊಂದಿಗೆ ಅದ್ಧೂರಿಯಾಗಿ ಜರುಗಿತು. ನಗರದ ರಥದ ಬೀದಿಯಲ್ಲಿರುವ ಗುರುನಂಜಶೆಟ್ಟರ ವೃತ್ತದ ಮುಂಭಾಗ ಗಣೇಶ ಹಬ್ಬದ ದಿನದಂದು ಸಿಂಹಾಸನದಲ್ಲಿ ವಿರಾಜಮಾನವಾಗಿ ಕುಳಿತಿದ್ದ ದರ್ಬಾರ್ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಅಂದಿನಿಂದ ಪೂಜಾ ಕಾರ್ಯಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದ್ದವು. ಚಾಲನೆ: ನಿಗದಿಯಂತೆ ಇಂದು ಬೆಳಿಗ್ಗೆ 10 ಗಂಟೆ ಸಮಯದಲ್ಲಿ ಮೆರವಣಿಗೆ ಆರಂಭವಾಯಿತು. ಖಡಕ್ಪುರ ಮೊಹಲ್ಲಾ,…
ಕೊಳ್ಳೇಗಾಲ ಟಿಎಪಿಸಿಎಂಎಸ್ಗೆ ಬೀಗ
September 27, 2018ಕೊಳ್ಳೇಗಾಲ: ಅಂತೂ ಕೊಳ್ಳೇಗಾಲದ ಟಿಎಪಿಸಿಎಂಎಸ್ನಿಂದ ಬಡವರಿಗೆ ವಿತರಿಸಬೇಕಾದ ಅನ್ನಭಾಗ್ಯದ ಅಕ್ಕಿ ವಿತರಣೆಯಲ್ಲಿ ವ್ಯಾಪಕ ಗೋಲ್ ಮಾಲ್ ನಡೆದ ಹಿನ್ನೆಲೆ ಮಂಗಳವಾರ ರಾತ್ರಿ ಆಹಾರ ಇಲಾಖೆಯ ಅಧಿಕಾರಿಗಳು ಜಿಲ್ಲಾಧಿಕಾರಿ ಕಾವೇರಿ ಅವರ ನಿರ್ದೇಶನದ ಮೇರೆಗೆ ಬೀಗ ಹಾಕಿದ್ದಾರೆ. 2.265 ಕ್ವಿಂಟಾಲ್ ಅಕ್ಕಿ ಹಾಗೂ 236 ಕ್ವಿಂಟಾಲ್ ಬೆಳೆ ವಿತರಿಸದೆ ಗೋಲ್ ಮಾಲ್ ಎಸಗಿರುವುದು ಆಹಾರ ಇಲಾಖೆಯ ಉಪ ನಿರ್ದೇಶಕ ರಾಚಪ್ಪ ಭೇಟಿ ವೇಳೆ ಪತ್ತೆಯಾಗಿದೆ. ಇದೇ ವೇಳೆ 535 ಕ್ವಿಂಟಾಲ್ ಸಕ್ಕರೆ ಸಹ ನಾಪತ್ತೆಯಾಗಿದೆ. ಕಳೆದ 2016 ರಲ್ಲಿ…
ಅಂಬಳೆಯಲ್ಲಿ ವಿಜೃಂಭಣೆಯ ಚಾಮುಂಡೇಶ್ವರಿ ಹಬ್ಬ
September 27, 2018ಯಳಂದೂರು: ತಾಲೂಕಿನ ಅಂಬಳೆ ಗ್ರಾಮದಲ್ಲಿ ಶ್ರೀ ಚಾಮುಂಡೇಶ್ವರಿ ಅಮ್ಮನವರ ರಕ್ತಬೀಜಾಸುರ ಸಂಹಾರ ದೊಡ್ಡಹಬ್ಬ (ಬಾಳೆ ಕತ್ತರಿಸುವ ಹಬ್ಬ) ವಿಜೃಂಭಣೆಯಿಂದ ಬುಧವಾರ ಜರುಗಿತು. ಬೆಳಿಗ್ಗೆಯಿಂದಲೇ ಗ್ರಾಮದ ಎಲ್ಲಾ ಕೋಮಿನ ಜನರು ವಾದ್ಯ ಮೇಳ, ನಗರಿ ಜತೆಯಲ್ಲಿ ಛತ್ರಿ ಚಾಮರಗಳೊಂದಿಗೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ಉತ್ಸವಮೂರ್ತಿಯನ್ನು ಗ್ರಾಮದ ಹೊರವಲಯದಲ್ಲಿರುವ ಸುವರ್ಣಾವತಿ ನದಿಯಲ್ಲಿ ವಿಶೇಷ ಪೂಜೆ ಮಾಡಿದರು. ನಂತರ ಭಕ್ತರು ಹೊಸ ಕೇಲು ಜತೆಯಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿದರು. ಬಳಿಕ ಚಾಮುಂಡೇಶ್ವರಿ ಅಮ್ಮನವರ ಉತ್ಸವ ಮೂರ್ತಿ ಹೊತ್ತ ಭಕ್ತರು…
ಕ್ರಿಮಿನಲ್ ಮೊಕದ್ದಮೆ ದಾಖಲು
September 27, 2018ಕೊಳ್ಳೇಗಾಲ: ಮಂಗಳವಾರ ಕೊಳ್ಳೇಗಾಲ ಟಿಎಪಿಸಿಎಂಎಸ್ ಗೋದಾಮಿಗೆ ಭೇೀಟಿ ನೀಡಿದ ವೇಳೆ 2261.58 ಕ್ವಿಂಟಾಲ್ ಅಕ್ಕಿ. 234.57ಕ್ವಿಂಟಾಲ್ ಬೇಳೆ, 530 ಕ್ವಿಂಟಾಲ್ ಸಕ್ಕರೆ, 15.813 ಲೀ. ತಾಳೆ ಎಣ್ಣೆ ವ್ಯತ್ಯಾಸವಾಗಿದ್ದು, ಟಿಎಪಿಸಿಎಂಎಸ್ ಪ್ರಭಾರ ವ್ಯವಸ್ಥಾಪಕ ಸಿದ್ದರಾಜು ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ ಎಂದು ಆಹಾರ ಇಲಾಖೆಯ ಉಪನಿರ್ದೇಶಕ ರಾಚಪ್ಪ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತನಿಖೆ ವೇಳೆ ಐನೂರು ಮೂವ ತ್ತೈದು ಕ್ವಿಂಟಾಲ್ ಸಕ್ಕರೆ ಹಾಳಾಗಿರುವ ಕುರಿತು ಮಾಹಿತಿ ಬಂದಿದೆ. ಈ ಕುರಿತು ಅಲ್ಲಿನ ಸಿಬ್ಬಂದಿ ಸಕ್ಕರೆ ಹಳೆಯದಾಗಿದ್ದು…
ಇಂದು ಚಾಮರಾಜನಗರದಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆ
September 26, 2018ಚಾಮರಾಜನಗರ: ನಗರದ ರಥದ ಬೀದಿಯಲ್ಲಿ ಶ್ರೀವಿದ್ಯಾ ಗಣಪತಿ ಮಂಡಳಿ ಪ್ರತಿಷ್ಠಾಪಿಸಿರುವ ಗಣಪತಿಯ ವಿಸರ್ಜನಾ ಮಹೋತ್ಸವ ನಾಳೆ (ಸೆ.26) ನಡೆಯಲಿದೆ. ಮುಂಜಾ ಗ್ರತಾ ಕ್ರಮವಾಗಿ ನಗರದ ಎಲ್ಲೆಡೆ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಶ್ರೀ ವಿದ್ಯಾಗಣಪತಿ ಮಂಡಳಿಯು ಕಳೆದ 55 ವರ್ಷಗಳಿಂದಲೂ ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಇಲ್ಲಿನ ರಥದ ಬೀದಿಯಲ್ಲಿ ಶ್ರೀ ವಿದ್ಯಾಗಣಪತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಅದರಂತೆ ಈ ವರ್ಷವೂ ಸಹ 56ನೇ ವರ್ಷದ ಗಣ ಪತಿಯನ್ನು ಹಬ್ಬದ ದಿನದಂದು (ಸೆ.13) ಪ್ರತಿಷ್ಠಾಪಿಸಲಾಗಿತ್ತು. 18ರಿಂದ 25ನೇ ದಿನಾಂಕದವರೆಗೂ ಪ್ರತಿದಿನ ದಿ.ಅಟಲ್…
ಗುಂಡ್ಲುಪೇಟೆ ಜೆಎಸ್ಎಸ್ ಕಾಲೇಜಿನಲ್ಲಿ ಕ್ರೀಡಾ ವೇದಿಕೆ ಉದ್ಘಾಟನೆ
September 26, 2018ಗುಂಡ್ಲುಪೇಟೆ: ವಿದ್ಯಾರ್ಥಿನಿಯರು ಪಠ್ಯದೊಂದಿಗೆ ಸಾಂಸ್ಕೃ ತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಲ್ಲಿಯೂ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬೇಕು ಎಂದು ಶಾಸಕ ಸಿ.ಎಸ್. ನಿರಂಜನಕುಮಾರ್ ಹೇಳಿದರು. ಪಟ್ಟಣದ ಜೆಎಸ್ಎಸ್ ಪದವಿ ಕಾಲೇ ಜಿನಲ್ಲಿ ಸಾಂಸ್ಕೃತಿಕ ಹಾಗೂ ಕ್ರೀಡಾ ವೇದಿಕೆ ಯನ್ನು ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶಗಳ ಹೆಣ್ಣುಮಕ್ಕಳ ಅನುಕೂಲಕ್ಕೆ ಜೆಎಸ್ಎಸ್ ಸಂಸ್ಥೆಯು ಮಹಿಳಾ ಕಾಲೇಜು ತೆರೆದು ಉತ್ತಮ ಶಿಕ್ಷಣ ಹಾಗೂ ಸಂಸ್ಕೃತಿಯನ್ನು ನೀಡು ತ್ತಿದೆ. ಇದರಿಂದ ಸಾವಿರಾರು ವಿದ್ಯಾರ್ಥಿ ನಿಯರು ಉತ್ತಮ ಶಿಕ್ಷಣ ಪಡೆದು ಸ್ವಾವ ಲಂಭಿಗಳಾಗಿದ್ದಾರೆ. ವಿದ್ಯಾರ್ಥಿಗಳು…
ಪುಟ್ಟರಂಗಶೆಟ್ಟಿ, ಮಹೇಶ್ ವಾಕ್ಸಮರ
September 26, 2018ಅಪಾಯಕಾರಿ ಕಾಂಗ್ರೆಸ್ ಗಿಡ ಕಡಿಯುವ ಕೆಲಸ ಮಾಡಿದ್ದೇವೆ: ಎನ್.ಮಹೇಶ್ ಅವನ್ ಯಾರ್ರೀ, ಕಾಂಗ್ರೆಸ್ ಕಿತ್ತು ಹಾಕುವುದಕ್ಕೆ: ಪುಟ್ಟರಂಗಶೆಟ್ಟಿ ಚಾಮರಾಜನಗರ: ಜಿಲ್ಲೆಯ ಸಚಿವ ರಾದ ಸಿ.ಪುಟ್ಟರಂಗಶೆಟ್ಟಿ ಮತ್ತು ಎನ್.ಮಹೇಶ್ ಅವರ ವಾಕ್ಸಮರ ಮುಂದುವರೆದಿದೆ. ‘ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಸಚಿವ ಎನ್.ಮಹೇಶ್ ಅವರು ಬಹಳ ಅಪಾಯಕಾರಿಯಾದ ಕಾಂಗ್ರೆಸ್ ಗಿಡವನ್ನು ಕಡಿಯುವಂತಹ ಕೆಲಸ ಮಾಡುತ್ತಿದ್ದೇವೆ ಎಂಬ ಹೇಳಿಕೆಗೆ ಇಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟ ರಂಗಶೆಟ್ಟಿ ಅವರು ಏಕವಚನದಲ್ಲಿಯೇ ಕಿಡಿಕಾರಿದ್ದಾರೆ. ನಡೆದಿದ್ದು ಏನು?:…