ತುರ್ತು ಸ್ಪಂದನಾ ವಾಹನಗಳ ನಿರಂತರ ಸೇವೆ
ಮಂಡ್ಯ

ತುರ್ತು ಸ್ಪಂದನಾ ವಾಹನಗಳ ನಿರಂತರ ಸೇವೆ

April 29, 2021

ಮಂಡ್ಯ, ಏ.28- ಜಿಲ್ಲಾ ವ್ಯಾಪ್ತಿಯಲ್ಲಿ 16 ತುರ್ತು ಸ್ಪಂದನಾ ವಾಹನಗಳನ್ನು ನಿಯೋಜಿಸಲಾಗಿದ್ದು, ಈ ವಾಹನಗಳು ಜಿಲ್ಲೆಯಲ್ಲಿ 24×7 ಸೇವೆಯನ್ನು ಒದಗಿಸಲಿವೆ ಎಂದು ಕ್ರೀಡೆ ಹಾಗೂ ಜಿಲ್ಲಾ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು.

ಜಿಲ್ಲಾ ಪೊಲೀಸ್ ಡಿಎಆರ್ ಮೈದಾನದಲ್ಲಿ ಸಾರ್ವಜನಿಕರಿಗೆ ತುರ್ತು ಸ್ಪಂದನಾ ಸಹಾಯ ವ್ಯವಸ್ಥೆ ವಾಹನಗಳಿಗೆ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು, ತುರ್ತು ಸ್ಪಂದನ ಸಹಾಯ ವ್ಯವಸ್ಥೆ 112 ಭಾರತ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ತುರ್ತು ಕರೆಗಳಾದ 100 ಪೊಲೀಸ್ 101 ಅಗ್ನಿಶಾಮಕ ಮತ್ತು ರಕ್ಷಣೆ ಹಾಗೂ ಇತರ ತುರ್ತು ಕರೆ ಸಂಖ್ಯೆಗಳನ್ನು 112ರಲ್ಲಿ ಏಕೀಕೃತಗೊಳಿಸಲಾಗಿದೆ ಎಂದರು.

ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ ಸಾರ್ವಜನಿಕರು ಅಪಘಾತ, ಕೊಲೆ ದರೋಡೆ, ಕಳ್ಳತನ, ಸರ ಗಳ್ಳತನ ಇತರೆ ಅಕ್ರಮ ಚಟುವಟಿಕೆಗಳು ಮತ್ತು ಮಹಿಳಾ, ಮಕ್ಕಳ ಹಿರಿಯ ನಾಗರಿಕರ ರಕ್ಷಣೆ ಹಾಗೂ ಇನ್ನಿತರ ಸಂದರ್ಭಗಳಲ್ಲಿ ತುರ್ತು ಸೇವೆಗಳು ಬೇಕಾದಲ್ಲಿ 112 ದೂರ ವಾಣಿ ಸಂಖ್ಯೆಗೆ ಕರೆ ಮಾಡಿ ಸೇವೆ ಪಡೆಯ ಬಹುದಾಗಿದೆ. ಕರ್ತವ್ಯ ನಿರತ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಹತ್ತಿರ ಇರುವ ತುರ್ತು ಸ್ಪಂದನಾ ವಾಹನದ ಸಹಾಯದಿಂದ ಅಗತ್ಯ ತುರ್ತು ಸೇವೆಯನ್ನು ಒದಗಿಸುತ್ತಾರೆ ಎಂದರು.

ಕೋವಿಡ್ ಮಹಾಮಾರಿ ಹೆಚ್ಚಾಗುತ್ತಿದ್ದು ಸರ್ಕಾರ 14 ದಿನ ಲಾಕ್ ಡೌನ್ ಘೋಷಣೆ ಮಾಡಿದೆ. ಎಲ್ಲರೂ ಮನೆಯಲ್ಲೇ ಇರಿ. ರೈತರಿಗೆ ಯಾವುದೇ ತೊಂದರೆ ಇಲ್ಲ, ಇತರ ಜನಗಳು ಅನಾವಶ್ಯಕವಾಗಿ ಓಡಾಡ ಬೇಡಿ, ಆದ್ದರಿಂದ ಅಗತ್ಯ ಸೇವೆ ಬಿಟ್ಟು ಇನ್ನುಳಿ ದವುಗಳನ್ನು ಮುಚ್ಚಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕ ಎಂ.ಶ್ರೀನಿವಾಸ್, ನಗರಸಭೆ ಅಧ್ಯಕ್ಷ ಮಂಜು, ಎಸ್ಪಿ ಡಾ.ಅಶ್ವಿನಿ, ಎಎಸ್ಪಿ ಧನಂಜಯ, ಮನ್‍ಮುಲ್ ನಿರ್ದೇಶಕ ಸ್ವಾಮಿ ಇತರರಿದ್ದರು.

ಕೊರೊನಾ ಸೋಂಕಿತರು ಬೇಗ ಗುಣಮುಖರಾಗಿ: ಇಂದು ಜಿಲ್ಲೆಯ ಮಂಡ್ಯ ತಾಲೂಕು ಒಕ್ಕಲಿಗರ ಭವನ ಕೋವಿಡ್ ಕೇರ್ ಕೇಂದ್ರಕ್ಕೆ ಭೇಟಿ ನೀಡಿ ಕೋವಿಡ್ ಸೋಂಕಿತರೊಂದಿಗೆ ಸಚಿವ ಕೆ.ಸಿ.ನಾರಾಯಣಗೌಡ ಮಾತನಾಡಿ, ಕೊರೊನಾ ಸೋಂಕಿತರು ಶೀಘ್ರ ಗುಣಮುಖ ರಾಗಿ ಬನ್ನಿ ಎಂದು ಹಾರೈಸಿದರು ಹಾಗೂ ಅವರ ಸಮಸ್ಯೆಗಳನ್ನು ಆಲಿಸಿದರು.

ಮಂಡ್ಯ ತಾಲೂಕಿನ ಆರೋಗ್ಯ ಅಧಿಕಾರಿ ಗಳಿಗೆ ಅಲ್ಲಿನ ಕೋವಿಡ್ ಕೇಂದ್ರಕ್ಕೆ ಸಂಬಂಧಿ ಸಿದಂತೆ ತೆಗೆದುಕೊಂಡ ಕ್ರಮಗಳನ್ನು ವಿಚಾರಿಸಿ ದರಲ್ಲದೆ, ಅಲ್ಲಿ ಕೆಲಸ ನಿರ್ವಹಿ ಸುತ್ತಿರುವ ಸಿಬ್ಬಂದಿಗಳ ಸೇವೆಯನ್ನು ಶ್ಲಾಘಿಸಿದರು.

ಕೋವಿಡ್ ವ್ಯಕ್ತಿಗಳನ್ನು ಮಾತನಾಡಿಸಿ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಮತ್ತು ಊಟ, ಬಿಸಿ ನೀರಿನ ವ್ಯವಸ್ಥೆ, ಸ್ವಚ್ಛತೆ ಮತ್ತು ಉತ್ತಮವಾದ ಆಹಾರದ ವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಿದರು ಹಾಗೂ ಕೋವಿಡ್ ವ್ಯಕ್ತಿಗಳಿಗೆ ಉತ್ತಮ ಆಹಾರ ನೀಡಿ ಅವರಿಗೆ ಯಾವುದೇ ಸಮಸ್ಯೆ ಆಗದಂತೆ ಅಗತ್ಯ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಉಪ ವಿಭಾಗಾಧಿ ಕಾರಿ ಐಶ್ವರ್ಯ, ತಹಶೀಲ್ದಾರ್ ಚಂದ್ರಶೇಖರ್ ಶಂ ಗಾಳಿ ಮತ್ತು ತಾಲೂಕು ಆರೋಗ್ಯ ಅಧಿಕಾರಿಗಳು, ಮತ್ತಿತರರು ಇದ್ದರು.

Translate »