ಮೈಸೂರು: ಮೈಸೂರಲ್ಲಿ 12 ತೀವ್ರ ಅಪಘಾತ ವಲಯಗಳಿವೆ. ಮೈಸೂರಿನ ಕೆ.ಆರ್, ಎನ್ಆರ್, ಸಿದ್ದಾರ್ಥ ನಗರ ಹಾಗೂ ವಿವಿ ಪುರಂ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಈ 12 ಅಪಘಾತ ವಲಯಗಳಲ್ಲಿ ಕಳೆದ 3 ವರ್ಷದ ಅವಧಿಯಲ್ಲಿ ಒಟ್ಟು 169 ಅಪಘಾತಗಳು ಸಂಭವಿಸಿದ್ದು, 45 ಮಂದಿ ಮೃತಪಟ್ಟಿದ್ಧರೆ, 158 ಮಂದಿಗೆ ತೀವ್ರತರ ಗಾಯಗಳಾಗಿವೆ. 500 ಮೀಟರ್ ಅಂತರದಲ್ಲಿ ಮೂರು ವರ್ಷದಲ್ಲಿ 10 ಅಪಘಾತ ಸಂಭವಿಸಿ, ಸಾಕಷ್ಟು ಸಾವು-ನೋವುಗಳಾಗಿದ್ದರೆ ಅಂತಹ ಸ್ಥಳವನ್ನು ತೀವ್ರ ಅಪಘಾತ ವಲಯ(ಃಟಚಿಛಿಞ Sಠಿoಣ) ಎಂದು…
ಮುಡಾ ವ್ಯಾಪ್ತಿಗಳ ಆಸ್ತಿ ತೆರಿಗೆ ಪಾವತಿಸಲು ನೂಕು ನುಗ್ಗಲು
April 26, 2019ಮೈಸೂರು: ನಿವೇಶನ, ಮನೆಗಳ ಕಂದಾಯ ಪಾವತಿಸಲು ಮುಡಾ ಕಚೇರಿಯ ಸ್ಪಂದನಾ ಕೌಂಟರ್ ಹಾಗೂ ವಿಜಯಾ ಬ್ಯಾಂಕ್ ಮುಡಾ ಶಾಖೆಯಲ್ಲಿ ಆಸ್ತಿಗಳ ಮಾಲೀಕರು ಮುಗಿ ಬೀಳುತ್ತಿದ್ದಾರೆ. ವರ್ಷದ ಕಡೇ ತಿಂಗಳಾದ ಕಾರಣ ಜನರು ಮುಡಾ ವ್ಯಾಪ್ತಿಯ ತಮ್ಮ ಆಸ್ತಿಗಳ ತೆರಿಗೆ ಪಾವತಿಸಲು ಮುಂದಾ ಗಿದ್ದಾರೆ. ಈ ಹಿಂದಿನ ವರ್ಷದ ಕಂದಾಯ ಪಾವತಿ ರಶೀದಿ ತೋರಿಸಿ ಮುಡಾ ಕಚೇರಿ ಪ್ರವೇಶದ ಬಳಿ ಇರುವ 4 ಸ್ಪಂದನಾ ಕೌಂಟರ್ನಲ್ಲಿ ಪ್ರಸಕ್ತ ವರ್ಷದ ಕಂದಾಯಕ್ಕೆ ಚಲನ್ ಹಾಕಿಸಿಕೊಳ್ಳಬೇಕು. ತಿಂಗಳ ಕಡೇ ವಾರವಾದ ಕಾರಣ…
ಸಾಮಾನ್ಯವಾಗಿ ಕೆಟ್ಟದರತ್ತ ಮನಸ್ಸಾಗುತ್ತದೆ, ಅದಕ್ಕೇನು ಪರಿಹಾರ…
April 26, 2019ಮೈಸೂರು: ಹೆಚ್ಚಾಗಿ ಟ್ಯಾಬ್, ಮೊಬೈಲ್ ಬಳಕೆಯಿಂದ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ತಂದೆ-ತಾಯಿ ಹೇಳುತ್ತಾರೆ. ಇದು ನಿಜವೆ?. ಕುರುಕಲು(ಜಂಕ್ಫುಡ್) ತಿಂಡಿ ಒಳ್ಳೆಯ ದಲ್ಲವೆಂದು ಗೊತ್ತಿದ್ದರೂ ಮನಸ್ಸು ಅದರೆ ಡೆಗೆ ಸೆಳೆಯುತ್ತದೆ. ಅದರಿಂದ ಹೊರ ಬರು ವುದು ಹೇಗೆ?. ನಿಮ್ಮ ಅನುಭವದಲ್ಲಿ ನೀವು ಕಂಡಿರುವ ವಿಚಿತ್ರವಾದ ಕೇಸು ಯಾವುದು?. ಬುದ್ಧಿ ಶಕ್ತಿ ಮತ್ತು ಮನಸಿಗೆ ಏನು ಸಂಬಂಧ ವಿದೆ?. ಕನಸು ಏಕೆ ಬಿಳುತ್ತೆ?. ಪರೀಕ್ಷೆಯ ವೇಳೆ ಉಂಟಾಗುವ ಭಯ ಒತ್ತಡದಿಂದ ಪಾರಾ ಗುವುದು, ಕೋಪವನ್ನು ಕಡಿಮೆ…
ಏ.28, ನಟ ರಮೇಶ್ ಅರವಿಂದ್ರಿಂದ ವೃತ್ತಿ ಶಿಕ್ಷಣದ ಬಗ್ಗೆ ಆನ್ಲೈನ್ ಸಂವಾದ
April 26, 2019ಮೈಸೂರು: ಮೈಸೂರಿನ ಲರ್ನರ್ಸ್ ಪಿಯು ಕಾಲೇಜಿನ ವತಿಯಿಂದ ಏ.28ರಂದು ಬೆಳಿಗ್ಗೆ 9.30ಕ್ಕೆ ಏರ್ಪಡಿಸಿರುವ ‘ವೃತ್ತಿ ಮಾರ್ಗದರ್ಶನ’ ಕಾರ್ಯಕ್ರಮದಲ್ಲಿ ಚಿತ್ರನಟ ರಮೇಶ್ ಅರವಿಂದ್ ಅವರು ವಿದ್ಯಾರ್ಥಿಗಳೊಂದಿಗೆ ಆನ್ಲೈನ್ ಸಂವಾದ ನಡೆಸಲಿದ್ದಾರೆ. ಮೈಸೂರು ಮುಕ್ತ ವಿವಿ ಆವ ರಣದಲ್ಲಿರುವ ಘಟಿಕೋತ್ಸವ ಭವನದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಹತ್ತನೇ ತರಗತಿ ನಂತರ ಏನು?, ವೃತ್ತಿ ಆಯ್ಕೆ ಬಗೆ ಹೇಗೆ?, ಐಐಟಿ, ಇಂಜಿನಿಯರಿಂಗ್, ವೈದ್ಯಕೀಯ ವೃತ್ತಿಗಳಲ್ಲದೆ ಲಭ್ಯವಿರುವ ಉತ್ತಮ ವೃತ್ತಿಗಳ ಬಗ್ಗೆ ಮಾರ್ಗದರ್ಶನ ನೀಡಲಾಗುವುದು. ಪ್ರಶ್ನೆಗಳನ್ನು ಕೇಳಲಿಚ್ಛಿಸುವ ವಿದ್ಯಾರ್ಥಿಗಳು ಹಾಗೂ ಪೋಷಕರು ಪ್ರಶ್ನೆ…
ಮೈಸೂರು ವಿವಿ ಪ್ರತಿಷ್ಠಿತ ಯುವರಾಜ ಕಾಲೇಜಲ್ಲಿ ಪದವಿ ಪ್ರದಾನ
April 26, 2019ಮೈಸೂರು: ಮೈಸೂರು ವಿವಿ ಯುವರಾಜ ಕಾಲೇಜಿನ 6ನೇ ಪದವಿ ಪ್ರದಾನ ಸಮಾರಂಭದಲ್ಲಿ ಚಿನ್ನದ ಪದಕ ಹಾಗೂ ದತ್ತಿ ಬಹುಮಾನ ಪಡೆದ 13 ಮಂದಿ ಸೇರಿದಂತೆ ಒಟ್ಟು 706 ವಿದ್ಯಾರ್ಥಿ ಗಳು ವಿವಿಧ ಪದವಿಗಳನ್ನು ಸ್ವೀಕರಿಸಿದರು. ಕಾಲೇಜಿನ ಅಮೃತ ಮಹೋತ್ಸವ ಸಭಾಂ ಗಣದಲ್ಲಿ ಗುರುವಾರ ಏರ್ಪಡಿಸಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್) ಗೌರವ ಪ್ರಾಧ್ಯಾಪಕ ಪ್ರೊ.ಕೆ.ಜೆ.ರಾವ್ ಪದವಿ ಪ್ರದಾನ ಮಾಡಿದರು. ಬಳಿಕ ಮಾತನಾಡಿದ ಅವರು, ಪ್ರಸ್ತುತ ಇಡೀ ವಿಶ್ವವೇ ವಿಜ್ಞಾನ ಮತ್ತು ತಂತ್ರ…
ಮೈಸೂರಿಂದ ಬೆಂಗಳೂರಿಗೆ ಟಿಬೆಟಿಯನ್ನರ `ಶಾಂತಿಗಾಗಿ ಪಾದಯಾತ್ರೆ’
April 26, 2019ಮೈಸೂರು: – ಟಿಬೆಟಿಯನ್ ಹನ್ನೊಂದನೇ ಪಂಚೆನ್ ಲಾಮಾ ಮುಕ್ತಗೊಳಿಸಲು ಆಗ್ರಹಿಸಿ ಮೈಸೂರಿನಿಂದ ಬೆಂಗಳೂರಿಗೆ ಟಿಬೆಟಿ ಯನ್ನರು ಕೈಗೊಂಡಿರುವ `ಶಾಂತಿಗಾಗಿ ಪಾದಯಾತ್ರೆ’ಗೆ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್, ಮೇಯರ್ ಪುಷ್ಪ ಲತಾ ಜಗನ್ನಾಥ್ ಗುರುವಾರ ಮೈಸೂ ರಿನ ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಸ್.ಎ.ರಾಮದಾಸ್, ಟಿಬೆಟಿಯನ್ ಬೌದ್ಧ ಧರ್ಮದ ಪ್ರಮುಖ ನಾಯಕ 11ನೇ ಪಂಚೆನ್ ಲಾಮಾರ 30ನೇ ಹುಟ್ಟು ಹಬ್ಬದ ಸಂದರ್ಭದಂದು ಅವರ ಆಶೀ ರ್ವಾದ ಪಡೆಯಬೇಕಾಗಿತ್ತು….
ಮೈಸೂರು ಮೆಡಿಕಲ್ ಕಾಲೇಜು ಕಟ್ಟಡಕ್ಕೆ ಲಿಫ್ಟ್ ಸೌಲಭ್ಯ
April 26, 2019ಮೈಸೂರು: ನೂರು ವರ್ಷಕ್ಕೆ ಕಾಲಿಡುತ್ತಿ ರುವ ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಪಾರಂಪರಿಕ ಕಟ್ಟಡಕ್ಕೆ ಲಿಫ್ಟ್ ಸೌಲಭ್ಯ ಒದಗಿಸ ಲಾಗುತ್ತಿದೆ. ಕಟ್ಟಡದ ಮೊದಲ ಮಹಡಿಯಲ್ಲಿ ಸಂಸ್ಥೆಯ ಡೀನ್ ಅಂಡ್ ಡೈರೆಕ್ಟರ್ ಕಚೇರಿ, ಮುಖ್ಯ ಆಡಳಿತಾಧಿಕಾರಿ ಕಚೇರಿ, ಆಡಳಿತ ಕಚೇರಿ ಸೇರಿದಂತೆ ಹಲವು ವಿಭಾಗಗಳ ತರಗತಿ ಕೊಠಡಿ, ಲ್ಯಾಬೋರೇಟರಿ, ಸಭಾಂಗಣ ಇರುವುದ ರಿಂದ ಪ್ರಾಧ್ಯಾಪಕರು, ಸಿಬ್ಬಂದಿ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ಮೊದಲ ಮಹಡಿಗೆ ಹೋಗಲು ಅನುಕೂಲ ವಾಗುವಂತೆ ಕಟ್ಟಡಕ್ಕೆ ಪ್ರಧಾನ ಪ್ರವೇಶ ದ್ವಾರದ ಬಳಿ ಲಿಫ್ಟ್…
ನಾಲ್ಕು ತಿಂಗಳಲ್ಲಿ ಮೈಸೂರು ಜಿಲ್ಲೆಯಲ್ಲಿ ಆರು ಚಿಕುನ್ಗುನ್ಯಾ ಪ್ರಕರಣ ಪತ್ತೆ
April 26, 2019ಮೈಸೂರು: ಚಿಕುನ್ಗುನ್ಯಾ, ಡೆಂಗ್ಯೂ ಹಾಗೂ ಮಲೇರಿಯಾ ಜ್ವರಗಳಿಗೆ ಸೊಳ್ಳೆಯೇ ಮೂಲ ಕಾರಣ. ಸೊಳ್ಳೆ ನಿಯಂತ್ರಿಸಿದರೆ ಇವುಗಳಿಂದ ಮುಕ್ತವಾಗಬಹುದು. ಜಿಲ್ಲೆಯಲ್ಲಿ ಈ ವರ್ಷದ ಜನವರಿಯಿಂದ ಏಪ್ರಿಲ್ 24ರವರೆಗೆ ಚಿಕುನ್ ಗುನ್ಯಾ ಜ್ವರದ 6 ಪ್ರಕರಣಗಳು ದಾಖಲಾಗಿವೆ. ಡೆಂಗ್ಯೂ ಹಾಗೂ ಮಲೇರಿಯಾ ಜ್ವರದ ಪ್ರಕರಣಗಳು ಎಲ್ಲಿಯೂ ವರದಿಯಾಗಿಲ್ಲ. ಈ ಅಂಕಿ-ಅಂಶವನ್ನು ಮೈಸೂರು ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಚೇರಿ ನೀಡಿದ್ದು, ಸೊಳ್ಳೆಗಳ ಕಚ್ಚುವಿಕೆಯಿಂದ ಹರಡುವ ಈ ಮೂರರ ಬಗ್ಗೆಯೂ ವ್ಯಾಪಕ ಜಾಗೃತಿ ಮೂಡಿಸಲಾಗು ತ್ತಿದೆ. ಡೆಂಗ್ಯೂ ಮತ್ತು…
ಪಾಲಿಕೆ ಅಧಿಕಾರಿಗಳಿಂದ ಕಾರ್ಯಾಚರಣೆ 90 ಕೆಜಿ ಪ್ಲಾಸ್ಟಿಕ್ ಬ್ಯಾಗ್ ವಶ
April 26, 2019ಮೈಸೂರು: ಪ್ಲಾಸ್ಟಿಕ್ ನಿಷೇಧ ಜಾರಿಯಲ್ಲಿದ್ದರೂ ಮೈಸೂರಿನ ವಿವಿಧೆಡೆ ಕದ್ದು ಮುಚ್ಚಿ ಪ್ಲಾಸ್ಟಿಕ್ ಚೀಲ ಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿ ಗಳ ಮೇಲೆ ಮೈಸೂರು ನಗರ ಪಾಲಿಕೆ ಅಧಿಕಾರಿಗಳು ಗುರುವಾರ ಕಾರ್ಯಾ ಚರಣೆ ನಡೆಸಿ ಸುಮಾರು 90 ಕೆಜಿಯಷ್ಟು ಪ್ಲಾಸ್ಟಿಕ್ ಬ್ಯಾಗ್ಗಳನ್ನು ವಶಪಡಿಸಿಕೊಂಡಿ ದ್ದಾರೆ. ಪ್ಲಾಸ್ಟಿಕ್ ಬಳಕೆ ನಿಷೇಧದ ನಡು ವೆಯೂ ಮಾರಾಟಗಾರರು ಪ್ಲಾಸ್ಟಿಕ್ ಬ್ಯಾಗ್ ಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಪಾಲಿಕೆ ಆರೋಗ್ಯಾ ಧಿಕಾರಿ ಡಾ.ನಾಗರಾಜ್ ನೇತೃತ್ವದಲ್ಲಿ ಪರಿಸರ ಇಂಜಿನಿಯರ್ ಮೈತ್ರಿ, ಆರೋಗ್ಯ ನಿರೀ…
ಇಸ್ರೇಲ್ ಮೂಲದ ಹಿಂದೂ ಸನ್ಯಾಸಿ ನಾರದ ಮುನಿಗಳ ಆರಾಧನೆ
April 25, 2019ಗೋಣಿಕೊಪ್ಪ: ಅತ್ತೂರು ಗ್ರಾಮ ದಲ್ಲಿರುವ ಇಸ್ರೇಲ್ ಮೂಲದ ಹಿಂದೂ ಸನ್ಯಾಸಿ ನಾರದ ಮುನಿಗಳ ಸಮಾಧಿ ಸ್ಥಾನದಲ್ಲಿ ನಡೆದ ನಾರದ ಮುನಿಗಳ ಆರಾಧನಾ ಮಹೋತ್ಸವ ಭಾರತ ಹಾಗೂ ಇಸ್ರೇಲ್ ಭಾಂಧವ್ಯ ಬೆಸೆಯುವ ದಿಕ್ಕಿನಲ್ಲಿ ಮಹತ್ವ ಪಡೆಯಿತು. ಸಮಾಧಿಯ ಸಮೀಪದಲ್ಲಿ 2 ಎಕರೆ ಪ್ರದೇಶದಲ್ಲಿ ಭಾರತ ಹಾಗು ಇಸ್ರೇಲ್ ನಡುವೆ ಭಾಂದವ್ಯ ವೃದ್ದಿಸುವ ದಿಕ್ಕಿನಲ್ಲಿ ಅಧ್ಯ ಯನ ಕೇಂದ್ರವನ್ನು ಸ್ಥಾಪಿಸುವುದಾಗಿ ಸಮಾಧಿ ಸ್ಥಳದ ದಾನಿ ಚಾಯಾ ನಂಜಪ್ಪ ಘೋಷಿ ಸಿದರು. ನಾರದ ಮುನಿಗಳ ಆರಾಧನಾ ಮಹೋತ್ಸವದಲ್ಲಿ ಮಾತನಾಡಿದ ಅವರು, ದಿಯಾ…










