ದೆಹಲಿಯಲ್ಲಿ ಕವಿ ಅಪ್ಪಚ್ಚ-ಮುತ್ತಣ್ಣ ವಿಚಾರ ಸಂಕಿರಣ
ಮೈಸೂರು

ದೆಹಲಿಯಲ್ಲಿ ಕವಿ ಅಪ್ಪಚ್ಚ-ಮುತ್ತಣ್ಣ ವಿಚಾರ ಸಂಕಿರಣ

January 28, 2020

ಮೈಸೂರು: ಕೇಂದ್ರ ಸಾಹಿತ್ಯ ಅಕಾಡೆಮಿಯ ಸಭೆ ಇತ್ತೀಚೆಗೆ ಬೆಂಗ ಳೂರಿನ ಪ್ರಾದೇಶಿಕ ಕಚೇರಿ ಸಭಾಂಗಣ ದಲ್ಲಿ ಡಾ.ಚಂದ್ರಶೇಖರ ಕಂಬಾರರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಭೆಯಲ್ಲಿ ಕಳೆದ ಬಾರಿ ಸಮಯದ ಕೊರತೆಯಿಂದ ನಡೆಸಲು ಸಾಧ್ಯವಾಗದ ‘ಅಪ್ಪಚ್ಚ ಕವಿ 150ನೇ ಜನ್ಮೋತ್ಸವ ಕಾರ್ಯ ಕ್ರಮವನ್ನು ಈ ಬಾರಿ ದೆಹಲಿಯಲ್ಲಿ ನಡೆ ಸಲು ತೀರ್ಮಾನಿಸಲಾಯಿತು. ದೆಹಲಿ ಕರ್ನಾಟಕ ಸಂಘ, ದೆಹಲಿ ಕೊಡವ ಸಮಾಜ ಮತ್ತು ಜವಹರಲಾಲ್ ರಾಷ್ಟ್ರೀಯ ವಿಶ್ವ ವಿದ್ಯಾನಿಲಯ (ಜೆಎನ್‍ಯು) ಇವುಗಳ ಸಂಯುಕ್ತ ಆಶ್ರಯದಲ್ಲಿ ಸಾಹಿತ್ಯ ಅಕಾ ಡೆಮಿ 2 ದಿನಗಳ ಕಾರ್ಯಕ್ರಮ ನಡೆಸ ಲಿದೆ. ಈ ಎರಡು ದಿನಗಳ ವಿಚಾರ ಸಂಕಿ ರಣದಲ್ಲಿ ಡಾ. ಐ.ಮಾ. ಮುತ್ತಣ್ಣನವರ ಶತಮಾನೋತ್ಸವವನ್ನು ಆಚರಿಸಲಾಗುತ್ತದೆ.

ಡಾ. ಐ.ಮಾ. ಮುತ್ತಣ್ಣ ನಾಡಿನ ಶ್ರೇಷ್ಠ ತ್ರಿಭಾಷಾ ಕವಿ, ಸಾಹಿತಿಯಾಗಿದ್ದು, ಅವರ `ಆತ್ಮಕಥನ’ ಪುಸ್ತಕ ಹೊರತರಲಾಗುವುದು. (ಶತಮಾನೋತ್ಸವ ನೆನಪಿಗೆ). ಅಪ್ಪಚ್ಚ ಕವಿ ಬರೆದ 4 ನಾಟಕಗಳನ್ನು ಡಾ.ಐ.ಮಾ. ಮುತ್ತಣ್ಣ ಕನ್ನಡಕ್ಕೆ ಅನುವಾದಿಸಿದ್ದು, ಇದರ ಮುದ್ರಣ ಪ್ರಕ್ರಿಯೆ ಪ್ರಗತಿಯಲ್ಲಿದೆ. ಅಕಾಡೆಮಿ ಸದಸ್ಯ ಅಡ್ಡಂಡ ಸಿ.ಕಾರ್ಯಪ್ಪ ಸಭೆಯಲ್ಲಿ ಮೇಲಿನ ಪ್ರಸ್ತಾವನೆಗಳನ್ನು ಮಂಡಿಸಿದ್ದು, ಅಕಾಡೆಮಿ ಇದಕ್ಕೆ ಅನುಮೋದಿಸಿದೆ. ಸಭೆಯಲ್ಲಿ ಅಕಾ ಡೆಮಿಯ ಸಂಚಾಲಕರಾದ ಡಾ.ಸಿದ್ದ ಲಿಂಗಯ್ಯ, ಸರೂಜ್‍ಕಾಟ್ಕರ್, ಪ್ರೊ. ಹೆಚ್.ಎಸ್.ಶಿವಪ್ರಕಾಶ್ ಸೇರಿದಂತೆ ಅಕಾ ಡೆಮಿ ಇತರೆ ಸದಸ್ಯರು ಹಾಜರಿದ್ದರು.

Translate »