ಮೈಸೂರು,ಜೂ.24(ಆರ್ಕೆಬಿ)- ಜೀವ ತೆಗೆಯುವ ಸಾಮಾಜಿಕ ಜಾಲ ತಾಣದ ಆಟಗಳನ್ನು ಬಿಟ್ಟು, ದೇಸೀ ಆಟ ಗಳನ್ನು ಆಡುವಂತೆ ಕರಪತ್ರಗಳನ್ನು ಹಂಚುವ ಮೂಲಕ ಮೈಸೂರಿನ ಸತ್ಯ ಮೇವ ಜಯತೆ ಸಂಘಟನೆ ಕಾರ್ಯ ಕರ್ತರು ಜನಜಾಗೃತಿಯಲ್ಲಿ ತೊಡಗಿದ್ದಾರೆ. ಮೈಸೂರು ನಗರ ಸಾರಿಗೆ ಬಸ್ ನಿಲ್ದಾಣ ದಲ್ಲಿ ಪ್ರಯಾಣಿಕರು ಹಾಗೂ ಕಾಲೇಜು ಯುವಕ-ಯುವತಿಯರಿಗೆ ಕರಪತ್ರಗಳನ್ನು ನೀಡಿ ಸಾಮಾಜಿಕ ಜಾಲತಾಣದ ಆಟಗಳಿಗೆ ಶರಣಾಗಿ ಜೀವ ಕಳೆದುಕೊಳ್ಳಬೇಡಿ. ಅದರ ಬದಲಿಗೆ ದೇಸೀಯ ಆಟಗಳನ್ನು ಆಡುವ ಮೂಲಕ ದೇಸೀಯ ಆಟಗಳ ಉಳಿವಿಗೆ ಮನಸ್ಸು ಮಾಡುವಂತೆ ಮನವಿ ಮಾಡಿದರು….
ನಂಜರಾಜ ಬಹದ್ದೂರ್ ಛತ್ರದ ಆಸ್ತಿ ನಿರ್ವಹಣೆಯಲ್ಲಿ ಜಿಲ್ಲಾಡಳಿತ ವಿಫಲ
June 25, 2019ಮೈಸೂರು,ಜೂ.24(ಎಂಟಿವೈ)- ಮುಜರಾಯಿ ಇಲಾಖೆಗೆ ಸೇರಿದ ಮೈಸೂರಿನ ನಂಜರಾಜ ಬಹದ್ದೂರ್ ಛತ್ರದ ಆಸ್ತಿ ನಿರ್ವಹಣೆ ಮಾಡಲು ಜಿಲ್ಲಾಡಳಿತ ವಿಫಲವಾಗಿದೆ ಎಂದು ನಂಜರಾಜ ಬಹ ದ್ದೂರ್ ಛತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸಿ.ಕೃಷ್ಣಪ್ಪ ಆರೋಪಿಸಿದ್ದಾರೆ. ಮೈಸೂರಿನ ನಂಜರಾಜ ಬಹದ್ದೂರ್ ಛತ್ರದಲ್ಲಿ ಸೋಮವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಛತ್ರದ ಆಸ್ತಿಯನ್ನು ಸಮರ್ಪಕವಾಗಿ ಬಳಸಿ ಕೊಳ್ಳಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣ ವಾಗಿದೆ. ಸಾರ್ವಜನಿಕರ ಉಪಯೋಗ ಕ್ಕಾಗಿ ನಂಜರಾಜ ಬಹದ್ದೂರ್ರವರು ಈ ಆಸ್ತಿಯನ್ನು ದಾನ ನೀಡಿ, ಲಾಭ ದಾಯಕ ಅಂಶಕ್ಕೆ ಬಳಸಿಕೊಳ್ಳದಂತೆ ಸಲಹೆ…
ನಾಳೆಯಿಂದ ರೈತರ ಅನಿರ್ದಿಷ್ಟಾವಧಿ ಪ್ರತಿಭಟನೆ
June 25, 2019ಮೈಸೂರು, ಜೂ.24(ಆರ್ಕೆಬಿ)- ಡಿಸ್ಟಿ ಲರಿ ತೊಲಗಿಸಿ, ಊರು ಉಳಿಸಿ ಎಂದು ಅಳಗಂಚಿಪುರ ಬಣ್ಣಾರಿ ಡಿಸ್ಟಿಲರಿ ಎದುರು ಜೂ.26ರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲು ಪ್ರೊ.ಎಂ.ಡಿ.ಎನ್. ಅನು ಯಾಯಿಗಳಾದ ದಿ.ತಾ.ರಾಮೇಗೌಡ ಮತ್ತು ರಘುಪತಿ ನಾಯಕ ಹೋರಾಟ ವೇದಿಕೆ ನಿರ್ಧರಿಸಿದೆ. ವೇದಿಕೆ ಮೈಸೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಮ್ಮಾವು ರಘು ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವೇದಿಕೆ ಜಿಲ್ಲಾಧ್ಯಕ್ಷ ಟಿ.ರಾಮೇಗೌಡ ವಿದ್ಯಾಸಗರ್ ನೇತೃತ್ವದಲ್ಲಿ ಜೂ.26ರಿಂದ ಎರಡು ದಿನ ಶಾಂತಿಯುವ ಪ್ರತಿಭಟನೆ ನಡೆಸಲಿದ್ದು, ಬಳಿಕ ಅನಿರ್ದಿಷ್ಟಾವಧಿ ಉಗ್ರ ಹೋರಾಟ…
ಅತಿಥಿ ಉಪನ್ಯಾಸಕನಾಗಿ ಮುಂದುವರೆಸಲು ಆಗ್ರಹಿಸಿ ಏಕಾಂಗಿ ಪ್ರತಿಭಟನೆ
June 25, 2019ಮೈಸೂರು, ಜೂ.24(ಎಸ್ಬಿಡಿ)- ಪಿಹೆಚ್.ಡಿ ಪದವಿ ಸಂಬಂಧ ಇರುವ ಗೊಂದಲ ವನ್ನು ನಿವಾರಿಸಿ, ಅತಿಥಿ ಉಪನ್ಯಾಸಕನಾಗಿ ಸೇವೆ ಮುಂದುವರೆಸಲು ಅವಕಾಶ ನೀಡಬೇಕೆಂದು ಆಗ್ರಹಿಸಿ ಡಾ.ಬಿ.ಬಸವರಾಜು ಮೈಸೂರು ವಿಶ್ವವಿದ್ಯಾನಿಲಯದ ಕ್ರಾಫರ್ಡ್ ಭವನದ ಬಳಿ ಪ್ರತಿಭಟನೆ ನಡೆಸಿದರು. ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ ಬಳಿಕ, 2016ರಲ್ಲಿ ದಕ್ಷಿಣ ಭಾರತೀಯ ಅಧ್ಯಯನ ವಿಭಾಗ(ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ)ದಲ್ಲಿ ಪಿಹೆಚ್.ಡಿ ಪಡೆದಿದ್ದೇನೆ. ನಂತರ 2017-18ನೇ ಶೈಕ್ಷಣಿಕ ವರ್ಷದಲ್ಲಿ ತೂಬಿನ ಕೆರೆಯಲ್ಲಿರುವ ಮೈಸೂರು ವಿವಿ ಸರ್ಎಂವಿ ಸ್ನಾತಕೋತ್ತರ ಕೇಂದ್ರದಲ್ಲಿ ಇತಿಹಾಸ…
ಎಸ್ಟಿ ಮೀಸಲಾತಿ ಶೇ.7.5ಕ್ಕೇರಿಸಲು ಆಗ್ರಹಿಸಿ ಬಿಎಸ್ಪಿ ಪ್ರತಿಭಟನೆ
June 25, 2019ಮೈಸೂರು,ಜೂ.24(ಎಂಟಿವೈ)- ಜನ ಸಂಖ್ಯೆಗೆ ಅನುಗುಣವಾಗಿ ಪರಿಶಿಷ್ಟ ಪಂಗ ಡದ ಮೀಸಲಾತಿಯನ್ನು ಶೇ.7.5ರಷ್ಟು ಹೆಚ್ಚಿಸುವಂತೆ ಆಗ್ರಹಿಸಿ ಬಹುಜನ ಸಮಾಜ ಪಾರ್ಟಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ಆರಂಭಿಸಿದ ಬಿಎಸ್ಪಿ ಕಾರ್ಯಕರ್ತರು, ರಾಜ್ಯದ ಜನಸಂಖ್ಯೆ ಯಲ್ಲಿ ಶೇ.10ಕ್ಕೂ ಹೆಚ್ಚು ಪರಿಶಿಷ್ಟ ಸಮು ದಾಯದ ಜನರಿದ್ದಾರೆ. ಕೇಂದ್ರ ಸರ್ಕಾರ ಎಸ್ಟಿ ಸಮುದಾಯಕ್ಕೆ ಶೇ.7.5ರಷ್ಟು ಮೀಸಲಾತಿ ನೀಡುತ್ತಿದೆ. ರಾಜ್ಯ ಸರ್ಕಾರ ಶೇ.3ರಷ್ಟು ಮೀಸಲಾತಿ ನೀಡುತ್ತಿದೆ. ಇದರಿಂದ ಪರಿಶಿಷ್ಟ ಪಂಗಡದ ಸಮು ದಾಯಕ್ಕೆ ಸವಲತ್ತು ದೊರೆಯದಂತಾಗಿದೆ. ಈ ಹಿನ್ನೆಲೆಯಲ್ಲಿ…
ಪ್ರಬಂಧ ಬರೆಯುವುದಕ್ಕಿಂತ ಚರ್ಚೆ ಮಾಡುವುದರಲ್ಲಿ ಹೆಚ್ಚಿನ ಜ್ಞಾನಾರ್ಜನೆ
June 25, 2019ಮೈಸೂರು: ಪ್ರಬಂಧ ಬರೆಯುವುದಕ್ಕಿಂತ ಚರ್ಚೆ ಮಾಡುವುದ ರಲ್ಲಿ ಹೆಚ್ಚಿನ ಜ್ಞಾನ ವೃದ್ಧಿಯಾಗುವುದರ ಜತೆಗೆ ಸಂವಹನ ಕೌಶಲ್ಯತೆ ಬೆಳೆಯುತ್ತದೆ ಎಂದು ಶಾಸಕ ಡಾ.ಯತೀಂದ್ರ ಸಿದ್ದ ರಾಮಯ್ಯ ಅಭಿಪ್ರಾಯಿಸಿದರು. ಕುವೆಂಪುನಗರದಲ್ಲಿರುವ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಶಿಕ್ಷಣ ಮಹಾವಿದ್ಯಾಲಯದಲ್ಲಿ ಜ್ಞಾನಪೀಠ ಪುರಸ್ಕøತ ಗಿರೀಶ್ ಕಾರ್ನಾಡ್ ಹಾಗೂ ಹಿರಿಯ ಪತ್ರಕರ್ತ ರಾಜಶೇಖರ ಕೋಟಿ ಅವರ ಸ್ಮರಣಾರ್ಥ ‘ರಾಜ್ಯ ಮಟ್ಟದ ಚರ್ಚಾ ಸ್ಪರ್ಧೆ, ಪ್ರತಿಭಾ ಪುರಸ್ಕಾರ’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಇಬ್ಬರು ಪ್ರಗತಿಪರ ಚಿಂತಕರಾದ ಹಿರಿಯ ನಾಟಕಕಾರ ಗಿರೀಶ್ ಕಾರ್ನಾಡ್…
ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣಐವರು ಅಪರಾಧಿಗಳೆಂದು ನ್ಯಾಯಾಲಯ ಘೋಷಣೆಇಂದು ಶಿಕ್ಷೆ ಪ್ರಮಾಣ ಪ್ರಕಟ
June 25, 2019ಮೈಸೂರು, ಜೂ.24(ಎಸ್ಪಿಎನ್)- ಒಂದೇ ಕುಟುಂಬದ ನಾಲ್ವರ ಮೇಲೆ ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿ ಕೊಲೆ ಮಾಡಿ, ಮೂವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಐವರ ಆರೋಪಿಗಳನ್ನು ಮೈಸೂರಿನ 4ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಅಪರಾಧಿಗಳೆಂದು ಘೋಷಿಸಿದ್ದು, ಶಿಕ್ಷೆ ಪ್ರಮಾಣವನ್ನು ಮಂಗಳವಾರ ಪ್ರಕಟಿಸುವ ಸಾಧ್ಯತೆ ಯಿದೆ. ಮೈಸೂರು ಕೆ.ಎನ್.ಪುರದ ನಿವಾಸಿಗಳಾದ ಹಸೀನಾ, ಆದಿಲ್, ಜಬೀನಾ, ಸಯೀದಾ ಹಾಗೂ ಜರೀನ್ ತಾಜ್ರನ್ನು ಅಪರಾಧಿಗಳೆಂದು ಘೋಷಿಸಿದ್ದು, ವಿಚಾರಣಾ ಹಂತದಲ್ಲಿ ಮತ್ತೊಬ್ಬ ಆರೋಪಿ ಕೌಸರ್ ಮೃತಪಟ್ಟಿದ್ದರಿಂದ ವಿಚಾರಣೆಯಿಂದ ಹೊರಗಿಡಲಾಗಿದೆ. ಉದಯಗಿರಿಯ…
ಮೈಸೂರಲ್ಲಿ ರೈತರ ಬೃಹತ್ ಪ್ರತಿಭಟನಾ ಮೆರವಣಿಗೆ
June 25, 2019ಮೈಸೂರು, ಜೂ. 24(ಆರ್ಕೆ)- ಸಾಲ ಮನ್ನಾ ಕುರಿತು ಶ್ವೇತಪತ್ರ ಹೊರಡಿಸ ಬೇಕೆಂಬುದೂ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತರು ಇಂದು ಮೈಸೂರಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮೈಸೂರು ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಪ್ರಧಾನ ಕಾರ್ಯ ದರ್ಶಿ ಹೊಸಕೋಟೆ ಬಸವರಾಜು ನೇತೃತ್ವ ದಲ್ಲಿ ಗನ್ಹೌಸ್ ವೃತ್ತದಿಂದ ಚಾಮರಾಜ ಜೋಡಿ ರಸ್ತೆ, ರಾಮಸ್ವಾಮಿ ಸರ್ಕಲ್, ಜೆಎಲ್ಬಿ ರಸ್ತೆ, ಮೆಟ್ರೋಪೋಲ್ ಸರ್ಕಲ್ ಮೂಲಕ ಮೆರವಣಿಗೆ ನಡೆಸಿದ ನೂರಾರು ರೈತರು…
ಉದ್ಯಾನವನ, ಟ್ರಾಫಿಕ್ ಸಮಸ್ಯೆ ಬಗ್ಗೆ ನಿವಾಸಿಗಳಿಂದ ಅಧಿಕ ದೂರು
June 25, 2019ಮೈಸೂರು, ಜೂ.24(ಆರ್ಕೆಬಿ)- ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಅವರು ಸೋಮವಾರ ಮೈಸೂ ರಿನ 57ನೇ ವಾರ್ಡ್ನಲ್ಲಿ ಜನಸ್ಪಂದನಾ ಯಾತ್ರೆ ಕೈಗೊಂಡ ಸಂದರ್ಭದಲ್ಲಿ ಅಗತ್ಯ ನಿರ್ವಹಣೆ ಇಲ್ಲದೆ, ನೀರಿಲ್ಲದೆ ಒಣಗುತ್ತಿರುವ ಉದ್ಯಾನವನದ ಗಿಡಗಳು, ಟ್ರಾಫಿಕ್ ಸಮಸ್ಯೆ, ಕೆಟ್ಟು ನಿಂತಿರುವ ಸಿಗ್ನಲ್, ಅಸಮರ್ಪಕ ನೀರಿನ ಪೂರೈಕೆ ಇತ್ಯಾದಿ ಹಲವು ದೂರುಗಳು ಕೇಳಿ ಬಂದವು. ಕುವೆಂಪುನಗರ 57ನೇ ವಾರ್ಡ್ನ ಹೊಂಗೆ ಮರದ ಉದ್ಯಾನವನ, ಉಮಾ ಮಹೇಶ್ವರಿ ಉದ್ಯಾನವನ, ಕೆಹೆಚ್ಬಿ ಕಾಂಪ್ಲೆಕ್ಸ್, ಲವಕುಶ ಉದ್ಯಾನವನ, ಸೌಗಂಧಿಕ ಉದ್ಯಾ ನವನ, ಮಸಣಿಕಮ್ಮ ದೇವಸ್ಥಾನ, ಅಂಬೇಡ್ಕರ್…
ಸಸಿ ನೆಡುವ ಮೂಲಕ ಪರಿಸರ ಸ್ನೇಹಿಯಾಗಿ ಡಾ.ಶ್ಯಾಮ್ಪ್ರಸಾದ್ ಮುಖರ್ಜಿ ಸಂಸ್ಮರಣೆ
June 25, 2019ಮೈಸೂರು, ಜೂ.24(ಆರ್ಕೆಬಿ)- ಮೈಸೂರಿನ ಪರಿಸರ ಸ್ನೇಹಿ ತಂಡದ ಸದಸ್ಯರು ಗಾಂಧಿ ನಗರದ ಶಿವಯೋಗಿ ಶಾಲಾವರಣದಲ್ಲಿ ಸಸಿಗಳನ್ನು ನೆಡುವ ಮೂಲಕ ಜನಸಂಘದ ಸಂಸ್ಥಾಪಕ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಬಲಿದಾನ ದಿನವನ್ನು ಆಚರಿಸಿದರು. ಮೊದಲಿಗೆ ಮುಖರ್ಜಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ನಂತರ ವಿವಿಧ ಗಿಡಗಳನ್ನು ನೆಟ್ಟು ನೀರೆರೆದರು. ಬಳಿಕ ಮಾತನಾಡಿದ ಬಿಜೆಪಿ ಯುವ ಮುಖಂಡ ಚೇತನ್ ಮಂಜುನಾಥ್, ಭಾರತ ಸ್ವಾತಂತ್ರ್ಯಗೊಂಡ ನಂತರ ಮೊದಲ ಕೈಗಾರಿಕಾ ಮಂತ್ರಿಯಾಗಿದ್ದ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ದೇಶದ ಕೈಗಾ ರಿಕಾ ಕ್ಷೇತ್ರದಲ್ಲಿ…










