ಮೈಸೂರು: ಪರಿಸರ ದಿನಾಚರಣೆಯಂದು ಮಾತ್ರ ಸಸಿ ನೆಟ್ಟು ಕಾಳಜಿ ವಹಿಸಿದರೆ, ಪರಿಸರ ಸಂರಕ್ಷಣೆ ಸಾಧ್ಯವಿಲ್ಲ. ಹೀಗಾಗಿ ಪರಿಸರ ಸಂರಕ್ಷಣೆ ನಮ್ಮ ಬದುಕಿನ ಪ್ರಮುಖ ಭಾಗವಾಗಬೇಕು ಎಂದು ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಪ್ರಾಯಪಟ್ಟರು. ಮೈಸೂರು ಹೆಬ್ಬಾಳಿನ ಸಿಐಟಿಬಿ ಛತ್ರದ ಸಮೀಪದ ಮೈದಾನದಲ್ಲಿ ನವಭಾರತ ನಿರ್ಮಾಣ್ ಸೇವಾ ಟ್ರಸ್ಟ್, ಸ್ವಚ್ಛಂದ ಸಂಸ್ಥೆ ಜಂಟಿ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಗಿಡ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ತ್ಯಜಿಸಿ,…
ವಸತಿ ಯೋಜನೆ ಸಂಬಂಧಿತ 2 ದಿನಗಳ ವಸ್ತುಪ್ರದರ್ಶನ ಆರಂಭ
June 10, 2018ಮೈಸೂರು: ಕಟ್ಟಡ ನಿರ್ಮಾಣ ಸಂಸ್ಥೆ ಬ್ರಿಗೇಡ್ ಗ್ರೂಪ್ನ ವಸತಿ ಯೋಜನೆಗೆ ಸಂಬಂಧಿಸಿದ ಎರಡು ದಿನಗಳ ವಸ್ತು ಪ್ರದರ್ಶನ ಶನಿವಾರ ಚಾಲನೆ ಪಡೆದುಕೊಂಡಿತು. ‘ಬ್ರಿಗೇಡ್ ಇಜಿ ಹೋಂ ಕಾರ್ನಿವಲ್/ ಶೀರ್ಷಿಕೆಯಡಿ ಮೈಸೂರಿನ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಗ್ರಾಂಡ್ ಮಕ್ರ್ಯುರ್ ಹೋಟೆಲ್ನ ಸಭಾಂಗಣದಲ್ಲಿ ಈ ಪ್ರದರ್ಶನ ಆರಂಭಗೊಂಡಿದ್ದು, ಸದರಿ ಸಂಸ್ಥೆ ವಸತಿ ಯೋಜನೆಗಳ ಸಮಗ್ರ ಮಾಹಿತಿ ಅನಾವರಣಗೊಂಡಿವೆ. ವಸ್ತು ಪ್ರದರ್ಶನ ಕುರಿತಂತೆ ಪತ್ರಿಕೆಯೊಂದಿಗೆ ಮಾತನಾಡಿದ ಬ್ರಿಗೇಡ್ ಸಂಸ್ಥೆಯ ಮೈಸೂರು ಶಾಖೆಯ ಮುಖ್ಯಸ್ಥ ಬಿ.ಆರ್.ಸುಚೇಂದ್ರ್ರ, ಕಳೆದ ವರ್ಷಗಿಂತ ಪ್ರಸ್ತುತ ರಿಯಲ್ ಎಸ್ಟೇಟ್…
ಇಂದು ಕೃತಿ ಬಿಡುಗಡೆ
June 10, 2018ಮೈಸೂರು: ವಿಜಯಧ್ವನಿ ಪ್ರತಿಷ್ಠಾನದ ಪ್ರಥಮ ವರ್ಷದ ವಾರ್ಷಿಕೋತ್ಸವ, ಹುಬ್ಬಳ್ಳಿಯ ಕಾವ್ಯಮಿತ್ರ ಪ್ರಕಾಶನದ ಉದ್ಘಾಟನೆ ಹಾಗೂ ಕೃತಿ ಬಿಡುಗಡೆ ಕಾರ್ಯಕ್ರಮವನ್ನು ಜೂ.10ರಂದು ಜೆಎಲ್ಬಿ ರಸ್ತೆಯ ರೋಟರಿ ಸಭಾಂಗಣ ದಲ್ಲಿ ಆಯೋಜಿಸಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷೆ ಆರ್.ಸಿ.ರಾಜಲಕ್ಷ್ಮೀ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಮಧ್ಯಾಹ್ನ 2.30ಕ್ಕೆ ಸಾಹಿತಿ ಜಯಪ್ಪ ಹೊನ್ನಾಳಿ ಸಮಾರಂಭ ಉದ್ಘಾಟಿಸಲಿದ್ದು, ಕೌಟಿಲ್ಯ ವಿದ್ಯಾಸಂಸ್ಥೆಯ ಸಂಸ್ಥಾಪಕ ಕೌಟಿಲ್ಯ ರಘು ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಕವಿ ನಿತೀನ್ ನೀಲಕಂಠೆ ಅವರ `ಕೂಲಿಂಗ್…
ಮತ್ತೆ ಚಿತ್ರರಂಗದತ್ತ ಮೋಹಕ ತಾರೆ?
June 10, 2018ಬೆಂಗಳೂರು: – ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ ಬಳಿಕ ಚಿತ್ರ ರಂಗದಿಂದ ದೂರ ಉಳಿದಿದ್ದ ಸ್ಯಾಂಡಲ್ವುಡ್ ಕ್ವೀನ್, ಮೋಹಕ ತಾರೆ ರಮ್ಯಾ ಅವರು ಮತ್ತೆ ಚಿತ್ರರಂಗದತ್ತ ಮುಖ ಮಾಡುವ ಸೂಚನೆ ನೀಡಿದ್ದಾರೆ. ಈ ಬಗ್ಗೆ ಸ್ವತಃ ರಮ್ಯಾ ಅವರೇ ಸ್ಪಷ್ಟನೆ ನೀಡಿದ್ದಾರೆ. ನಟ ರಕ್ಷಿತ್ ಶೆಟ್ಟಿಯವರ ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಟೀಸರ್ಗೆ ರಮ್ಯಾ ಅವರು ಮೆಚ್ಚುಗೆ ನೀಡಿದ್ದು, ನಂತರ ರಕ್ಷಿತ್ ಶೆಟ್ಟಿಯವರು ಕೇಳಿದ ಪ್ರಶ್ನೆಗೆ ಕುತೂಹಲಭರಿತ ಉತ್ತರವನ್ನು ನೀಡಿದ್ದಾರೆ. ಈ ಹಿಂದೆ ರಕ್ಷಿತ್ ಶೆಟ್ಟಿಯವರಿಗೆ ಟ್ವೀಟ್ ಮಾಡಿದ್ದ ರಮ್ಯಾ…
ಸಹ ಪ್ರಯಾಣ ಕನಂತೆ ಹೊಂಚು ಹಾಕಿ, ಮೊಬೈಲ್ ಪಡೆದು ಮಾತನಾಡುತ್ತಲೇ ಪರಾರಿ!
June 10, 2018ಸಹಾಯ ಮಾಡಲು ಹೋಗಿ ವಂಚನೆಗೊಳಗಾದ ಯುವಕ ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ವಂಚನೆ ಮೈಸೂರು: ಮಾತನಾಡಿ ಕೊಡುವುದಾಗಿ ಸಹ ಪ್ರಯಾಣ ಕರ ಬೆಲೆ ಬಾಳುವ ಮೊಬೈಲ್ ಫೋನ್ ಪಡೆದುಕೊಂಡ ಅಪರಿಚಿತ ವ್ಯಕ್ತಿಯೋರ್ವ ಮಾತನಾಡುತ್ತಾ ವೋಲ್ವೋ ಬಸ್ಸಿನಿಂದಿಳಿದು ಪರಾರಿಯಾದ ಪ್ರಸಂಗ ಮೈಸೂರಿನ ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಮೈಸೂರಿನ ರಾಮಕೃಷ್ಣನಗರದ ‘ಐ’ ಬ್ಲಾಕ್ ನಿವಾಸಿ ಚೆಲುವರಾಜು ಅವರ ಮಗ ವಿ.ಸಿ. ತೇಜಸ್, ಸಹ ಪ್ರಯಾಣ ಕನಂತೆ ವರ್ತಿಸಿದ ಅಪರಿಚಿತ ವ್ಯಕ್ತಿಗೆ ಸಹಾಯ ಮಾಡಲು ಹೋಗಿ ತನ್ನ…
ಹಳೆ ಮೈಸೂರು ಪ್ರಾಂತ್ಯದಲ್ಲಿ ಹಿಂದೂಸ್ತಾನಿ ಸಂಗೀತ ನೆಲೆಯೂರಲು ಪ್ರೊ.ಬಿ.ಸೋಮಶೇಖರ್ ಕೊಡುಗೆಯೂ ಇದೆ
June 10, 2018ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪುರಸ್ಕೃತ ಪಂ.ಇಂದೂಧರ ನಿರೋಡಿ ಅಭಿಮತ ಮೈಸೂರು: ಹಿಂದೂಸ್ತಾನಿ ಸಂಗೀತ ಹಳೆ ಮೈಸೂರು ಪ್ರಾಂತ್ಯದಲ್ಲಿ ನೆಲೆಯೂರಲು ಸಪ್ತಸ್ವರ ಬಳಗದಲ್ಲಿ ಒಬ್ಬರಾಗಿದ್ದ ಪ್ರೊ.ಬಿ.ಸೋಮಶೇಖರ್ ಅವರ ಕೊಡುಗೆಯೂ ಇದೆ ಎಂದು ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪುರಸ್ಕೃತ ಪಂ.ಇಂದೂಧರ ನಿರೋಡಿ ಅಭಿಪ್ರಾಯಪಟ್ಟರು. ಕುವೆಂಪುನಗರದ ಗಾನಭಾರತಿ ಸಭಾಂಗಣದಲ್ಲಿ ಸಪ್ತಸ್ವರ ಬಳಗ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ `ಪ್ರೊ.ಬಿ.ಸೋಮಶೇಖರ್ ಅವರ ನೆನಪಿನ ಸಂಗೀತ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಕಳೆದ ನಲ್ವತ್ತು ವರ್ಷಗಳ ಹಿಂದೆ ಹಿಂದೂಸ್ತಾನಿ ಸಂಗೀತ ಕೇವಲ ಮೈಸೂರು ದಸರಾ…
ಸಂಗೀತ, ಸಾಹಿತ್ಯದ ಮೂಲಕ ಯುವಜನರಲ್ಲಿ ಪರಿಸರ ಪ್ರಜ್ಞೆ ಮೂಡಿಸಬೇಕು ಪರಿಸರ ತಜ್ಞ ಡಾ.ಎ.ಎನ್.ಎಲ್ಲಪ್ಪ ರೆಡ್ಡಿ ಸಲಹೆ
June 10, 2018ಮೈಸೂರು: ನಮ್ಮ ಸುತ್ತಮುತ್ತಲಿನ ಪರಿಸರ ಉಳಿಯಬೇಕಾದರೆ, ನಮ್ಮ ಆತ್ಮ ಪರಿಶುದ್ಧವಾಗಿರಬೇಕು.ಇದಕ್ಕೆ ಯುವ ಜನರಲ್ಲಿ ಸಂಗೀತ, ಸಾಹಿತ್ಯಾಸಕ್ತಿ ಬೆಳೆಸಲು ಹೆಚ್ಚಿನ ಒತ್ತು ನೀಡಬೇಕು ಎಂದು ಹಿರಿಯ ಪರಿಸರ ತಜ್ಞ ಡಾ.ಎ.ಎನ್.ಎಲ್ಲಪ್ಪ ರೆಡ್ಡಿ ಅಭಿಪ್ರಾಯಪಟ್ಟರು. ಜೆಎಲ್ಬಿ ರಸ್ತೆಯ ನಾದಬ್ರಹ್ಮ ಸಭಾಂಗಣದಲ್ಲಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ವತಿಯಿಂದ `ವಿಶ್ವ ಪರಿಸರ ದಿನಾಚರಣೆ’ ಅಂಗವಾಗಿ ಆಯೋಜಿಸಿದ್ದ `ವೈದ್ಯರಿಂದ ಪರಿಸರ ಗೀತೆಗಳ ಗಾಯನ’ ಕಾರ್ಯಕ್ರಮಕ್ಕೆ ಹೂವಿನ ಗಿಡಕ್ಕೆ ನೀರು ಹಾಕುವ ಮೂಲಕ ಚಾಲನೆ ನೀಡಿ, ಮಾತನಾಡಿದರು. ಸೌಂದರ್ಯ ರಾಶಿ ಅರಣ್ಯ ಪ್ರದೇಶದ ಒಂದು…
ಚಾಮುಂಡಿಬೆಟ್ಟದಲ್ಲಿ ಹಿಮ್ಮುಖವಾಗಿ ಲಾರಿ ಚಲಿಸಿ ಕಾರ್ಮಿಕ ಸಾವು
June 10, 2018ಮೈಸೂರು: ಇಳಿಜಾರಿನಲ್ಲಿ ನಿಲ್ಲಿಸಿದ್ದ ಲಾರಿ ಹಿಮ್ಮುಖವಾಗಿ ಹರಿದು ಕಾರ್ಮಿಕನೋರ್ವ ಮೃತಪಟ್ಟಿರುವ ಘಟನೆ ಚಾಮುಂಡಿಬೆಟ್ಟದಲ್ಲಿ ಶುಕ್ರವಾರ ನಡೆದಿದೆ. ಪಶ್ಚಿಮ ಬಂಗಾಳ ಮೂಲದ ಪ್ರಕಾಶ್ ಸರಕಾರ್(34) ಮೃತ ವ್ಯಕ್ತಿ. ಚಾಮುಂಡಿಬೆಟ್ಟದಲ್ಲಿ ಮಲ್ಟಿ ಲೆವೆಲ್ ಪಾರ್ಕಿಂಗ್ ಕಾಮಗಾರಿ ನಡೆಯುತ್ತಿದ್ದು, ಶುಕ್ರವಾರ ಮಧ್ಯಾಹ್ನ ಕೆಬಿಆರ್ ಇನ್ ಫ್ರಾಟೆಕ್ಟ್ ಕಂಪನಿಗೆ ಸೇರಿದ (ಕೆಎ01 ಎಹೆಚ್4104) ಲಾರಿ ಚಾಲಕ ನಾಗೇಂದ್ರ, ಸಿಮೆಂಟ್ ಮಿಕ್ಸರ್ ತುಂಬಿದ ಲಾರಿ ಯನ್ನು ತಂದು ನಿಲ್ಲಿಸಿದ್ದಾರೆ. ಇಳಿಜಾರು ಮುಖವಾಗಿ ನಿಲ್ಲಿಸಿದ್ದರಿಂದ ಚಾಲಕನ ನಿಯಂತ್ರಣ ಕಳೆದುಕೊಂಡ ಲಾರಿ ಹಿಮ್ಮುಖವಾಗಿ ಚಲಿಸಿ ಶೆಡ್ನೊಳಗೆ ನುಗ್ಗಿದ…
ನಾಳೆ ಅಭಿನಂದನಾ ಕಾರ್ಯಕ್ರಮ
June 10, 2018ಮೈಸೂರು: ಇತ್ತೀಚೆಗೆ ನಿವೃತ್ತಿ ಹೊಂದಿದ ನಗರಪಾಲಿಕೆಯ ಸಹಾಯಕ ಅಭಿಯಂತರ ಎ.ಎಂ. ಮಂಜುನಾಥ್ ಅವರಿಗೆ ಮೈಸೂರು ಮಹಾನಗರ ಪಾಲಿಕೆಯ 36ನೇ ವಾರ್ಡಿನ ನಾಗರಿಕರಿಂದ ಜೂ. 11 ರಂದು ಮಧ್ಯಾಹ್ನ 12.30ಕ್ಕೆ ಜೆಎಲ್ಬಿ ರಸ್ತೆಯಲ್ಲಿರುವ ರೋಟರಿ ಕ್ಲಬ್ (ರೋಟರಿ ಶಾಲಾ ಆವರಣ)ದಲ್ಲಿ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಚಾಮರಾಜ ಕ್ಷೇತ್ರದ ಮಾಜಿ ಶಾಸಕ ವಾಸು, ಪ್ರಭಾರ ಆಯುಕ್ತ ಹೆಚ್.ನಾಗರಾಜು, ಸ್ವತಂತ್ರ ಹೋರಾಟ ಗಾರರ ಸಂಘದ ಅಧ್ಯಕ್ಷ ಡಾ.ಎಂ.ಜಿ.ಕೃಷ್ಣಮೂರ್ತಿ ಅವರು ಭಾಗವಹಿಸಲಿದ್ದಾರೆ.
ಬಂಡೀಪುರದಲ್ಲಿ ಪ್ಲಾಸ್ಟಿಕ್ ನಿಷೇಧ ಕುರಿತ ಜಾಗೃತಿ ಕಾರ್ಯಕ್ರಮ
June 10, 2018ಬಂಡೀಪುರ: ವಿಶ್ವ ಪರಿಸರ ದಿನದ ಹಿನ್ನೆಲೆಯಲ್ಲಿ ಬಂಡೀ ಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯ ವತಿಯಿಂದ ವಿವಿಧ ವನ ಮಹೋತ್ಸಹ ಹಾಗೂ ಪ್ಲಾಸ್ಟಿಕ್ ಬಳಸದಂತೆ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಿತು. ಗುಂಡ್ಲುಪೇಟೆಯ ಡಿ.ದೇವರಾಜ ಅರಸ್ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆಯ ಕಾರ್ಯ ಕ್ರಮದಲ್ಲಿ ಶಾಸಕ ಸಿ.ಎಸ್.ನಿರಂಜನ್ ಕುಮಾರ್, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಅಂಬಾಡಿ ಮಾಧವ್, ತಾ.ಪಂ ಅಧ್ಯಕ್ಷ ಕೆ.ಎ.ಜಗದೀಶ್ ಮೂರ್ತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ ಗಳು, ಸಂಘ ಸಂಸ್ಥೆಗಳ…










