Tag: Chamarajanagar

ಜಿಪಂ ಸಾಮಾನ್ಯ ಸಭೆ ಮುಂದೂಡಿಕೆ
ಚಾಮರಾಜನಗರ

ಜಿಪಂ ಸಾಮಾನ್ಯ ಸಭೆ ಮುಂದೂಡಿಕೆ

September 10, 2018

ಚಾಮರಾಜನಗರ: ಜಿಪಂ ಅಧ್ಯಕ್ಷರಾದ ಶಿವಮ್ಮ ಅಧ್ಯಕ್ಷತೆಯಲ್ಲಿ ಸೆ.10 ರಂದು ನಿಗದಿಯಾಗಿದ್ದ ಜಿಲ್ಲಾ ಪಂಚಾಯಿತಿಯ ಸಾಮಾನ್ಯ ಸಭೆಯನ್ನು ಮುಂದೂಡಲಾಗಿದೆ. ಸೆ.10 ರಂದು ಭಾರತ್ ಬಂದ್‍ಗೆ ಕರೆ ಕೊಟ್ಟಿರುವ ಹಿನ್ನೆಲೆಯಲ್ಲಿ ಅಂದು ಜಿಪಂ ಸದಸ್ಯರು ಇನ್ನಿತರ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಸಾಮಾನ್ಯ ಸಭೆಗೆ ಹಾಜರಾಗಲು ಕಷ್ಟಕರವಾಗಬಹುದೆಂದು ಸಾಮಾನ್ಯ ಸಭೆಯನ್ನು ಮುಂದೂಡುವಂತೆ ಜಿಲ್ಲಾ ಪಂಚಾ ಯತ್ ಅಧ್ಯಕ್ಷರು ಕೋರಿದ್ದಾರೆ. ಈ ಹಿನ್ನೆಲೆಯಲ್ಲಿ ಸೆಪ್ಟಂಬರ್ 10 ರಂದು ನಿಗದಿ ಯಾಗಿದ್ದ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯನ್ನು ಮುಂದೂಡಲಾಗಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ…

ಕಡೇ ಶ್ರಾವಣ ಶನಿವಾರ: ದೇವಾಲಯದಲ್ಲಿ ವಿಶೇಷ ಪೂಜೆ
ಚಾಮರಾಜನಗರ

ಕಡೇ ಶ್ರಾವಣ ಶನಿವಾರ: ದೇವಾಲಯದಲ್ಲಿ ವಿಶೇಷ ಪೂಜೆ

September 9, 2018

ಚಾಮರಾಜನಗರ: ಕಡೆಯ ಶ್ರಾವಣ ಶನಿವಾರದ ಅಂಗವಾಗಿ ಜಿಲ್ಲಾದಂತ್ಯ ಶನಿವಾರ ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯ ಜರುಗಿತ್ತು. ಬೆಳಿಗ್ಗೆಯಿಂದಲೇ ಸಾರ್ವಜನಿಕರು ದೇವಾ ಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ನಗರದ ಚಾಮರಾಜೇಶ್ವರಸ್ವಾಮಿ ದೇವ ಸ್ಥಾನ, ಕೊಳದಬೀದಿ ಗಣಪತಿ, ಆಂಜ ನೇಯ ಸ್ವಾಮಿ, ಆದಿಶಕ್ತಿ, ವೀರಭದ್ರೇಶ್ವರ ಸ್ವಾಮಿ, ಮಂಟೇಸ್ವಾಮಿ ದೇವಸ್ಥಾನದಲ್ಲಿ ಹಾಗೂ ಮಲೆಮಹದೇಶ್ವರಸ್ವಾಮಿ ಬೆಟ್ಟ, ಬಿಳಿಗಿರಿರಂಗನಾಥ ಸ್ವಾಮಿ ಬೆಟ್ಟ, ಸೇರಿ ದಂತೆ ವಿವಿಧ ಪ್ರಸಿದ್ಧ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು.ತಾಲೂಕಿನ ಅಮಚವಾಡಿ ಗ್ರಾಮದ ಚನ್ನಪ್ಪಪುರ ಮಾರ್ಗದಲ್ಲಿರುವ ಶ್ರೀ ಹೆಬ್ಬಾಳ್ ಶನೇಶ್ವರಸ್ವಾಮಿ…

ಬೈಕ್‍ಗೆ ಈಚರ್ ವಾಹನ ಡಿಕ್ಕಿ: ಶಿಕ್ಷಕ ಸಾವು
ಚಾಮರಾಜನಗರ

ಬೈಕ್‍ಗೆ ಈಚರ್ ವಾಹನ ಡಿಕ್ಕಿ: ಶಿಕ್ಷಕ ಸಾವು

September 9, 2018

ನೆಚ್ಚಿನ ಶಿಕ್ಷಕನ ಅಗಲಿಕೆಯಿಂದ ಕಣ್ಣೀರಿಟ್ಟ ವಿದ್ಯಾರ್ಥಿಗಳು, ಚಂದಕವಾಡಿಯಲ್ಲಿ ಶಿಕ್ಷಕನ ಅಂತ್ಯಕ್ರಿಯೆ ಚಾಮರಾಜನಗರ: ಬೈಕ್‍ಗೆ ಈಚರ್ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಶಿಕ್ಷಕ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಸಮೀಪದ ಸೋಮವಾರಪೇಟೆ ಬಳಿಯ ರಾಷ್ಟ್ರೀಯ ಹೆದ್ದಾರಿ 209ರ ಪಕ್ಕದಲ್ಲಿರುವ ಕ್ಲಬ್‍ನ ಮುಂಭಾಗ ಶನಿವಾರ ಬೆಳಿಗ್ಗೆ ನಡೆದಿದೆ. ರಾಮಸಮುದ್ರದಲ್ಲಿ ವಾಸವಿದ್ದ ಬಿಸಲವಾಡಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಹೆಚ್.ಎಸ್. ಭೀಮೇಶ್ (40) ಮೃತಪಟ್ಟ ಶಿಕ್ಷಕ. ಘಟನೆಯ ವಿವರ: ಭೀಮೇಶ್ ಅವರು ಶನಿವಾರವಾಗಿದ್ದ ಕಾರಣ ಮುಂಜಾನೆ ತರಗತಿಗೆ ಚಾಮರಾಜನಗರದಿಂದ ಬಿಸಲವಾಡಿಗೆ ಬೈಕ್‍ನಲ್ಲಿ ತೆರಳುತ್ತಿದ್ದರು. ಸೋಮ…

ಗ್ರಂಥಾಲಯ ಸೇವೆ ಸದ್ಬಳಕೆಗೆ ಸಲಹೆ
ಚಾಮರಾಜನಗರ

ಗ್ರಂಥಾಲಯ ಸೇವೆ ಸದ್ಬಳಕೆಗೆ ಸಲಹೆ

September 8, 2018

ಚಾಮರಾಜನಗರ: ಜ್ಞಾನ ಸಂಪಾ ದನೆಗೆ ಅಗತ್ಯವಾಗಿರುವ ಗ್ರಂಥಾಲಯಗಳ ಸೇವೆಯನ್ನು ಪ್ರತಿಯೊಬ್ಬರು ಸದುಪ ಯೋಗ ಮಾಡಿಕೊಳ್ಳಬೇಕೆಂದು ಸಂಸದ ಆರ್.ಧ್ರುವನಾರಾಯಣ ಸಲಹೆ ಮಾಡಿದರು. ನಗರದ ಜಿಲ್ಲಾ ನ್ಯಾಯಾಲಯ ಅವ ರಣದ ಸಂಕೀರ್ಣದಲ್ಲಿ ವಕೀಲರಿಗಾಗಿ ರಾಜ್ಯ ಸರ್ಕಾರದ ಅನುದಾನದಡಿ ವ್ಯವಸ್ಥೆ ಮಾಡಲಾಗಿರುವ ಇ-ಲೈಬ್ರರಿ ಸೇವೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಜ್ಞಾನಾರ್ಜನೆಗೆ ಪೂರಕವಾಗಿರುವ ಗ್ರಂಥಾಲಯಗಳು ಪ್ರತಿ ಜಿಲ್ಲೆ, ತಾಲೂಕು ಸೇರಿದಂತೆ ಎಲ್ಲೆಡೆ ಇರಬೇಕು. ಆದರೆ ಗ್ರಂಥಾ ಲಯಗಳಿಗೆ ನಿರೀಕ್ಷಿತ ಅದ್ಯತೆಯನ್ನು ನೀಡ ಲಾಗುತ್ತಿಲ್ಲ. ಅಧ್ಯಯನಕ್ಕೆ ಗ್ರಂಥಾಲಯ ಗಳು ತುಂಬಾ ಅವಶ್ಯಕವಾಗಿದೆ. ಹೀಗಾಗಿ…

ಗುಂಡ್ಲುಪೇಟೆ ಸಮಗ್ರ ಅಭಿವೃದ್ಧಿಗೆ ಕ್ರಮ
ಚಾಮರಾಜನಗರ

ಗುಂಡ್ಲುಪೇಟೆ ಸಮಗ್ರ ಅಭಿವೃದ್ಧಿಗೆ ಕ್ರಮ

September 8, 2018

ಗುಂಡ್ಲುಪೇಟೆ: ಪಟ್ಟಣದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಶಾಸಕ ಸಿ.ಎಸ್. ನಿರಂಜನಕುಮಾರ್ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದ ಮುಂಭಾಗದಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಅಳವಡಿಸಿದ್ದ ಬೀದಿದೀಪಗಳು ಮತ್ತು ಹೈಮಾಸ್ಟ್ ದೀಪಗಳಿಗೆ ನೀಡಿ ಮಾತನಾಡಿ, ಕಳೆದ ಎರಡು ವರ್ಷಗಳಲ್ಲಿಯೇ ಹೆದ್ದಾರಿ ಕಾಮಗಾರಿ ಮುಗಿದಿದ್ದರೂ ಸಹ ತಾಂತ್ರಿಕ ಕಾರಣ ಗಳಿಂದ ಬಳಕೆಗೆ ತರದೆ ಪಟ್ಟಣದ ಹೆದ್ದಾರಿಯು ಕಗ್ಗತ್ತಲಿನಿಂದ ಕೂಡಿತ್ತು. ಇದರಿಂದ ರಾತ್ರಿ ವೇಳೆ ಸಂಚರಿಸುವ ವಾಹನ ಸವಾರರು ಹಾಗೂ ಪಾದಚಾರಿಗಳು ತೀವ್ರ ತೊಂದರೆ ಎದುರಿಸುತ್ತಿದ್ದರು. ಪಟ್ಟಣದ ಸಮಗ್ರ ಅಭಿವೃದ್ಧಿಗೆ…

ಚಾಮರಾಜನಗರದಲ್ಲಿ ಮೊಸರು ಮಡಿಕೆ ಒಡೆಯುವ ಉತ್ಸವ
ಚಾಮರಾಜನಗರ

ಚಾಮರಾಜನಗರದಲ್ಲಿ ಮೊಸರು ಮಡಿಕೆ ಒಡೆಯುವ ಉತ್ಸವ

September 8, 2018

ಚಾಮರಾಜನಗರ:  ನಗರದ ಶ್ರೀಕೃಷ್ಣ ಪ್ರತಿಷ್ಠಾನದ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ಅಂಗವಾಗಿ ನಗರದ ರಥಬೀದಿಯಲ್ಲಿ ಶ್ರೀಕೃಷ್ಣ ವಿಶೇಷ ಪೂಜೆ ಹಾಗೂ ಮೊಸರು ಮಡಿಕೆ ಒಡೆಯುವ ಉತ್ಸವ ಶುಕ್ರವಾರ ನಡೆಯಿತು. 3 ಯುವತಿಯರ ತಂಡ ಹಾಗೂ 7 ಯುವ ಕರ ತಂಡ ಉತ್ಸವದಲ್ಲಿ ಪಾಲ್ಗೊಂಡಿದ್ದವು. ಎರಡು ಕಂಬ ಗಳ ನಡುವೆ ಸುಮಾರು 15ರಿಂದ 20 ಅಡಿ ಎತ್ತರದಲ್ಲಿ ಕಟ್ಟ ಲಾಗಿದ್ದ ಮೊಸರು ತುಂಬಿದ್ದ ಮಡಿಕೆಯನ್ನು ಯುವಕ, ಯುವತಿಯರ ತಂಡ ಪಿರಮಿಡ್ ಆಕಾರ ರಚಿಸಿಕೊಂಡು ಒಡೆಯುತ್ತಿದ್ದ ದೃಶ್ಯ ರೋಮಾಂಚನವಾಗಿತ್ತು. ಮೊಸರು ಮಡಿಕೆ…

ಚಾಮರಾಜನಗರ ನಗರಸಭೆ ಅಧ್ಯಕ್ಷ ಗಾದಿಗೆ ಕಸರತ್ತು: ಈ ಇಬ್ಬರು ಸದಸ್ಯರೇ ಕಿಂಗ್ ಮೇಕರ್!
ಚಾಮರಾಜನಗರ

ಚಾಮರಾಜನಗರ ನಗರಸಭೆ ಅಧ್ಯಕ್ಷ ಗಾದಿಗೆ ಕಸರತ್ತು: ಈ ಇಬ್ಬರು ಸದಸ್ಯರೇ ಕಿಂಗ್ ಮೇಕರ್!

September 7, 2018

ಚಾಮರಾಜನಗರ: ಈ ಸುದ್ದಿಯ ಭಾವಚಿತ್ರದಲ್ಲಿ ಇರುವ ಇಬ್ಬರು ಚಾಮರಾಜನಗರ ನಗರಸಭೆಯ ನೂತನ ಸದಸ್ಯರು. ಒಬ್ಬರು ಬಿಎಸ್‍ಪಿ ಸದಸ್ಯ ವಿ.ಪ್ರಕಾಶ್, ಮತ್ತೊಬ್ಬರು ಪಕ್ಷೇತರ ಸದಸ್ಯ ಸಿ.ಎ. ಬಸವಣ್ಣ. ಇವರಿಬ್ಬರು ತೆಗೆದುಕೊಳ್ಳುವ ನಿರ್ಧಾರದ ಮೇಲೆ ಕಾಂಗ್ರೆಸ್ ಮತ್ತು ಬಿಜೆಪಿ ಭವಿಷ್ಯ ನಿಂತಿದೆ. ಈ ಇಬ್ಬರು ಸದಸ್ಯರೇ ಇದೀಗ ಕಿಂಗ್ ಮೇಕರ್ ಆಗಿದ್ದಾರೆ. 31 ಸದಸ್ಯರ ಬಲವುಳ್ಳ ಚಾಮರಾಜ ನಗರ ನಗರಸಭೆಯ ಚುನಾವಣೆಯಲ್ಲಿ 15 ಸ್ಥಾನವನ್ನು ಗೆಲ್ಲುವ ಮೂಲಕ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್ 8, ಎಸ್‍ಡಿಪಿಐ 6, ಬಿಎಸ್‍ಪಿ…

ಜೆಡಿಎಸ್ ಸೋಲಿಗೆ ಜಿಲ್ಲಾಧ್ಯಕ್ಷರೇ ಕಾರಣ; ಆರೋಪ
ಚಾಮರಾಜನಗರ

ಜೆಡಿಎಸ್ ಸೋಲಿಗೆ ಜಿಲ್ಲಾಧ್ಯಕ್ಷರೇ ಕಾರಣ; ಆರೋಪ

September 7, 2018

ಚಾಮರಾಜನಗರ: ನಗರಸಭಾ ಚುನಾವಣೆಯಲ್ಲಿ ಜೆಡಿಎಸ್ ಹೀನಾಯ ಸೋಲಿಗೆ ಕಾರಣವಾಗಿರುವ ಪಕ್ಷದ ಜಿಲ್ಲಾಧ್ಯಕ್ಷ ಕಾಮರಾಜ್, ಪ್ರಧಾನ ಕಾರ್ಯದರ್ಶಿ ಇಮ್ತಿಯಾಜ್ ಕೂಡಲೇ ರಾಜೀನಾಮೆ ನೀಡಬೇಕು ಎಂದು ಜೆಡಿಎಸ್ ನಗರ ಘಟಕ ಅಧ್ಯಕ್ಷ ಜಿ.ಎಂ.ಶಂಕರ್ ಒತ್ತಾಯಿಸಿದರು. ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿ ಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಜಿಲ್ಲೆಯ ಕೊಳ್ಳೇಗಾಲ ಹಾಗೂ ಚಾಮರಾಜನಗರ ನಗರಸಭೆ ಚುನಾವಣೆಯಲ್ಲಿ ಪಕ್ಷದ ವತಿಯಿಂದ ಅಭ್ಯರ್ಥಿಗಳಿಗೆ ನೀಡಿದ ಫಂಡ್‍ನಲ್ಲಿ ಪಕ್ಷದ ಅಧ್ಯಕ್ಷ ಕಾಮರಾಜ್, ಪ್ರಧಾನ ಕಾರ್ಯದರ್ಶಿ ಇಮ್ತಿಯಾಜ್ 1 ಲಕ್ಷಕ್ಕೆ 10 ಸಾವಿರ,…

ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಭಾರೀ ಅವ್ಯವಹಾರ ಆರೋಪ
ಚಾಮರಾಜನಗರ

ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಭಾರೀ ಅವ್ಯವಹಾರ ಆರೋಪ

September 7, 2018

ಬೂದಂಬಳ್ಳಿ ಮೋಳೆ ಗ್ರಾಮಸ್ಥರ ಪ್ರತಿಭಟನೆ ಸಂತೇಮರಹಳ್ಳಿ:  ಸಮೀಪದ ಬೂದಂಬಳ್ಳಿ ಮೋಳೆ ಗ್ರಾಮದಲ್ಲಿರುವ ಹಾಲು ಉತ್ಪಾಕರ ಮಹಿಳಾ ಸಹಕಾರ ಸಂಘ ದಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ರೈತ ಸಂಘದ ಸದಸ್ಯರು, ಗ್ರಾಮ ಸ್ಥರು ಬುಧವಾರ ಪ್ರತಿಭಟನೆ ನಡೆಸಿದರು. ಇಲ್ಲಿರುವ ಅಧ್ಯಕ್ಷರು ಒಮ್ಮೆಯೂ ಸಂಘದ ಕಚೇರಿಗೆ ಬಂದಿಲ್ಲ. ಒಟ್ಟು 7 ಜನ ನಿರ್ದೇ ಶಕರಿದ್ದಾರೆ. ಇದರಲ್ಲಿ ಐವರು ಹಾಲು ಉತ್ಪಾದಕರೇ ಅಲ್ಲ. ಇವರ ಬಳಿ ಯಾವುದೇ ರಾಸುಗಳಿಲ್ಲ. ಸಂಘ ಅಸ್ತಿತ್ವಕ್ಕೆ ಬಂದು 11 ವರ್ಷ ಕಳೆದಿವೆ. ಇದುವರೆವಿಗೂ…

ಪಳನಿಮೇಡು ಗ್ರಾಮದಲ್ಲಿ ದಾಯಾದಿ ಜಗಳ; ಏಳು ಮಂದಿಗೆ ಗಾಯ
ಚಾಮರಾಜನಗರ

ಪಳನಿಮೇಡು ಗ್ರಾಮದಲ್ಲಿ ದಾಯಾದಿ ಜಗಳ; ಏಳು ಮಂದಿಗೆ ಗಾಯ

September 7, 2018

ಹನೂರು:ಭೂಮಿ ವಿಚಾರವಾಗಿ ದಾಯಾದಿಗಳ ನಡುವೆ ಮಾರಾಮಾರಿ ನಡೆದು 7 ಜನರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, 14 ಜನರ ಮೇಲೆ ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಘಟನೆ ಗುರುವಾರ ಜರುಗಿದೆ. ಹನೂರು ತಾಲೂಕಿನ ರಾಮಾಪುರ ಸಮೀಪದ ಪಳನಿಮೇಡು ಗ್ರಾಮದ ಆರ್ಮುಗಂ (50) ಪತ್ನಿ ಸೆಲ್ವಿ (35) ತಂದೆ ಇರಸೆಗೌಡ (70) ನಾಚಿಮುತ್ತು (50) ರಾಮಸ್ವಾಮಿ (40) ಇರಸಾಯಿ (35) ಸುಶೀಲ (35) ಅರ್ಕಣಿ (45) ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಕರಣದ ವಿವರ: ಪಳನಿಮೇಡು ಗ್ರಾಮದ ಆರ್ಮುಗಂ ಮತ್ತು…

1 42 43 44 45 46 74
Translate »