ನಾಡಿನ ಶ್ರೇಷ್ಠ ಸಂತರಲ್ಲಿ ಕೈವಾರ ತಾತಯ್ಯ ಒಬ್ಬರು
ಮೈಸೂರು

ನಾಡಿನ ಶ್ರೇಷ್ಠ ಸಂತರಲ್ಲಿ ಕೈವಾರ ತಾತಯ್ಯ ಒಬ್ಬರು

March 31, 2021

ಮೈಸೂರು,ಮಾ.30-ಮೈಸೂರಿನ ಶ್ರೀ ಯೋಗಿ ನಾರಾಯಣ ಯತೀಂದ್ರರ ಪ್ರಚಾರ ಸಭಾದಲ್ಲಿ ಕೈವಾರ ತಾತಯ್ಯನವರ 295ನೇ ವರ್ಷದ ಜಯಂತಿ ಆಚರಿಸಲಾಯಿತು.

ಮೈಲ್ಯಾಕ್ ಮಾಜಿ ಅಧ್ಯಕ್ಷ ಹೆಚ್.ಎ. ವೆಂಕಟೇಶ್, ಕೈವಾರ ತಾತಯ್ಯನವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತ ನಾಡಿ, ಈ ನಾಡಿನ ಶ್ರೇಷ್ಠ ಸಂತರಲ್ಲಿ ಕೈವಾರ ತಾತಯ್ಯನವರು ಪ್ರಮುಖರು. ಮನುಕುಲದ ಬಗ್ಗೆ ಚಿಂತಿಸಿದ ಮಹಾನ್ ಸಂತರು. ಪ್ರಕೃತಿಯ ಅವಿಭಾಜ್ಯ ಅಂಗವಾಗಿರುವ ಮಾನವ ಅದನ್ನು ಪೂಜಿಸದೆ ಸ್ವೇಚ್ಛಾ ಚಾರಕ್ಕೆ ಬಳಸಿಕೊಂಡರೆ ಆಗುವ ಅನಾ ಹುತಗಳನ್ನು ಆಡುಭಾಷೆಯಲ್ಲಿ ಕಟ್ಟಿಕೊಟ್ಟಿ ರುವ ಭವಿಷ್ಯವಾಣಿಯು ಪ್ರಸ್ತುತ ಸ್ಥಿತಿ ಯಲ್ಲಿ ವಿಶ್ಲೇಷಣೆಗೆ ಒಳಗಾಗುವ ಅವಶ್ಯ ಕತೆ ಇದೆ ಎಂದರು.

ಮಾನವತಾವಾದದ ಪ್ರತಿನಿಧಿಯಾಗಿ ರುವ ಕೈವಾರ ತಾತಯ್ಯ ಮನುಷ್ಯ ಜನ್ಮ ಪ್ರಕೃತಿಯನ್ನು ಆರಾಧಿಸಿದ ಹೊರತು ಅನುಭವಿಸಬೇಕಾಗಿ ಇರುವ ಸಮಸ್ಯೆಗಳನ್ನು ಶತಮಾನಗಳ ಹಿಂದೆಯೇ ಸೂಚಿಸಿರು ವುದು ಅವರ ಭವಿಷ್ಯವಾಣಿಯ ದೈವತ್ವ ವನ್ನು ತಿಳಿಸುತ್ತದೆ. ಇಂತಹ ಜ್ಞಾನಿಗಳ ವಿಚಾರ ಧಾರೆಗಳನ್ನು ಪ್ರಸ್ತುತ ಶಿಕ್ಷಣದ ಪಠ್ಯಗಳಲ್ಲಿ ಅಳವಡಿಸಬೇಕಾಗಿದೆ ಎಂದರು.

ಕೈವಾರ ತಾತಯ್ಯನವರ ಜಯಂತಿ ಯನ್ನು ರಾಜ್ಯದಲ್ಲಿ ಪ್ರಪ್ರಥಮವಾಗಿ ಆಚರಿ ಸಲು ಪ್ರೇರಣೆ ನೀಡಿದ ಕೈವಾರ ಶ್ರೀಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಂ ಅವರನ್ನು ಸ್ಮರಿಸಿದರು. ಉದ್ಯಮಿ ಡಿ.ಕೀರ್ತಿ ಕುಮಾರ್, ಸಂಘದ ಅಧ್ಯಕ್ಷ ಎಂ.ನಾರಾ ಯಣ್, ನಿವೃತ್ತ ಪ್ರಾಧ್ಯಾಪಕ ರಂಗನಾಥ್, ಎಚ್.ಆರ್.ಗೋಪಾಲ ಕೃಷ್ಣ, ಡಿ.ನಾಗರಾಜ್, ಡಾ.ಎಸ್.ಕೃಷ್ಣಪ್ಪ, ಜಿ.ರಮೇಶ್, ಬಿ.ಎಸ್. ಗುರುಮೂರ್ತಿ, ಗೋವಿಂದರಾಜ್. ಡಾ.ಟಿ.ರಮೇಶ್, ಎಚ್‍ಆರ್ ವೆಂಕಟೇಶ್, ನಾಗರಾಜಯ್ಯ ಮತ್ತಿತರರು ಹಾಜರಿದ್ದರು.

Translate »