ಕೊಡಗು

ಪೆರುಂಬಾಡಿಯಲ್ಲಿ ಕೋವಿಡ್ ಲಸಿಕಾ ಅಭಿಯಾನಕ್ಕೆ ಶಾಸಕ ಚಾಲನೆ
ಕೊಡಗು

ಪೆರುಂಬಾಡಿಯಲ್ಲಿ ಕೋವಿಡ್ ಲಸಿಕಾ ಅಭಿಯಾನಕ್ಕೆ ಶಾಸಕ ಚಾಲನೆ

August 23, 2021

ವಿರಾಜಪೇಟೆ, ಆ.22- ಖಾಸಗಿ ರೆಸಾರ್ಟ್‍ಗಳು ಪ್ರವಾಸೋದ್ಯಮಕ್ಕೆ ಮಾತ್ರ ಸೀಮಿತವಾಗದೆ ಸಮಾಜ ಸೇವೆಯಂತ ಜನೋಪ ಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳು ತ್ತಿರುವುದು ಉತ್ತಮ ಕಾರ್ಯ ಎಂದು ಶಾಸಕ ಕೆ.ಜಿ.ಬೋಪಯ್ಯ ಹೇಳಿದರು. ವಿರಾಜಪೇಟೆ ಬಳಿಯ ಪೆರುಂಬಾಡಿ ಗ್ರಾಮದ ಮ್ಯಾಗ್ನೋಲಿಯ ರೆಸಾರ್ಟ್ ಆಡಳಿತ ಮಂಡಳಿಯಿಂದ ರೇಸಾರ್ಟ್‍ನ ಸಭಾಂಗಣದಲ್ಲಿ ಪೆರುಂಬಾಡಿ ಗ್ರಾಮಾಸ್ಥರಿಗೆ ಏರ್ಪಡಿಸಿದ್ದ ದ್ವಿತೀಯ ಹಂತದ ಲಸಿಕಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ರಾಜ್ಯದಲ್ಲಿ ಕೊವಿಡ್ ಸೋಂಕು ತಡೆಗೆ ನೀಡುವ ಲಸಿಕೆಯು ಸ್ವಲ್ಪ ಅಭಾವವಿದ್ದರೂ ಸಾರ್ವಜನಿಕರಿಗೆ ಉಚಿತವಾಗಿ ಲಸಿಕೆ ನೀಡಲು ಮೆಗ್ನೋಲಿಯ ರೆಸಾರ್ಟ್…

ಗುಡ್ಡೆಹೊಸೂರು ವ್ಯಾಪ್ತಿಯಲ್ಲಿ ಆನೆ, ಹುಲಿ ಹಾವಳಿ
ಕೊಡಗು

ಗುಡ್ಡೆಹೊಸೂರು ವ್ಯಾಪ್ತಿಯಲ್ಲಿ ಆನೆ, ಹುಲಿ ಹಾವಳಿ

August 22, 2021

ಗುಡ್ಡೆಹೊಸೂರು, ಆ.21- ಗುಡ್ಡೆಹೊಸೂರು ವ್ಯಾಪ್ತಿಯ ಸುಣ್ಣದಕೇರೆ ಸುತ್ತಮುತ್ತಲಿನಲ್ಲಿ ರೈತರ ಬೆಳೆಗಳನ್ನು ಆನೆ ದಾಳಿ ನಡೆಸಿ ನಷ್ಟಪಡಿಸುತ್ತಿದೆ ಎಂದು ಆ ವಿಭಾಗದ ರೈತರು ದೂರಿಕೊಂಡಿದ್ದಾರೆ. ಆನೆಯ ಜೊತೆ ಹುಲಿ ಹಾವಳಿಯು ತಲೆದೋರಿದೆ ಎಂದು ಅಲ್ಲಿನ ನಿವಾಸಿ ರಂಜಿತ್ ಪ್ರತ್ಯಕ್ಷವಾಗಿ ಹುಲಿಯನ್ನು ವೀಕ್ಷಿಸಿ ಮಾಹಿತಿ ನೀಡಿದ್ದಾರೆ. ಆನೆ ಕಂದಕದ ಒಂದು ಭಾಗ ದಲ್ಲಿ ಹುಲಿ ಇರುವುದನ್ನು ನೋಡಲಾ ಗಿದೆ. ಸುಮಾರು ಒಂದು ವಾರದಿಂದ ನಿರಂ ತರವಾಗಿ ಆನೆ ರೈತರ ಜೋಳ, ಬಾಳೆ, ಮರಗೆಣಸು, ಅಡಿಕೆ, ತೆಂಗು ಅಲ್ಲದೆ ವಿವಿಧ ಬೆಳೆಗಳನ್ನು…

ಶಿಕ್ಷಣದಿಂದ ಮಾತ್ರ ಸಾಮಾಜಿಕ ಬದಲಾವಣೆ
ಕೊಡಗು

ಶಿಕ್ಷಣದಿಂದ ಮಾತ್ರ ಸಾಮಾಜಿಕ ಬದಲಾವಣೆ

August 22, 2021

ಮಡಿಕೇರಿ, ಆ.21- ಜಿಲ್ಲೆಯ ಹಾಡಿ ಗಳಲ್ಲಿ ವಾಸಿಸುವ ಆದಿವಾಸಿ ಬುಡಕಟ್ಟು ಕುಟುಂಬಗಳು ಶಿಕ್ಷಣದಿಂದ ವಂಚಿತರಾ ಗಿದ್ದು, ಬುಡಕಟ್ಟು ಆದಿವಾಸಿ ಮಕ್ಕಳು ಶಿಕ್ಷಣ ಪಡೆಯಲು ಮುಂದಾಗಬೇಕು ಎಂದು ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯ ದರ್ಶಿ ಎನ್.ಸುಬ್ರಹ್ಮಣ್ಯ ಕರೆ ನೀಡಿದ್ದಾರೆ. ಕುಶಾಲನಗರ ತಾಲೂಕಿನ ಬಸವನಹಳ್ಳಿ ಹಾಡಿಯ ಅಂಗನವಾಡಿ ಕೇಂದ್ರದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗ ಇವರ ಸಂಯುಕ್ತ ಆಶ್ರಯದಲ್ಲಿ…

ಕೊಡಗಲ್ಲಿ ವೀಕೆಂಡ್ ಕಫ್ರ್ಯೂ ತೆರವಿಗೆ ಒತ್ತಾಯ
ಕೊಡಗು

ಕೊಡಗಲ್ಲಿ ವೀಕೆಂಡ್ ಕಫ್ರ್ಯೂ ತೆರವಿಗೆ ಒತ್ತಾಯ

August 21, 2021

ಗೋಣಿಕೊಪ್ಪಲು, ಆ.20- ಕೋವಿಡ್ ವಿಚಾರದಲ್ಲಿ ಕೊಡಗಿನಲ್ಲಿ ವೀಕೆಂಡ್ ಕಫ್ರ್ಯೂ ತೆರವುಗೊಳಿಸುವ ಮೂಲಕ ಪ್ರವಾಸೋದ್ಯ ಮಕ್ಕೆ ಅವಕಾಶ ನೀಡಬೇಕೆಂದು ಕೊಡಗು ಪ್ರವಾಸೋದ್ಯಮ ಅವಲಂಭಿತರ ಒಕ್ಕೂ ಟದ ಅಧ್ಯಕ್ಷ ಕೆ.ಕೆ.ಮಂಜುನಾಥ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಗೋಣಿಕೊಪ್ಪಲುವಿನ ಖಾಸಗಿ ರೆಸಾರ್ಟ್ ನಲ್ಲಿ ಆಯೋಜನೆಗೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ಕೊರೊನಾ ವಿಚಾರ ಗಳನ್ನು ಮುಂದಿಟ್ಟುಕೊಂಡು ಪ್ರವಾಸೋ ದ್ಯಮಕ್ಕೆ ಕೊಡಗಿನಲ್ಲಿ ಅವಕಾಶ ನಿರಾಕರಿಸ ಲಾಗಿದೆ. ಇದರಿಂದಾಗಿ ಕೊಡಗಿನಲ್ಲಿರುವ 33 ಸಾವಿರ ಮಂದಿ ಉದ್ಯೋಗ ವಂಚಿತ ರಾಗಿದ್ದಾರೆ. ಕೊರೊನಾದೊಂದಿಗೆ ನಾವುಗಳು ಹೊಂದಾಣಿಕೆಯ ಜೀವನ ನಡೆಸುವ ಪರಿಸ್ಥಿತಿ…

ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಶತಮಾನೋತ್ಸವ ಕಟ್ಟಡಕ್ಕೆ ಶಂಕುಸ್ಥಾಪನೆ
ಕೊಡಗು

ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಶತಮಾನೋತ್ಸವ ಕಟ್ಟಡಕ್ಕೆ ಶಂಕುಸ್ಥಾಪನೆ

August 21, 2021

ಮಡಿಕೇರಿ, ಆ.20- ಸಹಕಾರಿ ಸಂಸ್ಥೆಗಳು ಆರೋಗ್ಯ ಪೂರ್ಣವಾಗಿ ಇರಬೇಕಾದಲ್ಲಿ ಠೇವಣಿದಾರರ ಹಿತ ಕಾಯುವುದು ಅತ್ಯವಶ್ಯವೆಂದು ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ ಅಭಿಪ್ರಾಯ ವ್ಯಕ್ತಪಡಿಸಿದರು. ಕೊಡಗು ಜಿಲ್ಲಾ ಸಹಾಕಾರ ಕೇಂದ್ರ ಬ್ಯಾಂಕ್‍ನ ನಗರದ ಕೇಂದ್ರ ಕಚೇರಿಯ ಆವರಣದಲ್ಲಿ 7 ಕೋಟಿ ರೂ. ವೆಚ್ಚದ ‘ಶತಮಾನೋತ್ಸವ ಕಟ್ಟಡ’ಕ್ಕೆ ಶಂಕುಸ್ಥಾಪನೆ ಮತ್ತು ಶತಮಾನೋ ತ್ಸವ ಸಮಾರಂಭ ನಗರದಲ್ಲಿ ನಡೆಯಿತು. ಶತಮಾನೋತ್ಸವ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿ, ಕ್ರಿಸ್ಟಲ್ ಕೋರ್ಟ್ ಸಭಾಂಗಣದಲ್ಲಿ ಆಯೋಜಿತ ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದ ಸಹಕಾರಿ ಸಚಿವ ಎಸ್.ಟಿ. ಸೋಮ ಶೇಖರ್, ಕರ್ನಾಟಕ…

ಸಂವಿಧಾನದ ವಿಶೇಷ ಸ್ಥಾನಮಾನ ದೊರೆತಾಗ  ಮಾತ್ರ ಕೊಡವರ ಸಂಪ್ರದಾಯ ಉಳಿಯಲು ಸಾಧ್ಯ
ಕೊಡಗು

ಸಂವಿಧಾನದ ವಿಶೇಷ ಸ್ಥಾನಮಾನ ದೊರೆತಾಗ ಮಾತ್ರ ಕೊಡವರ ಸಂಪ್ರದಾಯ ಉಳಿಯಲು ಸಾಧ್ಯ

August 21, 2021

ಮಡಿಕೇರಿ, ಆ.20- ಕೊಡವರ ಪದ್ಧತಿ, ಸಂಪ್ರದಾಯ, ಭೂಮಿ ಮತ್ತು ಆಚಾರ ವಿಚಾರಗಳು ಉಳಿಯಬೇಕಿದ್ದಲ್ಲಿ ಸಂವಿಧಾ ನದ ಆರ್ಟಿಕಲ್ 371(ಕೆ) ಅಡಿಯಲ್ಲಿ ವಿಶೇಷ ಸ್ಥಾನಮಾನಗಳು ದೊರೆಯಬೇಕಿದೆ. ಆ ದಿಸೆಯಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಹೋರಾಟ ರೂಪಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಕರೆ ನೀಡಿದ್ದಾರೆ. ಮಡಿಕೇರಿ ಹೊರವಲಯದ ಮೂರ್ನಾಡು ಸಮೀಪದ ಖಾಸಗಿ ರೆಸಾರ್ಟ್‍ನಲ್ಲಿ ಆಯೋ ಜಿಸಲಾಗಿದ್ದ ಕೊಡವರ ಬೇಡಿಕೆಗಳು ಮತ್ತು ಹಕ್ಕೋತ್ತಾಯಗಳ ವಿಚಾರ ಸಂಕೀರ್ಣದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕರ್ನಾಟಕ ಉಳಿಯಬೇಕಿದ್ದರೆ ಕೊಡವರ ಸಂಸ್ಕøತಿಯೂ ಉಳಿಯಬೇಕು…

ಪೆÇನ್ನಂಪೇಟೆ ಠಾಣೆಯಲ್ಲಿ ವರ್ತಕರ ಸಭೆ
ಕೊಡಗು

ಪೆÇನ್ನಂಪೇಟೆ ಠಾಣೆಯಲ್ಲಿ ವರ್ತಕರ ಸಭೆ

August 20, 2021

ಪೊನ್ನಂಪೇಟೆ, ಆ.19- ಪೆÇನ್ನಂಪೇಟೆ ಠಾಣಾ ಆವರಣದಲ್ಲಿ ಪೆÇನ್ನಂಪೇಟೆ ನಗರದ ವರ್ತಕರ ಸಭೆಯನ್ನು ಪೆÇನ್ನಂಪೇಟೆ ಚೇಂಬರ್ ಆಫ್ ಕಾಮರ್ಸ್‍ನ ಅಧ್ಯಕ್ಷ ಚಿರಿಯಪಂಡ ಕೆ. ಉತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಸಭೆಯಲ್ಲಿ ಠಾಣಾಧಿಕಾರಿ ಡಿ.ಕುಮಾರ್ ಮಾತನಾಡಿ, ಎಲ್ಲಾ ವರ್ತಕರು ತಮ್ಮ ಅಂಗಡಿ ಮಳಿಗೆಯಲ್ಲಿ ಸಿಸಿ ಕ್ಯಾಮರಾ ಅಳವಡಿಸು ವಂತೆ ತಿಳಿಸಿದರು. ಮಳೆಗಾಲದ ಸಮಯ ವಾಗಿದ್ದು, ನಗರದ ಕೆಲವು ಭಾಗದಲ್ಲಿ ರಾತ್ರಿ ಕಳ್ಳತನ ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ವರ್ತಕರು ತಮ್ಮ ಅಂಗಡಿ ಮಳಿಗೆಯ ಹೊರಭಾಗದಲ್ಲಿ ಸಿಸಿ ಕ್ಯಾಮರಾ ಅಳವಡಿಸಿದಲ್ಲಿ ಅಂಗಡಿಯ ಭದ್ರತೆಗೆ…

ಅಪರಿಚಿತ ವಾಹನ ಡಿಕ್ಕಿ; ಜಿಂಕೆಗೆ ಗಾಯ
ಕೊಡಗು

ಅಪರಿಚಿತ ವಾಹನ ಡಿಕ್ಕಿ; ಜಿಂಕೆಗೆ ಗಾಯ

August 20, 2021

ಕುಶಾಲನಗರ, ಆ.19- ಹೆಬ್ಬಾಲೆ-ಸೋಮವಾರಪೇಟೆ-ಬಾಣವಾರ ರಸ್ತೆಯ ಬೈರಪ್ಪನಗುಡಿ ಸಮೀಪದ ಮುಖ್ಯ ರಸ್ತೆಯಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿ ಣಾಮ ಜಿಂಕೆಯ ಬಲ ಕಾಲಿಗೆ ಪೆಟ್ಟಾಗಿದೆ. ಮಂಗಳವಾರ ಬೆಳಗ್ಗೆ ಕಾಡಿನಂಚಿನಿಂದ ರಸ್ತೆ ದಾಟಿ ಹೋಗುವ ಸಂದರ್ಭದಲ್ಲಿ ವಾಹನ ಜಿಂಕೆಗೆ ಡಿಕ್ಕಿ ಹೊಡೆದ ಪರಿಣಾಮ ವಾಗಿ ಬಲಗಾಲಿಗೆ ಗಾಯವಾಗಿದ್ದು, ರಸ್ತೆಯ ಒಂದು ಬದಿಯಲ್ಲಿ ಬಿದ್ದು ಕಿರುಚುತ್ತಿದ್ದ ಸಂದರ್ಭ ಸ್ಥಳೀಯರು ಬಾಣಾವರದ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದರು. ಸ್ಧಳಕ್ಕೆ ಆಗಮಿಸಿ ಗಾಯಗೊಂಡ ಮೂರು ವರ್ಷ ಪ್ರಾಯದ ಜಿಂಕೆಯನ್ನು ಬಾಣವಾರ ಉಪ ವಲಯ…

ಕೋವಿಡ್‍ನಿಂದ ಮೃತಪಟ್ಟ ಮಹಿಳೆಯ ಮೊಬೈಲ್ 3 ತಿಂಗಳ ನಂತರ ಪತ್ತೆ..!
ಕೊಡಗು

ಕೋವಿಡ್‍ನಿಂದ ಮೃತಪಟ್ಟ ಮಹಿಳೆಯ ಮೊಬೈಲ್ 3 ತಿಂಗಳ ನಂತರ ಪತ್ತೆ..!

August 20, 2021

ಮಡಿಕೇರಿ, ಆ.19- ಮಡಿಕೇರಿಯ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಮೇ.16ರಂದು ಮೃತಪಟ್ಟ ಮಹಿಳೆಯೊಬ್ಬರ ಮೊಬೈಲ್ ಫೋನ್ ಕಳುವಾದ 3 ತಿಂಗಳು 3 ದಿನಗಳ ಬಳಿಕ ಪತ್ತೆಯಾಗಿದೆ. ತಾಯಿಯನ್ನು ಕಳೆದುಕೊಂಡು ಆಕೆಯ ನೆನಪಿ ನಲ್ಲೇ ಕೊರಗುತ್ತಿದ್ದು, ಮೃತರ ಪುಟ್ಟ ಮಗಳು ಹೃತಿಕ್ಷಾ ಮನಸಿಗೆ ಸಾಂತ್ವಾನ ದೊರಕಿದೆ. ಆ ಮೂಲಕ ಮೊಬೈಲ್ ಕಳವು ಪ್ರಕರಣದ ನೋವಿನ ವ್ಯಥೆಯ ಕಥೆಯೂ ಸುಖಾಂತ್ಯ ಕಂಡಿದೆ. ಕೋವಿಡ್ ಆಸ್ಪತ್ರೆಯ ವೈದ್ಯಾಧಿ ಕಾರಿಯೊಬ್ಬರು ಈ ಮೊಬೈಲ್ ಪತ್ತೆಯಾದ ಬಗ್ಗೆ ಮಡಿಕೇರಿ ನಗರ ಠಾಣೆಗೆ ಸುದ್ದಿ ಮುಟ್ಟಿಸಿದ್ದು, ಪೊಲೀಸ್…

ಲವ್ ಜಿಹಾದ್, ಉಗ್ರಗಾಮಿ ಕೃತ್ಯಗಳ ಬಗ್ಗೆ ತನಿಖೆಗಾಗಿ ಪ್ರತಿಭಟನೆ
ಕೊಡಗು

ಲವ್ ಜಿಹಾದ್, ಉಗ್ರಗಾಮಿ ಕೃತ್ಯಗಳ ಬಗ್ಗೆ ತನಿಖೆಗಾಗಿ ಪ್ರತಿಭಟನೆ

August 19, 2021

ವಿರಾಜಪೇಟೆ, ಆ.18- ಕರ್ನಾಟಕ ರಾಜ್ಯ ಸೇರಿದಂತೆ ನೆರೆಯ ರಾಜ್ಯಗಳಲ್ಲಿ ನಡೆಯು ತ್ತಿರುವ ಲವ್ ಜಿಹಾದ್ ತಡೆಗಟ್ಟುವಲ್ಲಿ ಸರ್ಕಾರಗಳು ಕಟ್ಟುನಿಟ್ಟಿನ ಕ್ರಮ ಜರುಗಿಸು ವಂತೆ ಒತ್ತಾಯಿಸಿ ಹಿಂದೂ ಜಾಗರಣ ವೇದಿಕೆ ತಾಲೂಕು ಘಟಕದ ವತಿಯಿಂದ ವಿರಾಜಪೇಟೆ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಯೋಗಾ ನಂದ ಅವರಿಗೆ ಮನವಿ ಸಲ್ಲಿಸಲಾಯಿತು. ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಹೇಶ್ ಮಾತ ನಾಡಿ, ಮುಗ್ಧ ಹಿಂದೂ ಯುವತಿಯ ರನ್ನು ಆಸೆ ಅಮಿಷಗಳಿಗೆ ಬಲಿಯಾಗಿಸಿ, ಮೋಹಕವಾದ ಮಾತುಗಳಿಂದ ಬಲೆಗೆ…

1 10 11 12 13 14 187
Translate »