ಬೆಂಗಳೂರು, ಸೆ.16- ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಸಲ್ಲಿಸಿರುವ ಜಾಮೀನು ಅರ್ಜಿಗೆ ಜಾರಿ ನಿರ್ದೇಶನಾಲಯ ಆಕ್ಷೇ ಪಣೆಯನ್ನು ಸಲ್ಲಿಸಿದೆ. ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದೆ. ಸೋಮವಾರ ದೆಹಲಿಯಲ್ಲಿರುವ ಇಡಿ ವಿಶೇಷ ನ್ಯಾಯಾ ಲಯಕ್ಕೆ ಜಾರಿ ನಿರ್ದೇಶನಾಲಯ ಆಕ್ಷೇಪಣೆ ಸಲ್ಲಿಸಿದೆ. ಡಿ.ಕೆ.ಶಿವಕುಮಾರ್ ಇಡಿ ಕಸ್ಟಡಿ ಸೆ.17ರ ಮಂಗಳವಾರ ಅಂತ್ಯವಾಗಲಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸ ಲಾಗುತ್ತದೆ. ಶುಕ್ರವಾರ ಡಿ.ಕೆ.ಶಿವಕುಮಾರ್ ಪರ ವಕೀಲರು ಜಾಮೀನಿ ಗಾಗಿ ಅರ್ಜಿ ಸಲ್ಲಿಸಿದ್ದರು. ಡಿ.ಕೆ.ಶಿವಕುಮಾರ್ ಕಸ್ಟಡಿಯನ್ನು ನಾಲ್ಕು ದಿನಗಳ ಕಾಲ ವಿಸ್ತರಣೆ ಮಾಡಿದ್ದ…
ಅನರ್ಹ ಶಾಸಕರ ಪ್ರಕರಣ: ಇಂದು ಸುಪ್ರೀಂ ವಿಚಾರಣೆ
September 17, 2019ನವದೆಹಲಿ/ಬೆಂಗಳೂರು, ಸೆ.16- ದೋಸ್ತಿ ಪಕ್ಷ ಉರುಳಲು ಕಾರಣರಾಗಿದ್ದ ಅನರ್ಹ ಶಾಸಕರು ಸುಪ್ರೀಂ ಕೋರ್ಟಿ ನಲ್ಲಿ ಸಲ್ಲಿಕೆ ಮಾಡಿರುವ ಅರ್ಜಿಯ ವಿಚಾರಣೆ ಮಂಗಳವಾರ ನಡೆಯಲಿದ್ದು, ನ್ಯಾಯಾಲಯ ಯಾವ ನಿರ್ಧಾರಕ್ಕೆ ಬರ ಲಿದೆ ಎಂಬ ಕುತೂಹಲ ಮೂಡಿದೆ. ಈಗಾಗಲೇ ಅನರ್ಹ ಶಾಸಕರು ತಮ್ಮ ಅರ್ಜಿಯನ್ನು ತುರ್ತು ವಿಚಾರಣೆಗೆ ತೆಗೆದುಕೊಳ್ಳಲು ಸಲ್ಲಿಕೆ ಮಾಡಿದ್ದ ಅರ್ಜಿ ಯನ್ನು ನ್ಯಾಯಾಲಯ ತಿರಸ್ಕರಿಸಿ ತುರ್ತು ವಿಚಾರಣೆ ಸಾಧ್ಯವಿಲ್ಲ ಎಂದು ಹೇಳಿತ್ತು. ಇದರಂತೆ ನಿಯಮಗಳ ಅನ್ವಯ ಮಂಗಳವಾರ ಅನರ್ಹ ಶಾಸಕರು ಸಲ್ಲಿಕೆ ಮಾಡಿದ್ದ ಅರ್ಜಿ ವಿಚಾರಣೆಗೆ ಬರಲಿದೆ….
ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಮೈಸೂರು ಪಾಲಿಕೆಯ ನಾಲ್ಕು ವಾರ್ಡ್ಗಳಲ್ಲಿ ನಡೆಯದ ದಸರಾ ಕಾಮಗಾರಿ
September 17, 2019ಮೈಸೂರು,ಸೆ.16(ಆರ್ಕೆಬಿ)-ದಸರಾ ಸಂದರ್ಭದಲ್ಲಿ ಮೈಸೂರು ನಗರಾದ್ಯಂತ ವಿವಿಧ ಕಾಮಗಾರಿಗಳು ಆರಂಭವಾಗಿ ದ್ದರೂ ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಗೆ ಬರುವ ಮೈಸೂರಿನ ನಾಲ್ಕು ವಾರ್ಡ್ ಗಳಲ್ಲಿ ಕಾಮಗಾರಿ ನಡೆಯದ ಸಂಬಂಧ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಸೋಮವಾರ ಜಲದರ್ಶಿನಿ ಅತಿಥಿಗೃಹದ ಸಭಾಂಗಣದಲ್ಲಿ ನಗರ ಪಾಲಿಕೆ ಹಾಗೂ ಮುಡಾ ಅಧಿಕಾರಿಗಳ ಸಭೆ ನಡೆಸಿದರು. ತಮ್ಮ ಕ್ಷೇತ್ರ ವ್ಯಾಪ್ತಿಯ ನಾಲ್ಕು ವಾರ್ಡ್ ಗಳಲ್ಲಿ ಸ್ವಚ್ಛತೆ ಇಲ್ಲ. ಉದ್ಯಾನವನಗಳ ಅಭಿವೃದ್ಧಿ ಆಗುತ್ತಿಲ್ಲ. ವಿದ್ಯುತ್ ಮತ್ತು ನೀರಿನ ಸಮಸ್ಯೆಗಳ ಬಗ್ಗೆ ಬಂದ ದೂರು ಗಳ ಬಗ್ಗೆ…
ಇರ್ವಿನ್, ದೇವರಾಜ ಅರಸು ರಸ್ತೆಗೆ ತರಾತುರಿ ಪ್ಯಾಚ್ವಕ್ರ್ಸ್
September 17, 2019ಮೈಸೂರು,ಸೆ.16(ಆರ್ಕೆ)-ದಸರಾಗೆ ದಿನಗಣನೆ ಆರಂಭವಾಗಿದ್ದು, ಮೈಸೂರು ಮಹಾನಗರ ಪಾಲಿಕೆಯು ರಸ್ತೆ ಕಾಮಗಾರಿ ಗಳನ್ನು ತ್ವರಿತಗತಿಯಲ್ಲಿ ನಡೆಸುತ್ತಿದೆ. ಇರ್ವಿನ್ ರಸ್ತೆಯ ಅಗಲೀಕರಣಕ್ಕಾಗಿ ಎರಡೂ ಕಡೆಯ ಕಟ್ಟಡಗಳ (ಭಾಗಶಃ)ನ್ನು ಕೆಡವುತ್ತಿರುವುದರಿಂದ ಸದ್ಯಕ್ಕೆ ಗುಂಡಿ ಬಿದ್ದಿ ರುವ ರಸ್ತೆ ಪ್ಯಾಚ್ ವರ್ಕ್ ಅನ್ನು ಕೈಗೆತ್ತಿಕೊಳ್ಳ ಲಾಗಿದೆ. ದಸರಾ ಅನುದಾನದಡಿ ನೆಹರು ಸರ್ಕಲ್ನಿಂದ ಸರ್ಕಾರಿ ಆಯುರ್ವೇದ ಸರ್ಕಲ್ವರೆಗೆ 500 ಮೀಟರ್ ಅಂತರದ ರಸ್ತೆ ಗುಂಡಿ ಮುಚ್ಚುವ ಕಾರ್ಯ ಇಂದು ನಡೆಯಿತು. ಡಿ.ದೇವರಾಜ ಅರಸು ರಸ್ತೆಯ ಫುಟ್ ಪಾತ್ ಹಾಗೂ ರಸ್ತೆಯ ಗುಂಡಿ ಮುಚ್ಚಿ ಪ್ಯಾಚ್…
ಯುವ ಸಂಭ್ರಮ: ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳ ವೇಳಾಪಟ್ಟಿ
September 17, 2019ಮೈಸೂರು,ಸೆ.16-ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2019ರ ಅಂಗವಾಗಿ ಸೆ. 17 ರಿಂದ 26 ರವರೆಗೆ ಯುವ ಸಂಭ್ರಮ ಪ್ರತಿದಿನ ಸಂಜೆ 5-30 ಗಂಟೆಗೆ ಮಾನಸ ಗಂಗೋತ್ರಿಯ ಬಯಲು ರಂಗ ಮಂದಿರದಲ್ಲಿ ವಿವಿಧ ಕಾಲೇಜುಗಳ ತಂಡದ ವತಿಯಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ. ಸೆ.17 ರಂದು ಸಂಜೆ 5.30 ಗಂಟೆಗೆ ಮೈಸೂರು ವಿಶ್ವವಿದ್ಯಾನಿಲಯದ ಲಲಿತಾ ಕಲಾ ಕಾಲೇಜು ತಂಡದಿಂದ ಸ್ವಾಗತ ನೃತ್ಯ ಕಾರ್ಯಕ್ರಮ, ಸಂಜೆ 7 ಗಂಟೆಗೆ ಮೈಸೂರಿನ ಯರಗನಹಳ್ಳಿಯ ನಿತ್ಯ ನಿರಂತರ ಟ್ರಸ್ಟ್ ತಂಡದಿಂದ ಡಾ. ಶಿವಕುಮಾರ…
ದಸರಾ ಫಲ-ಪುಷ್ಪ ಪ್ರದರ್ಶನ ಮತ್ತಷ್ಟು ಆಕರ್ಷಣೀಯಗೊಳಿಸಲು ಭಾರೀ ಸಿದ್ಧತೆ
September 17, 2019ಮೈಸೂರು,ಸೆ.16(ಎಸ್ಬಿಡಿ)- ಮೈಸೂರು ದಸರಾ ಮಹೋತ್ಸವದ ಅಂಗ ವಾಗಿ ಏರ್ಪಡಿಸಲಾಗುವ `ದಸರಾ ಫಲ- ಪುಷ್ಪ ಪ್ರದರ್ಶನ’ವನ್ನು ಈ ಬಾರಿ ಮತ್ತಷ್ಟು ಆಕರ್ಷಣೀಯವಾಗಿಸುವ ಪ್ರಯತ್ನ ನಡೆದಿದೆ. ಜಯಚಾಮರಾಜ ಒಡೆಯರ್ ವೃತ್ತ (ಹಾರ್ಡಿಂಜ್ ಸರ್ಕಲ್)ದ ಸಮೀಪ ವಿರುವ ಕುಪ್ಪಣ್ಣ ಪಾರ್ಕ್ನಲ್ಲಿ ಫಲ-ಪುಷ್ಪ ಪ್ರದರ್ಶನ ಆಯೋಜನೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ವ್ಯಾಪ್ತಿಯ 6 ನರ್ಸರಿಗಳಲ್ಲಿ ವಿವಿಧ ಜಾತಿ, ಬಣ್ಣದ 60 ಸಾವಿರಕ್ಕೂ ಹೆಚ್ಚು ಹೂವು ಹಾಗೂ ಅಲಂಕಾರಿಕಾ ಗಿಡಗಳನ್ನು ಕುಂಡದಲ್ಲಿ ಬೆಳೆಸಿ, ಪೋಷಿಸಲಾಗಿದೆ. ನಗರದ ಇಟ್ಟಿಗೆಗೂಡಿನಲ್ಲಿರುವ…
ರೈಲ್ವೆ `ಸ್ವಚ್ಛತಾ ಪಾಕ್ಷಿಕ’ಕ್ಕೆ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅಜಯ್ಕುಮಾರ್ ಸಿಂಗ್ ಚಾಲನೆ
September 17, 2019 ಮೈಸೂರು ರೈಲ್ವೆ ವಿಭಾಗದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ ಪ್ಲಾಸ್ಟಿಕ್ ಪೂರ್ಣ ವಿಲೇವಾರಿ ಯಂತ್ರ ಅಳವಡಿಕೆ ಬಟ್ಟೆ ಒಗೆಯುವ ಯಾಂತ್ರಿಕ ಕೇಂದ್ರ ಸ್ಥಾಪನೆ ಮೈಸೂರು,ಸೆ.16(ಆರ್ಕೆಬಿ)-ದೇಶದ 64 ರೈಲ್ವೆ ವಿಭಾಗಗಳ ಪೈಕಿ ಮೈಸೂರು ರೈಲ್ವೆ ವಿಭಾಗ ಸ್ವಚ್ಛತೆಯಲ್ಲಿ 4ನೇ ಸ್ಥಾನ ಪಡೆದಿದೆ ಎಂದು ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅಜಯ್ಕುಮಾರ್ ಸಿಂಗ್ ಇಂದಿಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು. ಮೈಸೂರು ರೈಲ್ವೆ ನಿಲ್ದಾಣದ ಆವರಣ ದಲ್ಲಿ `ಸ್ವಚ್ಛತಾ ಪಾಕ್ಷಿಕ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಅವರು ಸುದ್ದಿ ಗಾರರೊಂದಿಗೆ…
‘ಉರಿಯ ಉಯ್ಯಾಲೆ’ ನಾಟಕ ಪ್ರದರ್ಶನ
September 17, 2019ಮೈಸೂರು,ಸೆ.16(ಎಂಟಿವೈ)- ಗೃಹಿಣಿ, ಶಿಕ್ಷಕಿ ಹಾಗೂ ವೈದ್ಯರಿರುವ ಎಂಟು ಮಹಿಳೆಯರ ಒಳಗೊಂಡ ತಂಡ ಎಂಟು ದ್ರೌಪದಿಯ ಪಾತ್ರವನ್ನೊಳಗೊಂಡ `ಉರಿಯ ಉಯ್ಯಾಲೆ’ ನಾಟಕವನ್ನು ಸೆ.19ರಂದು ಸಂಜೆ 7ಕ್ಕೆ ಮೈಸೂರಿನ ಕಲಾಮಂದಿರದ ಕಿರುರಂಗಮಂದಿರದಲ್ಲಿ ಪ್ರದರ್ಶಿಸಲಿದ್ದಾರೆ. ಮೈಸೂರಿನ ರಂಗಯಾನ ಟ್ರಸ್ಟ್ ವತಿ ಯಿಂದ ಆಯೋಜಿಸಿರುವ ಈ ನಾಟಕ ಪ್ರದರ್ಶನದಲ್ಲಿ ಡಾ.ಹೆಚ್.ಎಸ್. ವೆಂಕ ಟೇಶಮೂರ್ತಿ ರಚಿಸಿರುವ `ಉರಿಯ ಉಯ್ಯಾಲೆ’ ನಾಟಕವನ್ನು ಎಂಟು ಮಹಿಳೆ ಯರು ಪ್ರತ್ಯೇಕ, ದ್ರೌಪದಿ ಪಾತ್ರ ಅಭಿನ ಯಿಸಲಿದ್ದಾರೆ ಎಂದು ರಂಗಯಾನ ಟ್ರಸ್ಟ್ ಅಧ್ಯಕ್ಷ ವಿಕಾಸ್ಚಂದ್ರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ರಂಗಾಯಣ ಕಲಾವಿದೆ,…
ರಂಗಾಯಣ ನಿರ್ದೇಶಕರ ವಜಾ: ಸರ್ಕಾರದ ನಿಲುವಿಗೆ ರಂಗಕರ್ಮಿಗಳ ವ್ಯಾಪಕ ಖಂಡನೆ
September 17, 2019ಮೈಸೂರು,ಸೆ.16(ಎಂಟಿವೈ)- ಯಾವುದೇ ಕಾರಣವಿಲ್ಲದೆ ರಂಗಾಯಣದ ನಿರ್ದೇ ಶರನ್ನು ವಜಾಗೊಳಿಸಿರುವ ರಾಜ್ಯ ಸರ್ಕಾರದ ನಿರ್ಧಾರ ಮೂರ್ಖತನದ್ದಾಗಿದೆ ಎಂದು ಹಿರಿಯ ರಂಗಕರ್ಮಿ ಪ್ರಸನ್ನ ಕಿಡಿಕಾರಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾಯತ್ತ ಸಂಸ್ಥೆ ಯಾಗಿರುವ ರಂಗಾಯಣಕ್ಕೆ ರಾಜಕೀಯ ಲೇಪನ ಮಾಡುವ ಸಂಚು ನಡೆಯುತ್ತಿದೆ. ಕಲಾವಿದರನ್ನು ಬಿಜೆಪಿ, ಕಾಂಗ್ರೆಸ್ ಸದ ಸ್ಯರು ಎಂಬ ಪರಿಕಲ್ಪನೆಯಲ್ಲಿ ಯೋಚಿಸ ಬಾರದು. ಯಾವುದೇ ಪಕ್ಷದ ಪರವಾಗಿ ಕೆಲಸ ಮಾಡದೇ ತನ್ನದೇ ಆದ ಮಹತ್ವ ಕಾಯ್ದುಕೊಂಡಿರುವ ಏಕೈಕ ಸಂಸ್ಥೆ ರಂಗಾಯಣ….
ಮುಂದಿನ ವರ್ಷದಿಂದ ಮೈಸೂರು ವಿವಿ ಆಡಳಿತ ಪೂರ್ಣ ಡಿಜಿಟಲೀಕರಣ
September 17, 2019ಮೈಸೂರು,ಸೆ.16(ಆರ್ಕೆ)- ಮುಂದಿನ ಶೈಕ್ಷಣಿಕ ವರ್ಷದಿಂದ ಮೈಸೂರು ವಿಶ್ವವಿದ್ಯಾನಿಲಯದ ಆಡಳಿತ ಸಂಪೂರ್ಣ ಡಿಜಿಟಲೀಕರಣವಾಗಲಿದೆ.ಕ್ರಾಫರ್ಡ್ ಭವನದ ಸಭಾಂಗಣದಲ್ಲಿ ಇಂದು ನಡೆದ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಈ ಮಹ ತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಇನ್ನು ಮುಂದೆ ಕಾಗದದ ಮೂಲಕ ವ್ಯವಹರಿಸುವುದಕ್ಕೆ ತಿಲಾಂ ಜಲಿ ಇಟ್ಟು ಡಿಜಿಟಲೈಸ್ಡ್ ಪದ್ಧತಿಯಲ್ಲಿ ಆಡಳಿತ ನಡೆಸಲು ಸದಸ್ಯರು ಸಮ್ಮತಿಸಿದರು. ಆಡಳಿತದಲ್ಲಿ ಪಾರದರ್ಶಕತೆ ತರಲು, ಕಡತಗಳ ಶೀಘ್ರ ವಿಲೇವಾರಿ, ಕಾಗದ ಪತ್ರಗಳಿಗೆ ತಗಲುವ ವೆಚ್ಚ ಹಾಗೂ ಅಕ್ರಮಗಳಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಡಿಜಿಟಲೈಸ್ಡ್ ಸಿಸ್ಟಂ ಅನ್ನು ಜಾರಿಗೆ ತರಲು…










