ಮೈಸೂರು: ಸಹೋದರತ್ವ ಮತ್ತು ಭ್ರಾತೃತ್ವ ಸಾರುವ ಮುಸ್ಲಿಂರ ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ಬಿಗ್ಬಜಾರ್ನಲ್ಲಿ ಇಫ್ತಿಯಾರ್ ಕೂಟವನ್ನು ಶುಕ್ರವಾರ ಆಯೋಜಿಸಲಾಗಿತ್ತು. ಕಳೆದ 8 ವರ್ಷಗಳಿಂದ ಯಶಸ್ವಿಯಾಗಿ ಆಯೋಜಿಸಿದ್ದ ಇಫ್ತಿಯಾರ್ ಕೂಟವನ್ನು ಈ ಬಾರಿಯೂ ಆಯೋಜಿಸಲಾಗಿದೆ.ಈ ಬಾರಿಯ ಇಫ್ತಿಯಾರ್ ಕೂಟದಲ್ಲಿ ಸುಮಾರು 400ಕ್ಕೂ ಹೆಚ್ಚು ಮುಸ್ಲಿಂ ಬಾಂಧವರು ಭಾಗಿಯಾಗಿದ್ದರು. ಈ ಬಗ್ಗೆ ಬಿಗ್ಬಜಾರ್ನ ಸಿಬ್ಬಂದಿ ಸಿ.ಆರ್.ಪುನೀತ್ಕುಮಾರ್ `ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿ, ಬಿಗ್ ಬಜಾರ್ ಫ್ಯೂಚರ್ ಗ್ರೂಪ್ ಪ್ರಮುಖ ವಾಣ ಜ್ಯ ಮಾರುಕಟ್ಟೆಗಳಲ್ಲಿ ಒಂದಾಗಿದ್ದು, ದೇಶಾ ದ್ಯಂತ 124…
ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವಂತೆ ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ
June 10, 2018ಮೈಸೂರು: ಪ್ರಸಕ್ತ ಶೈಕ್ಷಣ ಕ ಸಾಲಿನಿಂದ ಶಾಲಾ-ಕಾಲೇಜಿನ ವಿದ್ಯಾರ್ಥಿಗಳಿಗೆ ಉಚಿತ ಬಸ್ಪಾಸ್ ನೀಡುವಂತೆ ಆಗ್ರಹಿಸಿ ಮೈಸೂರಿನ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಎಐಡಿಎಸ್ಒ ಸಂಘಟನೆಯ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಬಜೆಟ್ನಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಬಸ್ಪಾಸ್ ನೀಡುವುದಾಗಿ ಘೋಷಣೆ ಮಾಡಿದ್ದರು. ಈ ಶೈಕ್ಷಣ ಕ ಸಾಲಿನ ತರಗತಿಗಳು ಆರಂಭವಾಗಿವೆ. ಆದರೆ ಇಂದಿಗೂ ಉಚಿತ ಬಸ್ಪಾಸ್ ನೀಡುವುದಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ವಿದ್ಯಾರ್ಥಿಗಳು ಪ್ರತಿದಿನ ಹಣ ನೀಡಿ ತರಗತಿಗೆ ಬರಲು ಸಾಧ್ಯವಾಗದೆ…
9 ಮಂದಿಗೆ ನಂದಿ ಪ್ರಶಸ್ತಿ ಪ್ರದಾನ
June 10, 2018ಮೈಸೂರು: ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಶನಿವಾರ ಮೈಸೂರು ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ವತಿ ಯಿಂದ 9 ಮಂದಿಗೆ ‘ನಂದಿ ಪ್ರಶಸ್ತಿ’ ಯನ್ನು ಪ್ರದಾನ ಮಾಡಲಾಯಿತು. ಕ್ರೀಡಾ ಪ್ರೋತ್ಸಹಕ್ಕಾಗಿ ತಿ.ನರಸೀಪುರ ತಾಲೂಕು ಕುರುಬೂರಿನ ವಿದ್ಯಾದರ್ಶಿನಿ ಕಾನ್ವೆಂಟ್ ಸಹಶಿಕ್ಷಕ ಕೆ.ಮಂಜುನಾಥ, ಕ್ರೀಡಾ ವರದಿಗಾರಿಕೆಗಾಗಿ ಕೆ.ನಾಗರತ್ನಾ ಬಾಯಿ, ಕ್ರೀಡಾ ಫೆÇೀಟೋಗ್ರಫಿಗಾಗಿ ಕೆ.ಎಚ್.ಚಂದ್ರು, ಹಾಗೂ 2017-18ನೇ ಸಾಲಿನ ಅತ್ಯುತ್ತಮ ಅಥ್ಲೆಟ್ಗಳಾದ ಡಬ್ಲ್ಯೂ.ಆರ್.ಹರ್ಷಿತಾ (ಮಹಿಳಾ ವಿಭಾಗ) ಸಿ.ಜೆ.ಚೇತನ್ (ಪುರು ಷರ ವಿಭಾಗ), ಎಂ.ಆರ್.ಧನುಷಾ (ಜೂನಿ ಯರ್ ಮಹಿಳಾ ವಿಭಾಗ), ಎಸ್.ಎಲ್. ಸಹನಾ (18…
ನೂರಾರು ವಿದ್ಯಾರ್ಥಿಗಳಿಗೆ ಜ್ಞಾನಪೀಠ ಪುರಸ್ಕøತ ಸಾಹಿತಿ ಡಾ.ಯು.ಆರ್.ಅನಂತಮೂರ್ತಿ ಬದುಕು-ಬರಹ ಪರಿಚಯ
June 10, 2018ಮೈಸೂರು: ಮೈಸೂರಿನ ಕುವೆಂಪುನಗರದಲ್ಲಿರುವ ಶ್ರೀ ಕಾವೇರಿ ಪ್ರಥಮ ದರ್ಜೆ ಕಾಲೇಜಿನ ಸಭಾಂ ಗಣದಲ್ಲಿ ಶನಿವಾರ ನಡೆದ ‘ಅನಂತ ಸ್ಮರಣೆ’ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳ 30ಕ್ಕೂ ಹೆಚ್ಚು ಗ್ರಾಮೀಣ ಪ್ರದೇಶದ ಶಾಲೆಗಳ ನೂರಾರು ವಿದ್ಯಾರ್ಥಿ ಗಳು ಪಾಲ್ಗೊಂಡು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಯು.ಆರ್.ಅನಂತ ಮೂರ್ತಿ ಅವರ ಜೀವನ ಹಾಗೂ ಸಾಧನೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಡಾ.ಯು.ಆರ್.ಅನಂತಮೂರ್ತಿ ಸಾಹಿ ತ್ಯಾಸಕ್ತರ ಬಳಗ ಆಯೋಜಿಸಿದ್ದ ‘ಅನಂತ ಸ್ಮರಣೆ’ ವಿಶೇಷ ಉಪನ್ಯಾಸ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ಡಾ.ಯು.ಆರ್. ಅನಂತಮೂರ್ತಿ ಅವರ…
ಡಾ.ಎಂ.ಶೀನಿವಾಸ್ ಕೆ.ಆರ್.ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ
June 10, 2018ಮೈಸೂರು: ಮೈಸೂರಿನ ಕೆಆರ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕರನ್ನಾಗಿ ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ವೈದ್ಯಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ.ಎಂ.ಶ್ರೀನಿವಾಸ್ ಅವರನ್ನು ನೇಮಿಸಲಾಗಿದೆ. ವೈದ್ಯಕೀಯ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ವೈ.ಎಸ್.ದಳವಾಯಿ ಅವರು ಶುಕ್ರವಾರ ಡಾ.ಎಂ.ಶ್ರೀನಿವಾಸ್ ಅವರ ನೇಮಕಾತಿ ಅಧಿಸೂಚನೆ ಹೊರಡಿಸಿದ್ದಾರೆ. ಪ್ರಭಾರ ವೈದ್ಯಕೀಯ ಅಧೀಕ್ಷಕರಾದ ಡಾ.ಎಸ್.ಚಂದ್ರಶೇಖರ ಅವರಿಂದ ಶುಕ್ರವಾರ ಡಾ.ಶ್ರೀನಿವಾಸ್ ಅಧಿಕಾರ ವಹಿಸಿಕೊಂಡರು. ತೀವ್ರ ಸ್ಪರ್ಧೆ ಏರ್ಪಟ್ಟಿದ್ದ ಕಾರಣ ಸರ್ಕಾರದ ಮಟ್ಟದಲ್ಲಿ ವೈದ್ಯಕೀಯ ಅಧೀಕ್ಷಕರ ನೇಮಕ ಪ್ರಕ್ರಿಯೆ ನೆನೆಗುದಿಗೆ ಬಿದ್ದ ಕಾರಣ ಡಾ.ಚಂದ್ರಶೇಖರ್…
ವಿಧಾನ ಪರಿಷತ್ ಸದಸ್ಯ ಧರ್ಮಸೇನರಿಗೆ ಸಚಿವ ಸ್ಥಾನ ನೀಡಲು ಆಗ್ರಹ
June 10, 2018ಮೈಸೂರು: ಮೈಸೂರು ಮತ್ತು ಚಾಮರಾಜನಗದ ಜಿಲ್ಲಾ ಸ್ಥಳೀಯ ಸಂಸ್ಥೆಯಿಂದ ವಿಧಾನ ಪರಿಷತ್ ಸದಸ್ಯರಾಗಿ ಎರಡನೇ ಬಾರಿಗೆ ಅಧಿಕ ಮತಗಳಿಂದ ಜಯ ಗಳಿಸಿದ ಆರ್. ಧರ್ಮಸೇನ ಅವರಿಗೆ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ನೀಡುವಂತೆ ಮೈಸೂರು ನಗರ (ಜಿಲ್ಲಾ) ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಆರ್. ಸುನಂದಕುಮಾರ್ ವರಿಷ್ಠರಲ್ಲಿ ಒತ್ತಾಯಿಸಿದ್ದಾರೆ.
ಈದ್-ಉಲ್-ಫಿತರ್ ಆಚರಣೆ
June 10, 2018ಮೈಸೂರು: ಇಲ್ಲಿನ ಲಷ್ಕರ್ ಮೊಹಲ್ಲಾದ ಅಶೋಕಾ ರಸ್ತೆಯಲ್ಲಿರುವ ಮಸೀದಿ ಆಜûಮ್ ಮರ್ಕಾಜ್ó ಅಹಲೆ ಸುನ್ನತೋ ಜಮಾತ್ ವ್ಯವಸ್ಥಾಪಕ ಸಮಿತಿಯಿಂದ ಜೂನ್ 11 ರಂದು ರಾತ್ರಿ 10 ಗಂಟೆಗೆ ಶಾಬೆ ಖಾದರ್ ಅನ್ನು ಆಚರಿಸಲಾಗುವುದು. ಈ ಪ್ರಯುಕ್ತ ನಮಾಜ್-ಇ-ಇಶಾಖ್ ಪ್ರಾರ್ಥನೆ, ನಮಾಜ್-ಇ-ತರಾವಿ ಮತ್ತು ಫಜಿûಲುತ್-ಇ-ಶಾಜಿ ಖಾದರ್ ನಡೆಯಲಿದೆ. ಹಾಫಿಜ್ó ಖಾರಿ ಮೌಲಾನಾ ಮುಫ್ತಿ ಮೊಹಮದ್ ಶಂಶುಲ್ ಹುದಾ, ಖತೀಬ್ & ಖಾಜಿó, ಇದಾರೆ ಷರಿಯಾ ಮಸೀದಿ ಅeóÁಮ್ ಅವರು ಭಾಷಣ ಮಾಡಲಿದ್ದಾರೆ. ಅಂದು ಇಡೀ ರಾತ್ರಿ ಮಸೀದಿ ತೆರೆದಿದ್ದು…
ಅಭಿನಂದನಾ ಕಾರ್ಯಕ್ರಮ
June 10, 2018ಮೈಸೂರು: ಇತ್ತೀಚೆಗೆ ನಿವೃತ್ತಿ ಹೊಂದಿದ ನಗರಪಾಲಿಕೆಯ ಸಹಾಯಕ ಅಭಿಯಂತರ ಎ.ಎಂ. ಮಂಜುನಾಥ್ ಅವರಿಗೆ ಮೈಸೂರು ಮಹಾನಗರ ಪಾಲಿಕೆಯ 36ನೇ ವಾರ್ಡಿನ ನಾಗರಿಕರಿಂದ ಜೂ. 11 ರಂದು ಮಧ್ಯಾಹ್ನ 12.30ಕ್ಕೆ ಜೆಎಲ್ಬಿ ರಸ್ತೆಯಲ್ಲಿರುವ ರೋಟರಿ ಕ್ಲಬ್ (ರೋಟರಿ ಶಾಲಾ ಆವರಣ)ದಲ್ಲಿ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಚಾಮರಾಜ ಕ್ಷೇತ್ರದ ಮಾಜಿ ಶಾಸಕ ವಾಸು, ಪ್ರಭಾರ ಆಯುಕ್ತ ಹೆಚ್. ನಾಗರಾಜು, ಸ್ವತಂತ್ರ ಹೋರಾಟಗಾರರ ಸಂಘದ ಅಧ್ಯಕ್ಷ ಡಾ. ಎಂ.ಜಿ. ಕೃಷ್ಣಮೂರ್ತಿ ಅವರು ಭಾಗವಹಿಸಲಿದ್ದಾರೆ.
ಖಾತೆಹಂಚಿಕೆ ಸಿಎಂ, ಡಿಸಿಎಂ ಬಳಿ ಭರಪೂರ ಅಧಿಕಾರ
June 9, 2018ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಚಿವರು ಗಳಿಗೆ ಖಾತೆಗಳನ್ನು ಹಂಚಿಕೆ ಮಾಡಲಾ ಗಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹಣಕಾಸು, ಗುಪ್ತಚರ, ಇಂಧನ, ವಾರ್ತಾ ಮತ್ತು ಪ್ರಸಾರ, ಯೋಜನಾ ಮತ್ತು ಸಾಂಖ್ಯಿಕ ಸೇರಿದಂತೆ 11 ಖಾತೆಗಳನ್ನು ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ. ಉಪ ಮುಖ್ಯಮಂತ್ರಿ ಡಾ. ಜಿ.ಪರಮೇ ಶ್ವರ್ ಅವರಿಗೆ ಗೃಹ ಮತ್ತು ಬೆಂಗಳೂರು ನಗರಾಭಿವೃದ್ಧಿ ಖಾತೆಗಳನ್ನು ನೀಡಲಾಗಿದೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು 30 ಸಾವಿರಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಸೋಲಿಸಿ ದಾಖಲೆ ನಿರ್ಮಿಸಿದ ಜಿ.ಟಿ.ದೇವೇಗೌಡ ರಿಗೆ…
ಜಿಟಿಡಿ, ಪುಟ್ಟರಾಜು ಬೆಂಬಲಿಗರು, ಜೆಡಿಎಸ್ ಮುಖಂಡರ ಆಕ್ರೋಶ
June 9, 2018ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (ಈಗ ಮಾಜಿ) ಅವರನ್ನು ಮಣ ಸಿದ್ದ ಜಿ.ಟಿ. ದೇವೇಗೌಡ ಅವರಿಗೆ ಪ್ರಮುಖ ಖಾತೆ ಲಭಿಸುವ ನಿರೀಕ್ಷೆಯ ಲ್ಲಿದ್ದ ಅವರ ಬೆಂಬಲಿಗರು ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಈಗ ಅವರಿಗೆ ಉನ್ನತ ಶಿಕ್ಷಣ ಖಾತೆ ನೀಡಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಹಾಗೂ ಪ್ರಭಾವಿ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ 30 ಸಾವಿರಕ್ಕೂ ಅಧಿಕ ಮತಗಳಿಂದ ಜಯ ಸಾಧಿಸಿದ್ದ ಜಿ.ಟಿ. ದೇವೇಗೌಡರಿಗೆ ಸಹಜವಾಗಿಯೇ ಪ್ರಬಲ ಖಾತೆ ಸಿಗುವ ಬಗ್ಗೆಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಭಾರೀ…










