Tag: Burglar

ಮನೆ ಬಾಗಿಲು ಮೀಟಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ, 4 ಲಕ್ಷ ನಗದು ಕಳವು
ಮೈಸೂರು

ಮನೆ ಬಾಗಿಲು ಮೀಟಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ, 4 ಲಕ್ಷ ನಗದು ಕಳವು

December 10, 2018

ಮೈಸೂರು: ಮನೆ ಬಾಗಿಲು ಮೀಟಿ ಒಳನುಗ್ಗಿದ ಕಳ್ಳರು, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ 4 ಲಕ್ಷ ನಗದು ದೋಚಿರುವ ಘಟನೆ ಮೈಸೂರಿನ ಹೆಬ್ಬಾಳದಿಂದ ವರದಿಯಾಗಿದೆ. ಹೆಬ್ಬಾಳ 3ನೇ ಮುಖ್ಯ ರಸ್ತೆಯ ನಿವಾಸಿ ಪಿ.ಎಸ್. ಜಯಚಂದ್ರ ಎಂಬುವರು ಡಿ.6 ರಂದು ಕುಟುಂಬ ಸಮೇತರಾಗಿ ಬೆಂಗಳೂರಿಗೆ ತೆರಳಿದ್ದರು. ಶನಿವಾರ ವಾಪಸ್ ಬಂದಾಗ ಮನೆ ಬಾಗಿಲು ಅರೆಬರೆ ತೆರೆದಿತ್ತು. ಒಳಗೆ ಹೋಗಿ ನೋಡಿದಾಗ ರೂಂನಲ್ಲಿ ಇಟ್ಟಿದ್ದ 160 ಗ್ರಾಂ ತೂಕದ ಎರಡು ಚಿನ್ನದ ನೆಕ್ಲೇಸ್ ಹಾಗೂ ಬೆಳ್ಳಿ ಪದಾರ್ಥ ಗಳು,…

ಡೋರ್‍ಲಾಕ್ ಮುರಿದು ಚಿನ್ನಾಭರಣ ಕಳವು
ಮೈಸೂರು

ಡೋರ್‍ಲಾಕ್ ಮುರಿದು ಚಿನ್ನಾಭರಣ ಕಳವು

November 21, 2018

ಮೈಸೂರು:  ಡೋರ್‍ಲಾಕ್ ಮುರಿದಿರುವ ಖದೀಮರು ಮನೆಯಲ್ಲಿದ್ದ ಸುಮಾರು 97 ಸಾವಿರ ರೂ.ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿರುವ ಘಟನೆ ಶಕ್ತಿನಗರದಲ್ಲಿ ನಡೆದಿದೆ. ಇಲ್ಲಿನ 2ನೇ ಕ್ರಾಸ್ ನಿವಾಸಿ ಶೋಭಾವತಿ ಎಂಬುವರ ಮನೆಯಲ್ಲಿ ಕಳ್ಳತನವಾಗಿದೆ. ಶೋಭಾವತಿ ಅವರು ನ.15ರಂದು ಸಂಜೆ ಮನೆಗೆ ಬೀಗ ಹಾಕಿಕೊಂಡು ಬೆಂಗಳೂರಿನ ಸಂಬಂಧಿಕರ ಮನೆಗೆ ಹೋಗಿದ್ದರು. ನ.18ರಂದು ಸಂಜೆ ಎದುರು ಮನೆ ನಿವಾಸಿ ಮಮತಾ ಅವರು ಹೊರ ಬಂದು ನೋಡಿದಾಗ ಶೋಭಾವತಿ ಅವರ ಮನೆಯ ಬಾಗಿಲು ತೆರೆದಿರುವುದು ಗೊತ್ತಾಗಿದೆ. ಕೂಡಲೇ ದೂರವಾಣಿ ಕರೆ ಮಾಡಿ ವಿಷಯ…

ಮನೆ ಬಾಗಿಲು ಮೀಟಿ ಚಿನ್ನಾಭರಣ, ನಗದು ಕಳವು
ಮೈಸೂರು

ಮನೆ ಬಾಗಿಲು ಮೀಟಿ ಚಿನ್ನಾಭರಣ, ನಗದು ಕಳವು

November 14, 2018

ಮೈಸೂರು: ಮನೆಯ ಬಾಗಿಲು ಮೀಟಿ, ಬೀರುವಿನಲ್ಲಿದ್ದ ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ ನಗದನ್ನು ದೋಚಿರುವ ಘಟನೆ ಮೈಸೂರಿನ ಅರವಿಂದನಗರದಲ್ಲಿ ನಡೆದಿದೆ. ಅರವಿಂದನಗರ 2ನೇ ಹಂತದ 1ನೇ ಕ್ರಾಸ್ ನಿವಾಸಿ ಸಿ.ಸುನಿಲ್ ಕುಮಾರ್ ಮನೆಯಲ್ಲಿ ಕಳ್ಳತನವಾಗಿದೆ. ಕ್ಯಾಲಿಕಟ್ ಮೂಲದ ಸುನಿಲ್, ನ.9ರಂದು ಊರಿಗೆ ತೆರಳಿದ್ದರು. ನ.12 ರಂದು ಅವರು ವಾಪಸ್ಸಾದಾಗ ಮನೆಯ ಮುಂಬಾಗಿಲನ್ನು ಯಾವುದೋ ಆಯುಧದಿಂದ ಮೀಟಿ, ತೆರೆದಿದ್ದು ಬೆಳಕಿಗೆ ಬಂದಿತು. ಒಳಹೋಗಿ ನೋಡಿದಾಗ ಕೊಠಡಿಯಲ್ಲಿದ್ದ ಬೀರು ವನ್ನು ಒಡೆದು, 3 ಸಾವಿರ ಮೌಲ್ಯದ ಬೆಳ್ಳಿಯ ಕಾಲುಗೆಜ್ಜೆ, 14…

ಮನೆಗಳ್ಳತನಕ್ಕೆ ಯತ್ನಿಸಿದ ಯುವಕನ ಬಂಧನ
ಚಾಮರಾಜನಗರ

ಮನೆಗಳ್ಳತನಕ್ಕೆ ಯತ್ನಿಸಿದ ಯುವಕನ ಬಂಧನ

September 15, 2018

ಕೊಳ್ಳೇಗಾಲ: ಗಣೇಶ ಹಬ್ಬದ ತಯಾರಿಯಲ್ಲಿದ್ದ ಮನೆಯೊಳಗೆ ಮುಖವಾಡ ಧರಿಸಿ ಸಿನಿಮೀಯ ರೀತಿಯಲ್ಲಿ ನುಗ್ಗಿ ಕಳ್ಳತನಕ್ಕೆ ಯತ್ನಿಸಿದ್ದ ಯುವಕ ಪೊಲೀಸರ ಅತಿಥಿಯಾಗಿರುವ ಘಟನೆ ಪಟ್ಟಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಜರುಗಿದೆ. ಪಟ್ಟಣದ ಬಸ್ತೀಪುರ ಬಡಾವಣೆಯ ನಿವಾಸಿ ರಘು ಎಂಬಾತ ಪೊಲೀಸರ ಅತಿಥಿ ಯಾದ ಆರೋಪಿ. ಆರೋಪಿಯು ವಾಸವಿ ಮಹಲ್ ರಸ್ತೆಯಲ್ಲಿರುವ ಚೇತನ್ ಎಂಬುವರ ಮನೆಯಲ್ಲಿ ಕಳ್ಳತನ ಮಾಡಲು ಯತ್ನಿಸಿದ್ದ. ಗುರುವಾರ ಬೆಳಿಗ್ಗೆ ಸಮಯದಲ್ಲಿ ಮುಖವಾಡ ಧರಿಸಿ ವಾಸವಿ ಮಹಲ್ ರಸ್ತೆಯಲ್ಲಿರುವ ಮನೆಯೊಳಗೆ ನುಗ್ಗಿದ್ದ ಮನೆಯಲ್ಲಿದ್ದ ಚೇತನ್ ರವರ ಪತ್ನಿ…

ಬಟ್ಟೆ ವ್ಯಾಪಾರಿ ಮನೆ ಬೀಗ ಮುರಿದು: 18 ಲಕ್ಷ ರೂ. ಮೌಲ್ಯದ ಆಭರಣ ನಗದು ಲೂಟಿ
ಮೈಸೂರು

ಬಟ್ಟೆ ವ್ಯಾಪಾರಿ ಮನೆ ಬೀಗ ಮುರಿದು: 18 ಲಕ್ಷ ರೂ. ಮೌಲ್ಯದ ಆಭರಣ ನಗದು ಲೂಟಿ

August 25, 2018

ಮೈಸೂರಿನ ಲಷ್ಕರ್ ಮೊಹಲ್ಲಾದಲ್ಲಿ ಗುರುವಾರ ಘಟನೆ ಮೈಸೂರು: -ಮನೆ ಬೀಗ ಮುರಿದು ನಗದು ಸೇರಿ ಸುಮಾರು 18 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ ಆಭರಣ ಲೂಟಿ ಮಾಡಿರುವ ಘಟನೆ ಮೈಸೂರಿನ ಲಷ್ಕರ್ ಮೊಹಲ್ಲಾದಲ್ಲಿ ಗುರುವಾರ ಸಂಭವಿಸಿದೆ. ಲಷ್ಕರ್ ಮೊಹಲ್ಲಾದ ಹಳ್ಳದಕೇರಿ ಬಸ್ ತಂಗುದಾಣದ ಹಿಂಭಾಗದಲ್ಲಿರುವ ಬಟ್ಟೆ ವ್ಯಾಪಾರಿ ಅಶೋಕ್‍ಕುಮಾರ್ ಮನೆಯಲ್ಲಿ ಖದೀಮರು ದಾಳಿ ನಡೆಸಿ, 390 ಗ್ರಾಂ ಚಿನ್ನಾಭರಣಗಳು, 500 ಗ್ರಾಂ ಬೆಳ್ಳಿ ಪದಾರ್ಥ ಹಾಗೂ 7000 ರೂ. ನಗದನ್ನು ದೋಚಿದ್ದಾರೆ. ಮನೆ ಸಮೀಪವೇ ಲಷ್ಕರ್…

ಮನೆ ಚಿಲಕ ಮುರಿದು 67 ಗ್ರಾಂ ಚಿನ್ನಾಭರಣ ಕಳವು
ಮೈಸೂರು

ಮನೆ ಚಿಲಕ ಮುರಿದು 67 ಗ್ರಾಂ ಚಿನ್ನಾಭರಣ ಕಳವು

July 26, 2018

ಮೈಸೂರು: ಬಾಗಿಲು ಚಿಲಕ ಮುರಿದು ಮನೆಯಲ್ಲಿದ್ದ 67 ಗ್ರಾಂ ಚಿನ್ನಾಭರಣಗಳನ್ನು ಕಳವು ಮಾಡಿರುವ ಘಟನೆ ಗಾಯತ್ರಿಪುರಂನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇಲ್ಲಿನ 2ನೇ ಹಂತದ ನಿವಾಸಿ ಜೀಯಾ ಉರ್ ರೆಹಮಾನ್ ಎಂಬುವರ ಮನೆಯಲ್ಲಿ ಕಳ್ಳತನವಾಗಿದೆ. ಇವರು ಜು.13ರಂದು ಮನೆಗೆ ಬೀಗ ಹಾಕಿಕೊಂಡು ಕುಟುಂಬದೊಂದಿಗೆ ತಮಿಳುನಾಡಿಗೆ ಹೋಗಿದ್ದು, ನಿನ್ನೆ ವಾಪಸ್ ಮನೆಗೆ ಬಂದಾಗ ಮನೆಯ ಮುಂಬಾಗಿಲಿನ ಚಿಲಕವನ್ನು ಮುರಿದಿರುವುದು ಗಮನಕ್ಕೆ ಬಂದಿದೆ. ಮನೆಯೊಳಗೆ ಪ್ರವೇಶಿಸಿ ನೋಡಿದಾಗ ಖದೀಮರು ಗಾಡ್ರೇಜ್ ಬೀರುವಿನ ಸೀಕ್ರೇಟ್ ಲಾಕರ್ ಅನ್ನು ಆಯುಧದಿಂದ ಮೀಟಿ…

ಮನೆ ಕಿಟಕಿ ಸರಳು ಮುರಿದು 2.5 ಲಕ್ಷ ರೂ. ನಗದು, ಆಭರಣ ಕಳವು
ಮೈಸೂರು

ಮನೆ ಕಿಟಕಿ ಸರಳು ಮುರಿದು 2.5 ಲಕ್ಷ ರೂ. ನಗದು, ಆಭರಣ ಕಳವು

July 18, 2018

ಮೈಸೂರು: ಮನೆಯ ಕಿಟಕಿ ಸರಳು ಮುರಿದು 2.5 ಲಕ್ಷ ರೂ. ಮೌಲ್ಯದ ನಗದು ಹಾಗೂ ಚಿನ್ನಾಭರಣ ಕಳವು ಮಾಡಿರುವ ಘಟನೆ ಮೈಸೂರಿನ ಜೆ.ಪಿ.ನಗರದಲ್ಲಿ ಜುಲೈ 13 ರಂದು ಸಂಭವಿಸಿದೆ. ಜೆಪಿ ನಗರ ‘ಎಫ್’ ಬ್ಲಾಕ್ ನಿವಾಸಿಯಾದ ನಿವೃತ್ತ ಅಬಕಾರಿ ಇನ್ಸ್‍ಪೆಕ್ಟರ್ ಚಂದ್ರಶೇಖರ್ ಎಂಬುವರ ಮನೆಯಲ್ಲಿ ಕಳವು ಮಾಡಲಾಗಿದೆ. ಸಮಾರಂಭವೊಂದರ ಕಾರಣ, ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸಮೇತ ಜುಲೈ 11 ರಂದು ಬೆಂಗಳೂರಿಗೆ ತೆರಳಿದ ಅವರು, ಜುಲೈ 14 ರಂದು ವಾಪಸ್ ಬಂದಾಗ ಕಿಟಕಿ ಸರಳು ಮುರಿದಿರುವುದು…

ಮೈಸೂರಲ್ಲಿ ಮನೆ ಬೀಗ ಮುರಿದು ಚಿನ್ನಾಭರಣ ಕಳವು
ಮೈಸೂರು

ಮೈಸೂರಲ್ಲಿ ಮನೆ ಬೀಗ ಮುರಿದು ಚಿನ್ನಾಭರಣ ಕಳವು

July 2, 2018

ಮೈಸೂರು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮನೆಯ ಬಾಗಿಲು ಮುರಿದು, ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಕೆ.ಆರ್.ಆಸ್ಪತ್ರೆಯ ಮುಖ್ಯ ರಸ್ತೆ ನಿವಾಸಿ ಸುರೇಶ್ ಅವರು ಶನಿವಾರ ಬೆಳಗ್ಗೆ ಮನೆಯ ಬೀಗ ಹಾಕಿಕೊಂಡು ಹೊರ ಹೋಗಿದ್ದು, ಸಂಜೆ 4 ಗಂಟೆಗೆ ವಾಪಸ್ ಬಂದಾಗ ಖದೀಮರು ಮನೆಯ ಬಾಗಿಲು ಮುರಿದು ಮನೆಯ ವಾಡ್ರೂಬ್‍ನ ಡ್ರಾಯರ್‍ನಲ್ಲಿದ್ದ 384.5 ಗ್ರಾಂ ತೂಕದ ಚಿನ್ನಾ ಭರಣಗಳನ್ನು ಕಳವು ಮಾಡಿದ್ದಾರೆ. ಇದರ ಮೌಲ್ಯ 3,84,500 ರೂ. ಎಂದು ಅಂದಾಜಿಸ ಲಾಗಿದೆ. ಮತ್ತೊಂದು ಪ್ರಕರಣದಲ್ಲಿ…

ಪಾಲಿಕೆ ಅಧಿಕಾರಿಗಳ ಸೋಗಿನಲ್ಲಿ ದೋಚಿದ ಖದೀಮರು: ತನಿಖೆ ಚುರುಕು
ಮೈಸೂರು

ಪಾಲಿಕೆ ಅಧಿಕಾರಿಗಳ ಸೋಗಿನಲ್ಲಿ ದೋಚಿದ ಖದೀಮರು: ತನಿಖೆ ಚುರುಕು

June 26, 2018

ಮೈಸೂರು: ಪಾಲಿಕೆ ಅಧಿಕಾರಿಗಳ ಸೋಗಿನಲ್ಲಿ ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿರುವ ಪ್ರಕರಣದ ತನಿಖೆಯನ್ನು ಮೈಸೂರಿನ ಕುವೆಂಪುನಗರ ಠಾಣೆ ಪೊಲೀಸರು ಚುರುಕುಗೊಳಿಸಿದ್ದಾರೆ. ಕುವೆಂಪುನಗರ ಎನ್ ಬ್ಲಾಕ್, ಕೆಎಸ್ ಆರ್‍ಟಿಸಿ ಡಿಪೋ ರಸ್ತೆಯಲ್ಲಿರುವ ಕೆ.ಜೆ. ಲೀಲಾದೇವಿ ಅವರ ಮನೆಗೆ ಜೂ.22 ರಂದು ಪಾಲಿಕೆ ಅಧಿಕಾರಿಗಳೆಂದು ಹೇಳಿ ಕೊಂಡು ಬಂದಿದ್ದ ಇಬ್ಬರು ಖದೀಮರು, ಮನೆಯನ್ನು ಅಳತೆ ಮಾಡಿ, ಆಸ್ತಿ ಕಾರ್ಡ್ ನೀಡುವುದಾಗಿ ನಂಬಿಸಿ, ಮನೆಯ ಮಾಲೀಕರಾದ ಲೀಲಾದೇವಿ ಹಾಗೂ ಕೆಲಸದಾಕೆ ಮಂಗಳಮ್ಮ ಅವರನ್ನು ಟೆರೇಸ್‍ಗೆ ಕರೆದೊಯ್ದು, ಅದೇ ಸಮಯಕ್ಕೆ…

Translate »