ಇಂದಿನಿಂದ ಕೆಲವೊಂದು ನಿರ್ಬಂಧ ಸಡಿಲಿಕೆ
ಮೈಸೂರು

ಇಂದಿನಿಂದ ಕೆಲವೊಂದು ನಿರ್ಬಂಧ ಸಡಿಲಿಕೆ

April 20, 2020

ವದೆಹಲಿ: ದೇಶದಲ್ಲಿ ಮೇ 3ರವರೆಗೂ ಎರಡನೇ ಹಂತದ ಲಾಕ್‍ಡೌನ್ ಹೇರಲಾಗಿದ್ದು, ನಾಳೆಯಿಂದ ಕೆಲವೊಂದು ಕ್ಷೇತ್ರ ಗಳ ನಿರ್ಬಂಧದಲ್ಲಿ ಸ್ವಲ್ಪ ಸಡಿಲಗೊಳಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ನಾನ್ ಹಾಟ್‍ಸ್ಪಾಟ್ ಅಂದರೆ ಆರೆಂಜ್ ವಲಯದಲ್ಲಿ ನೀಡಬಹುದಾದ ವಿನಾಯಿತಿ ಬಗ್ಗೆ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಏ.20ರ ಬಳಿಕ ವಿನಾಯಿತಿ ನೀಡಲಾಗುವ ಕ್ಷೇತ್ರಗಳೆಂದರೆ.

ಆಯುಷ್ ಸೇರಿದಂತೆ ಎಲ್ಲಾ ವೈದ್ಯಕೀಯ ಸೇವೆಗಳು

ಎಲ್ಲಾ ಕೃಷಿ, ತೋಟಗಾರಿಕೆ ಚಟುವಟಿಕೆಗಳು

ಮೀನುಗಾರಿಕೆ, ಮೀನು ಸಾಕಾಣಿಕೆ ಸಂಬಂಧಿತ ಚಟುವಟಿಕೆ

ಟೀ, ಕಾಫಿ, ರಬ್ಬರ್ ಪ್ಲಾಂಟೇ ಷನ್‍ಗಳಲ್ಲಿ ಶೇ.50ರಷ್ಟು ಕಾರ್ಮಿಕರೊಂದಿಗೆ ಕಾರ್ಯನಿರ್ವ ಹಣೆ

ಪಶುಸಂಗೋಪನೆ ಸಂಬಂಧಿತ ಚಟುವಟಿಕೆಗಳು

ಹಣಕಾಸು ವಲಯದ ಕಾರ್ಯಚಟುವಟಿಕೆ ಸಾಮಾಜಿಕ ವಲಯ ಅಂದರೆ ಅನಾಥಾಲಯ, ವೃದ್ಧಾಶ್ರಮಗಳ ಚಟುವಟಿಕೆ ಗಳಿಗೆ ಅವಕಾಶ

ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸುವ ಮೂಲಕ ಮನ್ರೇಗಾ ಕಾರ್ಮಿಕರಿಗೆ ಕೆಲಸ

ಸಾರ್ವಜನಿಕರಿಗೆ ಅಗತ್ಯವಾದ ಸೌಲಭ್ಯ ನೀಡುವ ಸಂಸ್ಥೆಗಳು (ಗ್ಯಾಸ್, ವಿದ್ಯುತ್, ನೀರು, ದೂರವಾಣಿ) ಸರಕು ಸಾಗಣೆ ವಾಹನಗಳಿಗೆ ಅವಕಾಶ (ರಾಜ್ಯ ಮತ್ತು ಅಂತರಾಜ್ಯ)

ಆನ್‍ಲೈನ್ ಕೋಚಿಂಗ್ ಕ್ಲಾಸ್‍ಗಳಿಗೆ ಅವಕಾಶ

ಅಗತ್ಯ ವಸ್ತುಗಳ ಪೂರೈಕೆಗೆ ಯಾವುದೇ ಅಡ್ಡಿ ಇಲ್ಲ

ವಾಣಿಜ್ಯ, ಖಾಸಗಿ ಸಂಸ್ಥೆಗಳ ಕಾರ್ಯನಿರ್ವಹಣೆ

ಸರ್ಕಾರಿ ಮತ್ತು ಖಾಸಗಿ ಕೈಗಾರಿಕೆಗಳ ಕಾರ್ಯನಿರ್ವಹಣೆ ನಿರ್ಮಾಣ ಕಾಮಗಾರಿಗಳಿಗೆ ಅವಕಾಶ

ತುರ್ತು ಅಗತ್ಯತೆಗಳಿಗೆ ಖಾಸಗಿ ವಾಹನ ಬಳಸಬಹುದು (ವೈದ್ಯಕೀಯ ಅಗತ್ಯತೆ, ಗರ್ಭಿಣಿಯರನ್ನು ಕರೆದೊಯ್ಯಲು, ಅಗತ್ಯ ವಸ್ತುಗಳ ಪೂರೈಕೆಗೆ, ವಿನಾಯಿತಿ ನೀಡಲಾದ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ಕೆಲಸದ ಸ್ಥಳಕ್ಕೆ ತೆರಳಲು)

ಕೇಂದ್ರ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ ಕಚೇರಿಗಳು ಎಂದಿನಂತೆ ತೆರೆದಿರುತ್ತವೆ. ಇವೆಲ್ಲಾ ಆರೆಂಜ್ ಜೋನ್‍ನಲ್ಲಿ ಬರುವ ಜಿಲ್ಲೆಗಳಿಗೆ ಮಾತ್ರವೇ ಅನ್ವಯವಾಗುತ್ತವೆ. ಕಂಟೇನ್ಮೆಂಟ್ ವಲಯಗಳಲ್ಲಿ ಈಗಿರುವಂತೆಯೇ ಕಠಿಣ ಲಾಕ್‍ಡೌನ್ ಮುಂದುವರಿಯಲಿವೆ.

Translate »