ಮೈಸೂರು,ಏ.24(ಪಿಎಂ)-ದೂರ ಶಿಕ್ಷಣ ಬಲವರ್ಧನೆಗೆ `ಕರಾಮುವಿ ನಡಿಗೆ ವಿದ್ಯಾರ್ಥಿಗಳ ಕಡೆಗೆ’ ವಿಚಾರವಾಗಿ `ಪೋಸ್ಟರ್’ ಸಿದ್ಧಪಡಿಸುವ ಸ್ಪರ್ಧೆ ಏರ್ಪಡಿಸಿ ರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು (ಕೆಎಸ್ಓಯು) ವಿವಿಯ ಬೋಧಕ, ಬೋಧಕೇತರ ಮತ್ತು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು ಎಂದಿದೆ. ಉತ್ತಮ ಪೋಸ್ಟರ್ ವಿನ್ಯಾಸಕ್ಕೆ 10 ಸಾವಿರ ರೂ. ಬಹುಮಾನವಿದೆ. ಮೇ 5ರೊಳಗೆ ಪೊಸ್ಟರನ್ನು [email protected] ಇ-ಮೇಲ್ ವಿಳಾಸಕ್ಕೆ ಕಳುಹಿಸಬೇಕೆಂದು ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಲಾಕ್ಡೌನ್ ಹಿನ್ನೆಲೆಯಲ್ಲಿ ತಂತ್ರಜ್ಞಾನ ಬಳಸಿ ಆನ್ಲೈನ್ ತರಗತಿ ಮತ್ತು ಆಡಳಿತಾ ತ್ಮಕ ಸಭೆಗಳನ್ನು ನಡೆಸಲು ಹಾಗೂ…
ರಾಜ್ಯದಲ್ಲಿ ಇಂದು ಮೊದಲ ಪ್ಲಾಸ್ಮಾ ಥೆರಪಿ ಚಿಕಿತ್ಸೆ ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್
April 25, 2020ಬೆಂಗಳೂರು,ಏ.24- ಶನಿವಾರ (ಏ.25) ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಕೊರೊನಾ ರೋಗಿಗೆ ಪ್ಲಾಸ್ಮಾ ಥೆರಪಿ ಚಿಕಿತ್ಸೆ ನಡೆಸಲಾಗುತ್ತಿದೆ. ಈ ಬಗ್ಗೆ ಆರೋಗ್ಯ ಸಚಿವ ಬಿ.ಶ್ರೀರಾಮುಲು ಟ್ವೀಟ್ ಮೂಲಕ ತಿಳಿಸಿದ್ದಾರೆ. ಬಿಎಂಸಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪ್ಲಾಸ್ಮಾ ಥೆರಪಿ ನಡೆಸಲಾಗುತ್ತಿದ್ದು ಇದಕ್ಕಾಗಿ ಪ್ಲಾಸ್ಮಾ ನೀಡಲು ದಾನಿಯೂ ಸಿಕ್ಕಿದ್ದಾರೆ ಎಂದು ಸಚಿವರು ಹೇಳಿದ್ದಾರೆ. ಸಚಿವ ಶ್ರೀರಾಮುಲು ಶುಕ್ರವಾರ ಕೇಂದ್ರ ಆರೋಗ್ಯ ಸಚಿವರೊಂದಿಗಿನ ವೀಡಿಯೋ ಸಂವಾದದಲ್ಲಿ ಭಾಗವಹಿಸಿದ ನಂತರ ಈ ಮಾಹಿತಿ ನೀಡಿದ್ದಾರೆ. ಕೋವಿಡ್ ಸೋಂಕಿತರಿಗೆ ಕಾನ್ವೆಲೆಸೆಂಟ್ ಪ್ಲಾಸ್ಮಾ ಥೆರಪಿಯನ್ನು ಬಳಸುವ ಮೊದಲ…
ಚೆಕ್ಪೋಸ್ಟ್ ಗೆ ಟೆಂಪೋ ಡಿಕ್ಕಿ: ಎಎಸ್ಐ ಸೇರಿ ಐವರು ಪೊಲೀಸರು ಪಾರು
April 25, 2020ಮಂಡ್ಯ, ಏ.24(ನಾಗಯ್ಯ)- ಅತಿ ವೇಗವಾಗಿ ಬಂದ ಗೂಡ್ಸ್ ಟೆಂಪೋ ವೊಂದು ಕೊರೊನಾ ತಪಾಸಣಾ ಬ್ಯಾರಿಕೇಡ್ಗೆ ಡಿಕ್ಕಿ ಹೊಡೆದು ಐವರು ಪೊಲೀಸರು ಪ್ರಾಣಾಪಾಯದಿಂದ ಪಾರಾದ ಘಟನೆ ನಗರದ ಹೊರವಲಯದ ಶ್ರೀನಿವಾಸಪುರ ಗೇಟ್ ಬಳಿ ಶುಕ್ರವಾರ ನಡೆದಿದೆ. ಬೆಂಗಳೂರು ಕಡೆಯಿಂದ ಮೈಸೂರು ಕಡೆಗೆ ವೇಗವಾಗಿ ಬಂದ ಟೆಂಪೋ , ಚೆಕ್ಪೋಸ್ಟ್ನ ಬ್ಯಾರಿಕೇಡ್ ಗುದ್ದಿ ಪಲ್ಟಿಯಾಗಿದೆ. ಘಟನೆ ವೇಳೆ ತಪಾಸಣೆ ನಡೆಸುತ್ತಿದ್ದ ಓರ್ವ ಎಎಸ್ಐ, ನಾಲ್ವರು ಪೊಲೀಸರು ಜಂಪ್ ಮಾಡಿದ ಹಿನ್ನೆಲೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವೇಗದ ಚಾಲ ನೆಯೇ ಘಟನೆಗೆ ಕಾರಣ…
ಮನೆಯ ವಾರ್ಡ್ರೋಬ್ನಿಂದ 35 ಗ್ರಾಂ ಮಾಂಗಲ್ಯಸರ ಕಳವು: ಗೃಹಿಣಿ ದೂರು
April 25, 2020ಮೈಸೂರು,ಏ.24(ಎಸ್ಪಿಎನ್)- ಮನೆಯ ವಾರ್ಡ್ರೂಬ್ನಲ್ಲಿ ಇಟ್ಟಿದ್ದ 35 ಗ್ರಾಂ ಚಿನ್ನದ ಮಾಂಗಲ್ಯಸರ ಕಳುವಾಗಿರುವ ಘಟನೆ ನಗರದ ಹೆಬ್ಬಾಳ 2ನೇ ಹಂತದಲ್ಲಿ 4 ದಿನದ ಹಿಂದೆ ನಡೆದಿದ್ದು, ತಡವಾಗಿ ದೂರು ದಾಖಲಾಗಿದೆ. ಇಲ್ಲಿನ ನಿವಾಸಿ ಎಂ.ಎಸ್.ಹೇಮಲತಾ ಅವರೇ ಮಾಂಗಲ್ಯ ಸರ ಕಳೆದುಕೊಂಡವರು. ಹೇಮಲತಾ ಅವರು ಏ.20ರ ರಾತ್ರಿ 11 ಗಂಟೆಗೆ ತಮ್ಮ ಮಾಂಗಲ್ಯ ಸರವನ್ನು ಬಿಚ್ಚಿ ಬೆಡ್ರೂಮಿನ ವಾರ್ಡ್ರೂಬ್ನಲ್ಲಿಟ್ಟಿ ದ್ದಾರೆ. ಏ.21ರ ಬೆಳಿಗ್ಗೆ 8.30ಕ್ಕೆ ಮನೆ ಕೆಲಸದಾಕೆ ಬಂದು ಎಂದಿನಂತೆ ಕೆಲಸ ಮುಗಿಸಿ ಹೋಗಿದ್ದಾರೆ. ಬಳಿಕ ಹೇಮ ಲತಾ ವಾರ್ಡ್ರೂಬ್ನಲ್ಲಿಟ್ಟಿದ್ದ…
ರಾಮನಗರ ಜೈಲಿನಲ್ಲಿರಿಸಿದ್ದ ಪಾದರಾಯನಪುರ ಪ್ರಕರಣದ ಆರೋಪಿಗಳಲ್ಲೂ ಕೊರೊನಾ ಸೋಂಕು
April 24, 2020ಬೆಂಗಳೂರು, ಏ.23- ಪಾದರಾಯನಪುರ ಗಲಾಟೆ ಸಂಬಂಧ ಬಂಧಿತರಾಗಿ ರಾಮನಗರ ಜೈಲಿನಲ್ಲಿದ್ದ ಇಬ್ಬರು ಆರೋಪಿಗಳಿಗೆ ಗುರುವಾರ ರಾತ್ರಿ ಕೊರೊನಾ ವೈರಸ್ ಧೃಡಪಟ್ಟಿರುವುದು ತೀವ್ರ ಆತಂಕ ಉಂಟು ಮಾಡಿದೆ. ಅಲ್ಲದೇ ಇಂದು ಬೆಂಗಳೂರಿನಲ್ಲಿ ಒಟ್ಟು 15 ಮಂದಿಗೆ ಸೋಂಕು ಧೃಡಪಟ್ಟಿದ್ದು, ರಾಜಧಾನಿಯಲ್ಲಿ ಸೋಂಕು ಇನ್ನಷ್ಟು ಹರಡುವ ಭೀತಿ ಎದುರಾಗಿದೆ. ಪಾದರಾಯನಪುರ ಗಲಾಟೆಗೆ ಸಂಬಂಧಿಸಿದಂತೆ 121 ಆರೋಪಿಗಳನ್ನು ಬಂಧಿಸಿ, ರಾಮನಗರ ಜೈಲಿನಲ್ಲಿಡಲಾ ಗಿತ್ತು. ಅವರನ್ನು ಜೈಲಿಗೆ ಕರೆದೊಯ್ಯುವ ಮುನ್ನ ರಕ್ತ ಮತ್ತು ಗಂಟಲ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಅವರಲ್ಲಿ ಇಬ್ಬರಿಗೆ ಇಂದು…
ಊರು ಸೇರಲಾಗದೇ ರಾಜಸ್ತಾನದ 170 ಮಂದಿ ಮೈಸೂರಿನ ನಿರಾಶ್ರಿತ ಕೇಂದ್ರದಲ್ಲೇ `ಲಾಕ್ಡೌನ್’!
April 24, 2020ಮೈಸೂರು,ಏ.23-ಮೈಸೂರು ಜಿಲ್ಲೆಯ ವಿವಿಧೆಡೆ ಪಾನಿಪುರಿ, ಬೇಲ್ಪುರಿ, ಮೇವಾಡ್ ಐಸ್ ಕ್ರೀಂ ವ್ಯಾಪಾರ ಮಾಡಿ ಬದುಕು ಸಾಗಿ ಸುತ್ತಿದ್ದ 170 ರಾಜಸ್ತಾನಿ ಕುಟುಂಬಗಳು, ಲಾಕ್ಡೌನ್ನಿಂದಾಗಿ ಈಗ ಮೈಸೂರಿನ ಸಿದ್ದಾರ್ಥನಗರದ ಸಿಐಟಿಬಿ ಛತ್ರದಲ್ಲಿ 24 ದಿನಗಳಿಂದ ಲಾಕ್ ಆಗಿದ್ದಾರೆ. ದೂರದ ರಾಜಸ್ತಾನದಲ್ಲಿರುವ ತಮ್ಮ ಕುಟುಂಬದೊಂ ದಿಗೆ ಬೆರೆಯಲಾಗದೆ ಪರಿತಪಿಸುತ್ತಿದ್ದಾರೆ. ಕೋವಿಡ್-19 ವೈರಾಣು ಹರಡುವು ದನ್ನು ತಡೆಯಲು ಇಡೀ ದೇಶದಲ್ಲಿ ಲಾಕ್ ಡೌನ್ ಘೋಷಣೆಯಾಗಿದೆ. ಮೈಸೂರು ನಗರ ಮತ್ತು ಜಿಲ್ಲೆಯ ವಿವಿಧೆಡೆ ವ್ಯಾಪಾರ ಮಾಡಿಕೊಂಡಿದ್ದ ಇವರೆಲ್ಲರೂ 2 ಲಾರಿಗಳಲ್ಲಿ ಮಾ.30ರಂದು ರಾಜಸ್ತಾನದ…
ಮೈಸೂರಲ್ಲಿ ಕೊರೊನಾ ನಿಯಂತ್ರಣ ಲಕ್ಷಣ ಗೋಚರ: ಡಿಸಿ ಆಶಯ
April 24, 2020ಮೈಸೂರು, ಏ.23(ಪಿಎಂ)-ಮೈಸೂರು ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುವ ಲಕ್ಷಣಗಳು ಗೋಚರಿಸುತ್ತಿವೆ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಗುರುವಾರ ತುಸು ಆಶಾಭಾವ ವ್ಯಕ್ತಪಡಿಸಿದರು. ಮೈಸೂರು ತಾಲೂಕಿನ ಜಯಪುರದಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಜಿಲ್ಲಾಧಿಕಾರಿಗಳು, ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಬಂದಿರುವ ಒಟ್ಟು 88 ಜನರಲ್ಲಿ 33 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ಮರಳಿದ್ದಾರೆ. ಗುಣ ಮುಖರಲ್ಲಿ ಇಬ್ಬರು ಹಿರಿಯ ನಾಗರಿಕರೂ ಇದ್ದಾರೆ. ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಉತ್ತಮ ರೀತಿಯ ಚಿಕಿತ್ಸೆ ಸೌಲಭ್ಯ ಕಲ್ಪಿಸಿದ್ದರಿಂದ ಇದು…
ಶ್ರೀ ರಾಮಕೃಷ್ಣ ಆಶ್ರಮದಿಂದ 170 ಬಡ ಕುಟುಂಬಗಳಿಗೆ ದಿನಸಿ ಕಿಟ್
April 24, 2020ಮೈಸೂರು,ಏ.23(ಪಿಎಂ)-ಲಾಕ್ಡೌನ್ ಅವಧಿಯಲ್ಲಿ ಜನಸೇವೆ ನಿಟ್ಟಿನಲ್ಲಿ ಮೈಸೂ ರಿನ ಶ್ರೀರಾಮಕೃಷ್ಣ ಆಶ್ರಮದಿಂದ ನಿತ್ಯ ಸೇವಾ ಕಾರ್ಯಕ್ರಮಗಳು ನಡೆಯುತ್ತಿವೆ. ಗುರುವಾರ 170 ಬಡ ಕುಟುಂಬಗಳಿಗೆ ದಿನಸಿ ಕಿಟ್ಗಳನ್ನು ವಿತರಿಸಲಾಯಿತು. ಮೈಸೂರಿನ ನಾರಾಯಣಶಾಸ್ತ್ರಿ ರಸ್ತೆಯ ಲ್ಲಿರುವ ವಿವೇಕ ಸ್ಮಾರಕದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮ ಶೇಖರ್ ಅತಿಥಿಯಾಗಿ ಪಾಲ್ಗೊಂಡು ಫಲಾ ನುಭವಿಗಳಿಗೆ ದಿನಸಿ ಕಿಟ್ಗಳನ್ನು ವಿತರಿ ಸಿದರು. ಬಳಿಕ ಮಾತನಾಡಿದ ಸಚಿವರು, ಕೊರೊನಾ ಲಾಕ್ಡೌನ್ ಸನ್ನಿವೇಶದಲ್ಲಿ ಮೈಸೂರು ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷ ರಾದ ಸ್ವಾಮಿ…
ಎನ್ಆರ್ ಸಂಚಾರ ಠಾಣೆಯಲ್ಲಿ `ಡಿಸ್ ಇನ್ಫೆಕ್ಷನ್ ಟನಲ್’
April 24, 2020ಮೈಸೂರು, ಏ.23(ಎಂಕೆ)- ಕೊರೊನಾ ಸೋಂಕು ಹರಡ ದಂತೆ ತಡೆಯಲು ಮೈಸೂರಿನ ಎನ್.ಆರ್.ಸಂಚಾರ ಪೊಲೀಸ್ ಠಾಣೆ ಎದುರು ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತ್ ಕುಮಾರ್ ಅವರಿಂದ ಅನ್ವೇಷಣಾ ಸೇವಾ ಟ್ರಸ್ಟ್ ಸಹಕಾರ ದೊಂದಿಗೆ `ಡಿಸ್ ಇನ್ಫೆಕ್ಷನ್ ಟನಲ್'(ವೈರಾಣು ನಾಶಕ ಸುರಂಗ) ನಿರ್ಮಿಸಲಾಗಿದೆ. 40 ಸಾವಿರ ರೂ. ವೆಚ್ಚದಲ್ಲಿ ಆಟೋಮ್ಯಾಟಿಕ್ ಡಿಸ್ ಇನ್ಫೆಕ್ಷನ್ ಟನಲ್ ನಿರ್ಮಿಸಿದ್ದು, ಎನ್ಆರ್ ಸಂಚಾರ ಪೊಲೀಸ್ ಠಾಣೆ ಆವರಣದಲ್ಲೇ ಇರುವ ಸಿಸಿಬಿ ಮತ್ತು ಎಸಿಪಿ ಕಚೇರಿ ಸಿಬ್ಬಂದಿಗೂ ಅನುಕೂಲವಾಗಿದೆ. ಟನಲ್ನಲ್ಲಿ ಸ್ವಿಮಿಂಗ್ ಪೂಲ್ಗೆ ಹಾಕುವ…
ಕೋವಿಡ್ ಬಿಕ್ಕಟ್ಟು: ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳಕ್ಕೆ ತಡೆ
April 24, 2020ನವದೆಹಲಿ: ಕೊರೊನಾ ವೈರಸ್ ಲಾಕ್ ಡೌನ್ ಸಮಯದಲ್ಲಿ ತೆರಿಗೆ ಸಂಗ್ರಹಕ್ಕೆ ಸಮಸ್ಯೆ ಯಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ನೌಕರರ ಹೆಚ್ಚುವರಿ ತುಟ್ಟಿಭತ್ಯೆ (ಡಿಎ ಮತ್ತು ಡಿಆರ್) ಹೆಚ್ಚಳ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ಕೈಬಿಟ್ಟಿದೆ. ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಯನ್ನು ಶೇ.12ರಿಂದ 17ಕ್ಕೆ ಹೆಚ್ಚಿಸಬೇಕೆಂದು ಈ ಹಿಂದೆ ತೆಗೆದುಕೊಂಡಿದ್ದ ನಿರ್ಧಾರವನ್ನು ತಡೆಹಿಡಿಯಲು ಸರ್ಕಾರ ತೀರ್ಮಾನಿಸಿದೆ. ಕೇಂದ್ರದ ಈ ಕ್ರಮವು ಸುಮಾರು 50 ಲಕ್ಷ ಸರ್ಕಾರಿ ನೌಕರರು ಮತ್ತು 65 ಲಕ್ಷ ಪಿಂಚಣಿ ದಾರರ ಮೇಲೆ ಪರಿಣಾಮ ಬೀರಲಿದೆ. ಕೇಂದ್ರ…










