ಹೆಚ್.ಡಿಕುಮಾರಸ್ವಾಮಿ ನನಗೆ ಹಣದ ಆಮಿಷ ಒಡ್ಡಿದರು: ಹೊಸ ಬಾಂಬ್ ಸಿಡಿಸಿದ ಅನರ್ಹ ಶಾಸಕ ಬಿ.ಸಿ.ಪಾಟೀಲ್
ಮೈಸೂರು

ಹೆಚ್.ಡಿಕುಮಾರಸ್ವಾಮಿ ನನಗೆ ಹಣದ ಆಮಿಷ ಒಡ್ಡಿದರು: ಹೊಸ ಬಾಂಬ್ ಸಿಡಿಸಿದ ಅನರ್ಹ ಶಾಸಕ ಬಿ.ಸಿ.ಪಾಟೀಲ್

September 27, 2019

ಹಾವೇರಿ, ಸೆ.26- ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸದ್ರೋಹಿ. ಉತ್ತರ ಕರ್ನಾಟಕಕ್ಕೆ ಕುಮಾರಸ್ವಾಮಿ ವಿಶ್ವಾಸದ್ರೋಹ ಮಾಡಿದ್ದಾರೆ. ಒಬ್ಬ ಮುಖ್ಯಮಂತ್ರಿಯನ್ನು ಬದಲಾಯಿಸುವ ಶಕ್ತಿ ನಮ್ಮ ತಾಲೂಕಿಗೆ ಇದೆ ಅಂತ ಅನರ್ಹ ಶಾಸಕ ಬಿ.ಸಿ.ಪಾಟೀಲ್ ಅವರು ಹೇಳಿದ್ದಾರೆ. ಅವರು ಇಂದು ನಗರದಲ್ಲಿ ತಮ್ಮ ನಿವಾಸದಲ್ಲಿ ನಡೆದ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಇದೇ ವೇಳೆ ಅವರು ಮಾತನಾಡುತ್ತ ಕಾಂಗ್ರೆಸ್ ಬೆಂಬಲದಿಂದ ಸಿಎಂ ಆದರು, ಒಬ್ಬರಿಗಾದರೂ ಧನ್ಯವಾದ ಹೇಳಿದರಾ ಅಂತ ಪ್ರಶ್ನೆ ಮಾಡಿ ದರು. ಇನ್ನು ಮಾತೆತ್ತಿದರೆ ಬ್ರದರ್ ಅಂತಾ ಚೆನ್ನಾಗಿ ಮಾತನಾಡುತ್ತಾರೆ. ಆಗ ಕುಮಾರಸ್ವಾಮಿ ನನ್ನ ಮಗಳಿಗೆ ಫೆÇೀನ್ ಮಾಡಿದ್ದರು. ಬಿಜೆಪಿಯವರು ಎಷ್ಟು ಕೊಟ್ಟಿದ್ದಾರೆ ಅದರ ಡಬಲ್ ಕೊಡುತ್ತೇನೆ ಅಂತ ಹೇಳಿದ್ದರು, ಆದರೆ ನಾನು ಮುಂದಿಟ್ಟ ಹೆಜ್ಜೆ ಹಿಂದಿಡಲಿಲ್ಲ. ಅವರ ಹಣದ ಆಮಿಷಕ್ಕೆ ನಾನು ತಲೆ ಬಾಗಲಿಲ್ಲ ಎಂದು ಹೇಳಿದರು.

Translate »