ಶಿವಾನುಭವ ದಾಸೋಹ ಉಪನ್ಯಾಸ
ಮೈಸೂರು

ಶಿವಾನುಭವ ದಾಸೋಹ ಉಪನ್ಯಾಸ

July 27, 2018

ಮೈಸೂರು: ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿ ಆಶ್ರಯದಲ್ಲಿ ಶಿವಾನುಭವ ದಾಸೋಹ ಮಾಲಿಕೆಯ 249ನೇ ಕಾರ್ಯಕ್ರಮದಲ್ಲಿ ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಡಾ. ಸಿ.ಜಿ. ಉಷಾದೇವಿ ಅವರು ಜು. 28 ರಂದು ಸಂಜೆ 6 ಗಂಟೆಗೆ `ಅಮುಗೆ ರಾಯಮ್ಮನ ವಚನಗಳಲ್ಲಿ ಅರಿವು’ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಕಾರ್ಯಕ್ರಮವು ನಂ. 811, ಜೆಎಸ್‍ಎಸ್ ಬಡಾವಣೆ, 2ನೇ ಹಂತ ಇಲ್ಲಿ ನಡೆಯಲಿದೆ.

ಮೈಸೂರು ಮೃಗಾಲಯ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಂ. ನಂಜುಂಡಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದ ಆರಂಭದಲ್ಲಿ ಶ್ರೀ ಶಿವರಾತ್ರೀಶ್ವರ ಭಜನಾ ಮಂಡಳಿಯವರು ಭಜನೆ ನಡೆಸಿಕೊಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Translate »