ಪ್ರಾಂಶುಪಾಲರ ಅವ್ಯವಹಾರಕ್ಕೂ  ನಮಗೂ ಸಂಬಂಧವಿಲ್ಲ: ಶ್ರೀಕಾಂತ ವಿದ್ಯಾ ಸಂಸ್ಥೆ ಸ್ಪಷ್ಟನೆ
ಮೈಸೂರು

ಪ್ರಾಂಶುಪಾಲರ ಅವ್ಯವಹಾರಕ್ಕೂ  ನಮಗೂ ಸಂಬಂಧವಿಲ್ಲ: ಶ್ರೀಕಾಂತ ವಿದ್ಯಾ ಸಂಸ್ಥೆ ಸ್ಪಷ್ಟನೆ

June 28, 2018

ಮೈಸೂರು: ವಿದೇಶಿ ವಿದ್ಯಾರ್ಥಿಗಳಿಗೆ ವೀಸಾ ವಿಸ್ತರಣೆಗಾಗಿ ನಕಲಿ ಡಿಪ್ಲೋಮಾ ಪ್ರಮಾಣ ಪತ್ರ ನೀಡಿದ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಶ್ರೀಕಾಂತ ವಿದ್ಯಾ ಸಂಸ್ಥೆಗಳ ಆಡಳಿತ ವರ್ಗ ಸ್ಪಷ್ಟಪಡಿಸಿದೆ.

ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಸಂಸ್ಥೆಯ ಅಧ್ಯಕ್ಷರು, ಶ್ರಿಕಾಂತ ಪ್ರಥಮ ದರ್ಜೆ ಕಾಲೇಜನ್ನು 2010ರಿಂದಲೂ ವೇದ ಚಾರಿಟಬಲ್ ಅಂಡ್ ವೆಲ್‍ಫೇರ್ ಟ್ರಸ್ಟ್‍ನವರೇ ಶ್ರೀಕಾಂತ ವಿದ್ಯಾ ಸಂಸ್ಥೆಗಳ ಹೆಸರಿನಲ್ಲಿ ನಡೆಸಿಕೊಂಡು ಬರುತ್ತಿದ್ದಾರೆ ಎಂದು ತಿಳಿಸಿದ್ದು, ಪ್ರಕರಣದಲ್ಲಿ ಪೊಲೀಸರು ಪ್ರಾಂಶುಪಾಲರ ವಿರುದ್ಧ ಎಫ್‍ಐಆರ್ ದಾಖಲಿಸಿರುವ ಆಧಾರದ ಮೇರೆಗೆ ಶ್ರೀಕಾಂತ ವಿದ್ಯಾ ಸಂಸ್ಥೆಯು ಶ್ರೀಕಾಂತ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಎಂ.ಚಂದ್ರಬಾಬು ಅವರನ್ನು ಜೂ.26ರಂದು ಅಮಾನತುಪಡಿಸಿದೆ. ಅವರು ನಡೆಸಿರುವ ಅವ್ಯವಹಾರಕ್ಕೂ ಸಂಸ್ಥೆಗೂ ಯಾವುದೇ ಸಂಬಂಧವಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »