Tag: Madikeri

ಮಡಿಕೇರಿಯಲ್ಲಿ ಭಾರೀ ಮಳೆ
ಕೊಡಗು

ಮಡಿಕೇರಿಯಲ್ಲಿ ಭಾರೀ ಮಳೆ

June 28, 2018

ಮಡಿಕೇರಿ: ಆರಿದ್ರಾ ಮಳೆಯ ಆರ್ಭಟಕ್ಕೆ ಮಡಿಕೇರಿ ನಗರ ತತ್ತರಿಸಿದೆ. ಬುಧವಾರ ಮಧ್ಯಾಹ್ನ ಸುಮಾರು ಮೂರು ಗಂಟೆ ಸಮಯ ದಲ್ಲಿ ಸುರಿದ ಭಾರಿ ಮಳೆಗೆ ನಗರದ ಕೆಲವು ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ನಗರದ ಮ್ಯಾನ್ಸ್ ಕಾಂಪೌಂಡ್ ಮುಂಭಾ ಗದ ಬಡಾವಣೆಯಲ್ಲಿ ತೋಡು ಉಕ್ಕಿ ಹರಿದ ಪರಿಣಾಮ ಸಂಪೂರ್ಣ ಪ್ರದೇಶ ಜಲಮಯವಾಗಿತ್ತು. ಕೊಳಚೆ ನೀರು ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿದ್ದು, ಮನೆಯೊಳಗಿದ್ದ ವಸ್ತುಗಳಿಗೆ ಹಾನಿ ಸಂಭವಿಸಿದೆ. ಆರಿದ್ರಾ ಮಳೆಯ ಬಿರುಸಿಗೆ ಯುಜಿಡಿ ಚರಂಡಿ ಕಾಮಗಾರಿಯ ಮುಖವಾಡ…

ಬೆಂಗಳೂರು ನಿರ್ಮಾಣಕ್ಕೆ ಕೆಂಪೇಗೌಡರ ಕೊಡುಗೆ ಅಪಾರ
ಕೊಡಗು

ಬೆಂಗಳೂರು ನಿರ್ಮಾಣಕ್ಕೆ ಕೆಂಪೇಗೌಡರ ಕೊಡುಗೆ ಅಪಾರ

June 28, 2018

ಮಡಿಕೇರಿ: ಬೆಂಗಳೂರು ನಿರ್ಮಾತೃ, ಆದರ್ಶ ಆಡಳಿತಗಾರ ಕೆಂಪೇ ಗೌಡರ ಆಡಳಿತ ವ್ಯವಸ್ಥೆ, ದಕ್ಷತೆ ವಿಚಾರ ಗಳನ್ನು ಇಂದಿನ ಯುವ ಜನರು ತಿಳಿದು ಕೊಳ್ಳುವಂತಾಗಬೇಕು ಎಂದು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಸಲಹೆ ನೀಡಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಕಾವೇರಿ ಕಲಾಕ್ಷೇತ್ರ ದಲ್ಲಿ ಬುಧವಾರ ನಡೆದ ನಾಡಪ್ರಭು ಕೆಂಪೇ ಗೌಡ ಜಯಂತ್ಯುತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಾಡಪ್ರಭು ಕೆಂಪೇಗೌಡರು ಆದರ್ಶ ಆಡಳಿತಗಾರರಾಗಿ ಬೆಂಗಳೂರು ನಗರ ನಿರ್ಮಾಣಕ್ಕೆ ಅಪಾರ…

ಬಸ್‍ಗೆ ಡಿಕ್ಕಿ ಹೊಡೆದು ಉರುಳಿ ಬಿದ್ದ ಲಾರಿ
ಕೊಡಗು

ಬಸ್‍ಗೆ ಡಿಕ್ಕಿ ಹೊಡೆದು ಉರುಳಿ ಬಿದ್ದ ಲಾರಿ

June 28, 2018

ಮಡಿಕೇರಿ: ಕಬ್ಬಿಣದ ಶೀಟ್ ರೋಲ್ ಸಾಗಿಸುತ್ತಿದ್ದ ಲಾಂಗ್ ಚಾಸೀಸ್ ಲಾರಿಯೊಂದು, ಕೆಎಸ್‍ಆರ್‍ಟಿಸಿ ಬಸ್‍ಗೆ ಡಿಕ್ಕಿ ಹೊಡೆದು ರಸ್ತೆ ಮಧ್ಯೆ ಉರುಳಿ ಬಿದ್ದ ಘಟನೆ ಮಡಿಕೇರಿ ಸಮೀಪದ ಬೋಯಿಕೇರಿಯಲ್ಲಿ ನಡೆದಿದೆ. ಮಂಗಳೂರು ಬಂದರಿನಿಂದ ಬೆಂಗಳೂರು ಕಡೆಗೆ 60 ಟನ್ ತೂಕದ ಕಬ್ಬಿಣದ 2 ಶೀಟ್ ರೋಲ್ ಸಾಗಿಸುತ್ತಿದ್ದ ಲಾರಿ, ಬೊಯಿಕೇರಿ ಬಳಿಯ ರಸ್ತೆ ಹಂಪ್ಸ್‍ನಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡಿದೆ. ಈ ಸಂದರ್ಭ ಮೈಸೂರು ಕಡೆಯಿಂದ ಮಡಿಕೇರಿಗೆ ಬರುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್‍ಗೆ ಡಿಕ್ಕಿ ಹೊಡೆದಿದೆ. ಬಸ್‍ನಲ್ಲಿದ್ದ 10ಕ್ಕೂ ಹೆಚ್ಚು ಪ್ರಯಾಣಿಕರಿಗೆ…

ಮೂಲ ಸೌಕರ್ಯ ಒದಗಿಸಲು ಡಿಸಿ ಸೂಚನೆ
ಕೊಡಗು

ಮೂಲ ಸೌಕರ್ಯ ಒದಗಿಸಲು ಡಿಸಿ ಸೂಚನೆ

June 26, 2018

ಮಡಿಕೇರಿ:  ಸೋಮವಾರ ಪೇಟೆ ತಾಲೂಕಿನ ಬಸವನಹಳ್ಳಿ ಮತ್ತು ಬ್ಯಾಡಗೊಟ್ಟ ಪುನರ್ವಸತಿ ಕೇಂದ್ರಗಳಲ್ಲಿ ವಾಸಿಸುವ ಗಿರಿಜನ ಕಟುಂಬಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಆದಷ್ಟು ಬೇಗನೆ ಕಲ್ಪಿಸುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರು ನಿರ್ದೇಶನ ನೀಡಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬಸವನಹಳ್ಳಿ ಮತ್ತು ಬ್ಯಾಡ ಗೊಟ್ಟ ಪುನರ್ವಸತಿ ಕೇಂದ್ರಗಳಲ್ಲಿ ವಾಸವಿರುವ ಗಿರಿಜನರ ಕುಟುಂಬಗಳಿಗೆ ಒದಗಿಸಲಾಗುತ್ತಿರುವ ಮೂಲಭೂತ ಸೌಕರ್ಯಗಳ ಪ್ರಗತಿ ಪರಿಶೀಲನಾ ಸಭೆ ಯಲ್ಲಿ ಅವರು ಮಾತನಾಡಿದರು. ಬಸವನಹಳ್ಳಿ ಮತ್ತು ಬ್ಯಾಡಗೊಟ್ಟ ಪುನ ರ್ವಸತಿ ಕೇಂದ್ರಗಳಲ್ಲಿ…

ಹುಲಿ ದಾಳಿಗೆ ಹಸು ಬಲಿ
ಕೊಡಗು

ಹುಲಿ ದಾಳಿಗೆ ಹಸು ಬಲಿ

June 26, 2018

ಮಡಿಕೇರಿ: ಹುಲಿ ದಾಳಿಗೆ ಮತ್ತೊಂದು ಹಸು ಬಲಿಯಾಗಿರುವ ಘಟನೆ ಸುಂಟಿಕೊಪ್ಪ ಸಮೀಪದ ಅತ್ತೂರು ನಲ್ಲೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿ ರಾಬರ್ಟ್ ಎಂಬುವರಿಗೆ ಸೇರಿದ 3 ವರ್ಷ 9 ತಿಂಗಳು ಪ್ರಾಯದ, ಗರ್ಭ ಧರಿಸಿರುವ ಹಸುವಿನ ಮೇಲೆ ಹುಲಿ ದಾಳಿ ಮಾಡಿ ಕೊಂದು ಹಾಕಿದೆ. ಮೇಯಲು ಹೋಗಿದ್ದ ಹಸು ಕಳೆದೆರಡು ದಿನಗಳಿಂದ ಕಾಣೆಯಾಗಿತ್ತು. ಮನೆಯ ಹತ್ತಿರವಿರುವ ತೊರೆಯ ಬದಿಯಲ್ಲಿ ನೀರು ಕುಡಿಯಲು ಹೋದ ಸಂದರ್ಭ ಹತ್ತಿರದ ಮೀನುಕೊಲ್ಲಿ ಅರಣ್ಯದಿಂದ ಬಂದ ಹುಲಿ ದಾಳಿ ಮಾಡಿರುವ ಬಗ್ಗೆ ಸಂಶಯ…

‘ನಮಾಮಿ ಕಾವೇರಿ’ ಕಾವೇರಿ ಪುನರುತ್ಥಾನ ಅಭಿಯಾನಕ್ಕೆ ಚಾಲನೆ
ಕೊಡಗು

‘ನಮಾಮಿ ಕಾವೇರಿ’ ಕಾವೇರಿ ಪುನರುತ್ಥಾನ ಅಭಿಯಾನಕ್ಕೆ ಚಾಲನೆ

June 25, 2018

ಮಡಿಕೇರಿ: ಜೀವನದಿ ಕಾವೇರಿ ಉಗಮ ಸ್ಥಾನದಿಂದಲೇ ಮಲಿನ ಗೊಳ್ಳುತ್ತಿದ್ದು, ಕಾವೇರಿ ಮಾತೆ ಎಲ್ಲರ ತಾಯಿ ಎಂಬ ಜಾಗೃತಿ ಮೂಡಿಸುವುದ ರೊಂದಿಗೆ ಜಿಲ್ಲೆಯ ಜನತೆಯಲ್ಲಿ ಸಾಮರಸ್ಯ, ಸದ್ಭಾವನೆಯನ್ನು ಮೂಡಿ ಸುವ ಸಲುವಾಗಿ ‘ನಮಾಮಿ ಕಾವೇರಿ’ ಎಂಬ ಜೀವನದಿ ಕಾವೇರಿ ಪುನರುತ್ಥಾನ ಅಭಿಯಾ ನಕ್ಕೆ ನಗರದಲ್ಲಿ ಚಾಲನೆ ನೀಡಲಾಯಿತು. ನಗರದ ಶ್ರೀ ಓಂಕಾರ ಸದನದಲ್ಲಿ ತಲ ಕಾವೇರಿ ದೇವಾಲಯದ ಪ್ರಧಾನ ಅರ್ಚಕ ನಾರಾಯಣಾಚಾರ್ ಅವರು ದೀಪ ಪ್ರಜ್ವ ಲಿಸಿ, ತೀರ್ಥ ರೂಪಿಣಿ ಕಾವೇರಿ ಮಾತೆಯ ಶ್ಲೋಕ ಉಚ್ಚರಿಸುವ ಮೂಲಕ ಅಭಿ…

ಎಟಿಎಂ ಗ್ರಾಹಕರಿಗೆ ವಂಚಿಸುತ್ತಿದ್ದ ಆರೋಪಿ ಬಂಧನ
ಕೊಡಗು

ಎಟಿಎಂ ಗ್ರಾಹಕರಿಗೆ ವಂಚಿಸುತ್ತಿದ್ದ ಆರೋಪಿ ಬಂಧನ

June 25, 2018

ಮಡಿಕೇರಿ: ಎಟಿಎಂ ಕೇಂದ್ರಗಳಿಗೆ ಬರುತ್ತಿದ್ದ ವಯೋವೃದ್ಧ ಗ್ರಾಹಕರಿಗೆ ನೆರವು ನೀಡುವ ನೆಪವೊಡ್ಡಿ ಬ್ಯಾಂಕ್ ಖಾತೆಗಳಿಂದ ಹಣಲಪಟಾಯಿ ಸುತ್ತಿದ್ದ ಕಳ್ಳನನ್ನು ಮಡಿಕೇರಿ ನಗರ ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ಮೂಲದ ರಾಜುಪ್ರಕಾಶ್ ಕುಲಕರ್ಣಿ ಬಂಧಿತ ಆರೋಪಿಯಾಗಿದ್ದು, ಈತನ ವಿರುದ್ಧ ರಾಜ್ಯದ ವಿವಿಧ ಕಡೆ ಗಳಲ್ಲಿ ಒಟ್ಟು 16ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಮೇ 31 ರಂದು ಮಡಿಕೇರಿ ಸಮೀಪದ ಬಿಳಿಗೇರಿ ಗ್ರಾಮದ ಲೋಕೇಶ್ ಎಂಬು ವರು ಮಡಿಕೇರಿಯ ವಿಜಯಾ ಬ್ಯಾಂಕ್ ಎಟಿಎಂಗೆ ಬಂದ ಸಂದರ್ಭ ಎಟಿಎಂ ಪಕ್ಕದಲ್ಲಿ ನಿಂತಿದ್ದ ರಾಜು…

ಚೆನ್ನೈನಲ್ಲಿ ಫೀ.ಮಾ.ಕೆ.ಎಂ ಕಾರ್ಯಪ್ಪ ಪ್ರತಿಮೆ ಅನಾವರಣ
ಕೊಡಗು

ಚೆನ್ನೈನಲ್ಲಿ ಫೀ.ಮಾ.ಕೆ.ಎಂ ಕಾರ್ಯಪ್ಪ ಪ್ರತಿಮೆ ಅನಾವರಣ

June 24, 2018

ಮಡಿಕೇರಿ: ದೇಶ ಕಂಡ ಅಪ್ರತಿಮ ವೀರ, ಕನ್ನಡನಾಡಿನ ಹೆಮ್ಮೆ, ಕೊಡಗಿನ ಕಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಕಂಚಿನ ಪ್ರತಿಮೆ ಯನ್ನು ತಮಿಳುನಾಡಿನಲ್ಲಿ ಸ್ಥಾಪಿಸಲಾ ಗಿದ್ದು, ಕರ್ನಾಟಕ ರಾಜ್ಯಕ್ಕೆ ಹೆಮ್ಮೆ ತಂದಿದೆ. ತಮಿಳುನಾಡಿನ ಚೆನ್ನೈನ ಆಫೀ ಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ಕೊಡಂದೇರ ಕಾರ್ಯಪ್ಪನವರ ಆಳು ದ್ದದ ಕಂಚಿನ ಪ್ರತಿಮೆಯನ್ನು ಶುಕ್ರವಾರ ಅನಾವರಣಗೊಳಿಸಲಾಗಿದೆ. ದೇಶದ ಪ್ರಥಮ ಕಮಾಂಡರ್ ಇನ್ ಚೀಫ್ ಆಫ್ ಇಂಡಿಯನ್ ಆರ್ಮಿ ಎಂಬ ಹೆಗ್ಗಳಿಕೆ ಹೊಂದಿರುವ ಕಾರ್ಯಪ್ಪನವರ ಕಂಚಿನ ಪ್ರತಿಮೆಯನ್ನು, ನಿವೃತ್ತ ಏರ್ ಮಾರ್ಷಲ್ ಹಾಗೂ…

ಕೊಡವರ ಸಮಗ್ರ ಕುಲಶಾಸ್ತ್ರ ಅಧ್ಯಯನ ಪುನರಾರಂಭಿಸಲು ಸಿಎನ್‍ಸಿ ಆಗ್ರಹ
ಕೊಡಗು

ಕೊಡವರ ಸಮಗ್ರ ಕುಲಶಾಸ್ತ್ರ ಅಧ್ಯಯನ ಪುನರಾರಂಭಿಸಲು ಸಿಎನ್‍ಸಿ ಆಗ್ರಹ

June 23, 2018

ಮಡಿಕೇರಿ: ಕೊಡವ ಬುಡ ಕಟ್ಟು ಜನಾಂಗವನ್ನು ಸಂವಿಧಾನದ ಶೆಡ್ಯೂಲ್ ಪಟ್ಟಿಯಲ್ಲಿ ಸೇರಿಸುವ ಸಲು ವಾಗಿ, ಕೊಡವರ ಸಮಗ್ರ ಕುಲಶಾಸ್ತ್ರ ಅಧ್ಯ ಯನವನ್ನು ಮುಂದುವರಿಸಲು ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು. ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ, ಸಿಎನ್‍ಸಿ ಸಂಘ ಟನೆಯ ಪದಾಧಿಕಾರಿಗಳು ಕೊಡವ ಜನಾಂಗಕ್ಕೆ ಸಂವಿಧಾನ ಭದ್ರತೆ ಒದಗಿಸು ವಂತೆ ಒತ್ತಾಯಿಸಿದರು. ಕೊಡವ ಕುಲ ವನ್ನು ಸಂವಿಧಾನದ ಶೆಡ್ಯೂಲ್ 340-342ರ ಅಡಿಯಲ್ಲಿ ಸೇರ್ಪಡೆ ಮಾಡುವ ಮೂಲಕ ಆಂತರಿಕ ರಾಜಕೀಯದ ಸ್ವಯಂ…

ಮನೆ ಮೇಲೆ ಉರುಳಿ ಬಿದ್ದ ಆಟೋ
ಕೊಡಗು

ಮನೆ ಮೇಲೆ ಉರುಳಿ ಬಿದ್ದ ಆಟೋ

June 23, 2018

ಮಡಿಕೇರಿ: ಗೂಡ್ಸ್ ಆಟೋವೊಂದು ಬ್ರೇಕ್ ವಿಫಲಗೊಂಡು ಮನೆ ಯೊಂದರ ಮೇಲೆ ಉರುಳಿ ಬಿದ್ದಿದ್ದು, ಮನೆಯೊಳಗಿದ್ದ ತಾಯಿ ಮಗು ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ಮಡಿಕೇರಿಯಲ್ಲಿ ನಡೆದಿದೆ. ನಗರದ ತ್ಯಾಗರಾಜ್ ಕಾಲೋನಿಯ ಹಫೀಜ್ ಎಂಬವರಿಗೆ ಸೇರಿದ ಮನೆಯ ಮೇಲೆ ಆಟೋ ಉರುಳಿ ಬಿದ್ದ ಪರಿಣಾಮ ಮನೆಗೆ ಹಾನಿಯಾಗಿದೆ. ಹಫೀಜ್ ಅವರ ಮನೆಯಲ್ಲಿ ಕವಿತಾ ಎಂಬವರು ಬಾಡಿಗೆಗೆ ವಾಸವಿದ್ದು, ಗುರು ವಾರ ರಾತ್ರಿ 9.30ರ ಸಮಯ ತನ್ನ ಮಗುವಿನೊಂದಿಗೆ ಗಾಢ ನಿದ್ರೆಯಲ್ಲಿದ್ದರು. ಈ ಸಂದರ್ಭ ಮನೆಯ ಮೇಲೆ ಗೂಡ್ಸ್…

1 24 25 26 27 28 32
Translate »