ಹಾಸನ

ಮತದಾರರ ಜಾಗೃತಿ ಚಟುವಟಿಕೆ ಚುರುಕುಗೊಳಿಸಲು ಸಿಇಓ ಸೂಚನೆ
ಹಾಸನ

ಮತದಾರರ ಜಾಗೃತಿ ಚಟುವಟಿಕೆ ಚುರುಕುಗೊಳಿಸಲು ಸಿಇಓ ಸೂಚನೆ

February 20, 2019

ಹಾಸನ: ಲೋಕಸಭಾ ಚುನಾ ವಣೆ ಸಮೀಪಿಸುತ್ತಿದ್ದು, ಮತದಾರರ ಜಾಗೃತಿ ಚಟುವಟಿಕೆಗಳನ್ನು ಇನ್ನಷ್ಟು ಚುರುಕು ಗೊಳಿಸಬೇಕು ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪುಟ್ಟಸ್ವಾಮಿ ಸೂಚನೆ ನೀಡಿದರು. ನಗರದ ಜಿಲ್ಲಾ ಪಂಚಾಯಿತಿ ಹೇಮಾ ವತಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಸ್ವೀಪ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 18 ವರ್ಷ ತುಂಬಿದ ಯುವ ಮತದಾರರು ಹಾಗೂ ಮತದಾರರ ಪಟ್ಟಿಯಿಂದ ಹೊರಗುಳಿದಿ ರುವವರನ್ನು ಸೇರ್ಪಡೆಗೊಳಿಸಲು ಕ್ರಮ ವಹಿಸಬೇಕು ಎಂದು ತಿಳಿಸಿದರು. ಜಿಲ್ಲೆಯಲ್ಲಿರುವ…

ಬೇಲೂರು: ಸಂತ ಸೇವಾಲಾಲ್, ಶಿವಾಜಿ, ಸರ್ವಜ್ಞ ಜಯಂತಿ ಆಚರಣೆ
ಹಾಸನ

ಬೇಲೂರು: ಸಂತ ಸೇವಾಲಾಲ್, ಶಿವಾಜಿ, ಸರ್ವಜ್ಞ ಜಯಂತಿ ಆಚರಣೆ

February 20, 2019

ಬೇಲೂರು: ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಮಂಗಳ ವಾರ ತಾಲೂಕು ಆಡಳಿತದಿಂದ ಸಂತ ಸೇವಾಲಾಲ್, ಛತ್ರಪತಿ ಶಿವಾಜಿ ಹಾಗೂ ಸಂತಕವಿ ಸರ್ವಜ್ಞ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಎಸ್.ಲಿಂಗೇಶ್ ಮಾತನಾಡಿ, ಸಮಾಜ ದಲ್ಲಿನ ಅಂಕು-ಡೊಂಕುಗಳನ್ನು ತಿದ್ದಲು ಮಹನೀಯರ ಕೊಡುಗೆ ಸ್ಮರಣೀಯ ವಾಗಿದ್ದು, ದೇಶದ ಅಭಿವೃದ್ಧಿಯ ದೃಷ್ಟಿ ಯಿಂದ ಪ್ರತಿಯೊಬ್ಬರು ಮಹನೀಯರ ತತ್ವಾದರ್ಶವನ್ನು ಪಾಲಿಸಬೇಕು ಎಂದು ಸಲಹೆ ನೀಡಿದರು. ಶಿವಾಜಿ ಕೇವಲ ಐತಿಹಾಸಿಕವಾಗಿ ಮಹಾ ರಾಜ ಮಾತ್ರವಲ್ಲ. ಇಂದಿಗೂ ಸ್ಫೂರ್ತಿಯಾ ಗಿದ್ದಾರೆ. ಭಾರತೀಯ ಕಲ್ಪನೆಗೆ…

ಗುಡಿಯಲ್ಲಿರುವ ದೇವರಿಗಿಂತ ಗಡಿಯಲ್ಲಿರುವ ಯೋಧ ಶ್ರೇಷ್ಠ
ಹಾಸನ

ಗುಡಿಯಲ್ಲಿರುವ ದೇವರಿಗಿಂತ ಗಡಿಯಲ್ಲಿರುವ ಯೋಧ ಶ್ರೇಷ್ಠ

February 20, 2019

ರಾಮನಾಥಪುರ: ಗುಡಿಯಲ್ಲಿರುವ ದೇವರಿಗಿಂತ ಗಡಿಯಲ್ಲಿರುವ ಯೋಧ ಶ್ರೇಷ್ಠನಾಗಿದ್ದು, ಆ ದೇವರ ರಕ್ಷಣಾ ಕಾರ್ಯದಿಂದ ನಾವಿಂದು ನೆಮ್ಮದಿಯಾಗಿ ನಿದ್ರಿಸುವಂ ತಾಗಿದೆ ಎಂದು ಬಸವಾಪಟ್ಟಣ ತೋಂಟ ದಾರ್ಯ ಮಠದ ಸ್ವತಂತ್ರ ಬಸವಲಿಂಗ ಶಿವಯೋಗಿ ಸ್ವಾಮೀಜಿ ಗಡಿ ಕಾಯುವ ಯೋಧರಿಗೆ ಕೃತಜ್ಞತೆ ಸಲ್ಲಿಸಿದರು. ರಾಮನಾಥಪುರ ಹೋಬಳಿ ಲಕ್ಕೂರು ಗ್ರಾಮದಲ್ಲಿ ಸುಮಾರು 60ಲಕ್ಷ ರೂ ವೆಚ್ಚದಡಿ ನೂತನವಾಗಿ ನಿರ್ಮಿಸಿರುವ ಪ್ರಸಿದ್ಧ ಶ್ರೀಸಂಗಮೇಶ್ವರಸ್ವಾಮಿ ದೇವ ಸ್ಥಾನದ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಯೋಧರ ಮೇಲಿನ ದಾಳಿಯನ್ನು ಖಂಡಿ ಸಿದ ಸ್ವಾಮೀಜಿ, ಹುತಾತ್ಮ ಯೋಧರ…

ಬೇಲೂರು ಎಸ್‍ಬಿಐ ಶಾಖೆಯಲ್ಲಿ ತಾಂತ್ರಿಕ ದೋಷ: 4 ದಿನದಿಂದ ವ್ಯವಹಾರ ಸ್ಥಗಿತ: ಗ್ರಾಹಕರ ಪರದಾಟ
ಹಾಸನ

ಬೇಲೂರು ಎಸ್‍ಬಿಐ ಶಾಖೆಯಲ್ಲಿ ತಾಂತ್ರಿಕ ದೋಷ: 4 ದಿನದಿಂದ ವ್ಯವಹಾರ ಸ್ಥಗಿತ: ಗ್ರಾಹಕರ ಪರದಾಟ

February 20, 2019

ಬೇಲೂರು: ಇಲ್ಲಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಇಂಟರ್‍ನೆಟ್ ಸರ್ವರ್ ದೋಷ ದಿಂದಾಗಿ ಕಳೆದ 4 ದಿನದಿಂದ ವ್ಯವಹಾರ ಇಲ್ಲದೆ ಸ್ಥಗಿತಗೊಂಡಿದ್ದು ಗ್ರಾಹಕರು ಪರದಾಡುತ್ತಿದ್ದಾರೆ. ಸರ್ಕಾರಿ ಸ್ವಾಮ್ಯದ ಬಿಎಸ್‍ಎನ್‍ಎಲ್ ನೆಟ್‍ವರ್ಕ್ ಸಂಪರ್ಕ ಹೊಂದಿರುವ ಬ್ಯಾಂಕಿನಲ್ಲಿ ಸರ್ಕಾರಿ ವ್ಯವಹಾರ ಸೇರಿದಂತೆ ಎಲ್ಲಾ ರೀತಿಯ ಗ್ರಾಹಕರ ವ್ಯವಹಾರವೂ ಸಹ ಆನ್‍ಲೈನ್ ಮೂಲಕ ನಡೆಯಬೇಕಿದ್ದು, ಇದೀಗ ನೆಟ್‍ವರ್ಕ್ ಸರ್ವರ್ ದೋಷ ಇರುವುದರಿಂದ ವ್ಯವಹಾರವೆಲ್ಲವೂ ಪೂರ್ಣ ಸ್ಥಗಿತಗೊಂಡಿದೆ. ವಿವಿಧ ಇಲಾಖೆ, ಕಚೇರಿಯಿಂದ ಸರ್ಕಾರಕ್ಕೆ ಪಾವತಿಸ ಬೇಕಾದ ನಗದು ವ್ಯವಹಾರಗಳಿಗೂ ಸಹ ಅಡ್ಡಿಯಾಗಿದೆ….

ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ಹೆಚ್‍ಡಿಕೆ
ಹಾಸನ

ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ಹೆಚ್‍ಡಿಕೆ

February 19, 2019

ಹಾಸನ: ಸರ್ಕಾರ ರೈತರ ಹಿತ ದೃಷ್ಟಿಯನ್ನಷ್ಟೇ ಇಟ್ಟುಕೊಂಡಿಲ್ಲ, ಯುವ ಜನರಿಗೆ ಉದ್ಯೋಗ ಸೃಷ್ಟಿಸಿಕೊಡುವ ಕಾರ್ಯ ದಲ್ಲಿಯೂ ಮಗ್ನವಾಗಿದೆ ಎಂದು ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಡಳಿತ ಹಾಗೂ ಜಿಲ್ಲಾ ಸಹಕಾರ ಬ್ಯಾಂಕ್ ಜಂಟಿಯಾಗಿ ಆಯೋಜಿಸಿದ್ದ ರೈತರಿಗೆ ಸಾಲ ತೀರುವಳಿ ಪತ್ರ ವಿತರಣೆ ಸಮಾರಂಭದಲ್ಲಿ ಸೋಮವಾರ ಮಾತನಾಡಿದ ಅವರು, ರೈತರ ಸಾಲಮನ್ನಾ ಯೋಜನೆಯನ್ನು ಎರಡೇ ಕಂತುಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದರು. ಇದೇ ವೇಳೆ, ರಾಜ್ಯದಲ್ಲಿ ನಿರುದ್ಯೋಗ ನಿವಾರಣೆ ಉದ್ದೇಶದಿಂದ 9 ಜಿಲ್ಲೆಗಳಲ್ಲಿ ಹೊಸ ಕಾರ್ಖಾನೆಗಳ…

ಹಾಸನ ಯುವ ಮತದಾರರ ನೋಂದಣಿ ಹಿನ್ನಡೆ!
ಹಾಸನ

ಹಾಸನ ಯುವ ಮತದಾರರ ನೋಂದಣಿ ಹಿನ್ನಡೆ!

February 19, 2019

ಲೋಕಸಭಾ ಚುನಾವಣೆಗೆ ಈಗಿನಿಂದಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳಿ: ಡಿಸಿ ಸೂಚನೆ ಹಾಸನ: ಜಿಲ್ಲೆಯಲ್ಲಿ ಯುವ ಮತ ದಾರರ ನೋಂದಣಿ ಪ್ರಕ್ರಿಯೆಯಲ್ಲಿ ಹಿನ್ನಡೆ ಯಾಗಿದೆ. ಕಾಲೇಜುಗಳಲ್ಲಿ ಈ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕಿದೆ ಎಂದು ಜಿಲ್ಲಾಧಿ ಕಾರಿ ರೋಹಿಣಿ ಸಿಂಧೂರಿ ಅಧಿಕಾರಿ ಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ಲೋಕಸಭಾ ಚುನಾ ವಣೆ ಶೀಘ್ರದಲ್ಲಿಯೇ ಘೋಷಣೆಯಾ ಗುವ ನಿರೀಕ್ಷೆ ಇದ್ದು, ಈಗಿನಿಂದಲೇ ಎಲ್ಲ ಅಗತ್ಯ ಪೂರ್ವ ತಯಾರಿ…

ಫೆ.23ರಿಂದ ಬೃಹತ್ ಉದ್ಯೋಗ ಮೇಳ:  ಅಗತ್ಯ ಸಿದ್ಧತೆಗೆ ಸಚಿವ ರೇವಣ್ಣ ಸೂಚನೆ
ಹಾಸನ

ಫೆ.23ರಿಂದ ಬೃಹತ್ ಉದ್ಯೋಗ ಮೇಳ: ಅಗತ್ಯ ಸಿದ್ಧತೆಗೆ ಸಚಿವ ರೇವಣ್ಣ ಸೂಚನೆ

February 19, 2019

ಹಾಸನ: ನಗರದಲ್ಲಿ ಫೆ.23 ಮತ್ತು 24ರಂದು ಬೃಹತ್ ಉದ್ಯೋಗ ಮೇಳ ಆಯೋಜಿಸುತ್ತಿದ್ದು, ಅಗತ್ಯ ಸಿದ್ಧತೆ ಮಾಡಿ ಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ಜಿಲ್ಲೆಯ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಉದ್ಯೋಗ ಮೇಳ ಪೂರ್ವ ಭಾವಿ ಸಭೆಯಲ್ಲಿ ಸೋಮವಾರ ಮಾತನಾಡಿದ ಅವರು, 2 ದಿನ ಗಳ ಉದ್ಯೋಗ ಮೇಳದಲ್ಲಿ 20 ಸಾವಿರ ಉದ್ಯೋಗಾಕಾಂಕ್ಷಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಉತ್ತಮ ರೀತಿ ಪ್ರಚಾರ ನಡೆಸಿರಿ. ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಿ ಎಂದು ಉದ್ಯೋಗ ವಿನಿಮಯ…

ಲಕ್ಕೂರು ಶ್ರೀ ಸಂಗಮೇಶ್ವರ ದೇಗುಲ ಲೋಕಾರ್ಪಣೆ
ಹಾಸನ

ಲಕ್ಕೂರು ಶ್ರೀ ಸಂಗಮೇಶ್ವರ ದೇಗುಲ ಲೋಕಾರ್ಪಣೆ

February 19, 2019

ರಾಮನಾಥಪುರ: ದೇವಾಲಯ ಗಳು ನಮ್ಮ ಸಂಸ್ಕøತಿ ಪರಂಪರೆ ಮತ್ತು ಇತಿ ಹಾಸದ ಮೇಲೆ ಬೆಳಕು ಚೆಲ್ಲುವ ಜೀವಂತ ಸ್ಮಾರಕಗಳಾಗಿವೆ. ಮುಂದಿನ ತಲೆಮಾರಿಗೆ ಪರಂಪರೆ ಉಳಿಸಲು ದೇವಾಲಯಗಳ ಸಂರಕ್ಷಣೆ ಹೊಣೆ ನಮ್ಮೆಲ್ಲರದ್ದಾಗಿದೆ ಎಂದು ಶಾಸಕ ಎ.ಟಿ.ರಾಮಸ್ವಾಮಿ ಹೇಳಿದರು. ಹೋಬಳಿಯ ಲಕ್ಕೂರು ಗ್ರಾಮದಲ್ಲಿ 60 ಲಕ್ಷ ರೂ. ವೆಚ್ಚದಲ್ಲಿ ಹೊಸದಾಗಿ ನಿರ್ಮಿಸಿದ ಪ್ರಸಿದ್ಧ ಶ್ರೀಸಂಗಮೇಶ್ವರ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿ ಸಿದ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಇಂದಿನ ಒತ್ತಡದ ಬದುಕಿನಲ್ಲಿ ದೇವರು ಮತ್ತು…

ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ: 18,950 ಮಂದಿಗೆ ತಪಾಸಣೆ
ಹಾಸನ

ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ: 18,950 ಮಂದಿಗೆ ತಪಾಸಣೆ

February 17, 2019

ಹರಿದು ಬಂದ ಜನ ಸಾಗರ  600 ವೈದ್ಯರು, 2000 ಸಿಬ್ಬಂದಿ ಕರ್ತವ್ಯ ನಿರ್ವಹಣೆ ಹಾಸನ: ಗ್ರಾಮೀಣ ಭಾಗದ ಜನರ ಅನುಕೂಲ ಕ್ಕಾಗಿ ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಏರ್ಪಡಿಸ ಲಾಗಿದ್ದ ಬೃಹತ್ ಆರೋಗ್ಯ ಶಿಬಿರ ಯಶಸ್ವಿಯಾಗಿದ್ದು, ಸಾವಿರಾರು ಜನರು ಶಿಬಿರದಲ್ಲಿ ಪಾಲ್ಗೊಂಡು ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಬೆಂಗಳೂರಿನ ನಿಮಾನ್ಸ್, ಜಯದೇವ ಹೃದ್ರೋಗ ಆಸ್ಪತ್ರೆ, ಕಿದ್ವಾಯಿ ಗ್ರಂಥಿ ಆಸ್ಪತ್ರೆ, ಸ್ಪರ್ಶ ಆಸ್ಪತ್ರೆ, ಬೆಂಗಳೂರು ದಂತ ಚಿಕಿತ್ಸಾ ಲಯ, ಆದಿಚುಂಚನಗಿರಿ ವೈದ್ಯಕೀಯ ಮಹಾ…

ಹುತಾತ್ಮ ಯೋಧರಿಗೆ ಜಿಲ್ಲಾದ್ಯಂತ ಭಾವಪೂರ್ಣ ಶ್ರದ್ಧಾಂಜಲಿ
ಹಾಸನ

ಹುತಾತ್ಮ ಯೋಧರಿಗೆ ಜಿಲ್ಲಾದ್ಯಂತ ಭಾವಪೂರ್ಣ ಶ್ರದ್ಧಾಂಜಲಿ

February 17, 2019

ಹಾಸನ: ಜಮ್ಮು- ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಫೆ.14ರಂದು ನಡೆದ ಉಗ್ರರ ಆತ್ಮಾಹುತಿ ಬಾಂಬ್ ದಾಳಿಗೆ ಹುತಾತ್ಮರಾದ 40 ವೀರ ಯೋಧರಿಗೆ ಜಿಲ್ಲಾ ದ್ಯಂತ ವಿವಿಧ ಸಂಘಟನೆಗಳು ಹಾಗೂ ಜಿಲ್ಲಾ ಪಂಚಾಯಿತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಜಿಪಂನಿಂದ ವೀರ ಯೋಧರಿಗೆ ಶ್ರದ್ಧಾಂಜಲಿ: ಜಮ್ಮು ಕಾಶ್ಮೀರದಲ್ಲಿ ಉಗ್ರಗಾಮಿಗಳ ದಾಳಿ ಯಿಂದ ಹುತಾತ್ಮರಾದ ಸಿಆರ್‍ಪಿಎಫ್ ವೀರ ಯೋಧರಿಗೆ ಜಿಲ್ಲಾ ಪಂಚಾಯತ್ ಹೊಯ್ಸಳ ಸಭಾಂಗಣದಲ್ಲಿ ಅಧಿಕಾರಿ ಗಳು ಮತ್ತು ಸಿಬ್ಬಂದಿ ವರ್ಗದವರು ಮೌನಾ ಚರಿಸಿ ಗೌರವ ಸಲ್ಲಿಸಿದರು. ಹುತಾತ್ಮರ ಆತ್ಮಕ್ಕೆ ಶಾಂತಿ ಕೋರಿ…

1 44 45 46 47 48 133
Translate »