ಸೋಮವಾರಪೇಟೆ,ಏ.24-ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಸಚಿವರೊಂದಿಗೆ ಇಂದು ವೀಡಿಯೋ ಕಾನ್ಫರೆನ್ಸ್ ನಡೆಸಲಾಯಿತು. ಅಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ನಲ್ಲಿ ಭಾಗವಹಿಸಿದ್ದ ಶಾಸಕ ಅಪ್ಪಚ್ಚು ರಂಜನ್ ಸಚಿವರೊಂ ದಿಗೆ ಮಾತನಾಡಿ, ಜಿಲ್ಲೆಯಲ್ಲಿ ಅತಿಯಾದ ಮಳೆಯಿಂದ ನದಿ ಪಾತ್ರದಲ್ಲಿ ತುಂಬಿರುವ ಹೂಳನ್ನು ಮೇಲೆತ್ತಲು ಎನ್ಆರ್ಇಜಿ ಯೋಜನೆಯಡಿ ಕಾಮಗಾರಿ ಕೈಗೊಳ್ಳಲು ಅವಕಾಶವಿದೆಯೇ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿ ಸಿದ ಸಚಿವ ಕೆ.ಎಸ್.ಈಶ್ವರಪ್ಪ, ನದಿಪಾತ್ರದಲ್ಲಿ ತುಂಬಿರುವ ಹೂಳನ್ನು ತೆಗೆಯಲು ಉದ್ಯೋಗಖಾತ್ರಿ ಯೋಜನೆ ಯಡಿ ಕಾಮಗಾರಿ ಕೈಗೊಳ್ಳಬಹುದಾಗಿದೆ ಎಂದರು. ನಂತರ ತಾಲೂಕು ಮಟ್ಟದ…
ಕುಶಾಲನಗರ: ಚೆಕ್ಪೋಸ್ಟ್ಗಳ ಪರಿಶೀಲನೆ
April 24, 2020ಕುಶಾಲನಗರ, ಏ.23- ಕೊರೊನಾ ವೈರಸ್ ಹರಡದಂತೆ ಮೇ 3ರವರೆಗೆ ಲಾಕ್ಡೌನ್ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಗುರುವಾರ ಜಿಲ್ಲಾ ಪ್ರವೇಶದ್ವಾರ ಪಟ್ಟಣದ ಟೋಲ್ಗೇಟ್ ಬಳಿಯ ಅರಣ್ಯ ತಪಾ ಸಣಾ ಕೇಂದ್ರ ಹಾಗೂ ಶಿರಂಗಾಲ ಗ್ರಾಮ ದಲ್ಲಿರುವ ತಪಾಸಣಾ ಕೇಂದ್ರಗಳಿಗೆ ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುನೀಲ್ ಸುಬ್ರಮಣಿ ಭೇಟಿ ನೀಡಿ ಪರಿಶೀಲಿಸಿದರು. ಜಿಲ್ಲಾ ಗಡಿ ಪ್ರದೇಶಗಳಲ್ಲಿ ಪೆÇಲೀಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆ ಕೈಗೊಂಡಿರುವ ಭದ್ರತಾ ಕ್ರಮಗಳನ್ನು ಪರಿಶೀಲಿಸಿದ ಅವರು ಶಾಸಕರು ಸಿಬ್ಬಂದಿ ಗಳಿಗೆ ಕಲ್ಪಿಸಿರುವ ಅನುಕೂಲಗಳ ಬಗ್ಗೆ ಮಾಹಿತಿ ಪಡೆದರು….
ಕೊಡಗಿನಲ್ಲಿ ಕೊರೊನಾ ಮಧ್ಯೆ ಡೆಂಗ್ಯೂ ಭೀತಿ
April 24, 2020ಮಡಿಕೇರಿ, ಏ.23- ಕೊಡಗು ಜಿಲ್ಲೆಯಲ್ಲಿ ಕೊರೊನಾ ಭೀತಿ ಆವರಿ ಸಿರುವ ನಡುವೆಯೇ ಡೆಂಗ್ಯೂ ಜ್ವರವೂ ಕಾಣಿಸಿಕೊಂಡಿದೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಒಟ್ಟು 7 ಡೆಂಗ್ಯೂ ಜ್ವರ ಪೀಡಿತರು ಪತ್ತೆಯಾಗಿದ್ದು, ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಡೆಂಗ್ಯೂ ಜ್ವರವನ್ನು ಮಟ್ಟ ಹಾಕಲು ಮುಂದಾಗಿದೆ. ಜಿಲ್ಲೆಯ ಜನರು ಕೊರೊನಾ ಸೋಂಕಿನ ಬಗ್ಗೆ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳನ್ನು ಡೆಂಗ್ಯೂ ಜ್ವರದ ಬಗ್ಗೆಯೂ ಕೈಗೊಳ್ಳಬೇಕು. ಶುಚಿತ್ವಕ್ಕೆ ಹೆಚ್ಚಿನ ಮಹತ್ವ ನೀಡುವ ಮೂಲಕ ಮನೆ ಮತ್ತು ಸುತ್ತ ಮುತ್ತ ಲಿನ ಪ್ರದೇಶವನ್ನೂ ಶುಚಿಯಾಗಿಟ್ಟು ಕೊಳ್ಳಬೇಕೆಂದು…
ಕೋವಿಡ್ ಆಸ್ಪತ್ರೆಗೆ 1 ಲಕ್ಷ ರೂ. ವೆಚ್ಚದ ಆರೋಗ್ಯ ಪರಿಕರ ಹಸ್ತಾಂತರ
April 24, 2020ಮಡಿಕೇರಿ, ಏ.23- ಮರ್ಕೆರಾ ಕೌಂಟಿ ಕ್ಲಬ್ ವತಿಯಿಂದ 1 ಲಕ್ಷ ರೂ. ವೆಚ್ಚದ ಆರೋಗ್ಯ ಪರಿಕರಗಳನ್ನು ಶಾಸಕ ಕೆ.ಜಿ. ಬೋಪಯ್ಯ ಮತ್ತು ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ ಗುರುವಾರ ಜಿಲ್ಲಾಸ್ಪತ್ರೆಗೆ ಹಸ್ತಾಂತರಿಸಿದರು. ಬಳಿಕ ಮಾತನಾಡಿದ ಶಾಸಕ ಕೆ.ಜಿ.ಬೋಪಯ್ಯ, ಮರ್ಕೆರ ಕೌಂಟಿ ಕ್ಲಬ್ ವತಿಯಿಂದ ಒಂದು ಲಕ್ಷ ರೂ. ವೆಚ್ಚದ ಕ್ರಾಸ್ ಕಾರ್ಟ್ಗಳ ಮೂಲಕ ವಿವಿಧ ವಾರ್ಡ್ಗಳಿಗೆ ಔಷಧಿ ಗಳನ್ನು ತೆಗೆದುಕೊಂಡು ಹೋಗಿ ನೀಡಲು ಸಹಕಾರಿಯಾಗಿದೆ ಎಂದರು. ಕೋವಿಡ್ 19 ಸಂದರ್ಭದಲ್ಲಿ ವಿವಿಧ ಸಂಘ ಸಂಸ್ಥೆ ಗಳು…
ತರಕಾರಿಯೊಂದಿಗೆ ಗೋಮಾಂಸ ಸಾಗಣೆ; ಆರೋಪಿ ಪೊಲೀಸ್ ವಶಕ್ಕೆ
April 23, 2020ಮಡಿಕೇರಿ, ಏ.22- ಹೊರ ಜಿಲ್ಲೆಗ ಳಿಂದ ಕೊಡಗು ಜಿಲ್ಲೆಗೆ ತರಕಾರಿ ತರಲು ಜಿಲ್ಲಾಡಳಿತ ನೀಡಿದ್ದ ಪಾಸ್ಗಳನ್ನು ದುರುಪಯೋಗ ಪಡಿಸಿಕೊಂಡು ತರಕಾರಿ ವಾಹನದಲ್ಲಿ ಗೋ ಮಾಂಸವನ್ನು ಸಾಗಿಸುತ್ತಿದ್ದ ಪ್ರಕರಣವನ್ನು ಸಿದ್ದಾಪುರ ಪೊಲೀಸರು ಪತ್ತೆ ಹಚ್ಚಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿ ಮತ್ತು ಗೋ ಮಾಂಸ ಸಾಗಾಟಕ್ಕೆ ಬಳಸಿದ್ದ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನೆಲ್ಯಹುದಿಕೇರಿಯ ಮುಸ್ತಫಾ ಎಂಬಾತ ತನ್ನ ಜೀಟೋ ವಾಹನ(ಕೆ.ಎ.12-ಬಿ.3948) ದಲ್ಲಿ ತರಕಾರಿ ತರಲು ಪಾಸ್ ಪಡೆದು ಹುಣಸೂರಿಗೆ ತೆರಳಿದ್ದ. ಬಳಿಕ ಅಲ್ಲಿಂದ ಬರುವಾಗ ತರಕಾರಿ ಸಹಿತ 25…
ಬೆಂಗಳೂರಿನ ಮೂವರು ಸೇರಿ ಹತ್ತು ಮಂದಿ ಕ್ವಾರೆಂಟೈನ್ಗೆ
April 23, 2020ಕುಶಾಲನಗರ, ಏ.22- ಬೆಂಗಳೂರಿ ನಿಂದ ಕೂಡುಮಂಗಳೂರಿನ ಚಿಕ್ಕತ್ತೂರು ಗ್ರಾಮಕ್ಕೆ ಆಗಮಿಸಿ ತಂಗಿದ್ದ ಮೂವರು ಸೇರಿ ದಂತೆ ಒಟ್ಟು 10 ಮಂದಿಯನ್ನು ತಪಾ ಸಣೆಗೆ ಮಡಿಕೇರಿಗೆ ರವಾನಿಸಲಾಗಿದೆ. ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಚಿಕ್ಕತ್ತೂರಿನಲ್ಲಿ ಸ್ನೇಹಿತನ ಮನೆಯಲ್ಲಿ ತಂಗಿದ್ದ ಯುವಕನನ್ನು ಕರೆದೊಯ್ಯಲು ಬೆಂಗಳೂರಿನಿಂದ ಆಗಮಿಸಿದ್ದ ಮೂವರು, ಬೆಂಗಳೂರಿನಿಂದ ಆಂಬ್ಯುಲೆನ್ಸ್ ಮೂಲಕ ಸುಳ್ಳು ಮಾಹಿತಿ ನೀಡಿ ಅಕ್ರಮವಾಗಿ ಕೊಪ್ಪ ಗೇಟ್ ಮೂಲಕ ಜಿಲ್ಲೆಗೆ ನುಸುಳಿ ರುವ ಶಂಕೆ ವ್ಯಕ್ತವಾಗಿದೆ. ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಹಾರಂಗಿ ರಸ್ತೆಯ ಚಿಕ್ಕತ್ತೂರಿನ ಅಯ್ಯಪ್ಪ ಸ್ವಾಮಿ ದೇವಾಲಯ…
ಕೊರೊನಾ ಬಗ್ಗೆ ಮತ್ತಷ್ಟು ಎಚ್ಚರಿಕೆ ವಹಿಸಲು ಸಲಹೆ
April 22, 2020ಮಡಿಕೇರಿ ಏ.21- ಕೋವಿಡ್-19ಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಕಳೆದ 28 ದಿನಗಳಿಂದ ಯಾವುದೇ ಪಾಸಿಟಿವ್ ಪ್ರಕರಣಗಳು ಕಂಡು ಬಂದಿಲ್ಲ. ಇದೇ ರೀತಿ ಮುಂದಿನ ದಿನಗಳಲ್ಲಿಯೂ ಕಾಪಾಡಿ ಕೊಂಡು ಹೋಗಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ.ಅನ್ಬು ಕುಮಾರ್ ಸಲಹೆ ನೀಡಿದರು. ಜಿಲ್ಲೆಯಲ್ಲಿ ಕೋವಿಡ್-19 ಸ್ಥಿತಿಗತಿ ಸಂಬಂಧ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಅಧಿಕಾರಿ ಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇದುವರೆಗೆ ಕೋವಿಡ್-19 ಸಂಬಂಧ ಜ್ವರ ಪ್ರಕರಣಗಳು, ಕಂಟೈನ್ಮೆಂಟ್ನಲ್ಲಿ ಇರುವವರು ಮತ್ತಿತರ ಬಗ್ಗೆ ಮಾಹಿತಿ…
ಕರಿಕೆ-ಕೇರಳ ಗಡಿ ಪರಿಶೀಲಿಸಿದ ಶಾಸಕ ಕೆ.ಜಿ.ಬೋಪಯ್ಯ
April 22, 2020ಮಡಿಕೇರಿ, ಏ.21- ಕೇರಳ-ಕರ್ನಾಟಕ ಗಡಿ ಕರಿಕೆಗೆ ಶಾಸಕ ಕೆ.ಜಿ.ಬೋಪಯ್ಯ ಭೇಟಿ ನೀಡಿ ಗಡಿಯಲ್ಲಿ ಕೈಗೊಂಡಿರುವ ಭದ್ರತೆಯನ್ನು ಪರಿಶೀಲನೆ ನಡೆಸಿದರು. ಸದ್ಯದ ಮಟ್ಟಿಗೆ ಮುಚ್ಚಿರುವ ಅಂತರಾಜ್ಯ ಗಡಿಯನ್ನು ತೆರವುಗೊಳಿಸುವುದಿಲ್ಲ . ಭದ್ರತೆಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಪೊಲೀಸ್ರನ್ನು ಅಳವಡಿಸಲು ಕ್ರಮ ವಹಿಸಲಾಗುವುದು. ಅಲ್ಲದೆ ಗ್ರಾಮಕ್ಕೆ ಅಗತ್ಯ ಸಾಮಗ್ರಿ ಯನ್ನು ರಾಜ್ಯದ ಒಳಗೆ ಸಾಗಾಟ ಮಾಡಲು ಬದಲಿ ವ್ಯವಸ್ಥೆ ಮಾಡಲಾಗು ವುದು ಎಂದರು. ಕರಿಕೆ ಆರೋಗ್ಯ ವಿಸ್ತರಣಾ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ವೀಕ್ಷಿಸಿ, ತುರ್ತಾಗಿ ಕೆಲವು ಅಗತ್ಯ…
ಬಾರ್ನಲ್ಲಿ 86 ಸಾವಿರ ರೂ. ಮೌಲ್ಯದ ಮದ್ಯ ಕಳವು
April 21, 2020ಮೇ.3 ರವರೆಗೂ ಮದ್ಯ ಮಾರಾಟ ಬಂದ್; ಅಬಕಾರಿ ಡಿಸಿ ಆದೇಶ ಮಂಡ್ಯ, ಏ.20(ನಾಗಯ್ಯ)- ತಾಲೂಕಿನ ಚಂದಗಾಲು ಗ್ರಾಮದ ಪ್ರಿಯ ಬಾರ್ ಮತ್ತು ರೆಸ್ಟೋರೆಂಟ್ನ ಶೆಟರ್ ಮುರಿದು ಸುಮಾರು 86 ಸಾವಿರ ರೂ. ಮೌಲ್ಯದ ಮದ್ಯವನ್ನು ಕಳವು ಮಾಡಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ. ಗ್ರಾಮದ ಹೊರವಲಯದಲ್ಲಿರುವ ಪ್ರಿಯಾ ಬಾರ್ನ ಶೆಟರ್ ಮುರಿದು ಒಳನುಗ್ಗಿರುವ ದುಷ್ಕರ್ಮಿಗಳು 12 ಕೇಸ್ ಮದ್ಯ ಹಾಗೂ 27 ಕೇಸ್ ಬಿಯರ್ ಹಾಗೂ ಕ್ಯಾಸ್ ಕೌಂಟರ್ನಲ್ಲಿದ್ದ 3 ಸಾವಿರ ನಗದನ್ನು ಕಳವು ಮಾಡಿ ಪರಾರಿಯಾಗಿದ್ದಾರೆ….
ವಿರಾಜಪೇಟೆ ಬೇಕರಿಗಳಿಗೆ ಕೇರಳ ತಿನಿಸು ರವಾನೆ ಅಧಿಕಾರಿಗಳ ಪರಿಶೀಲನೆ: ತಿನಿಸುಗಳ ವಶ
April 21, 2020ಮಡಿಕೇರಿ, ಏ.20- ಕೇರಳದ ಗಡಿ ಭಾಗವಾದ ಇರಟ್ಟಿಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಬೇಕರಿ ತಿನಿಸುಗಳು ವಿರಾಜ ಪೇಟೆ ನಗರದ ಆನೇಕ ಬೇಕರಿಗಳಲ್ಲಿ ಮಾರಾಟವಾಗುತ್ತಿದೆ ಎಂದು ಪಪಂ ಮುಖ್ಯಾಧಿಕಾರಿಗಳಿಗೆ ಅನಾಮಧೇಯ ದೂರವಾಣಿ ಕರೆ ಬಂದ ಹಿನ್ನೆಲೆಯಲ್ಲಿ ಪಪಂ ಆರೋಗ್ಯ ಅಧಿಕಾರಿ ಮತ್ತು ಸಿಬ್ಬಂದಿ ಇಂದು ವಿವಿಧ ಬೇಕರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೇರಳ ರಾಜ್ಯಕ್ಕೆ ಸೇರಿದ ಮಾಲೀಕರ 6 ಬೇಕರಿಗಳನ್ನು ಪರಿಶೀಲನೆ ಮಾಡಿದ ಸಂದರ್ಭ ಇತ್ತೀಚಿನ ದಿನಗಳಲ್ಲಿ ತಯಾರಿಸಿದ ಬೇಕರಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ….