ಮೈಸೂರು, ಸೆ. 13(ಆರ್ಕೆ)- ಎಡಿಜಿಪಿ (ಕಾನೂನು-ಸುವ್ಯವಸ್ಥೆ) ಅಮರ್ಕುಮಾರ್ ಪಾಂಡೆ ಅವರು ಇಂದು ಮೈಸೂರಿನ ನಗರ ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿ ದಸರಾ ಮಹೋ ತ್ಸವದ ಬಂದೋಬಸ್ತ್ ಕುರಿತಂತೆ ಸಭೆ ನಡೆಸಿದರು. ಆರಂಭದಲ್ಲಿ ನಗರ ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ ಅವರು ದಸರಾಗೆ ಮಾಡಿಕೊಂಡಿರುವ ಭದ್ರತಾ ಹಾಗೂ ಸುಗಮ ಸಂಚಾರ ಸಿದ್ಧತೆಗಳ ಬಗ್ಗೆ ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮೂಲಕ ಪಾಂಡೆ ಅವರಿಗೆ ವಿವರಿಸಿದರು. ಈ ಬಾರಿ ದಸರಾದಲ್ಲಿ ಅತೀ ಹೆಚ್ಚು ಕಾರ್ಯಕ್ರಮಗಳನ್ನು ಆಯೋ ಜಿಸುತ್ತಿರುವುದರಿಂದ ಹಾಗೂ ವಿಜಯದಶಮಿ ಮೆರವಣಿಗೆ…
ಮೈಸೂರಲ್ಲಿ ಭರದಿಂದ ಸಾಗಿದೆ ದೀಪಾಲಂಕಾರ
September 14, 2019ಮೈಸೂರು,ಸೆ.13(ವೈಡಿಎಸ್)-ದಸರಾಗೆ ದಿನಗಣನೆ ಆರಂಭ ವಾಗಿದ್ದು, ನಗರದಲ್ಲೆಡೆ ದೀಪಾಲಂಕಾರ ಕಾರ್ಯ ಭರ ದಿಂದ ಸಾಗುತ್ತಿದೆ. ನಗರದ ಮುಖ್ಯರಸ್ತೆಗಳಲ್ಲಿ ದೀಪಾಲಂಕರದ ಸಿದ್ಧತೆ ಬಿರುಸುಗೊಂಡಿದ್ದು, ಹಾರ್ಡಿಂಜ್ ವೃತ್ತದಿಂದ ಜೆಎಸ್ಎಸ್ ಮಹಾವಿದ್ಯಾಪೀಠ, ಸಯ್ಯಾಜಿರಾವ್ ರಸ್ತೆ, ದೇವರಾಜ ಅರಸು ರಸ್ತೆ, ಜೆಎಲ್ಬಿ ರಸ್ತೆ, ಮೈಸೂರು-ಬೆಂಗಳೂರು ರಸ್ತೆ, ಮಾನಸ ಗಂಗೋತ್ರಿ ಬಯಲುರಂಗ ಮಂದಿರ ರಸ್ತೆ ಸೇರಿದಂತೆ ಮತ್ತಿತರೆ ರಸ್ತೆಗಳಲ್ಲಿ ದೀಪಾಲಂಕಾರ ಅಳವಡಿಕೆ ಕಾರ್ಯ ಆರಂಭಗೊಂಡಿದೆ. ಕೆ.ಆರ್.ಆಸ್ಪತ್ರೆ ಸಮೀಪದಲ್ಲಿ ಹಸಿರು ಚಪ್ಪರ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಜತೆಗೆ ನ್ಯಾಯಾಲಯದ ಮುಂಭಾಗ ವಿರುವ ಮರಗಳಿಗೆ ಬಣ್ಣದ ದೀಪಗಳನ್ನು ಅಳವಡಿಸಲಾಗುತ್ತಿದೆ….
ದಸರಾ ಆನೆ ಹಾಗೂ ಕುದುರೆಗಳಿಗೆ ಸಿಡಿಮದ್ದು ತಾಲೀಮು
September 14, 2019ಮೈಸೂರು,ಸೆ.13(ಎಂಟಿವೈ)-ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿರುವ ಗಜ ಪಡೆ ಹಾಗೂ ಅಶ್ವಪಡೆಗೆ ಶುಕ್ರವಾರ ಅರ ಮನೆಯ ವರಾಹ ಗೇಟ್ ಬಳಿಯಿ ರುವ ವಾಹನ ನಿಲುಗಡೆಯ ಸ್ಥಳದಲ್ಲಿ ಈ ಸಾಲಿನ ಮೊದಲ ಸಿಡಿಮದ್ದು ಸಿಡಿಸುವ ತಾಲೀ ಮನ್ನು ಯಶಸ್ವಿಯಾಗಿ ನಡೆಸಲಾಯಿತು. ಜಂಬೂಸವಾರಿ ಹಾಗೂ ಬನ್ನಿ ಮಂಟ ಪದ ಪಂಜಿನ ಕವಾಯಿತು ವೇಳೆ ವಿಜ ಯದ ಸಂಕೇತವಾಗಿ 21 ಸುತ್ತು ಕುಶಾಲ ತೋಪು ಸಿಡಿಸುವ ಪರಂಪರೆಯಿದೆ. ಈ ಹಿನ್ನೆಲೆಯಲ್ಲಿ ಜಂಬೂಸವಾರಿ ಮೆರವಣಿಗೆ ಯಲ್ಲಿ ಜನಸಂದಣಿಯ ನಡುವೆ ಸಾಗಲಿ ರುವ ಆನೆ, ಕುದುರೆಗಳು ಕುಶಾಲ…
ದಸರಾ ಜಂಬೂಸವಾರಿಯಿಂದ ದೂರವುಳಿಯಲಿದೆ ಗರ್ಭಿಣಿ `ವರಲಕ್ಷ್ಮಿ’ಇನ್ನೂ ಒಂದು ವಾರ ಪೌಷ್ಟಿಕ ಆಹಾರ ನೀಡಿ ಆರೈಕೆ ಮಾಡಲು ನಿರ್ಧಾರ
September 14, 2019ಮೈಸೂರು, ಸೆ.13(ಎಂಟಿವೈ)- ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಅಂಬಾರಿ ಅರ್ಜುನ ನೇತೃತ್ವದ ಗಜಪಡೆಯೊಂದಿಗೆ ಆಗಮಿಸಿರುವ `ವರಲಕ್ಷ್ಮಿ’ ಗರ್ಭಿಣಿ ಯಾಗಿರುವ ಹಿನ್ನೆಲೆಯಲ್ಲಿ ಜಂಬೂ ಸವಾರಿ ಮೆರವಣಿಗೆಯಿಂದ ದೂರ ವುಳಿಯುವುದು ಖಚಿತವಾಗಿದ್ದು, ಇನ್ನೊಂದು ವಾರ ಪೌಷ್ಟಿಕ ಆಹಾರ ನೀಡಿ ಆರೈಕೆ ಮಾಡಿದ ಬಳಿಕ ಶಿಬಿರಕ್ಕೆ ಕಳಿಸಲಾಗುತ್ತದೆ. ಆನೆಗಳ ಆಯ್ಕೆ ಸಂದರ್ಭದಲ್ಲಿ ಎಲ್ಲಾ ಆನೆಗಳ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಲಾಗಿತ್ತು. ಈ ವೇಳೆ ವರಲಕ್ಷ್ಮಿ ಮೂರ್ನಾಲ್ಕು ತಿಂಗಳ ಗರ್ಭಿಣಿ ಎಂದು ಭಾವಿಸ ಲಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ವರಲಕ್ಷ್ಮಿಗೆ 10 ಅಥವಾ 11 ತಿಂಗಳು…
ದಸರಾ, ಪ್ರವಾಸಿ ತಾಣಗಳ ವ್ಯಾಪಕ ಪ್ರಚಾರಕ್ಕೆ ಅಧಿಕಾರಿಗಳಿಗೆ ಸಚಿವ ಸಿ.ಟಿ.ರವಿ ತಾಕೀತು
September 12, 2019ಮೈಸೂರು, ಸೆ. 11(ಆರ್ಕೆ)- 2019ರ ದಸರಾ ಮಹೋತ್ಸವ ಮತ್ತು ಪ್ರವಾಸೀ ತಾಣಗಳ ಬಗ್ಗೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಪ್ರಚಾರ ಮಾಡಿ ಎಂದು ಪ್ರವಾ ಸೋದ್ಯಮ ಸಚಿವ ಸಿ.ಟಿ.ರವಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ದಸರಾ ಮಹೋತ್ಸವದ ಕಾರ್ಯಕ್ರಮಗಳು, ಪ್ರವಾಸಿ ತಾಣಗಳು, ಕಲ್ಪಿಸಿ ರುವ ಸೌಲಭ್ಯಗಳು, ಮಾರ್ಗದರ್ಶಿ ಗಳು, ಪ್ರವೇಶ ವೇಳಾಪಟ್ಟಿಗಳ ಬಗ್ಗೆ ವ್ಯಾಪಕ ಪ್ರಚಾರ ನೀಡಿ ಮೈಸೂರು ಸುತ್ತಮುತ್ತಲಿನ ಪ್ರವಾಸೋದ್ಯಮ ಅಭಿವೃದ್ಧಿಗೆ ಕಾರ್ಯ ಕ್ರಮ ರೂಪಿಸಿ ಎಂದೂ ಸಚಿವರು ಅಧಿಕಾರಿಗಳಿಗೆ ತಿಳಿಸಿದರು. ಪ್ರವಾಸೋದ್ಯಮ ಇಲಾಖೆ…
ದಸರಾ ವೆಬ್ಸೈಟ್, ಪೋಸ್ಟರ್ ಬಿಡುಗಡೆ
September 1, 2019ಮೈಸೂರು, ಆ.31(ಆರ್ಕೆ)- ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹಾಗೂ ಶಾಸಕ ಎಸ್.ಎ.ರಾಮದಾಸ್ ಅವರು ಇಂದು ಮೈಸೂರಿನ ಜಲದರ್ಶಿನಿ ಅತಿಥಿಗೃಹದಲ್ಲಿ ದಸರಾ ವೆಬ್ಸೈಟ್ ಹಾಗೂ ಪ್ರಚಾರ ಪೋಸ್ಟರ್ ಬಿಡುಗಡೆ ಮಾಡಿದರು. 2019ರ ಮೈಸೂರು ದಸರಾ ಮಹೋತ್ಸವ ಕುರಿತು ಎಲ್ಲಾ ಮಾಹಿತಿಗಳನ್ನು ಕನ್ನಡ, ಇಂಗ್ಲಿಷ್, ಅರೇಬಿಕ್, ಚೈನಿಸ್, ಡಚ್, ಫ್ರೆಂಚ್, ಜರ್ಮನ್, ಇಟಲಿಯನ್, ಪೋರ್ಚುಗೀಸ್, ರಷ್ಯನ್, ಸ್ಪಾನಿಷ್ ಸೇರಿದಂತೆ ಒಟ್ಟು 12 ಭಾಷೆಗಳಲ್ಲಿ ಪ್ರವಾಸಿಗರಿಗೆ ವೆಬ್ಸೈಟ್ನಲ್ಲಿ ನೀಡಲಾಗುವುದು ಎಂದು ಸಚಿವರು ತಿಳಿಸಿದರು. ಕಂಪ್ಯೂಟರ್, ಮೊಬೈಲ್, ಟ್ಯಾಬ್ ಕಂಪಾಟಿಬಲ್ ಮೂಲಕವೂ…
ಇಂದು ಮೈಸೂರಿಗೆ ದಸರಾ ‘ಗಜಪಡೆ’
August 22, 2019ಮೈಸೂರು, ಆ.21(ಎಂಟಿವೈ, ಹನಗೋಡು ಮಹೇಶ್)- ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಗಜಪಡೆ. ಅಂಬಾರಿ ಆನೆ ಅರ್ಜುನ ನೇತೃತ್ವದ ಆರು ಆನೆಗಳುಳ್ಳ ಮೊದಲ ತಂಡ ನಾಳೆ(ಆ.22) ಬೆಳಿಗ್ಗೆ 11ಕ್ಕೆ ಹುಣಸೂರು ತಾಲೂಕಿನ ವೀರನಹೊಸಹಳ್ಳಿ ಗೇಟ್ನಿಂದ ಮೈಸೂರಿಗೆ ಆಗಮಿಸಲಿವೆ. ನಾಗರಹೊಳೆ ಅಭಯಾರಣ್ಯದ ಕಾಡಂಚಿನ ಹಾಡಿ ಹುಣಸೂರು ತಾಲೂಕಿನ ವೀರನಹೊಸಹಳ್ಳಿ ಗೇಟ್ ಬಳಿ ನಾಳೆ ಬೆಳಿಗ್ಗೆ 11ಕ್ಕೆ ದಸರಾ ಗಜಪಡೆಗೆ ಮೈಸೂರು ಜಿಲ್ಲೆ ನೆರೆ ಪರಿಹಾರ ಉಸ್ತುವಾರಿಯಾಗಿ ನಿಯೋಜನೆಗೊಂಡಿರುವ ಸಚಿವ ಆರ್.ಅಶೋಕ್ ಸಾಂಪ್ರದಾಯಿಕ ಪೂಜೆ ಸಲ್ಲಿಸುವ ಮೂಲಕ ಗಜಪಯಣಕ್ಕೆ ವಿಧ್ಯುಕ್ತ…